ಜೋಪಾನ! ಇದು ಅಪರಿಚಿತರ ಜಗತ್ತು


Team Udayavani, Aug 21, 2019, 5:06 AM IST

1

ನಿಮಗೆ ಬೇಕಾದ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರು ಫೇಸ್‌ಬುಕ್‌ ಬಳಕೆದಾರರಾಗಿದ್ದರೆ ಸುಲಭವಾಗಿ ಹುಡುಕಬಹುದು. ಇದು ಫೇಸ್‌ಬುಕ್‌ನ ಹೆಗ್ಗಳಿಕೆ. ವಿಶ್ವಾದ್ಯಂತ ನೆಲೆಸಿರುವ ಸ್ನೇಹಿತರನ್ನು ಬೆಸೆಯುವ ಉದ್ದೇಶದಿಂದಲೇ ಬಳಕೆಗೆ ಬಂದ ಈ ಜಾಲತಾಣ, ಇಂದು ಮೂಲ ಉದ್ದೇಶವನ್ನು ಮೀರಿ ವಿಸ್ತರಿಸಿದೆ.

ಇಂಥ ಜಾಲತಾಣಗಳಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ಅದರ ದುರ್ಬಳಕೆಯೂ ನಡೆಯುತ್ತಿದೆ. ಅದರಲ್ಲೂ ಹೆಣ್ಣುಮಕ್ಕಳು ಫೇಸ್‌ಬುಕ್‌ ಗೆಳೆಯರನ್ನು ನಂಬಿ ಮೋಸ ಹೋಗುವುದೂ, ಬ್ಲಾಕ್‌ಮೇಲ್‌ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು, ಅಶ್ಲೀಲ ಕಮೆಂಟ್‌ನಿಂದ ಖನ್ನತೆಗೆ ಒಳಗಾಗುವುದು ನಡೆಯುತ್ತಿದೆ.

ನನ್ನ ಫೇಸ್‌ಬುಕ್‌ ಗೆಳತಿಯೊಬ್ಬರು, ಅನುಮತಿ ಪಡೆಯದೆ ತಮ್ಮ ಫೋಟೋಗಳನ್ನು ಶೇರ್‌ ಮಾಡಿಕೊಂಡ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಜಗ್ಗಾಡಿ, ಹಾಗೆಯೇ ಶೇರ್‌ ಆಗಿದ್ದ ಅನೇಕ ಹೆಣ್ಣು ಮಕ್ಕಳ ಫೋಟೋಗಳನ್ನು ಆತನ ವಾಲ್‌ನಿಂದ ತೆಗೆಸುವಲ್ಲಿ ಸಫ‌ಲರಾದರು. ಆದರೆ ಬಹುತೇಕ ಹೆಣ್ಣುಮಕ್ಕಳು ಹೀಗೆ ಪ್ರತಿಭಟಿಸುವ ಗೋಜಿಗೆ ಹೋಗುವುದಿಲ್ಲ. ಫೇಸ್‌ಬುಕ್‌ ಫ್ರೆಂಡ್‌ಶಿಪ್‌ ನೆಪದಲ್ಲಿ ನಡೆಯುವ ಶೋಷಣೆಗಳನ್ನು ಸಹಿಸಿಕೊಂಡಿರುತ್ತಾರೆ. ಸಾಕ್ಷಿಗಳು ಇದ್ದರೂ ಹೇಳಿಕೊಳ್ಳಲು ಹಿಂಜರಿಕೆ. ಯಾಕಂದ್ರೆ, “ನನಗೂ ಆತ ಫ್ರೆಂಡ್‌. ಯಾವತ್ತೂ ಹಾಗೆ ನಡೆದುಕೊಂಡಿಲ್ಲವಲ್ಲ’ ಅಂತ ಯಾರಾದರೊಬ್ಬರು ಹೇಳಿದರೆ, ಅಲ್ಲಿಗೆ ಮುಗಿಯಿತು. ದೂರು ಹೇಳಿದವಳ ನಡತೆಯನ್ನೇ ಅನುಮಾನಿಸುತ್ತಾರೆ. ಅಷ್ಟಲ್ಲದೆ, ಫೇಸ್‌ಬುಕ್‌ ಬಳಕೆ ವಿರೋಧಿಸುವ ಹೆತ್ತವರಿಂದ ಎಂಥ ಪ್ರತಿಕ್ರಿಯೆ ಬರಬಹುದು ಎನ್ನುವ ದಿಗಿಲು ಹುಡುಗಿಯರಿಗೆ ಸಹಜ.

ಆದರೆ, ಭಯ ಪಡುವ ಅಗತ್ಯವಿಲ್ಲ. ಇಂಥ ಸಮಸ್ಯೆಗಳನ್ನು ಮನಗಂಡಿರುವ ಫೇಸ್‌ಬುಕ್‌ ಸಹ, ಬಳಕೆದಾರರ ಸುರಕ್ಷತೆಯನ್ನು ಕಾಪಾಡುವತ್ತ ಗಮನ ಹರಿಸಿದೆ. ಅದರ ಜೊತೆಗೆ, ಫೇಸ್‌ಬುಕ್‌ ಬಳಸುವಾಗ ನಾವು ಕೆಲವು ನಿಯಮ-ನಿಬಂಧನೆಗಳನ್ನು ಪಾಲಿಸಿದರೆ ಸಮಸ್ಯೆಗಳು ಎದುರಾಗುವುದಿಲ್ಲ.

-ಫ್ರೆಂಡ್‌ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವಾಗ, ವ್ಯಕ್ತಿಯ ಖಾತೆಯನ್ನು ಪರೀಕ್ಷಿಸಿ.
-ನಿಮಗೆ ಕಿರಿಕಿರಿಯಾಗುವಂತೆ ನಡೆದುಕೊಳ್ಳುತ್ತಿರುವ ವ್ಯಕ್ತಿಯನ್ನು ತಕ್ಷಣ ಬ್ಲಾಕ್‌ ಮಾಡಿ.
-ಪ್ರೊಫೈಲ್‌ ಚಿತ್ರವನ್ನು ಕದಿಯದಂತೆ ಪ್ರೈವೆಸಿಗಾರ್ಡ್‌ ಹಾಕಿಕೊಳ್ಳಿ. ಆಗ ಚಿತ್ರದ ಸ್ಕ್ರೀನ್‌ಶಾಟ್‌ ಸಹ ತೆಗೆಯಲು ಸಾಧ್ಯವಿಲ್ಲ.
– ನೀವು ಹಾಕುವ ಪೋಸ್ಟ್‌ಗಳನ್ನು ನಿಮ್ಮ ಗೆಳೆಯರಿಗೆ ಮಾತ್ರ ಕಾಣುವಂತೆ ಸೆಟ್‌ ಮಾಡಬಹುದು. ಇದರಿಂದಾಗಿ ಅಪರಿಚಿತರು ನಿಮ್ಮ ಪೋಸ್ಟ್ ಗಳನ್ನು ಅವರ ಖಾತೆಯ ಮೂಲಕ ಹಂಚಿಕೊಳ್ಳಲಾಗದು.
-ನಿಮ್ಮ ಮೊಬೈಲ್‌ ಸಂಖ್ಯೆ, ಜನ್ಮದಿನ ಸೇರಿದಂತೆ ಮುಂತಾದ ಮಾಹಿತಿಗಳನ್ನು ನಿಮಗೆ/ ನಿಮ್ಮ ಸ್ನೇಹಿತರಿಗೆ ಮಾತ್ರ ಕಾಣುವಂತೆ ಸೆಟ್‌ ಮಾಡಬಹುದು.
-ಖಾಸಗಿ ಜೀವನದ ಎಲ್ಲವನ್ನೂ ಹಂಚಿಕೊಳ್ಳುವ ತುಡಿತಕ್ಕೆ ಕಡಿವಾಣ ಹಾಕಿ. ಉತ್ತಮ ಮಾಹಿತಿ, ಆಸಕ್ತಿ, ಅಭಿವ್ಯಕ್ತಿಗಳನ್ನು ಹಂಚಲು ಫೇಸ್‌ಬುಕ್‌ ಮೀಸಲಿರಲಿ.
-ಫೋಟೊಗಳನ್ನು ತೆಗೆದುಕೊಂಡು, ಸ್ಥಳದ ಲೊಕೇಶನ್‌ ಜೊತೆಗೇ ಶೇರ್‌ ಮಾಡುವುದನ್ನು ನಿಲ್ಲಿಸಿ.
-ಅಸಭ್ಯ ಕಮೆಂಟ್‌ ಬಂದರೆ ತಕ್ಷಣ ಡಿಲೀಟ್‌ ಮಾಡಿ.
-ಅಪರಿಚಿತರು ಮೆಸೇಜ್‌ ಮಾಡಿದಾಗ ಉತ್ತರಿಸಬೇಡಿ. ಉತ್ತರಿಸುವುದಿದ್ದರೂ ಯೋಚಿಸಿ ಉತ್ತರಿಸಿ.
-ಅಶ್ಲೀಲ ಚಿತ್ರಗಳನ್ನು ಕಳಿಸಿದ ವ್ಯಕ್ತಿಯ ಜೊತೆಗೆ ಅನಗತ್ಯ ಚರ್ಚೆಗೆ ಇಳಿಯುವ ಬದಲು ತಕ್ಷಣ ಬ್ಲಾಕ್‌ ಮಾಡಿ. ರಿಪೋರ್ಟ್‌ ಮಾಡಿ.
-ನಿಮ್ಮ ಚಿತ್ರಗಳ ದುರ್ಬಳಕೆ ಮಾಡುತ್ತೇವೆಂದು ಹೆದರಿಸಿದರೆ, ತಕ್ಷಣವೇ ಅದನ್ನು ಪೋಷಕರ ಗಮನಕ್ಕೆ ತಂದು, ಅಂಥವರ ವಿರುದ್ಧ ದೂರು ದಾಖಲಿಸಿ.
-ನಿಮ್ಮ ಹವ್ಯಾಸ, ಅಭಿರುಚಿಗೆ ತಕ್ಕವರನ್ನೇ ಸ್ನೇಹಿತರಾಗಿ ಸ್ವೀಕರಿಸಿ. ಯಾರನ್ನೂ ಅಗತ್ಯ ಮೀರಿ ಹಚ್ಚಿಕೊಳ್ಳಬೇಡಿ.
-ಎಷ್ಟು ಆತ್ಮೀಯರೆನ್ನಿಸಿದರೂ ಕಾರಣವಿಲ್ಲದೇ ವೈಯಕ್ತಿಕ ವಿವರಗಳನ್ನು ಕೊಡಬೇಡಿ.

ಭೇಟಿಗೂ ಮುನ್ನ ಎಚ್ಚರ
ಫೇಸ್‌ಬುಕ್‌ನಲ್ಲಿ ಅಪರಿಚಿತರು ಬಹುಬೇಗ ಸ್ನೇಹಿತರಾಗಿ, ಆಕರ್ಷಣೆ ಬೆಳೆದು, ಭಾವನೆಗಳು ಪ್ರೀತಿಗೆ ತಿರುಗಬಹುದು. ನಿಮ್ಮ ಭಾವನೆಗಳನ್ನು ಥಟ್ಟನೆ ಗ್ರಹಿಸಿ ಸ್ಪಂದಿಸುತ್ತಾನೆಂದಾಗಲಿ, ಕಷ್ಟ ಸುಖಗಳನ್ನು ಆಸಕ್ತಿಯಿಂದ ಕೇಳುತ್ತಾನೆಂದಾಗಲಿ ಕೇವಲ ಒಂದೆರಡು ತಿಂಗಳ ಸಂವಾದದಿಂದ ಆ ವ್ಯಕ್ತಿಯನ್ನು ಪೂರ್ತಿಯಾಗಿ ನಂಬಬೇಡಿ. ಎಲ್ಲರೂ ಹಾಗಲ್ಲದಿದ್ದರೂ ನಿಮ್ಮ ಎಚ್ಚರಿಕೆ ನಿಮಗಿರಲಿ..ನಿಮ್ಮ ಸ್ನೇಹಿತ ನಿಮ್ಮನ್ನು ಭೇಟಿಯಾಗಲು ಬಯಸಿ, ನಿಮಗೂ ಇಚ್ಛೆ ಇದ್ದರೆ ಆದಷ್ಟು ಜನಸಂಚಾರವಿರುವ ಸ್ಥಳವನ್ನು ನೀವೇ ನಿರ್ಧರಿಸಿ. ಅವನನ್ನು ಭೇಟಿಯಾಗುತ್ತಿರುವ ವಿಷಯವನ್ನು ಆತ್ಮೀಯರಿಂದ ಮುಚ್ಚಿಡಬೇಡಿ. ಅವನ ವರ್ತನೆ ಅಸಹಜವೆನ್ನಿಸಿದರೆ, ಅನಿರೀಕ್ಷಿತವಾಗಿ ಭೇಟಿಯ ಸ್ಥಳ ಬದಲಿಸಿದರೆ, ಆ ಹೊಸ ಸ್ಥಳಕ್ಕೆ ಹೋಗಬೇಡಿ.

– ಕವಿತಾ ಭಟ್‌

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.