ಐವತ್ತಾಯ್ತು ಅಂತ ಅಳ್ಳೋದ್ಯಾಕೆ?

ಹಾಫ್ ಸೆಂಚುರಿಯ ನಂತರವೂ ಆನಂದ ಹೆಚ್ಚಲಿ

Team Udayavani, Sep 25, 2019, 5:16 AM IST

r-10

ಐವತ್ತು ವರ್ಷ ತುಂಬಿದಾಗ, ವಾಹ್‌, ಅರ್ಧ ಸೆಂಚುರಿ ದಾಟಿಬಿಟ್ಟೆ ಎಂದು ಗಂಡಸರು ಸಂಭ್ರಮಿಸುತ್ತಾರೆ. ಆದರೆ, ಹೆಂಗಸರ ಕತೆ ಹಾಗಲ್ಲ. 50 ವರ್ಷ ಎಂಬುದು ಹೆಂಗಸರ ಪಾಲಿಗೆ ಆರ್ಥಿಕವಾಗಿಯೂ ಅಂಥ ಸಂತಸದ ಸಮಯವೇನಲ್ಲ. ಹೆಚ್ಚುತ್ತಿರುವ ಮಕ್ಕಳ ವಿದ್ಯಾಭ್ಯಾಸದ ಖರ್ಚು, ಚಿಕಿತ್ಸೆಯ ವೆಚ್ಚ, ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ, ಹಣದುಬ್ಬರ, ನಿವೃತ್ತಿಯ ನಂತರ ಮುಂದೇನು ಎಂಬ ಚಿಂತೆ… ಇವೆಲ್ಲಾ ಮಹಿಳೆಯನ್ನು ಇನ್ನಷ್ಟು ಕುಗ್ಗಿಸುತ್ತವೆ.

“ನಲವತ್ತು, ತಾರುಣ್ಯದ ವೃದ್ಧಾಪ್ಯ; ಐವತ್ತು, ವೃದ್ಧಾಪ್ಯದ ತಾರುಣ್ಯ’- ಇದು ಮಧ್ಯ ವಯಸ್ಸಿನ ಕುರಿತು ಪ್ರಸಿದ್ಧ ಲೇಖಕ ವಿಕ್ಟರ್‌ ಹ್ಯೂಗೋನ ಮಾತು.

ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು, ಮನೆ…ಹೀಗೆ, ಜೀವನದಲ್ಲಿ ಒಂದು ಮಟ್ಟಿಗೆ ಸಾಧಿಸಿದ್ದೇನೆ ಎನ್ನುವ ತೃಪ್ತಿಯಲಿದ್ದ ಆಕೆಗೆ ಇದ್ದಕ್ಕಿದ್ದಂತೆ ಕನ್ನಡಿಯಲ್ಲಿ ಕಂಡಿದ್ದೇನು?ಅಲ್ಲಲ್ಲಿ ಹೊಳೆಯುವ ಬೆಳ್ಳಿಕೂದಲು, ಕಣ್ಣಂಚಿನ ಮಡಿಕೆ, ಮುಖದ ನೆರಿಗೆ, ಹೆಚ್ಚುವ ದೇಹದ ತೂಕ, ಒರಟಾದ ಚರ್ಮ… ಅರೆ! ಜಿಂಕೆಮರಿಯಂತೆ ಜಿಗಿದಾಡಿ, ಅಂದುಕೊಂಡಿದ್ದನ್ನೆಲ್ಲ ಸಾಧಿಸುತ್ತೇನೆ, ಹೊಸದಾಗಿ ಏನನ್ನಾದರೂ ಮಾಡುತ್ತೇನೆ ಎನ್ನುವ ಹುರುಪಿನ ದಿನಗಳು ಎಲ್ಲಿ ಹೋದವು? ಎಲ್ಲದಕ್ಕೂ ಹೆದರುವ ಜೀವ, ಕಾಡುವ ಹತಾಶ ಭಾವ-ಏನಾಗಿದೆ? ಹೆಚ್ಚೇನಿಲ್ಲ; ವಯಸ್ಸು ಐವತ್ತಾಗಿದೆ ಅಷ್ಟೇ!

ಬಾಲ್ಯ, ಹರೆಯ, ವೃದ್ಧಾಪ್ಯ ಇವು ಮಾನವ ಜೀವನದ ಮೂರು ಪ್ರಮುಖ ಹಂತಗಳು.ಬಾಲ್ಯದ ಮುಗ್ಧತೆ ಚೆಂದವಾದರೆ, ಹರೆಯದಲ್ಲಿ ಎಲ್ಲವೂ ಅಂದ.ಅದೇ ನಲವತ್ತನ್ನು ದಾಟಿ ಐವತ್ತಕ್ಕೆ ಕಾಲಿಡುತ್ತಿದ್ದಂತೆ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳ ಚಕ್ರಕ್ಕೆ ಸಿಲುಕಿ ಮಹಿಳೆಯರು ಒದ್ದಾಡುವುದು ಸಹಜ.ಬಹಳಷ್ಟು ಸಂದರ್ಭಗಳಲ್ಲಿ ಐವತ್ತರ ನಂತರದ ಬದುಕು ಮಹಿಳೆಗೆ ಸಂಕ್ರಮಣ ಕಾಲವಷ್ಟೇ ಅಲ್ಲ, ಸಂಘರ್ಷದ ಕಾಲವೂ ಹೌದು.

ದೈಹಿಕ-ಮಾನಸಿಕ ಸಮಸ್ಯೆಗಳು
ನಲವತ್ತರ ಅಂಚಿನಲ್ಲಿ ಕಂಡುಬರುವ “ವಯಸ್ಸಾಗುವಿಕೆ’ಯ ಆರಂಭಿಕ ಲಕ್ಷಣಗಳು ಐವತ್ತರಲ್ಲಿ ಪ್ರಖರವಾಗುತ್ತವೆ. ದೇಹದ ಜೀವಕೋಶಗಳ ಸಾಮರ್ಥ್ಯ ಕುಗ್ಗಿದಂತೆ ಮತ್ತು ಜೀವನಶೈಲಿಯ ಪರಿಣಾಮವಾಗಿ ಮಧುಮೇಹ, ಏರಿದ ರಕ್ತದೊತ್ತಡ. ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಪೊಳ್ಳು ಮೂಳೆಗಳು ಜೊತೆಯಾಗುತ್ತವೆ. ಹೀಗಾಗಿ ಕೈ-ಕಾಲು ನೋವು ಶುರುವಾಗುತ್ತದೆ. ಆನಂತರದಲ್ಲಿ ಒಂದೊಂದಾಗಿ ರೋಗ-ತೊಂದರೆಗಳ ದಾಳಿ. ಇದರ ಜತೆಗೇ ಋತುಬಂಧವಾಗಿ ನಿಶ್ಶಕ್ತಿ, ಕುಗ್ಗಿದ ಸಾಮರ್ಥ್ಯ,ಸಿಟ್ಟು-ಸಿಡಿಮಿಡಿ -ಕಿರಿಕಿರಿ. ಕ್ಯಾನ್ಸರ್‌ನಂಥ ರೋಗಗಳ ಸಂಭವನೀಯತೆ ಹೆಚ್ಚಾಗಿಬಿಟ್ಟರೆ ಎಂಬ ಭಯ.

ವಯೋಸಹಜವಾಗಿ ಆಗುವ ಬದಲಾವಣೆಗಳಿಂದ ಮಹಿಳೆಯ ಬಾಹ್ಯರೂಪವೂ ಬದಲಾಗುತ್ತದೆ.ಇದು ಸಹಜವಾದರೂ, ಮಹಿಳೆಯಲ್ಲಿ “ತಾನು ಆಕರ್ಷಕವಾಗಿಲ್ಲ, ಲೈಂಗಿಕವಾಗಿ ಅಸಮರ್ಥಳು, ಮಕ್ಕಳಾಗಲು ಸಾಧ್ಯವಿಲ್ಲ’ ಎಂಬ ಕೀಳರಿಮೆ ಹುಟ್ಟಿ ಜೀವನಸಂಗಾತಿಯ ಜತೆಯೂ ಸಂಬಂಧ ಹದಗೆಡುತ್ತದೆ. ಹರಯದ ಹುಮ್ಮಸ್ಸಿನಲ್ಲಿ ರಾಣಿಯಂತೆ ಹುಕುಂ ಮಾಡಿ, ಮಹಾರಾಣಿಯಂತೆ ಮೆರೆದಿದ್ದವಳು, ಬದಲಾದ ಸಂದರ್ಭದಲ್ಲಿ ಜಾರುವ ವಯಸ್ಸನ್ನು ನಿಲ್ಲಿಸಲಾಗದೇ ಅಸಹಾಯಕಳಾಗಿ ತೊಳಲಾಡುತ್ತಾಳೆ. ಇವೆಲ್ಲದರ ಜತೆ ಬದಲಾದ ಸನ್ನಿವೇಶಗಳು, ಪೋಷಕರ ಅನಾರೋಗ್ಯ/ಸಾವು, ಪತಿಯ ಕಾಯಿಲೆಯಂಥ ಘಟನೆಗಳು ಮಹಿಳೆಯನ್ನು ಕಂಗೆಡಿಸುತ್ತದೆ. ಇವೆಲ್ಲವೂ ಆಕೆಯ ಮೇಲೆ ಹೆಚ್ಚಿನ ಒತ್ತಡ, ಜವಾಬ್ದಾರಿ ಹೇರುತ್ತವೆ. ಪರಿಣಾಮ, ಕುಂದುತ್ತಿರುವ ದೇಹದ ಶಕ್ತಿ, ಗೊಂದಲಕ್ಕೊಳಗಾದ ಮನಸ್ಸು ಇವುಗಳ ಮೇಲೆ ಇನ್ನಷ್ಟು ಹೊರೆ, ಬದುಕು ಭಾರ ಅನ್ನಿಸತೊಡಗುತ್ತದೆ.

ಇವೆಲ್ಲದರ ಪರಿಣಾಮವಾಗಿ, ಅಂದರೆ ದೇಹ-ಮನಸ್ಸು-ಸಂಬಂಧಗಳ ಬದಲಾವಣೆಗಳಿಂದ ಮಹಿಳೆಯ ಆರೋಗ್ಯದಲ್ಲಿ ತೊಂದರೆಗಳು ಸಾಮಾನ್ಯ ಎಂಬಂತೆ ಆಗಿಬಿಡುತ್ತದೆ. ಆದರೆ, ಅಂಕಿಗಳಲ್ಲಿ ವಯಸ್ಸು ಎಷ್ಟೇ ಇರಲಿ, ಅದನ್ನು ಅನುಭವಿಸುವ ರೀತಿ ನಮ್ಮ ಮನಸ್ಸಿನಲ್ಲಿದೆ. ಆದ್ದರಿಂದ, ಬರಲಿರುವ ದಿನಗಳ ಬಗ್ಗೆ ಭಯ ಪಡುವುದಕ್ಕಿಂತ ಮಾಗಿದ ದೇಹ, ಮನಸ್ಸುಗಳ ಇಂದಿನ ಪ್ರಬುದ್ಧ ಜೀವನವನ್ನು ಆದಷ್ಟೂ ಸಂತೋಷವಾಗಿ ಕಳೆದರೆ, ಫಿಫ್ಟಿ ಕ್ಯಾನ್‌ ಬಿ ಫ‌ನ್‌!

ಐವತ್ತರಲ್ಲಿ ಬಾಳಪಥ ಹೀಗಿರಲಿ
-ದೈಹಿಕ ಬದಲಾವಣೆಗಳ ಬಗ್ಗೆ ಅತಿಯಾದ ಕಾಳಜಿ ಬೇಡ. ಆತ್ಮವಿಶ್ವಾಸ ಹೆಚ್ಚಿಸುವ, ವಯಸ್ಸಿಗೆ ಸೂಕ್ತ ಅನ್ನಿಸುವ ಹಿತ-ಮಿತ ಅಲಂಕಾರ ಇರಲಿ.
-ಸಂಗಾತಿಯೊಡನೆ ಕೇವಲ ದೈಹಿಕ ಸಂಬಂಧವಷ್ಟೇ ಅಲ್ಲ, ಭಾವನಾತ್ಮಕ-ಮಾನಸಿಕ ಆತ್ಮೀಯತೆ.
-ಒಳ್ಳೆಯ ಸಮತೋಲನ ಆಹಾರ, ಸರಿಯಾದ ಸಮಯಕ್ಕೆ ನಿದ್ದೆ ಮತ್ತು ನಿತ್ಯ ಅರ್ಧಗಂಟೆ ವ್ಯಾಯಾಮ.
-ಮುಂದಿನ ದಿನಗಳಿಗಾಗಿ ಹಣ ಉಳಿಸುವ ದೂರದೃಷ್ಟಿ.
-ಮಕ್ಕಳು ದೂರದಲ್ಲಿದ್ದರೂ ಪತ್ರ, ದೂರವಾಣಿ, ಇ-ಮೇಲ್‌ ಮೂಲಕ ಅವರೊಡನೆ ನಿರಂತರ ಸಂಪರ್ಕ.
-ನೃತ್ಯ, ಸಂಗೀತ, ಚಿತ್ರಕಲೆ, ನಾಟಕ, ತೋಟಗಾರಿಕೆ ಹೀಗೆ ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಮನಸ್ಸಿಗೆ ಖುಷಿ ಕೊಡುವ ಏನನ್ನಾದರೂ ಹೊಸತನ್ನು ಕಲಿಯುವ ಪ್ರಯತ್ನ ಮಾಡಿ.
-ದೈನಂದಿನ ಏಕತಾನತೆ ಕಳೆಯಲು ಪುಟ್ಟ ಪ್ರವಾಸ, ಗೆಳತಿಯರೊಂದಿಗೆ ಹರಟೆ, ಪಾರ್ಕ್‌ನಲ್ಲಿ ತಿರುಗಾಟ.
-ಆರೋಗ್ಯದ ಬಗ್ಗೆ ಕಾಳಜಿ, ನಿಯಮಿತವಾಗಿ ವೈದ್ಯರ ಭೇಟಿ.

ಎಂಪ್ಟಿ ನೆಸ್ಟ್‌ ಸಿಂಡ್ರೋಮ್‌!
ಪ್ರಕೃತಿಯಲ್ಲಿ ಪಕ್ಷಿಗಳು ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಗಳು ಹೊರಬರುತ್ತವೆ. ಆ ಮರಿಗಳ ಆರೈಕೆಯ ಸಂಪೂರ್ಣ ಹೊಣೆ ಪಕ್ಷಿಗಳದ್ದು. ರೆಕ್ಕೆ ಬಲಿತ ಮರಿಗಳು ಸ್ವತಂತ್ರವಾಗಿ ಹಾರಬೇಕು, ತಮ್ಮಷ್ಟಕ್ಕೆ ತಾವೇ ಬದುಕಬೇಕು. ಕಡೆಗೊಂದು ದಿನ ಗೂಡನ್ನು ಬಿಟ್ಟು ಮತ್ತೆಲ್ಲೋ ತಮ್ಮ ಗೂಡನ್ನು ಕಟ್ಟುತ್ತವೆ. ಮೊದಲಿದ್ದ ಗೂಡು ಖಾಲಿ !ಇದು ನಿಸರ್ಗ ನಿಯಮ.ಇದು ಮಾನವರಿಗೂ ಅನ್ವಯವಾಗುತ್ತದೆ.ತಂದೆ-ತಾಯಿ ಮಕ್ಕಳನ್ನು ಪಡೆದು ಅವರನ್ನು ಲಾಲಿಸಿ ಪಾಲಿಸುತ್ತಾರೆ. ಮಗು ತನ್ನ ಬದುಕಿನ ಮೊದಲ ಕೆಲವು ವರ್ಷಗಳು ತಾಯಿಯ ಮೇಲೆಯೇ ಸಂಪೂರ್ಣ ಅವಲಂಬಿತವಾಗಿರುತ್ತದೆ. ಕ್ರಮೇಣ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಾಗ/ಮುಗಿದಾಗ ಬೇರೆಡೆ ಹೋಗುವುದು ಅನಿವಾರ್ಯ.ಆಗ ಅದುವರೆಗೆ ಮಕ್ಕಳ ಬೇಕು-ಬೇಡಗಳನ್ನು ಪೂರೈಸಿದ,ಅವರ ಜವಾಬ್ದಾರಿ ಹೊತ್ತ ತಾಯಿಗೆ ಅಗಲುವಿಕೆ ಬೇಸರ ಕಾಡುವುದು ಸಹಜ.ಇದನ್ನು “ಖಾಲಿ ಗೂಡಿನ ಸಹಲಕ್ಷಣ’ ಎನ್ನಲಾಗುತ್ತದೆ.ಇದಕ್ಕೆ ಹೊಂದಿಕೊಳ್ಳಲು ಸಾಮಾನ್ಯವಾಗಿ ತಗಲುವ ಸಮಯ ಒಂದು ವರ್ಷ.ಇದು ಜೀವನದ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮುನ್ನಡೆಯುವಾಗ ಆಗುವ ಪ್ರಕ್ರಿಯೆ. ಪೋಷಕರಿಬ್ಬರಲ್ಲೂ ಇದು ಕಾಣಿಸಬಹುದಾದರೂ ಮಧ್ಯ ವಯಸ್ಸಿನ ತಾಯಿಯರಲ್ಲಿ ಹೆಚ್ಚಾಗಿ ಕಾಣಿಸುತ್ತದೆ.

-ಡಾ.ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.