ಮುಖದ ತೇವ ಕಾಪಾಡಿ…ಫೀವರ್ ಆ್ಯಂಡ್ ಲವ್ಲಿ
ಮುಖಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ.
Team Udayavani, Nov 28, 2020, 9:45 AM IST
1. ಯೋಗ್ಯ ಮಾಯಿಶ್ಚರೈಸರ್: ಮುಖ ಡಲ್ ಕಾಣಿಸುತ್ತಿದೆ ಅಂದ ಕೂಡಲೆ ಹೆಚ್ಚಿನವರು ಗಾಢ ಮೇಕಪ್ ಮೊರೆ ಹೋಗುತ್ತಾರೆ. ಆಗ ಮಾಯಿಶ್ಚರೈಸರ್ ಬಳಸುವುದನ್ನು ನಿರ್ಲಕ್ಷಿಸುತ್ತಾರೆ. ಅದು ತಪ್ಪು. ಸರಿಯಾದ ಮಾಯಿಶ್ವರೈಸರ್ ಬಳಸಿದ್ರೆ ಚರ್ಮದ ತೇವ, ಕಾಂತಿ ಹೆಚ್ಚುತ್ತದೆ.
2. ಮುಖದ ತೇವ ಕಾಪಾಡಿ: ಆರೋಗ್ಯ ಹದಗೆಟ್ಟಾಗ ಸಾಮಾನ್ಯವಾಗಿ ಚರ್ಮದ ಕಾಳಜಿಯನ್ನು ಕಡೆಗಣಿಸುತ್ತೇವೆ. ಮುಖ ತೊಳೆಯದೆ, ಕ್ರೀಂ ಹಚ್ಚದೇ ಇರೋದ್ರಿಂದ ಚರ್ಮ ಒಣಗುತ್ತದೆ. ಹಾಗಾಗಿ ಏನೇ ಆದರೂ ದಿನಕ್ಕೆರಡು ಬಾರಿ ಮುಖ ತೊಳೆಯುವ ಅಭ್ಯಾಸ ಬಿಡದಿರಿ.
3.ಬಿಸಿ ನೀರ ಶಾಖ: ಮುಖಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಜ್ವರ, ನೆಗಡಿಯ ಅಥವಾ ನೀವು ತೆಗೆದುಕೊಂಡ ಮಾತ್ರೆಯ ಕಾರಣದಿಂದ ಮುಖ ಕೆಂಪಾಗಿದ್ದರೆ, ಬಿಸಿನೀರಿನ ಶಾಖ ನೀಡಿ ಆಹ್ಲಾದ ಪಡೆಯಬಹುದು.
4. ಕಪ್ಪುಗಟ್ಟಿದ ಕಣ್ಣ ಮೇಲೆ ಟೀ ಬ್ಯಾಗ್: ಜ್ವರ ಬಂದಾಗ ಕೆಲವರಿಗೆ ನಿದ್ದೆ ಸರಿಯಾಗಿ ಬಾರದೇ, ಕಣ್ಣಿನ ಸುತ್ತ ಕಪ್ಪುವರ್ತುಲ ಮೂಡುತ್ತದೆ. ಅದರಿಂದ ಪಾರಾಗಲು, ಟೀ ಬ್ಯಾಗ್ ಅನ್ನು ತೇವ ಮಾಡಿ 15-20 ನಿಮಿಷ ಕಣ್ಣಿನ ಮೇಲಿಟ್ಟುಕೊಳ್ಳಿ. ಅದೇ ರೀತಿ ಸೌತೆಕಾಯಿಯನ್ನು ತೆಳ್ಳಗೆ ಸ್ಲೆ„ಸ್ ಮಾಡಿ ಕಣ್ಣಿನ ಮೇಲಿಟ್ಟರೂ ಒಳ್ಳೆಯದು.
5. ಕಣ್ಣಿಗೆ ಪ್ರಾಮುಖ್ಯ ನೀಡಿ: ಮುಖದ ಸೌಂದರ್ಯಕ್ಕೆ ಕಣ್ಣು ಕಲಶವಿಟ್ಟಂತೆ. ಆರೋಗ್ಯ ಹದಗೆಟ್ಟಾಗ ಕಣ್ಣು ಕೆಂಪಾಗಿ, ಕಿರಿದಾಗಿ ಕಾಣುವುದು ಸಹಜ. ಆಗ ಸೂಕ್ತ ಕಾಡಿಗೆಯನ್ನು ಬಳಸಿ, ಕಣ್ಣು ಆಕರ್ಷಕವಾಗಿ ಕಾಣುವಂತೆ ಮಾಡಿ. ವಾಟರ್ಪ್ರೂಫ್ ಮಸ್ಕರಾ ಬಳಸುವುದು ಉತ್ತಮ.
6. ಜಾಸ್ತಿ ನೀರು ಕುಡಿಯಿರಿ: ಜ್ವರ ಬಂದಾಗ, ಅದರಲ್ಲೂ ವೈರಲ್ ಅಟ್ಯಾಕ್ನಿಂದ ಜ್ವರ ಬಂದಾಗ ದೇಹ ಹೆಚ್ಚು ನೀರನ್ನು ಅಪೇಕ್ಷಿಸುತ್ತದೆ. ಜಾಸ್ತಿ ನೀರು ಕುಡಿಯುವುದರಿಂದ ಚರ್ಮವೂ ಕಾಂತಿ ಪಡೆಯುತ್ತದೆ.
7. ತುಟಿಯ ಬಗ್ಗೆ ಗಮನ ಕೊಡಿ: ಜ್ವರ, ನೆಗಡಿ ಆದಾಗ ಮೂಗು ಕಟ್ಟಿಕೊಂಡು ಬಾಯಿಯ ಮೂಲಕ ಉಸಿರಾಡುವುದು ಅನಿವಾರ್ಯ. ಆಗ ತುಟಿಯ ಚರ್ಮ ಒಣಗಿ ಬಿರುಕು ಬಿಡುತ್ತದೆ. ಚರ್ಮಕ್ಕೆ ಮೃದುತ್ವ ನೀಡುವಂಥ ಲಿಪ್ಬಾಮ್ಗಳನ್ನು ಬಳಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ
ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು
ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’
ಫ್ಯಾಶನ್ ಶೋ ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ
ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ