ಸಮ್ಮರ್‌ ಸ್ಪೆಷಲ್‌ ಸಾಸಿವೆ

ಕುಕಿಂಗ್‌ Point

Team Udayavani, May 1, 2019, 6:15 AM IST

Avalu-Aduge-1

ಸಾಸಿವೆ ಅಥವಾ ಪಚಡಿ,
ಬೇಸಿಗೆಯಲ್ಲಿ ಸವಿಯಲು ಸೂಕ್ತವಾದ ತಿನಿಸು. ಮಲೆನಾಡಿನ ಈ ಖಾದ್ಯ, ತಯಾರಿಸಲು ಸುಲಭ, ಬಾಯಿಗೆ ರುಚಿ, ಹೊಟ್ಟೆಗೂ ತಂಪು. ಬಹುತೇಕ ಎಲ್ಲಾ ತರಕಾರಿ ಹಾಗೂ ಹುಳಿ-ಸಿಹಿ ಹಣ್ಣು ಗಳಿಂದ ಪಚಡಿ ತಯಾರಿಸಬಹುದು. ಕೆಲವು ರೆಸಿಪಿ ಇಲ್ಲಿದೆ.

ಬಾಳೆ ದಿಂಡಿನ ಸಾಸಿವೆ
ಬೇಕಾಗುವ ಸಾಮಗ್ರಿ: ಹೆಚ್ಚಿದ ಬಾಳೆ ದಿಂಡು-1 ಕಪ್‌, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಬಾಳೆದಿಂಡನ್ನು ನಾರುಗಳಿಲ್ಲದಂತೆ ಸಣ್ಣಗೆ ಹೆಚ್ಚಿಡಿ. ತೆಂಗಿನತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ಹೆಚ್ಚಿದ ಬಾಳೆದಿಂಡು, ಮೊಸರು ಹಾಗೂ ಉಪ್ಪು ಸೇರಿಸಿ, ಸಾಸಿವೆ- ಕರಿಬೇವು ಸೇರಿಸಿದ ಒಗ್ಗರಣೆ ಕೊಡಿ. ದೇಹದಿಂದ ಕಲ್ಮಶವನ್ನು ಹೊರ ಹಾಕುವಲ್ಲಿ ಬಾಳೆದಿಂಡಿನ ಸೇವನೆ ಉಪಕಾರಿ.


ದ್ರಾಕ್ಷಿ ಹಣ್ಣಿನ ಸಾಸಿವೆ

ಬೇಕಾಗುವ ಸಾಮಗ್ರಿ: ಹಸಿರು ದ್ರಾಕ್ಷಿ-1 ಕಪ್‌, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು) ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ದ್ರಾಕ್ಷಿಯನ್ನು ತೊಳೆದು, ಹೆಚ್ಚಿಟ್ಟುಕೊಳ್ಳಿ. ತೆಂಗಿನತುರಿ, ಹಸಿರುಮೆಣಸು ಮತ್ತು ಸಾಸಿವೆ ಜೊತೆ ಮಿಕ್ಸಿಗೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ದ್ರಾಕ್ಷಿ, ಮೊಸರು, ಉಪ್ಪು ಸೇರಿಸಿ ಕಲಸಿ. ಬೇಕಿದ್ದರೆ ಹೆಚ್ಚುವರಿ ನೀರನ್ನು ಸೇರಿಸಬಹುದು. ನಂತರ ಸಾಸಿವೆ ಕರಿಬೇವು, ಹಾಕಿದ ಒಗ್ಗರಣೆ ಕೊಟ್ಟರೆ ಹುಳಿ-ಸಿಹಿ ರುಚಿಯ ಸಾಸಿವೆ ಸಿದ್ಧ.


ಕರಬೂಜದ ಸಾಸಿವೆ

ಬೇಕಾಗುವ ಸಾಮಗ್ರಿ: ಕರಬೂಜದ ಹಣ್ಣು- 1 ಕಪ್‌, ತೆಂಗಿನತುರಿ- 1/2 ಕಪ್‌, ಒಣಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.


ಮಾಡುವ ವಿಧಾನ:
ಕರಬೂಜದ ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಕರಬೂಜದ ಹೋಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಯಲ್ಲಿ, ಸಾಸಿವೆ-ಕರಿಬೇವು ಸೇರಿಸಿದ ಒಗ್ಗರಣೆ ಕೊಡಿ.


ದಪ್ಪ ಮೆಣಸಿನಕಾಯಿ ಸಾಸಿವೆ

ಬೇಕಾಗುವ ಸಾಮಗ್ರಿ: ದಪ್ಪಮೆಣಸಿನ ಕಾಯಿ- 2, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ದಪ್ಪಮೆಣಸಿನಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ, ಸಣ್ಣ ಉರಿಯಲ್ಲಿ ಸ್ವಲ್ಪ ಬಾಡಿಸಿಕೊಳ್ಳಿ. ತೆಂಗಿನತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಬಾಡಿಸಿದ ಹೋಳುಗಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ಉಪ್ಪು ಸೇರಿಸಿ. ನಂತರ ಒಗ್ಗರಣೆ ಕೊಡಿ.


ಆಲೂಗಡ್ಡೆಯ ಸಾಸಿವೆ

ಬೇಕಾಗುವ ಸಾಮಗ್ರಿ: ಆಲೂಗಡ್ಡೆ- 2, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಬೆಂದ ಹೋಳುಗಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ಉಪ್ಪು ಸೇರಿಸಿ, ಒಗ್ಗರಣೆ ಕೊಟ್ಟರೆ ಆಲೂಗಡ್ಡೆಯ ಸಾಸಿವೆ ರೆಡಿ.
ಇವಿಷ್ಟೇ ಅಲ್ಲದೆ ಅನಾನಸ್‌, ಸೇಬು ಮೊದಲಾದ ಹಣ್ಣುಗಳಿಂದಲೂ, ಹಸಿಯಾಗಿ ಸೇವಿಸುವ ತರಕಾರಿಗಳಾದ ಸೌತೆಕಾಯಿ, ಮೂಲಂಗಿ ಹಾಗೂ ಬೇಯಿಸಿ ತಿನ್ನುವ ಬೆಂಡೆಕಾಯಿ, ಹಾಗಲಕಾಯಿ, ಸೌತೆ, ಬದನೆಕಾಯಿಗಳಿಂದಲೂ ಸಾಸಿವೆ ತಯಾರಿಸಬಹುದು.

— ಹೇಮಮಾಲಾ.ಬಿ, ಮೈಸೂರು

ಟಾಪ್ ನ್ಯೂಸ್

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

12-

Gangolli: ರಿಕ್ಷಾ-ಕಾರು ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.