ಬೇಗ ಬನ್ನಿ, ಆಯ್ತಾ..?


Team Udayavani, Mar 13, 2019, 12:30 AM IST

x-10.jpg

ನಾನು ಐದು ತಿಂಗಳ ಬಾಣಂತಿ. ರಜೆ ಸಿಗದ ಕಾರಣ ಅವರು ಮಗುವನ್ನು ನೋಡಲೂ ಬಂದಿರಲಿಲ್ಲ. ಏನಾದರೂ ತುರ್ತು ಘಟನೆ ನಡೆದರೆ ಟೆಲಿಗ್ರಾಂ ಮಾಡುವ ಕಾಲವದು. ನಮ್ಮಿಬ್ಬರ ನಡುವೆ ಮಾತೇ ಇಲ್ಲ. ಅವರೊಂದು ಕಡೆ, ನಾನೊಂದು ಕಡೆ. ಯುದ್ಧ ಪ್ರಾರಂಭವಾಯಿತು. ಎದೆಯಲ್ಲಿ ಆತಂಕ, ದಿಗಿಲು, ನೋವು. ಮಗುವಿನ ಮುಖವನ್ನು ಅವರು ನೋಡುತ್ತಾರೋ ಇಲ್ಲವೋ! 

ಮೊನ್ನೆ ಒಂದು ರೈಲ್ವೆ ಸ್ಟೇಷನ್ನಿನಲ್ಲಿ ಕುಳಿತಾಗ, ಅಲ್ಲಿ ಯೋಧನನ್ನು ಅವನ ಪತ್ನಿ ಬೀಳ್ಕೊಡುತ್ತಿರುವ ಭಾವುಕ ಸನ್ನಿವೇಶವನ್ನು ಕಂಡೆನು. ಅವಳ ಕಂಕುಳಲ್ಲಿ ಪುಟ್ಟ ಕಂದಮ್ಮ, ಏನನ್ನೂ ಅರಿಯದೇ ಮುಗ್ಧವಾಗಿ ಅತ್ತಿತ್ತ ನೋಡುತ್ತಿದೆ. ಪತ್ನಿಯ ಕಂಗಳಲ್ಲಿ ದಳದಳನೆ ಕಣ್ಣೀರು. ಆರ್ಮಿ ಸಮವಸ್ತ್ರದಲ್ಲಿರುವ ಗಂಡನ ಹಣೆಗೆ ಮುತ್ತು ಕೊಟ್ಟರೂ, “ನಿನ್ನ ಹೇಗೆ ಬಿಟ್ಟಿರಲಿ?’ ಎನ್ನುವ ಪ್ರಶ್ನೆಯೊಂದು ಅವಳ ಎದೆಯೊಳಗೆ ಬಾಕಿ ಇದೆ. ಅದನ್ನು ನೋಡುತ್ತಾ, ಯಾಕೋ ಅತ್ತೆ ನೆನಪಾದರು….

ನಿಜ ಜೀವನದಲ್ಲಿ ಸಂಬಂಧ ಕೈ ಜಾರಿದ ನಂತರ ಲೆಕ್ಕಾಚಾರ ಶುರುವಾಗುತ್ತದೆ. ಪ್ರೀತಿಯಿಂದ, ಆಪ್ತತೆಯಿಂದ ಕಟ್ಟಿಕೊಂಡಿದ್ದು ಎಂದಿಗೂ ನಶಿಸದು. ಆದರೆ, ನನ್ನ ಮತ್ತು ಅತ್ತೆಯ ಸಂಬಂಧದ ಲೆಕ್ಕಾಚಾರದಲ್ಲಿ ಗಳಿಸಿದ್ದೇ ಹೆಚ್ಚು. ಮದುವೆಯಾದ ನಂತರ ವಿದ್ಯಾಭ್ಯಾಸ ಮುಂದುವರಿಸಿದ ಕಾರಣ, ನಾನು ಮನೆಗೆಲಸದ ಹೊರೆಯನ್ನು ಹೊತ್ತುಕೊಂಡಿರಲಿಲ್ಲ. 

ಅದು 1999ರ ಸುಮಾರು. ಕಾರ್ಗಿಲ್‌ ಯುದ್ಧ ಘೋಷಣೆಯಾದಂಥ ಸಮಯ. ಬೆಳಗ್ಗೆ ಎದ್ದಾಗ ಎಂದಿನಂತೆ ಸಿದ್ಧವಾಗಿರುತ್ತಿದ್ದ ಕಾಫಿ, ಅವತ್ತು ರೆಡಿ ಆಗಿರಲಿಲ್ಲ. ಪ್ರತಿದಿನವೂ ಅತ್ತೆಯೇ ಕಾಫಿ ಮಾಡಿ ಕೊಡುತ್ತಿದ್ದರು. “ಕಾಫಿ ಇಲ್ಲವೇ?’- ಕೇಳಿದೆ. ಮೌನ. ಮಾತು ಮಾತಿಗೂ ರೇಗಿಬಿಟ್ಟರು, ಅತ್ತೆ. ಎಲ್ಲ ಮನೆಗಳಂತೆ ನಮ್ಮ ಮನೆಯಲ್ಲೂ ಅತ್ತೆ-ಸೊಸೆ ವಿರಸ ಶುರುವಾಯಿತೇ ಎಂದು ಮನ ಕದಡಿತು. ಎರಡು ದಿನಗಳು ಮನೆಯ ಪರಿಸ್ಥಿತಿ ಹಾಗೇ ಇತ್ತು.

ಮೂರನೇ ದಿನ ಬೆಳಗ್ಗೆ ಎದ್ದಾಗ ಮನೆ ತುಂಬಾ ಎಂದಿನಂತೆ ಕಾಫಿಯ ಘಮಲು… ಕಾಫಿ ಹೀರುತ್ತಾ ಅತ್ತೆ ಮಾತಿಗೆ ಪ್ರಾರಂಭಿಸಿದರು. ಮಂತ್ರಮುಗ್ಧಳಾಗಿ ಕುಳಿತು ಅವರ ಮಾತಿಗೆ ಕಿವಿಯಾದೆ. 1971ರಲ್ಲಿ ನಡೆದಂಥ ಒಂದು ಕತೆ ಹೇಳಿದರು…

“ಆಗಷ್ಟೇ ಭಾರತ- ಪಾಕಿಸ್ತಾನದ (ಬಾಂಗ್ಲಾ) ನಡುವೆ ಯುದ್ಧ ಘೋಷಣೆ ಆಗಿತ್ತು. ನಾನು ಆಗ ಗೋಕರ್ಣದಲ್ಲಿದ್ದೆ. ನಿನ್ನ ಮಾವ, ಕ್ಯಾಪ್ಟನ್‌ ಎಸ್‌.ಜಿ. ಭಾಗÌತ್‌ರಿಗೆ ಮೀಸಾಮಾರಿ ಅಸ್ಸಾಂನಲ್ಲಿ ಪೋಸ್ಟಿಂಗ್‌ ಆಗಿತ್ತು. ನಾನು 5 ತಿಂಗಳ ಬಾಣಂತಿ. ರಜೆ ಸಿಗದ ಕಾರಣ ಅವರು ಮಗುವನ್ನು ನೋಡಲೂ ಬಂದಿರಲಿಲ್ಲ. ಏನಾದರೂ ತುರ್ತು ಘಟನೆ ನಡೆದರೆ ಟೆಲಿಗ್ರಾಂ ಮಾಡುವ ಕಾಲವದು. ನಮ್ಮಿಬ್ಬರ ನಡುವೆ ಮಾತೇ ಇಲ್ಲ. ಅವರೊಂದು ಕಡೆ, ನಾನೊಂದು ಕಡೆ. ಯುದ್ಧ ಪ್ರಾರಂಭವಾಯಿತು. ಎದೆಯಲ್ಲಿ ಆತಂಕ, ದಿಗಿಲು, ನೋವು. ಮಗುವಿನ ಮುಖವನ್ನು ಅವರು ನೋಡುತ್ತಾರೋ ಇಲ್ಲವೋ! ಹೀಗೆ ಕೆಟ್ಟ ಯೋಚನೆಗಳಿಂದ ದಿನ ಕಳೆಯುವುದೇ ಕಷ್ಟವಾಯಿತು. ಆಗ ಟಿ.ವಿ. ಇರಲಿಲ್ಲ. ರೇಡಿಯೋ ನ್ಯೂಸ್‌ಅನ್ನು ತಪ್ಪದೇ ಕೇಳುತ್ತಿದ್ದೆ. ಯುದ್ಧ ನಡೆದ 13 ರಾತ್ರಿಗಳನ್ನು ನಿದ್ದೆ ಇಲ್ಲದೆ ಕಳೆದು, ಬೆಳಗು ಮಾಡಿದ್ದೇನೆ. 

ಚಿಕ್ಕ ಮಗುವನ್ನು ಹೊತ್ತು ನಾನೊಬ್ಬಳೆ ಅಸ್ಸಾಂಗೆ ಹೋಗುವುದು ಕೂಡ ಸುಲಭವಾಗಿರಲಿಲ್ಲ. ಅಗ್ನಿಪರೀಕ್ಷೆಯ ಆ 13 ದಿನಗಳು ಜೀವನದಲ್ಲಿ ಬಹುದೊಡ್ಡ ಪಾಠ ಕಲಿಸಿದವು. ಹಿಂದಿ ಭಾಷೆ ಬರದ ನಾನು ನಿಧಾನವಾಗಿ ಹಿಂದಿ ಕಲಿಯಲು ಶುರುಮಾಡಿದ್ದೇ ಆಗ…’ ಎಂದರು ಬಿಕ್ಕುತ್ತಾ. ನನ್ನ ಗಂಟಲಿನಿಂದ ದನಿಯೇ ಹೊಮ್ಮದಾಗಿತ್ತು. 

ಅತ್ತೆ ಮತ್ತೆ ಮುಂದುವರಿಸಿದರು… “ದೂರದಲ್ಲಿ ಪೋಸ್ಟಿಂಗ್‌ ಹಾಕಿದ್ದಾಗ ಕೆಲವೊಮ್ಮೆ ಮಾತ್ರ ಕುಟುಂಬದ ಜೊತೆಗೆ ನೆಲೆಸಲು ಸಾಧ್ಯವಾಗುತ್ತಿತ್ತು. ಅವರು ಲೇಹ್‌- ಲಡಾಕ್‌ನಲ್ಲಿ ಇದ್ದಾಗ ನಾನು ಮಕ್ಕಳ ಜೊತೆಗೆ ಉತ್ತರಪ್ರದೇಶದ ರೂರ್ಕಿಯಲ್ಲಿದ್ದೆ. ನಿನ್ನ ಗಂಡನೂ ಸೈನ್ಯ ಸೇರಲು ಎರಡು ಬಾರಿ ಪ್ರಯತ್ನಿಸಿ ಫೇಲ್‌ ಆದ. ಅವನು ಹತ್ತನೇ ತರಗತಿಯಲ್ಲಿದ್ದಾಗ ಕೈ ಮುರಿದುಕೊಂಡಿದ್ದ. ಆ ಕಾರಣದಿಂದಲೇ ಸೈನ್ಯದ ವೈದ್ಯಕೀಯ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲ. ಈಗ ಕಾರ್ಗಿಲ್‌ ಯುದ್ಧವಂತೆ. ಸೇನೆಯ ಅಧಿಕಾರಿಗಳಿಗೆ ಯುದ್ಧ ಸಿದ್ಧತೆಯ ಎಚ್ಚರಿಕೆ ಇದೆ. ಈಗ ಬ್ರಿಗೇಡಿಯರ್‌ ಹುದ್ದೆಯಲ್ಲಿರುವುದರಿಂದ ಅಗತ್ಯವಿದ್ದರೆ ಹೊರಡಬೇಕಂತೆ…’

ಅದನ್ನು ಕೇಳುತ್ತಲೇ, ನಾಲಿಗೆಯೇಕೋ ಕಹಿ ಆಗುತ್ತಿತ್ತು. ಅತ್ತೆ ಕೊಟ್ಟ ಕಾಫಿಯಲ್ಲಿ ಅವರ ವಿರಹದ ತಾಪವೂ ಬೆರೆತಿತ್ತು.

ಡಾ. ವಾಣಿ ಸಂದೀಪ್‌, ಸೌದಿ ಅರೇಬಿಯ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.