ಅಡುಗೆ ತಯಾರಿ…


Team Udayavani, Nov 20, 2019, 6:02 AM IST

aduge-taya

ಎಲ್ಲರ ಮನೆಯಂತೆ ನಮ್ಮ ಮನೆಯಲ್ಲಿ ಊಟ-ತಿಂಡಿ ನಡೆಯುವುದಿಲ್ಲ. ಯಾಕೆಂದರೆ, ಈ ದಿನ ತಯಾರಿಸಿದ ಅಡುಗೆ ಮತ್ತೂಮ್ಮೆ ನಮ್ಮ ಮನೆಯಲ್ಲಿ ತಯಾರಾಗೋದು ಇನ್ನು ಒಂದು ತಿಂಗಳ ನಂತರವೇ. ಈ ವಾರ ಚಪಾತಿ ಮಾಡಿರಬಹುದು. ಆದರೆ, ಅದಕ್ಕೆ ಈ ಬಾರಿ ಮಾಡಿದ ಕರಿಯನ್ನು ಇನ್ನೊಂದು ತಿಂಗಳು ರಿಪೀಟ್‌ ಮಾಡ­ಬಾರದು. ಬೆಳಗ್ಗೆ ಹೊತ್ತು ಚಿತ್ರಾನ್ನ, ಪುಳಿಯೊಗರೆ ಮಾಡಲೇಬಾರದು.

ಏನಿದ್ದರೂ ರೊಟ್ಟಿ, ಚಪಾತಿ, ದೋಸೆ ಇಂಥವನ್ನೇ ಮಾಡಬೇಕು. ಅನ್ನದ ಪದಾರ್ಥ ಗಳೇನಿದ್ದರೂ ಮಧ್ಯಾಹ್ನದ ಊಟಕ್ಕೆ ಮಾತ್ರ. ಮನೆಯವರ ಇಷ್ಟಗಳೇನೆಂದು ಅರ್ಥವಾಗಿರುವುದರಿಂದ ಕಷ್ಟ ಆಗು­ವುದಿಲ್ಲ. ನಾನು ದಿನವಿಡೀ ಮನೆಯಲ್ಲೇ ಇರುತ್ತೇನೆ. ಬೆಳಗ್ಗೆ ಐದು ಗಂಟೆಗೆ ಒಲೆ ಮುಂದೆ ನಿಂತರೆ, ಶಾಲೆ, ಕಾಲೇಜು, ಆಫೀಸ್‌ಗೆ ಹೋಗುವವರಿಗೆ ಅವರು ಕೇಳಿದ ತಿಂಡಿ ತಯಾರಿಸಿ, ಹೋಟೆಲ್‌ ತಿಂಡಿ, ಕುರುಕಲು ತಿಂಡಿಗಳಿಗೆ ಆಸೆ ಪಡದ ರೀತಿಯಲ್ಲಿ ಕುರುಕಲು ತಿಂಡಿಗ ಳ ವ್ಯವಸ್ಥೆಯನ್ನೂ ಮಾಡುತ್ತೇನೆ.

ಅವರೆಲ್ಲರ ಮೆನುವಿನ ಪ್ರಕಾರ ರುಚಿರುಚಿಯಾದ ಅಡುಗೆ ತಯಾರಿಸಿವುದೇ ನನ್ನ ಅತಿ ದೊಡ್ಡ ಕಾಯಕ ವೆಂದರೆ ತಪ್ಪಾಗಲಾರದು. ಅದಕ್ಕಾಗಿ ನಾನು ಭಾನುವಾರವೇ ಸೋಮ ವಾರದ ಮೆನುವನ್ನು ಪಟ್ಟಿ ಮಾಡಿಕೊಳ್ಳುತ್ತೇನೆ. ಭಾನುವಾರ ಬೆಳಗ್ಗಿನ ಕೆಲಸ ಮುಗಿಸಿದ ನಂತರ, ತರಕಾರಿ, ದಿನಸಿ ಸಾಮಗ್ರಿ, ಮುಂತಾ ದವನ್ನೆಲ್ಲ, ಎಲ್ಲಿ ಒಳ್ಳೆಯದು ಸಿಗುತ್ತದೋ, ಅಲ್ಲಿಗೇ ಹೋಗಿ ತರುತ್ತೇನೆ.

ತರಕಾರಿಗಳನ್ನಂತೂ ನಾನೇ ಖರೀದಿಸಬೇಕು. ಮನೆಯವರು ತಂದರೆ, ಅದರಲ್ಲಿ ಹುಳುಕೇ ಎದ್ದು ಕಾಣುತ್ತದೆ! ಭಾನುವಾರ ಸಂಜೆ ಹೊರಗೆ ಹೋಗಿದ್ದರೂ, ಸ್ವಲ್ಪ ಮುಂಚಿತ ವಾಗಿಯೇ ಮನೆ ಸೇರುತ್ತೇವೆ. ಏಕೆಂದರೆ,ತರಕಾರಿ ಹೆಚ್ಚುವುದೇ ತಲೆ ನೋವಿನ ಕೆಲಸ ನನಗೆ. ದಿನಕ್ಕೆ ಮೂರು ರೀತಿಯ ಅಡುಗೆ ಆಗ ಬೇಕೆಂದರೆ, ಕಡಿಮೆಯೆಂದರೂ ಎರಡು ಗಂಟೆ ತರಕಾರಿ ಹೆಚ್ಚಲೇ ಬೇಕು. ಆಗ ನಾನೊಬ್ಬಳೇ ತರಕಾರಿ ಹೆಚ್ಚುವುದಿಲ್ಲ.

ಯಜಮಾನರೂ ಸಹಾಯ ಮಾಡುತ್ತಾರೆ. ಸೋಮವಾರಕ್ಕೆ ಅವರಿಂದ ಸಹಾಯ ದೊರೆ ತರೂ ಮುಂದಿನ ಶನಿವಾರದವರೆಗೆ ನಾನೊಬ್ಬಳೇ ನಿಭಾಯಿಸಬೇಕು. ಹೆಂಗಸರೇನು, ತಂದಿದ್ದನ್ನು ಬೇಯಿಸಿ ಹಾಕ್ತಾರೆ ಅಷ್ಟೆ ಎಂಬ ಭಾವ ಕೆಲವರಿಗಿದೆ. ಆದರೆ, ಆ “ಬೇಯಿಸುವುದು’ ಎಷ್ಟು ಕಷ್ಟ ಎಂದು ಅವರಿಗೇನು ಗೊತ್ತು? ದಿನಾ ಬೆಳಗ್ಗೆ ಕನಿಷ್ಠ ನಾಲ್ಕು ಗಂಟೆ ಒಲೆ ಮುಂದೆ ನಿಲ್ಲುವುದು ಸಾಮಾನ್ಯ ಕೆಲಸವೇ?

* ವೇದಾವತಿ ಎಚ್‌.ಎಸ್‌.

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.