ನಾನು ಯಾರಿಗೂ ಬೇಡವಾದೆನಾ?

ಅಂತರಗಂಗೆ

Team Udayavani, Jun 12, 2019, 5:00 AM IST

h-2

ಐವತ್ತನಾಲ್ಕು ವರ್ಷದ ಕಮಲಮ್ಮನವರಿಗೆ ಉರಿಯೂತ ಜಾಸ್ತಿಯಾಗಿ ಸಂಧಿವಾತ ತಜ್ಞರಲ್ಲಿ ಚಿಕಿತ್ಸೆ ಪಡೆದಿದ್ದರೂ ಪ್ರಯೋಜನವಾಗಿರಲಿಲ್ಲ. ದಿನನಿತ್ಯದ ಜೀವನವೇ ಕಷ್ಟವಾದಂತೆ ಅನಿಸುತಿತ್ತು. ಮಂಡಿನೋವು ಜಾಸ್ತಿಯಾಗಿ ಮಂಚ ಹತ್ತಿ ಇಳಿಯುವುದು ಪ್ರಯಾಸವಾಗಿತ್ತು. ಬೆನ್ನು- ಭುಜದಲ್ಲಿ ಶಕ್ತಿ ಕುಂದಿದಂತೆ ಅನಿಸುತ್ತಿತ್ತು. ಹತ್ತು ಹೆಜ್ಜೆ ನಡೆದರೆ ಕಾಲುಗಳು ಜೋಮುಗಟ್ಟುತ್ತಿದ್ದವು. ಒಲೆಯ ಮೇಲಿಂದ ಕುಕ್ಕರ್‌ ಇಳಿಸುವುದು ಕಷ್ಟವಾಗುತಿತ್ತು. ಎಷ್ಟು ಮಾತ್ರೆ ನುಂಗಿದರೂ ಸಮಸ್ಯೆ ಕಡಿಮೆಯಾಗದೇ, ವೈದ್ಯರು ಮಾನಸಿಕ ಸ್ಥಿತಿಯ ವಿಶ್ಲೇಷಣೆಗಾಗಿ ನನ್ನ ಬಳಿ ಕಳಿಸಿದ್ದರು.

ಕಮಲಮ್ಮನವರ ಪತಿಗೆ, ಅವರು ನಿವೃತ್ತಿ ಹೊಂದಿದ ಮೇಲೆ ಮನೆಯಲ್ಲಿ ಚಿಕ್ಕಪುಟ್ಟ ಕೆಲಸಗಳು ಕಿರಿಕಿರಿಯಾಗುತ್ತಿದ್ದವು. ಬಲಗಾಲಿನಲ್ಲಿ ಅವರಿಗೆ ಬಲ ಇರಲಿಲ್ಲ. ಕಮಲಮ್ಮ ನಿವೃತ್ತಿ ಹೊಂದಲು ಇನ್ನೂ ಆರೇಳು ವರ್ಷಗಳಿದ್ದಾಗಲೇ ಕಮಲಮ್ಮನವರನ್ನು ಕೆಲಸಬಿಡಲು ಪುಸಲಾಯಿಸಿದ್ದರಂತೆ. ಕಮಲಮ್ಮ ಕೆಲಸಬಿಟ್ಟ ಮೇಲೆ, ಪತಿಗೆ ಅನುಕೂಲವಾದರೂ, ಕಮಲಮ್ಮನವರಿಗೆ ಮನೆ ಹಿತವೆನಿಸಲಿಲ್ಲ. ಜೊತೆಗೆ ಪತಿಗೆ ಕೋಪ ಜಾಸ್ತಿ. ಕಾಫೀ ಬೇಗ ಕೊಟ್ಟರೆ ಸಿಟ್ಟು; ಲೇಟಾದರಂತೂ ರೇಗಿಯೇಬಿಡುತ್ತಿದ್ದರು. ಗಂಡ- ಹೆಂಡತಿಯ ನಡುವೆ ಸಮರಸ ಇರಲಿಲ್ಲ. ಬರೀ ವಾಗ್ವಾದ. ಹೆಂಡತಿ ಆಫೀಸಿನ ಗೆಳತಿಯರೊಂದಿಗೆ ಸಿನಿಮಾ/ ಪ್ರವಾಸಗಳಿಗೆ ಹೋಗಲು ಪತಿಯ ತಕರಾರಿತ್ತು.

ಮಗ ಹೆಂಡತಿಯ ಗುಲಾಮನಂತೆ ವರ್ತಿಸುತ್ತಿದ್ದ. ಹೆಂಡತಿಯ ಆಣತಿ ಮೀರುತ್ತಿರಲಿಲ್ಲ. ತಾಯಿಯ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ. ಆಗಾಗ್ಗೆ ಕಮಲಮ್ಮನವರಿಗೆ ನೋವಾಗುತ್ತಿತ್ತು. ಚಿಕ್ಕವಳು ಮಗಳು. ಅನ್ಯಧರ್ಮೀಯನನ್ನು ಪ್ರೀತಿ ಮಾಡಿದ್ದಾಳೆ. ಇತ್ತ ಪ್ರೀತಿಸಿದ ಹುಡುಗ ಮದುವೆಗೂ ಒಪ್ಪುವುದಿಲ್ಲ. ಸ್ನೇಹವನ್ನೂ ಕೈ ಬಿಡುವುದಿಲ್ಲ. ಮಗಳ ಮದುವೆಗೆ ಹೊಸಾ ಸಂಬಂಧಗಳು ಬರುತ್ತಿವೆ. ಚಟಪಟಾಂತ ಮಾತನಾಡುತ್ತಿದ್ದ ಮಗಳು ಇತ್ತೀಚೆಗೆ ಯಾರೊಂದಿಗೂ ಮಾತೇ ಆಡುತ್ತಿಲ್ಲ.

ಕಮಲಮ್ಮನವರ ಉರಿಯೂತ ಜಾಸ್ತಿಯಾಗಲು ಮಾನಸಿಕ ಒತ್ತಡ ಕಾರಣ ಎಂಬುದು ಸುಸ್ಪಷ್ಟವಾಗಿತ್ತು. ಕಮಲಮ್ಮನವರ ಪತಿಯನ್ನು ಕರೆಸಿದ್ದೆ. ಅನೇಕ ಗಂಡಸರಿಗೆ ಕೌನ್ಸೆಲಿಂಗ್‌ನಲ್ಲಿ ನಂಬಿಕೆ ಇರುವುದಿಲ್ಲ. ಹೆಂಡತಿ ಗೆಳತಿಯರೊಂದಿಗೆ ಸಿನಿಮಾಗೆ ಹೋಗಬಾರದು ಅಷ್ಟೇ. ಜೊತೆಗೆ ಹೆಂಡತಿಯ ಮಾನಸಿಕ ತುಮುಲ ಅವರಿಗೆ ಅರ್ಥವಾಗದ ಸಮಾಚಾರ. ಮಗನನ್ನು ಕರೆಸಿದ್ದೆ. ಮಗ ಅವನ ಪ್ರಪಂಚದಲ್ಲಿ ಮುಳುಗಿದ್ದ. ತಾಯಿ ತನ್ನ ಅಪ್ಪನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬಹುದೆಂದು ಅವನ ಅನಿಸಿಕೆ. ಮಗನಾಗಿ ಅವನು ಹೇಗೆ ತಾಯಿಯ ಭಾವನೆಗಳಿಗೆ ಸ್ಪಂದಿಸಬಹುದೆಂದು ಅವನಿಗೆ ತಿಳಿದಿರಲಿಲ್ಲ. ಅದೇ ತನ್ನ ಹೆಂಡತಿಯ ತಾಯಿಯೊಂದಿಗೆ ಅತ್ಯಂತ ತಾಳ್ಮೆಯಿಂದ ವ್ಯವಹರಿಸುತ್ತಿದ್ದ.

ನಾನು ತಿರಸ್ಕೃತಳಾದವಳು ಎಂಬ ಭಾವ ಮನಸ್ಸಿನಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಕೌಟುಂಬಿಕ ಸಂಬಂಧಗಳು ಅರ್ಥ ಕಳೆದುಕೊಂಡು ಸ್ವಂತ ಮನೆಯೇ ಹಿಂಸೆಯಾಗುತ್ತದೆ. ನೌಕರಿಗೆ ರಾಜೀನಾಮೆ ಕೊಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದರು. ಮುಂದಿನ ಜೀವನದ ಬಗ್ಗೆ ಕಮಲಮ್ಮನವರಿಗೆ ಚಿಂತೆಯಾಗುತ್ತಿತ್ತು. ಹೀಗಾಗಿ, ಉರಿಯೂತದ ಸಮಸ್ಯೆ ಜಾಸ್ತಿಯಾಗಿತ್ತು. ಕಮಲಮ್ಮ ಈಗ ಮನೆಯಲ್ಲಿಯೇ ಸೀರೆ ಅಂಗಡಿ ತೆರೆದಿದ್ದಾರೆ. ತಮ್ಮ ಗ್ರಾಹಕರೊಂದಿಗೆ ಒಡನಾಟದಿಂದಾಗಿ, ಅವರಲ್ಲಿ ಇತ್ತೀಚೆಗೆ ಸ್ವಲ್ಪ ಉಲ್ಲಾಸ ಎನಿಸುತ್ತಿದೆ.

ವಿ.ಸೂ.: ತೀವ್ರ ಚಿಂತೆಯನ್ನು ದೂರ ಮಾಡಿಕೊಂಡರೆ, ಸಂಧಿವಾತದ ಸಮಸ್ಯೆ ನಿವಾರಣೆಯಾಗುತ್ತದೆ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್‌

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.