ಸಂಧಿವಾತ ಸಲಹೆ-ಸೂಚನೆ
Team Udayavani, Jan 22, 2020, 4:09 AM IST
ಸಂಧಿವಾತವು ಎಲ್ಲಾ ವಯಸ್ಸಿನ ಮತ್ತು ಎಲ್ಲರ (ಲಿಂಗಿಗಳ)ಲ್ಲಿ ಕಾಣಿಸಿಕೊಳ್ಳುತ್ತದಾದರೂ, ಮಹಿಳೆಯರೇ ಹೆಚ್ಚಾಗಿ ಈ ಸಮಸ್ಯೆಗೆ ಒಳಗಾಗುತ್ತಾರೆ. ಕೀಲುಗಳ ಊತ ಮತ್ತು ಮೃದುತ್ವದಿಂದ ಗುರುತಿಸಲ್ಪಟ್ಟಿರುವ ಈ ರೋಗದಲ್ಲಿ, 100 ಕ್ಕೂ ಹೆಚ್ಚು ಬಗೆಗಳಿವೆ ಎಂದು ಗುರುತಿಸಲಾಗಿದೆ. ಸಂಧಿವಾತವು ರೋಗಿಯ ದೈನಂದಿನ ಚಟುವಟಿಕೆಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ನೋವನ್ನು ನಿರ್ವಹಿಸಲು, ಸಂದು-ಜಂಟಿಗೆ ಆಗುವ ಹಾನಿಯನ್ನು ಕಡಿಮೆ ಮಾಡಲು ಚಿಕಿತ್ಸೆ ನೀಡಬಹುದಾದರೂ, ರೋಗಿಗಳು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದರೆ ಮಾತ್ರ ಚಿಕಿತ್ಸೆ ಫಲಪ್ರದವಾಗಲು ಸಾಧ್ಯ.
ಆಹಾರದಲ್ಲಿ ಬದಲಾವಣೆ
ಸಮತೋಲಿತ ಆಹಾರದಿಂದ ಸಂಧಿವಾತವನ್ನು ಸ್ವಲ್ಪ ಮಟ್ಟಿಗೆ ದೂರವಿಡಬಹುದು. ಹಣ್ಣು, ತರಕಾರಿ, ಬೇಳೆಕಾಳು, ಧಾನ್ಯ ಮುಂತಾದ ಸಸ್ಯಜನ್ಯ ಆಹಾರಗಳು, ನೋವನ್ನು ಕಡಿಮೆ ಮಾಡುತ್ತವೆ. ಪ್ರೋಟೀನ್ ಸೇವನೆಯನ್ನು ನಿಯಂತ್ರಿಸುವ ಮೂಲಕ ಸಂಧಿವಾತವನ್ನು ಹತೋಟಿಗೆ ತರಬಹುದು. ಆಹಾರ ಬದಲಾವಣೆ ಮಾಡುವ ಮೊದಲು, ವೈದ್ಯರ ಸಲಹೆ ಪಡೆಯಿರಿ.
ದೈಹಿಕ ಸದೃಢತೆ, ವ್ಯಾಯಾಮ
ವ್ಯಾಯಾಮದಿಂದ ಸಂಧಿವಾತದ ನೋವು ಕಡಿಮೆಯಾಗುವುದಲ್ಲದೆ, ತೂಕ ಕೂಡಾ ನಿಯಂತ್ರಣಕ್ಕೆ ಬರುತ್ತದೆ. ನೋವು ಇರುವಾಗ, ಕಠಿಣ ವ್ಯಾಯಾಮದ ಬದಲು, ಸಾಮಾನ್ಯ ವ್ಯಾಯಾಮಗಳನ್ನು ಮಾಡಬಹುದು. ಅದರಿಂದ ಕೀಲುಗಳ ಸುತ್ತಲಿನ ಸ್ನಾಯುಗಳು ಮತ್ತು ಮೂಳೆಗಳ ಬಲವರ್ಧನೆಯಾಗುತ್ತದೆ. ಯೋಗ, ಸ್ಟ್ರೆಚಿಂಗ್, ನಡಿಗೆ, ಸೈಕ್ಲಿಂಗ್ನಂಥ ಚಟುವಟಿಕೆಗಳಿಂದ ಪ್ರಯೋಜನವಿದೆ.
ತೂಕ ನಿಯಂತ್ರಣ
ಹೆಚ್ಚುವರಿ ತೂಕದಿಂದಾಗಿ ಸಂಧಿವಾತದ ನೋವು ಬಿಗಡಾಯಿಸುತ್ತದೆ. ಅಧ್ಯಯನದ ಪ್ರಕಾರ ದೇಹವು ಒಂದು ಪೌಂಡ್ ತೂಕ ಕಳೆದುಕೊಂಡರೆ, ಮೊಣಕಾಲುಗಳ ಮೇಲಿನ ನಾಲ್ಕು ಪೌಂಡ್ ಒತ್ತಡ ಕಡಿಮೆಯಾಗುತ್ತದಂತೆ. ತೂಕ ಇಳಿಸುವುದರಿಂದ ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡಬಹುದು. ಅಲ್ಪಾವಧಿಯಲ್ಲಿ ತೂಕ ಇಳಿಸುವ ಸಾಹಸಕ್ಕೆ ಇಳಿಯದೆ, ಆರೋಗ್ಯಕರವಾಗಿ ತೂಕ ಕಡಿಮೆ ಮಾಡುವ ಗುರಿ ಇಟ್ಟುಕೊಳ್ಳಿ.
ಮದ್ಯಸೇವನೆ ಸಲ್ಲ
ಸಂಧಿವಾತದ ನೋವಿನಿಂದ ಮುಕ್ತಿ ಪಡೆಯಲು ಕೆಲವರು ಆಲ್ಕೋಹಾಲ್ ಸೇವಿಸುತ್ತಾರೆ. ಗೌಟ್ನಂಥ ಕೆಲವು ಸಂಧಿವಾತಗಳು, ಮದ್ಯ ಸೇವನೆಯಿಂದಲೇ ಬರುತ್ತವೆ. ಮದ್ಯ ಸೇವಿಸಿದಾಗ ದೇಹದಲ್ಲಿ ದ್ರವಾಂಶ ಕಡಿಮೆಯಾಗಿ, ಕೀಲು ನೋವು ಉಲ್ಬಣಿಸುತ್ತದೆ.
ಕಿತ್ತಳೆ, ಮೂಸಂಬಿ ತಿನ್ನಿ
ಜೀವಕೋಶಗಳನ್ನು ರಕ್ಷಿಸುವ, ಕಾಲಜನ್ ಮತ್ತು ಅಂಗಾಂಶಗಳನ್ನು ನಿರ್ವಹಿಸುವ ಶಕ್ತಿ ವಿಟಮಿನ್ ಸಿ ಗೆ ಇದೆ. ಇದು ಗಾಯಗಳನ್ನು ಗುಣಪಡಿಸಲು, ಉರಿಯೂತದ ಸಂಧಿವಾತವನ್ನು ತಡೆಗಟ್ಟಲು ಸಹಕಾರಿ. ಹಾಗಾಗಿ, ಕಿತ್ತಳೆ, ಮೂಸಂಬಿ, ಲಿಂಬೆ, ನೆಲ್ಲಿಕಾಯಿ ಮುಂತಾದ ಸಿ ವಿಟಮಿನ್ ಇರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿ.
-ಡಾ. ಪ್ರಶಾಂತ್ ಎ. ಪಾಟೀಲ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444