ಕರ್ರಿ ಸ್ಪೆಷಲ್‌


Team Udayavani, Sep 4, 2019, 5:00 AM IST

q-12

ರೆಸ್ಟೋರೆಂಟ್‌ಗಳಿಗೆ ಹೋದಾಗ ರೋಟಿ, ಚಪಾತಿ ಜೊತೆ ರುಚಿ ರುಚಿಯಾದ ಕರ್ರಿ, ಕುರ್ಮ ಸವಿಯುತ್ತೇವಲ್ಲ? ಅದನ್ನು ಮನೆಯಲ್ಲಿಯೇ ತಯಾರಿಸಬಹುದು. ಹಬ್ಬ, ಹರಿದಿನಗಳಲ್ಲಿ ಅಥವಾ ಮನೆಗೆ ಅತಿಥಿಗಳು ಬಂದಾಗ, ಪನೀರ್‌ ಬಟರ್‌ ಮಸಾಲ, ಬೇಬಿಕಾರ್ನ್ ಕರ್ರಿ ಮಾಡಿ ಬಡಿಸಬಹುದು. ಮನೆಯಲ್ಲಿಯೇ ಮಾಡುವ ಈ ತಿನಿಸುಗಳು ಹೋಟೆಲ್‌ನಲ್ಲಿ ಮಾಡಿದಷ್ಟೇ ರುಚಿಯಾಗಿ, ಅದಕ್ಕಿಂತಲೂ ಹೆಚ್ಚು ಆರೋಗ್ಯಕರವಾಗಿ ಇರುತ್ತದೆ.

1. ಪನೀರ್‌ ಬಟರ್‌ ಮಸಾಲ
ಬೇಕಾಗುವ ಸಾಮಗ್ರಿ: ಬೆಣ್ಣೆ – 3 ಚಮಚ, ಪನೀರ್‌- 100 ಗ್ರಾಂ, ಟೊಮೇಟೊ -3, ಈರುಳ್ಳಿ- 2, ಚಕ್ಕೆ- 1 ಇಂಚು, ಜೀರಿಗೆ- 1 ಚಮಚ, ಶುಂಠಿ- 1 ಇಂಚು, ಹಸಿಮೆಣಸಿನಕಾಯಿ- 3, ಒಣಮೆಣಸಿನಪುಡಿ- 1 ಚಮಚ, ಅರಿಶಿನ- ಅರ್ಧ ಚಮಚ, ಧನಿಯಾ ಪುಡಿ- 1 ಚಮಚ, ಗೋಡಂಬಿ- 15, ಗರಂ ಮಸಾಲ- ಅರ್ಧ ಚಮಚ, ಕಸೂರಿ ಮೇಥಿ- ಅರ್ಧ ಚಮಚ, ರುಚಿಗೆ ಉಪ್ಪು, ಏಲಕ್ಕಿ.

ಮಾಡುವ ವಿಧಾನ: ಬಾಣಲೆಗೆ ಮೊದಲು ಬೆಣ್ಣೆ ಹಾಕಿ, ಜೀರಿಗೆ-ಚಕ್ಕೆ ಹಾಕಿ ಹುರಿಯಿರಿ. ಇದಕ್ಕೆ ಸಣ್ಣದಾಗಿ ಹೆಚ್ಚಿದ ಶುಂಠಿ- ಹಸಿಮೆಣಸು ಹಾಕಿ. ಹೆಚ್ಚಿದ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೂ ಫ್ರೆç ಮಾಡಿ. ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿದ ಟೊಮೇಟೊ ಹಾಕಿ ಚೆನ್ನಾಗಿ ಬೇಯಿಸಿ. ಈಗ ಅರಿಶಿನ, ಒಣಮೆಣಸಿನಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಬೆರೆಸಿ. ಗೋಡಂಬಿಯನ್ನು ನುಣ್ಣಗೆ ರುಬ್ಬಿ, ಬೆರೆಸಿ. ಈಗ ಪನೀರ್‌ ಕ್ಯೂಬ್ಸ್ ಹಾಕಿ ಐದು ನಿಮಿಷ ಕುದಿಸಿ. ಕೊನೆಯಲ್ಲಿ ಗರಂ ಮಸಾಲ, ಕಸೂರಿ ಮೇಥಿ ಹಾಕಿ ಕೂಡಿಸಿ ಕೆಳಗಿಳಿಸಿ. ಇದನ್ನು ಚಪಾತಿ, ನಾನ್‌, ರೋಟಿಯೊಂದಿಗೆ ಸವಿಯಬಹುದು.

2. ಬೇಬಿಕಾರ್ನ್ ಕರ್ರಿ
ಬೇಕಾಗುವ ಸಾಮಗ್ರಿ: ಬೇಬಿ ಕಾರ್ನ್- 10, ಪಲಾವ್‌ ಎಲೆ-1, ಈರುಳ್ಳಿ- 1, ಟೊಮೇಟೊ-2, ಜೀರಿಗೆ- 1 ಚಮಚ, ಏಲಕ್ಕಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಅರಿಶಿನ-ಧನಿಯ ಪುಡಿ- ಒಣಮೆಣಸಿನಪುಡಿ-ಜೀರಿಗೆ ಪುಡಿ-ಗರಂ ಮಸಾಲ- ತಲಾ ಅರ್ಧ ಚಮಚ, ಗೋಡಂಬಿ ಪೇಸ್ಟ್‌- ಅರ್ಧಕಪ್‌, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ, ಜೀರಿಗೆ ಹಾಕಿ, ಹೆಚ್ಚಿದ ಟೊಮೇಟೊ ಹಾಕಿ ಫ್ರೆç ಮಾಡಿ, ಆರಿದ ನಂತರ ಅದನ್ನು ರುಬ್ಬಿ. ಅದೇ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಪಲಾವ್‌ ಎಲೆ, ಏಲಕ್ಕಿ, ಜೀರಿಗೆ ಹಾಕಿ ಘಂ ಎನ್ನುವವರೆಗೆ ಹುರಿದು, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ, ರುಬ್ಬಿದ ಟೊಮೇಟೊ ಸೇರಿಸಿ ಮುಚ್ಚಳ ಹಾಕಿ ಹತ್ತು ನಿಮಿಷ ಬೇಯಿಸಿ. ಈಗ ಅರಿಶಿನ, ಒಣಮೆಣಸಿನಪುಡಿ, ಧನಿಯ ಪುಡಿ, ಜೀರಿಗೆ ಪುಡಿ, ಗೋಡಂಬಿ ಪೇಸ್ಟ್‌ ಹಾಗೂ ಒಂದು ಕಪ್‌ ನೀರು ಹಾಕಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಬೇಬಿ ಕಾರ್ನ್ ಹಾಕಿ ಹತ್ತು ನಿಮಿಷ ಕುದಿಸಿ. ಗರಂ ಮಸಾಲ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಬೇಬಿಕಾರ್ನ್ ಕರ್ರಿ ತಯಾರು.

3. ಟೊಮೇಟೊ ಕುರ್ಮ
ಬೇಕಾಗುವ ಸಾಮಗ್ರಿ: ಟೊಮೇಟೊ -3, ಈರುಳ್ಳಿ- 2, ಹುರಿಗಡಲೆ- ಒಂದು ಹಿಡಿ, ಕೊತ್ತಂಬರಿ ಸೊಪ್ಪು- ಅರ್ಧ ಕಂತೆ, ಕರಿಬೇವು, ಗೋಡಂಬಿ, ಸೋಂಪು- 2 ಚಮಚ, ಧನಿಯ- 1 ಚಮಚ, ಹಸಿಮೆಣಸು- 2, ತೆಂಗಿನ ತುರಿ- 1 ಕಪ್‌, ಸಾಸಿವೆ-ಜೀರಿಗೆ- 1 ಚಮಚ, ಚಕ್ಕೆ- 1 ಇಂಚು, ಉದ್ದಿನಬೇಳೆ- ಅರ್ಧ ಚಮಚ, ಅರಿಶಿನ-ಚಿಟಿಕೆ, ಒಣಮೆಣಸಿನಪುಡಿ- ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ತೆಂಗಿನತುರಿ, ಹುರಿಗಡಲೆ, ಗೋಡಂಬಿ, ಧನಿಯ, ಸೋಂಪಿನ ಕಾಳು, ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಜೀರಿಗೆ- ಸಾಸಿವೆ, ಚಕ್ಕೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಹೆಚ್ಚಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೂ ಫ್ರೈ ಮಾಡಿ. ಅರಿಶಿನ, ಒಣಮೆಣಸಿನಪುಡಿ, ಉಪ್ಪು ಹಾಕಿ ಬೆರೆಸಿ. ಈಗ ರುಬ್ಬಿಕೊಂಡ ಮಿಶ್ರಣವನ್ನು ಬೆರೆಸಿ ಸ್ವಲ್ಪ ನೀರು ಹಾಕಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಕರಿಬೇವು ಹಾಕಿ ಐದು ನಿಮಿಷ ಕುದಿಸಿ.

4. ತರಕಾರಿ ಸಾಗು
ಬೇಕಾಗುವ ಸಾಮಗ್ರಿ: ಕ್ಯಾರೆಟ್‌-ಬೀನ್ಸ್‌- ಹಸಿಬಟಾಣಿ -ಆಲೂಗಡ್ಡೆ- ತಲಾ ಒಂದು ಕಪ್‌, ಹುರಿಗಡಲೆ- ಅರ್ಧ ಕಪ್‌, ಕಾಯಿತುರಿ- 1 ಕಪ್‌, ಕೊತ್ತಂಬರಿ ಸೊಪ್ಪು – 1 ಸಣ್ಣಕಂತೆ, ಹಸಿಮೆಣಸಿನಕಾಯಿ- 5, ಶುಂಠಿ- ಅರ್ಧ ಇಂಚು, ಕರಿಮೆಣಸು, ಚಕ್ಕೆ-ಲವಂಗ, ಕರಿಬೇವು- ಒಂದು ಹಿಡಿ, ಅರಿಶಿನ-ಚಿಟಿಕೆ, ಜೀರಿಗೆ- ಸಾಸಿವೆ- ತಲಾ ಅರ್ಧ ಚಮಚ, ರುಚಿಗೆ ಉಪ್ಪು, ಎಣ್ಣೆ-ಸ್ವಲ್ಪ.

ಮಾಡುವ ವಿಧಾನ: ಮೊದಲು ಕಾಯಿತುರಿ, ಹುರಿಗಡಲೆ, ಶುಂಠಿ, ಲವಂಗ, ಚಕ್ಕೆ, ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ, ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಸಾಸಿವೆ-ಜೀರಿಗೆ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ, ತೊಳೆದು ಸಣ್ಣದಾಗಿ ಹೆಚ್ಚಿಕೊಂಡ ತರಕಾರಿಗಳನ್ನು ಹಾಕಿ, ಉಪ್ಪು- ನೀರು ಸೇರಿಸಿ ಬೇಯಿಸಿ. ತರಕಾರಿ ಬೆಂದ ನಂತರ, ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ತರಕಾರಿ ಸಾಗು ರೆಡಿ.

– ಶ್ರುತಿ ಕೆ.ಎಸ್‌., ತುರುವೇಕೆರೆ

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.