ಸೌತೆಯ ಸವಿರುಚಿ


Team Udayavani, Nov 28, 2018, 6:00 AM IST

c-7.jpg

ಬೇಸಿಗೆಯಲ್ಲಿ ಹಿತವೆನಿಸುವ, ವರ್ಷವಿಡೀ ಮಾರುಕಟ್ಟೆಯಲ್ಲಿ ದೊರೆಯುವ, ಎಲ್ಲರಿಗೂ ಇಷ್ಟವಾಗುವ ತರಕಾರಿಗಳಲ್ಲಿ ಸೌತೆಕಾಯಿಯೂ ಒಂದು. ಶೇ. 90ರಷ್ಟು ನೀರಿನಂಶ ಹೊಂದಿರುವ ಈ ತರಕಾರಿ, ಜೀರ್ಣಕ್ರಿಯೆಗೆ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ಹಸಿಯಾಗಿ ತಿಂದರೂ ರುಚಿಯಾಗಿರುವ ಸೌತೆಕಾಯಿಯಿಂದ ಸ್ವಾದಿಷ್ಟ ಅಡುಗೆಗಳನ್ನೂ ಮಾಡಬಹುದು. ಅಂಥ ಕೆಲವು ರೆಸಿಪಿಗಳು ಇಲ್ಲಿವೆ.  

1. ಸೌತೆಕಾಯಿ ಜ್ಯೂಸ್‌
ಬೇಕಾಗುವ ಸಾಮಗ್ರಿ: ಕತ್ತರಿಸಿದ ಸೌತೆಕಾಯಿ-3 ಕಪ್‌, ಕರಿಬೇವಿನ ಎಸಳು-10, ಪುದೀನಾ ಎಲೆಗಳು-8, ಜೀರಿಗೆ-3 ಚಮಚ, ಕಾಳುಮೆಣಸಿನ ಪುಡಿ-1/2 ಚಮಚ, ಲಿಂಬೆರಸ-1 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಸೌತೆಕಾಯಿ, ಕರಿಬೇವು, ಪುದೀನಾ ಸೊಪ್ಪು, ಜೀರಿಗೆ ಹಾಗೂ ಕಾಳುಮೆಣಸಿನ ಪುಡಿಯನ್ನು ಸೇರಿಸಿ, ಒಂದು ಕಪ್‌ ನೀರು ಬೆರೆಸಿ, ಅರೆಯಿರಿ. ಆ ಮಿಶ್ರಣವನ್ನು ಶೋಧಿಸಿ, ಪಾನಕದ ಹದಕ್ಕೆ ನೀರು ಹಾಕಿ, ಉಪ್ಪು, ನಿಂಬೆರಸ ಹಾಕಿದರೆ ಜ್ಯೂಸ್‌ ತಯಾರು. 

2. ಖಮಂಗ್‌ ಕಾಕಡಿ
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಸೌತೆಕಾಯಿ-2 ಕಪ್‌, ಶೇಂಗಾ ಪುಡಿ-3/4 ಕಪ್‌, ಜೀರಿಗೆ ಪುಡಿ-1 ಚಮಚ, ಹಸಿಮೆಣಸು-4, ಸಕ್ಕರೆ-1/2 ಚಮಚ, ತೆಂಗಿನ ತುರಿ-1/2 ಕಪ್‌, ಕೊತ್ತಂಬರಿ ಸೊಪ್ಪು-4 ಚಮಚ, ಲಿಂಬೆರಸ-1 ಚಮಚ, ಉಪ್ಪು-ರುಚಿಗೆ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕರಿಬೇವು -8 ಎಸಳು

ಮಾಡುವ ವಿಧಾನ: ಜೀರಿಗೆ, ಉಪ್ಪು, ಹಸಿಮೆಣಸಿನಕಾಯಿಯನ್ನು ಒಟ್ಟಿಗೆ ಅರೆದು, ಆ ಮಿಶ್ರಣಕ್ಕೆ ಸೌತೆ ಹೋಳು, ಶೇಂಗಾ ಪುಡಿ, ಲಿಂಬೆರಸ, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಅದಕ್ಕೆ ಸಾಸಿವೆ-ಇಂಗು-ಕರಿಬೇವಿನ ಒಗ್ಗರಣೆ ಹಾಕಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ರುಚಿಯಾದ ಖಮಂಗ್‌ ಕಾಕಡಿ ರೆಡಿ. ಚಪಾತಿ ಇಲ್ಲವೇ ರೊಟ್ಟಿಯ ಜೊತೆ ತಿನ್ನಲು ಬಲು ರುಚಿ. 

3. ಸೌತೆಕಾಯಿ ಸಿಹಿ ಗೊಜ್ಜು
ಬೇಕಾಗುವ ಸಾಮಗ್ರಿ:
ಸಣ್ಣಗೆ ಹೆಚ್ಚಿದ ಸೌತೆ-3 ಕಪ್‌, ತೆಂಗಿನ ತುರಿ-1/2 ಕಪ್‌, ಹುರಿದ ಉದ್ದಿನ ಬೇಳೆ-1/2 ಚಮಚ, ಹುರಿದ ಕಡಲೆ ಬೇಳೆ-1 ಚಮಚ, ಹಸಿಮೆಣಸು-5, ಹುಣಸೆ ರಸ-2 ಚಮಚ, ಬೆಲ್ಲದ ತುರಿ-3 ಚಮಚ, ಶೇಂಗಾ ಪುಡಿ-4 ಚಮಚ, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಕೊತ್ತಂಬರಿ ಸೊಪ್ಪು-4 ಚಮಚ.

ಮಾಡುವ ವಿಧಾನ: ತೆಂಗಿನ ತುರಿ, ಹಸಿಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ ಸೇರಿಸಿ ಅರೆದಿರಿಸಿ. ಸೌತೆ ಹೋಳುಗಳಿಗೆ, ಅರೆದ ಮಿಶ್ರಣ, ಹುಣಸೆ ರಸ, ಬೆಲ್ಲದ ತುರಿ, ಕೊತ್ತಂಬರಿ ಸೊಪ್ಪು, ಶೇಂಗಾ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣಕ್ಕೆ ಸಾಸಿವೆ-ಇಂಗಿನ ಒಗ್ಗರಣೆ ಹಾಕಿದರೆ, ಸಿಹಿ ಗೊಜ್ಜು ರೆಡಿ.

4. ಸೌತೆಕಾಯಿ ಇಡ್ಲಿ
ಬೇಕಾಗುವ ಸಾಮಗ್ರಿ:
ತುರಿದ ಸೌತೆಕಾಯಿ-3/4 ಕಪ್‌, ಅಕ್ಕಿ ರವೆ-2 ಕಪ್‌, ಮೊಸರು-2 ಕಪ್‌, ತೆಂಗಿನ ತುರಿ-1/2 ಕಪ್‌, ಹಸಿಮೆಣಸು-6, ಶುಂಠಿ-1 ಇಂಚಿನಷ್ಟು, ಕೊತ್ತಂಬರಿ ಸೊಪ್ಪು-2 ಚಮಚ, ಪುದೀನಾ ಸೊಪ್ಪು-3 ಚಮಚ, ಕಾಳುಮೆಣಸಿನಪುಡಿ-1/2 ಚಮಚ, ಜೀರಿಗೆ ಪುಡಿ-3/4 ಚಮಚ, ಎಣ್ಣೆ-3 ಚಮಚ, ಸಾಸಿವೆ-1 ಚಮಚ, ಅರಿಶಿನ-1/2 ಚಮಚ, ಕಡಲೆ ಬೇಳೆ-1 ಚಮಚ, ಉದ್ದಿನಬೇಳೆ-1 ಚಮಚ, ಇಂಗು-1/4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಅಕ್ಕಿ ರವೆಯನ್ನು ಹುರಿಯಿರಿ. ಹಸಿಮೆಣಸು, ಶುಂಠಿ ಸೇರಿಸಿ ತರಿತರಿಯಾಗಿ ಅರೆದಿರಿಸಿ. ಅರೆದ ಮಿಶ್ರಣಕ್ಕೆ, ಸೌತೆಕಾಯಿ ತುರಿ, ಅಕ್ಕಿ ರವೆ, ಕಾಳುಮೆಣಸಿನಪುಡಿ, ಜೀರಿಗೆ ಪುಡಿ ಹಾಗೂ ಮೊಸರನ್ನು ಸೇರಿಸಿ ಇಡ್ಲಿ ಮಿಶ್ರಣದ ಹದಕ್ಕೆ ಬೆರೆಸಿ, ಕಾಲು ಗಂಟೆ ಹುದುಗಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ, ಕಡಲೆ ಬೇಳೆ, ಉದ್ದಿನಬೇಳೆ ಒಗ್ಗರಣೆ ಮಾಡಿ. ಹುದುಗಲಿರಿಸಿದ ಇಡ್ಲಿ ಮಿಶ್ರಣಕ್ಕೆ ಒಗ್ಗರಣೆ, ತೆಂಗಿನ ತುರಿ, ಕೊತ್ತಂಬರಿ, ಪುದಿನಾ ಸೊಪ್ಪು, ಉಪ್ಪು ಬೆರೆಸಿ ಚೆನ್ನಾಗಿ ಕಲಕಿ. ಎಣ್ಣೆ ಸವರಿದ ಇಡ್ಲಿ ತಟ್ಟೆಗೆ, ಹಿಟ್ಟು ಹಾಕಿ ಬೇಯಿಸಿ, ಕಾಯಿ ಚಟ್ನಿಯೊಂದಿಗೆ ಸವಿಯಿರಿ. 

5. ಸೌತೆಕಾಯಿ ಪೂರಿ
ಬೇಕಾಗುವ ಸಾಮಗ್ರಿ:
ಸೌತೆಕಾಯಿ ತುರಿ-1 ಕಪ್‌, ಗೋಧಿ ಹಿಟ್ಟು-2 ಕಪ್‌, ಮೈದಾ ಹಿಟ್ಟು-3 ಚಮಚ, ಚಿರೋಟಿ ರವೆ-2 ಚಮಚ, ತುಪ್ಪ-1 ಚಮಚ, ಉಪ್ಪು-ರುಚಿಗೆ, ಸಕ್ಕರೆ-1 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಗೋದಿ ಹಿಟ್ಟಿಗೆ, ಸೌತೆಕಾಯಿ ತುರಿ, ಮೈದಾ ಹಿಟ್ಟು, ಚಿರೋಟಿ ರವೆ, ಉಪ್ಪು, ಸಕ್ಕರೆ, ತುಪ್ಪ ಸೇರಿಸಿ, ಗಟ್ಟಿಯಾಗಿ ಕಲಸಿ, ಅರ್ಧ ಗಂಟೆ ನೆನೆಯಲು ಬಿಡಿ. ನಂತರ ಚಿಕ್ಕ ಚಿಕ್ಕ, ಉಂಡೆ ಮಾಡಿ, ಪೂರಿ ಗಾತ್ರಕ್ಕೆ ಲಟ್ಟಿಸಿ, ಕರಿಯಿರಿ.  

ಜಯಶ್ರೀ ಕಾಲ್ಕುಂದ್ರಿ , ಬೆಂಗಳೂರು

ಟಾಪ್ ನ್ಯೂಸ್

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.