ಸಂಧಿವಾತ ಸಲಹೆ-ಸೂಚನೆ


Team Udayavani, Jan 22, 2020, 4:09 AM IST

chi-4

ಸಂಧಿವಾತವು ಎಲ್ಲಾ ವಯಸ್ಸಿನ ಮತ್ತು ಎಲ್ಲರ (ಲಿಂಗಿಗಳ)ಲ್ಲಿ ಕಾಣಿಸಿಕೊಳ್ಳುತ್ತದಾದರೂ, ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಗೆ ಒಳಗಾಗುತ್ತಾರೆ. ಕೀಲುಗಳ ಊತ ಮತ್ತು ಮೃದುತ್ವದಿಂದ ಗುರುತಿಸಲ್ಪಟ್ಟಿರುವ ಈ ರೋಗದಲ್ಲಿ, 100 ಕ್ಕೂ ಹೆಚ್ಚು ಬಗೆಗಳಿವೆ ಎಂದು ಗುರುತಿಸಲಾಗಿದೆ. ಸಂಧಿವಾತವು ರೋಗಿಯ ದೈನಂದಿನ ಚಟುವಟಿಕೆಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ನೋವನ್ನು ನಿರ್ವಹಿಸಲು, ಸಂದು-ಜಂಟಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು ಚಿಕಿತ್ಸೆ ನೀಡಬಹುದಾದರೂ, ರೋಗಿಗಳು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದರೆ ಮಾತ್ರ ಚಿಕಿತ್ಸೆ ಫ‌ಲಪ್ರದವಾಗಲು ಸಾಧ್ಯ.

ಆಹಾರದಲ್ಲಿ ಬದಲಾವಣೆ
ಸಮತೋಲಿತ ಆಹಾರದಿಂದ ಸಂಧಿವಾತವನ್ನು ಸ್ವಲ್ಪ ಮಟ್ಟಿಗೆ ದೂರವಿಡಬಹುದು. ಹಣ್ಣು, ತರಕಾರಿ, ಬೇಳೆಕಾಳು, ಧಾನ್ಯ ಮುಂತಾದ ಸಸ್ಯಜನ್ಯ ಆಹಾರಗಳು, ನೋವನ್ನು ಕಡಿಮೆ ಮಾಡುತ್ತವೆ. ಪ್ರೋಟೀನ್‌ ಸೇವನೆಯನ್ನು ನಿಯಂತ್ರಿಸುವ ಮೂಲಕ ಸಂಧಿವಾತವನ್ನು ಹತೋಟಿಗೆ ತರಬಹುದು. ಆಹಾರ ಬದಲಾವಣೆ ಮಾಡುವ ಮೊದಲು, ವೈದ್ಯರ ಸಲಹೆ ಪಡೆಯಿರಿ.

ದೈಹಿಕ ಸದೃಢತೆ, ವ್ಯಾಯಾಮ
ವ್ಯಾಯಾಮದಿಂದ ಸಂಧಿವಾತದ ನೋವು ಕಡಿಮೆಯಾಗುವುದಲ್ಲದೆ, ತೂಕ ಕೂಡಾ ನಿಯಂತ್ರಣಕ್ಕೆ ಬರುತ್ತದೆ. ನೋವು ಇರುವಾಗ, ಕಠಿಣ ವ್ಯಾಯಾಮದ ಬದಲು, ಸಾಮಾನ್ಯ ವ್ಯಾಯಾಮಗಳನ್ನು ಮಾಡಬಹುದು. ಅದರಿಂದ ಕೀಲುಗಳ ಸುತ್ತಲಿನ ಸ್ನಾಯುಗಳು ಮತ್ತು ಮೂಳೆಗಳ ಬಲವರ್ಧನೆಯಾಗುತ್ತದೆ. ಯೋಗ, ಸ್ಟ್ರೆಚಿಂಗ್‌, ನಡಿಗೆ, ಸೈಕ್ಲಿಂಗ್‌ನಂಥ ಚಟುವಟಿಕೆಗಳಿಂದ ಪ್ರಯೋಜನವಿದೆ.

ತೂಕ ನಿಯಂತ್ರಣ
ಹೆಚ್ಚುವರಿ ತೂಕದಿಂದಾಗಿ ಸಂಧಿವಾತದ ನೋವು ಬಿಗಡಾಯಿಸುತ್ತದೆ. ಅಧ್ಯಯನದ ಪ್ರಕಾರ ದೇಹವು ಒಂದು ಪೌಂಡ್‌ ತೂಕ ಕಳೆದುಕೊಂಡರೆ, ಮೊಣಕಾಲುಗಳ ಮೇಲಿನ ನಾಲ್ಕು ಪೌಂಡ್‌ ಒತ್ತಡ ಕಡಿಮೆಯಾಗುತ್ತದಂತೆ. ತೂಕ ಇಳಿಸುವುದರಿಂದ ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡಬಹುದು. ಅಲ್ಪಾವಧಿಯಲ್ಲಿ ತೂಕ ಇಳಿಸುವ ಸಾಹಸಕ್ಕೆ ಇಳಿಯದೆ, ಆರೋಗ್ಯಕರವಾಗಿ ತೂಕ ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಿ.

ಮದ್ಯಸೇವನೆ ಸಲ್ಲ
ಸಂಧಿವಾತದ ನೋವಿನಿಂದ ಮುಕ್ತಿ ಪಡೆಯಲು ಕೆಲವರು ಆಲ್ಕೋಹಾಲ್‌ ಸೇವಿಸುತ್ತಾರೆ. ಗೌಟ್‌ನಂಥ ಕೆಲವು ಸಂಧಿವಾತಗಳು, ಮದ್ಯ ಸೇವನೆಯಿಂದಲೇ ಬರುತ್ತವೆ. ಮದ್ಯ ಸೇವಿಸಿದಾಗ ದೇಹದಲ್ಲಿ ದ್ರವಾಂಶ ಕಡಿಮೆಯಾಗಿ, ಕೀಲು ನೋವು ಉಲ್ಬಣಿಸುತ್ತದೆ.

ಕಿತ್ತಳೆ, ಮೂಸಂಬಿ ತಿನ್ನಿ
ಜೀವಕೋಶಗಳನ್ನು ರಕ್ಷಿಸುವ, ಕಾಲಜನ್‌ ಮತ್ತು ಅಂಗಾಂಶಗಳನ್ನು ನಿರ್ವಹಿಸುವ ಶಕ್ತಿ ವಿಟಮಿನ್‌ ಸಿ ಗೆ ಇದೆ. ಇದು ಗಾಯಗಳನ್ನು ಗುಣಪಡಿಸಲು, ಉರಿಯೂತದ ಸಂಧಿವಾತವನ್ನು ತಡೆಗಟ್ಟಲು ಸಹಕಾರಿ. ಹಾಗಾಗಿ, ಕಿತ್ತಳೆ, ಮೂಸಂಬಿ, ಲಿಂಬೆ, ನೆಲ್ಲಿಕಾಯಿ ಮುಂತಾದ ಸಿ ವಿಟಮಿನ್‌ ಇರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿ.

-ಡಾ. ಪ್ರಶಾಂತ್‌ ಎ. ಪಾಟೀಲ್‌

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.