ಡೆನಿಮ್‌ ಸೀರೆ, ಜೀನ್ಸ್‌ಪ್ಯಾಂಟ್‌ ಬಿಚ್ಚಿ ಸೀರೆ ಉಟ್ಕೊಳ್ಳಿ!


Team Udayavani, Feb 8, 2017, 10:40 AM IST

denim.jpg

ನಾಟಕೀಯ ಅಥವಾ ಡ್ರಮಾಟಿಕ್‌ ಫ್ಯಾಶನ್‌ ಸ್ಟೇಟ್‌ಮೆಂಟ್‌ಗಳ ಬಗ್ಗೆ ನಿಮಗೆ ಆಸಕ್ತಿ ಇದ್ರೆ ಮೊದಲು ಸೋನಂ ಡ್ರೆಸ್‌ಗಳನ್ನು ಗಮನಿಸಿ. ಫ್ಯಾಶನ್‌ನಲ್ಲಿ ಆಕೆಯಷ್ಟು ಪ್ರಯೋಗಶೀಲತೆ ಇರುವ ಇನ್ನೊಬ್ಬ ನಟಿ ಬಾಲಿವುಡ್‌ನ‌ಲ್ಲಿ ಸಿಗಲ್ಲ. ಗೌರಮ್ಮನ ಥರ ಸೀರೆ ಉಟ್ಟು ತಲೆತುಂಬ ಹೂ ಮುಡಿಯೋ ಸುಂದರಿ ಇನ್ನೊಂದು ಕ್ಷಣದಲ್ಲಿ ಎಲ್‌ಬಿಡಿಯಂಥ ಸೆಕ್ಸಿ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳಬಹುದು. ಮೊನ್ನೆ ಮೊನ್ನೆ ಮುಂಬೈನಲ್ಲಿ ಸಹ ಕಲಾವಿದ ವಿನ್‌ ಡಿಸೆಲ್‌ ಜೊತೆ ತನ್ನ ಹಾಲಿವುಡ್‌ ಸಿನಿಮಾ ತ್ರಿಬಲ್‌ ಎಕ್ಸ್‌ನಲ್ಲಿ ಕಾಣಿಸಿಕೊಂಡ  ದೀಪಿಕಾ ಪಡುಕೋಣೆ ಡ್ರೆಸ್‌ ನಿಮ್ಮ ಕಣ್ಣಿಗೂ ಬಿದ್ದಿರಬಹುದು. ನಯೀಮ್‌ ಖಾನ್‌ ಡಿಸೈನ್‌ ಮಾಡಿರೋ ಗೋಲ್ಡನ್‌ ಗೌನ್‌ನ ಮುಂಭಾಗ ಡೀಪ್‌ ವಿ ಶೇಪ್‌ ಕಟ್‌ ಇದೆ. ಇಂಥ ಮಾದಕ ಉಡುಗೆಯನ್ನು ಸೋನಂ ವರ್ಷಗಳ ಹಿಂದೆಯೇ ತೊಟ್ಟು ಪಡ್ಡೆಗಳ  ನಿದ್ದೆ ಕದ್ದಿದ್ದರು. ಈಕೆ ಕಳೆದ ಸಲ ಕಾನ್‌ ಫೆಸ್ಟ್‌ನಲ್ಲಿ ತೊಟ್ಟ ಕಡುನೀಲಿ ಬಣ್ಣದ “ಪೈನ್‌ಸ್ಟೆàಕಿಂಗ್ಲಿ ಸ್ವಾನ್‌’ ಸೀರೆ ಮೇಲ್ನೋಟಕ್ಕೆ ರಬ್ಬರ್‌ ಸೀರೆ ಥರ ಇತ್ತು, ಇಡೀ ಕ್ಯಾನ್‌ಫೆಸ್ಟ್‌ನಲ್ಲಿ ಭಲೇ ಪ್ರಚಾರ ಗಿಟ್ಟಿಸಿಕೊಂಡ ಸೀರೆಯದು. ಸೋನಂ ಫ್ಯಾಶನ್‌ ಜಗತ್ತಿನ ಮೋಸ್ಟ್‌ ಡಿಸೈರೇಬಲ್‌ ಮಾಡೆಲ್‌ ಅಂತಾರೆ ಡಿಸೈನರ್‌ ಮಸಾಬಾ ಗುಪ್ತ. 

ಈಗ ಸೋನಂ ಮತ್ತೆ ಸುದ್ದಿಯಲ್ಲಿರೋದು ಮಸಾಬ ಗುಪ್ತ ಡಿಸೈನ್‌ ಹೊಸ ಸೀರೆ ಮೂಲಕ. ಇದು ಎಂಥ ಸೀರೆ ಅಂತೀರಿ? ನಿಮಗೆ ಜೀನ್ಸ್‌ ಪ್ಯಾಂಟ್‌ ಹಾಕ್ಕೊಂಡು ಗೊತ್ತಿರಬಹುದು, ಸ್ವಲ್ಪ ಬೋಲ್ಡ್‌ ಹುಡುಗಿಯಾದ್ರೆ ಡೆನಿಮ್‌ ಪುಟ್ಟ ಚೆಡ್ಡಿ ತೊಟ್ಟ ಅನುಭವ ಇರಬಹುದು, ಡೆನಿಮ್‌ ಓವರ್‌ಕೋಟ್‌ ಅಂತೂ ಎವರ್‌ಗ್ರೀನ್‌ ಬಿಡಿ. ಇಲ್ಲಿ ಮಸಾಬ ಗುಪ್ತ ಡಿಸೈನ್‌ ಮಾಡಿರೋದು ಡೆನಿಮ್‌ ಸೀರೆ ಅರ್ಥಾತ್‌ ನೀವು ತೊಡೋ ಜೀನ್ಸ್‌ ಪ್ಯಾಂಟ್‌ ಮೆಟೀರಿಯಲ್‌ನಲ್ಲಿ ತಯಾರಿಸಿರೋ ಸೀರೆ!

ಡೆನಿಮ್‌ ಸೀರೆಯನ್ನು ಸೋನಂ ಹಿಂದೆಯೂ ಒಮ್ಮೆ ಉಟ್ಟಿದ್ದನ್ನು ಈ ಫ್ಯಾಶನ್‌ ಪೇಜ್‌ನಲ್ಲೇ ನೀವು ಓದಿರಬಹುದು, ಬಟ್‌ ಇದು ಲೇಟೆಸ್ಟ್‌ ಡಿಸೈನ್‌.  ಮಸಾಬ ಗುಪ್ತ ಕ್ರಿಯೇಟಿವಿಟಿ ಈ ಡಿಸೈನ್‌ನಲ್ಲಿ ಎದ್ದು ಕಾಣಿ¤ದೆ, ಈ ಸೀರೆ ಏಕಕಾಲಕ್ಕೆ ಅತ್ಯಾಧುನಿಕವಾಗಿ ಹಾಗೂ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಕಾಣಿಸಿಕೊಂಡರೆ ಅದಕ್ಕೆ ಮಸಾಬ ಗುಪ್ತಗೆ ಸಲಾಂ ಹೇಳ್ಬೇಕು. “ಪ್ಯಾರಿಸ್‌ ಸ್ಟ್ರೀಟ್‌ ಸ್ಟೈಲ್‌ಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲದ ಬೆಸ್ಟ್‌ ಸ್ಟೈಲ್‌ ಇದು. ಈ ಸ್ಟೈಲ್‌ನಲ್ಲೊಂದು ಸಾಮರಸ್ಯ ಇದೆ. ಇದನ್ನು ಸಾಮಾನ್ಯ ಮಹಿಳೆಯಿಂದ ಹಿಡಿದು ಹೈ ಫೈ ಲೇಡೀಸ್‌ ಧರಿಸಬಹುದು. ಜೊತೆಗೆ ಹಳೆಯ ಡೆನಿಮ್‌ನ° ಈ ರೀತಿ ಮರುಬಳಕೆ ಮಾಡಬಹುದು’ ಅನ್ನೋದು ಫ್ಯಾಶನ್‌ ವಿಮರ್ಶಕರೋರ್ವರ ಅಭಿಪ್ರಾಯ. 

ಈ ಸೀರೆಯ ಡಿಸೈನ್‌ನಲ್ಲಿ ಮಸಾಬ ಗುಪ್ತ ಜೊತೆಗೆ ರಿಯಾ ಕಪೂರ್‌ ಕೈ ಜೋಡಿಸಿದ್ದಾರೆ. ಇಬ್ಬರ ಜಾಣ್ಮೆಯ ಒಟ್ಟುಮೊತ್ತದ ಹಾಗೆ ಕಾಣೋ ಡಿಸೈನ್‌ ಬಗ್ಗೆ ಬಾಲಿವುಡ್‌ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ಸೀರೆಯನ್ನು ಗಮನಿಸಿ, ಇದರಲ್ಲಿ ಹೈ ನೆಕ್‌ ಡೆನಿಮ್‌ ಬ್ಲೌಸ್‌ ಇದೆ. ಕೊರಳನ್ನು ತಬ್ಬಿ ಹಿಡಿದಂಥ ಪಟ್ಟಿಯಿದೆ. ಜೊತೆಗೆ ನಮ್ಮ ಸಾಂಪ್ರದಾಯಿಕ ಸೀರೆಯ ಪಲ್ಲು ಇದೆ. ಅದನ್ನು ಮುಂಭಾಗಕ್ಕೆ ತಂದಿದ್ದಾರೆ. ಜಾಳು ಜಾಳಾದ ಪ್ಯಾಂಟ್‌ ಪಾದದವರೆಗೂ ಬರುತ್ತೆ. ಇದು ಹೈ ವೆಸ್ಟ್‌ ಪ್ಯಾಂಟ್‌. ಮಧ್ಯೆ ಚಿನ್ನದ ಬಣ್ಣದ ಡಿಸೈನ್‌ ಬಣ್ಣದ ಏಕತಾನತೆಯನ್ನು ಮೀರುವಲ್ಲಿ ಸಹಾಯ ಮಾಡುತ್ತೆ. ಜೊತೆಗೆ ಕಂದುಬಣ್ಣದ ಬೆಲ್ಟ್ ಇರೋ ಕಾರಣ ಇಡೀ ಡ್ರೆಸ್‌ಗೆ ಕಂಟೆಂಪರರಿ ಲುಕ್‌ ಬಂದಿದೆ. ಬೆಲ್ಟ್ಗೆ ಮ್ಯಾಚಿಂಗ್‌ ಶೂ ಇದರ ಇನ್ನೊಂದು ಪ್ಲಸ್‌ ಪಾಯಿಂಟ್‌. ಇದರ ಜೊತೆಗೆ ಮೊಣ ಕೈ ಸಮೀಪ ಬಂಗಾರದ ಆಭರಣವನ್ನೂ ತೊಟ್ಟಿದ್ದಾರೆ. 

ಸ್ವಲ್ಪ ಸಡಿಲವಾದ ಬನ್‌ ಹೇರ್‌ಸ್ಟೈಲ್‌ ಡ್ರೆಸ್‌ಗೆ ಪೂರಕವಾಗಿದೆ. ನ್ಯೂಡ್‌ ರೂಟ್‌ ಮೇಕಪ್‌ನಲ್ಲಿ ಕೆನ್ನೆಗೆ ಬಳಿದಿರುವ ಬ್ಲಿಶ್‌ ಬಿಟ್ಟರೆ ನಸುಗುಲಾಬಿ ಬಣ್ಣದ ಲಿಪ್‌ಸ್ಟಿಕ್‌ ಅಷ್ಟೇ ಕಣ್ಣಿಗೆ ಬೀಳುತ್ತೆ. ಒಂದೇ ಮಾತಲ್ಲಿ ಹೇಳ್ಳೋದಾದ್ರೆ ಪಿಂಕ್‌ ಶೇಡ್‌ನ‌ ಸಿಂಪಲ್‌ ಮೇಕಪ್‌ ಇದೆ. 

ನಿಮಗೆ ಸ್ವಲ್ಪ ಡಿಸೈನಿಂಗ್‌ ಐಡಿಯಾ ಇದ್ದರೆ ನಿಮ್ಮ ಹಳೇ ಡೆನಿಮ್‌ನ° ಈ ಬಗೆಯ ಸೀರೆಯಾಗಿ ಮಾರ್ಪಡಿಸಬಹುದು. ಹೊಸತನ, ಕ್ರಿಯೇಟಿವಿಟಿ ಜೊತೆಗೆ ಟ್ರೆಂಡಿ ಸೀರೆಯುಟ್ಟ ಖುಷಿ, ಹೆಮ್ಮೆ ಎಲ್ಲ ಇರುತ್ತೆ. 

– ಪೀಕೆ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.