ಮುಟ್ಟಿದರೆ ಮುನಿಯುವಳು…


Team Udayavani, Feb 6, 2019, 12:30 AM IST

s-3.jpg

ಈ ಮದುವೆಯಲ್ಲಿ ಇರಲು ಸಾಧ್ಯವೇ ಇಲ್ಲವೆಂದು ಗಂಡ ಸಮೀರ್‌ (30) ಹಠಾತ್‌ ಆಗಿ ಮನೆ ಬಿಟ್ಟು ಬಿಟ್ಟು ಹೋಗಿರುವುದು ಲಲಿತಾಳಲ್ಲಿ ಆತಂಕ ಮೂಡಿಸಿದೆ. ಮದುವೆಯಾಗಿ ಇನ್ನೇನು ವರ್ಷವಾಗುತ್ತಾ ಬಂದರೂ, ಲಲಿತಾಗೆ (27) ಗಂಡನ ಸಾಮೀಪ್ಯವೇ ಹಿತವಾಗಿಲ್ಲ. ಮುಟ್ಟಕ್ಕೂ ಬಿಡದೇ ಕಾಡುತ್ತಾಳೆ. ಅವನಿಗೆ ಬೇರೆ ದಂಪತಿಯನ್ನು ನೋಡಿದಾಗ ಹೊಟ್ಟೆಕಿಚ್ಚು. ಸಾರ್ವಜನಿಕ ಸ್ಥಳದಲ್ಲಿ ಕೈ ಹಿಡಿದುಕೊಂಡರೆ ಮಿಸುಕಾಡುತ್ತಾಳೆ. ರಾತ್ರಿಯ ಹೊತ್ತು ಇವನೇನು ರೇಪ್‌ ಮಾಡಬಹುದು ಅನ್ನುವ ರೀತಿ, ಕೋಣೆಯ ಮೂಲೆಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು, ಗಡಗಡಾಂತ ನಡುಗಿದ್ದಾಳೆ. ಇವನಿಗೆ ಅವಳಿಂದ ತಿರಸ್ಕೃತನಾದಂತೆ ಅನಿಸುತ್ತದೆ. ಗಂಡನ ಸಂಕಷ್ಟ ಅರ್ಥವಾಗಿ, ಸಾಕಷ್ಟು ಪ್ರಯತ್ನ ಮಾಡಿದ್ದರೂ, ಇಬ್ಬರೂ ಸುಖೀಯಾಗಿಲ್ಲ.

ಮದುವೆ ನಿಶ್ಚಯವಾದ ಕೆಲವು ವಾರಗಳಲ್ಲಿ ಗಂಡು- ಹೆಣ್ಣು ಸರಸದಿಂದ ಮಾತನಾಡುತ್ತಾ ಹನಿಮೂನ್‌ ಬಗ್ಗೆ ಒಟ್ಟಿಗೆ ಕನಸು ಕಾಣುವುದು ಸಹಜ. ಆದರೆ, ಲಲಿತಾ ಅವನನ್ನು ಬಯ್ದಿದ್ದಾಳೆ. ಅವಳಿಗೆ ಆ ಚರ್ಚೆಯೆಲ್ಲಾ ಅಸಹ್ಯವಂತೆ!! ಇವಳು ಮಾಡಿದ ರಂಪಾಟಕ್ಕೆ ಹೆದರಿ, ಮಾವನವರಿಗೆ ಫೋನ್‌ ಮಾಡಿ, ಲಲಿತಾಗೆ ಮದುವೆ ಇಷ್ಟವಿಲ್ಲದಿದ್ದರೆ ತಿಳಿಸಿ ಎಂದು ಅವಲತ್ತುಕೊಂಡಿದ್ದ. ಸ್ವಲ್ಪ ನಾಚಿಕೆ ಇರಬಹುದು ಎಂದು ಮಾವ, ಸಮಾಧಾನ ಮಾಡಿದ್ದರು. ಲಲಿತಾ ಕಾನೂನು ಪದವೀಧರೆ, ಕೆಲಸದಲ್ಲಿದ್ದಾಳೆ. ನೋಡಲು ಮುದ್ದಾಗಿದ್ದಾಳೆ. ಮಾವನ ಮಾತಿಗೆ ಒಪ್ಪಿಕೊಂಡು ಸಮೀರ್‌ ಮುಂದುವರಿದ.

ಕೆಲವು ಹೆಣ್ಣುಮಕ್ಕಳಿಗೆ ಸೆಕ್ಸ್‌ ಬಗ್ಗೆ ಒಂದು ಮಟ್ಟದ ಮಡಿವಂತಿಕೆ ಸಹಜ. ಸತಿ- ಪತಿಗಳ ನಡುವೆ ಸರಸ ಸಲ್ಲಾಪವೇ ಇರದ, ಅಸಹಜ ಭಯಕ್ಕೆ ಚಿಕಿತ್ಸೆಯ ಅಗತ್ಯವಿದೆ. ಮೊದಲು ಸಮೀರನ ಮನಸ್ಸನ್ನು ಸಮಾಧಾನಕ್ಕೆ ತರಲು ನನ್ನ ಬಳಿ ಪ್ರತಿಯೊಂದು ಘಟನೆಯನ್ನೂ ವಿವರಿಸಿ ಹೇಳಿಕೊಳ್ಳಲು ಅನುವು ಮಾಡಿಕೊಟ್ಟೆ. ಇದನ್ನು venting out ಎನ್ನುತ್ತಾರೆ. ಈ ಮಧ್ಯ, ಲಲಿತಾ ಪ್ರಸೂತಿ ತಜ್ಞರ ಬಳಿ ಸಲಹೆಗೆ ಹೋದಳು. ಹಲವಾರು ಪರೀಕ್ಷೆ ಮಾಡಲಾಯಿತು. ನಂತರ sexologist ಬಳಿ ಇಬ್ಬರನ್ನೂ, ಸಲಹೆಗಾಗಿ ಕಳಿಸಿದೆ. ಲೈಂಗಿಕ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಕಲ್ಪನೆಯೂ ಇರದೇ, ಗಂಡನಿಗೆ ಎಷ್ಟು ನೋವಾಗಬಹುದೆಂದು ಕೌನ್ಸೆಲಿಂಗ್‌ ಮೂಲಕ ತಿಳಿದುಕೊಂಡಳು. ಸಂಬಂಧ ಸುಧಾರಿಸಿತು.

ಹುಡುಗಿಗೆ ಎದೆ ಕಡಿಮೆ ಇದ್ದಲ್ಲಿ, ತನ್ನ ದೈಹಿಕ ಆಕರ್ಷಣೆಯ ಬಗ್ಗೆ ಹೀನಭಾವವಿರಬಹುದು; ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಕಿರುಕುಳವಾಗಿರಬಹುದು; ತಂದೆ, ಮಗಳ ಬಗ್ಗೆ ಉತ್ಕಟ ಪ್ರೇಮ ಮತ್ತು ಕಾಳಜಿ ಹೊಂದಿದ್ದು, ತಾಯಿ- ಮಗಳ ಸಂಬಂಧ ಜಾಳು ಜಾಳಗಿದ್ದಲ್ಲಿ, ತಂದೆ- ತಾಯಿ ಸದಾ ಜಗಳವಾಡುತ್ತಿದ್ದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಉದ್ವಿಗ್ನತೆ ಇದ್ದಲ್ಲಿ, ಹೆಣ್ಣು ಗಂಡಿನ ಪಾಲಿಗೆ ಗಗನಕುಸುಮ ಆಗುತ್ತಾಳೆ. ಸರಿಯಾಗಿ ಗುರುತಿಸಿ, ಚಿಕಿತ್ಸೆ ನೀಡಬಹುದು.

ಹೆಣ್ಣು ಮಕ್ಕಳು ಚಿಕ್ಕವರಿರುವಾಗ ಪರೀಕ್ಷಾಭಯ ಹೊಂದಿದ್ದರೆ; ಟೀವಿ ನೋಡುವಾಗ ಪ್ರೇಮಗೀತೆಗಳ ಬಗ್ಗೆ ಅತೀ ನಾಚಿಕೆ ಹೊಂದಿದ್ದರೆ; ಕಾರಣವಿಲ್ಲದೆ ಅಳುತ್ತಿದ್ದರೆ; ಹಟಮಾರಿಗಳಗಿದ್ದರೆ ಮತ್ತು ಕೀಳರಿಮೆ ಇದ್ದಲ್ಲಿ ಒಮ್ಮೆ ಕೌನ್ಸೆಲಿಂಗ್‌ ಕೊಡಿಸಿ. ದೈಹಿಕ ವ್ಯಾಯಾಮವೂ ಅತ್ಯಗತ್ಯ.

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.