ಫೋಟೊ ಆಸೆಗೆ ಕೂದಲು ಕಚಕ್‌…


Team Udayavani, Oct 2, 2019, 3:08 AM IST

phpto-asege

ಶಾಲೆಯಲ್ಲಿ ಪ್ರಾರ್ಥನೆಗೆ ನಿಂತಿದ್ದಾಗ, ನಮ್ಮ ನಾಲ್ಕು ಮಂದಿಯ ತಲೆ ಟೀಚರ್‌ಗೆ ವಿಚಿತ್ರವಾಗಿ ಕಂಡಿರಬೇಕು. “ಜಡೆಯಿಲ್ಲದ ನಾಲ್ಕು ಕೋತಿಗಳು ಇಲ್ಲಿ ಬನ್ನಿ. ನಿಮ್ಮ ಜಡೆಯನ್ನು ಯಾವ ದೇವರಿಗೆ ಮುಡಿ ಕೊಟ್ಟಿದ್ದೀರಿ? ಆ ದೇವರು ಪೂರ್ತಿ ಮುಡಿ ಕೇಳಲಿಲ್ವಾ?’… ಎಂದಾಗ ನಾಚಿಕೆ, ಭಯ, ಅವಮಾನವಾಗಿ ಅಳತೊಡಗಿದೆವು.

ಕೆಲವು ವರ್ಷಗಳ ಹಿಂದಿನ ಮಾತು. ಆಗ ಗ್ರಾಮಕ್ಕೊಂದು ಪಂಚಾಯತ್‌, ಹತ್ತು ಹಳ್ಳಿಗೊಂದು ಪೋಸ್ಟ್ಆಫೀಸ್‌, ದೂರದಲ್ಲೊಂದು ಸರ್ಕಾರಿ ಆಸ್ಪತ್ರೆ, ಒಂದು ನ್ಯಾಯಬೆಲೆ ಅಂಗಡಿ, ಒಂದೆರಡು ದಿನಸಿ ಅಂಗಡಿ… ಇಷ್ಟೇ ಇದ್ದದ್ದು. ಬ್ಯೂಟಿಪಾರ್ಲರ್‌, ಫೋಟೋ ಸ್ಟುಡಿಯೋ, ಬಟ್ಟೆ ಅಂಗಡಿ, ಕ್ಲಿನಿಕ್‌ಗೆ ಪೇಟೆಗೇ ಹೋಗಬೇಕಿತ್ತು. ಆಗಷ್ಟೇ ಭಟ್ಕಳ ತಾಲೂಕಿನ ಬೆಳ್ಕೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಿತ್ತು. ಸುತ್ತಮುತ್ತಲಿನ ಇಪ್ಪತ್ತು-ಮೂವತ್ತು ಹಳ್ಳಿಗೆ ಅದೊಂದೇ ಪ್ರೌಢಶಾಲೆ.

ಐದ್ಹತ್ತು ಮೈಲುಗಳಿಂದ ಮಕ್ಕಳು ಓಡುತ್ತಾ, ಏದುಸಿರು ಬಿಡುತ್ತಾ ಆ ಶಾಲೆಗೆ ಬರುತ್ತಿದ್ದರು. ಬಗಲಿಗೆ ಸ್ಕೂಲ್‌ಬ್ಯಾಗ್‌ ಇರುತ್ತಿರಲಿಲ್ಲ. ಪುಸ್ತಕಗಳನ್ನು ಒಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ಮಡಚಿ, ಕೈಲಿ ಹಿಡಿದುಕೊಂಡು ಹೋಗುತ್ತಿದ್ದೆವು. ಮಳೆ ಬಂದಾಗ ಪಠ್ಯಪುಸ್ತಕಗಳನ್ನು ಎದೆಗಾನಿಸಿಕೊಂಡು, ಒದ್ದೆಯಾಗದಂತೆ ನೋಡಿಕೊಳ್ಳುತ್ತಿದ್ದೆವು. ಬೆಳಗ್ಗೆ ತಂಗಳನ್ನ, ರವೆ ರೊಟ್ಟಿ ಅಥವಾ ಗೋಧಿಹಿಟ್ಟಿನ ದೋಸೆ ತಿಂದು ಓಡಲು ಪ್ರಾರಂಭಿಸಿದರೆ, ಸಂಜೆ ಅದೇ ಸ್ಪೀಡಿನಲ್ಲಿ ಪುರ್ರನೆ ಹಾರಿ ಮನೆ ಸೇರುತ್ತಿದ್ದೆವು.

ಒಮ್ಮೆ ಹೈಸ್ಕೂಲಿನ ಗೆಳತಿಯೊಬ್ಬಳು, “ಬನ್ರೇ, ನಾವು ನಾಲ್ಕು ಮಂದಿ ಫೋಟೋ ತೆಗೆಸಿಕೊಳ್ಳೋಣ. ನಮ್ಮ ಬಳಿ ನೆನಪಿಗಾಗಿ ಒಂದು ಫೋಟೋವಾದರೂ ಇರಲಿ’ ಎಂದಳು. ನಮ್ಮೂರಲ್ಲಿ ಸ್ಟುಡಿಯೋ ಇರಲಿಲ್ಲ. ಭಟ್ಕಳಕ್ಕೆ ಹೋಗುವುದಾದರೂ ಸರಿಯೇ, ಫೋಟೋ ಬೇಕೇ ಬೇಕು ಅಂತ ಹೊರಟೆವು. ಅಲ್ಲಿನ ಸ್ಟುಡಿಯೋದವ ನಮ್ಮ ಮುಖ ನೋಡಿ, “ಅಡಗೂಲಜ್ಜಿ ಥರ ಕಾಣಿಸ್ತಿದ್ದೀರಿ. ಬ್ಯೂಟಿಪಾರ್ಲರ್‌ಗೆ ಹೋಗಿ ಹೇರ್‌ಸ್ಟೈಲ್‌ ಬದಲಿಸಿ, ಮೇಕಪ್‌ ಮಾಡಿಸ್ಕೊಂಡು ಬನ್ನಿ’ ಎಂದು ಉಚಿತ ಸಲಹೆ ಕೊಟ್ಟ.

ಫೋಟೊದಲ್ಲಿ ಚಂದ ಕಾಣಿಸಬೇಕೆಂಬ ಆಸೆಯಿಂದ ಬ್ಯೂಟಿಪಾರ್ಲರ್‌ ಎಲ್ಲಿದೆ ಅಂತ ಕೇಳಿ, ವಿಚಾರಿಸಿಕೊಂಡು ಹೊರಟೆವು. ಅಲ್ಲಿಯ ತನಕ ಗಂಡಸರ ಸಲೂನ್‌ ಬಗ್ಗೆ ತಿಳಿದಿತ್ತೇ ಹೊರತು, ಹೆಂಗಳೆಯರ ಹೆರಳು ಕತ್ತರಿಸುವವರ ಬಗ್ಗೆ ತಿಳಿದಿರಲಿಲ್ಲ. ಹೆದರುತ್ತಲೇ ಅಲ್ಲಿಗೆ ಹೋದೆವು. ನಾಲ್ಕೂ ಮಂದಿಯ ಮಾರುದ್ದದ ಜಡೆಯನ್ನು ಯು ಶೇಪ್‌, ವಿ ಶೇಪ್‌ ಹೆಸರಿನಲ್ಲಿ ಚೋಟುದ್ದ ಮಾಡಿದಳು ಅಲ್ಲಿದ್ದ ಹೆಂಗಸು. ನಂತರ ಮುಖಕ್ಕೆ ಒಂದಿಂಚಿನ ಮೇಕಪ್‌ ಮೆತ್ತಿಕೊಂಡು, ಲಿಪ್‌ಸ್ಟಿಕ್‌ ಬಳಿದುಕೊಂಡು, ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ನಮ್ಮ ಗುರುತು ನಮಗೇ ಸಿಗುತ್ತಿರಲಿಲ್ಲ.

ಸ್ಟುಡಿಯೋಗೆ ಹೋಗಿ, ಬೇಕು ಬೇಕಾದಂತೆ ಮೂರ್ನಾಲ್ಕು ಭಂಗಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಮನೆಗೆ ಬಂದೆ. ನನ್ನ ವೇಷ ನೋಡಿದ ಅಮ್ಮ, ಸಹಸ್ರ ನಾಮಾರ್ಚನೆ ಮಾಡಿ ಮಂಗಳಾರತಿ ಮಾಡಿದಳು. “ಬೇಕಿತ್ತಾ ನಿನಗೆ ಈ ಸಂಭ್ರಮ? ನೀನೇನು ಸಿನೆಮಾದಲ್ಲಿ ಕುಣಿಯೋ ಗೊಂಬೆನಾ? ಉದ್ದ ಜಡೆ ಎಷ್ಟು ಚಂದ ಕಾಣ್ತಿತ್ತು. ನಾಳೆ ಶಾಲೆಗೆ ಅದು ಹೇಗೆ ಎರಡುಜಡೆ ಹೆಣೆದುಕೊಳ್ತೀಯ?’ ಅಂದಾಗ ನನಗೂ ಗಾಬರಿಯಾಯ್ತು. ಮರುದಿನ ಎರಡು ಪುಕ್ಕ ಕಟ್ಟಿಕೊಂಡು ಶಾಲೆಗೆ ಹೋದೆ. ಶಾಲೆ ಯಲ್ಲಿ ಪ್ರಾರ್ಥನೆಗೆ ನಿಂತಿದ್ದಾಗ, ನಮ್ಮ ನಾಲ್ಕು ಮಂದಿಯ ತಲೆ ಟೀಚರ್‌ಗೆ ವಿಚಿತ್ರವಾಗಿ ಕಂಡಿರಬೇಕು. “ಜಡೆಯಿಲ್ಲದ ನಾಲ್ಕು ಕೋತಿಗಳು ಇಲ್ಲಿ ಬನ್ನಿ. ನಿಮ್ಮ ಜಡೆಯನ್ನು ಯಾವ ದೇವರಿಗೆ ಮುಡಿ ಕೊಟ್ಟಿದ್ದೀರಿ?

ಆ ದೇವರು ಪೂರ್ತಿ ಮುಡಿ ಕೇಳಲಿಲ್ವಾ?’ ಎಂದಾಗ ನಾಚಿಕೆ, ಭಯ, ಅವಮಾನವಾಗಿ ಅಳತೊಡಗಿದೆವು. “ಅದೇನು ಮಾಡ್ತೀರೋ ನನಗೆ ಗೊತ್ತಿಲ್ಲ. ದಿನವೂ ನೀವು ಜಡೆ ಹೆಣೆದು ರಿಬ್ಬನ್‌ ಕಟ್ಟಿಕೊಂಡೇ ಬರಬೇಕು’ ಎಂದಾಗ ನನ್ನ ಗೋಳಾಟ ಹೇಳತೀರದು. ಸ್ಟುಡಿಯೋಗೆ ಹೋಗೋಣವೆಂದ ಗೆಳತಿಗೆ ಬೈಯ್ಯುತ್ತಾ, ಅದಕ್ಕೆ ಒಪ್ಪಿದ ನನ್ನ ಬುದ್ಧಿಗೂ ಬೈದುಕೊಂಡೆ. “ಟೀಚರ್‌ ಸರಿಯಾಗಿ ಹೇಳಿದ್ದಾರೆ’ ಅಂತ ಅಮ್ಮ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದರು. ಕೂದಲಿನ ಬುಡದಿಂದಲೇ ರಿಬ್ಬನ್‌ ಸೇರಿಸಿ, ಜಡೆ ಹೆಣೆದು ನಂತರ ಮೊಂಡಾದ ಜಡೆ ಬಿಚ್ಚಿ ಹೋಗದಂತೆ ರಬ್ಬರ್‌ ಹಾಕಿಕೊಂಡು ಶಾಲೆಗೆ ಹೋಗತೊಡಗಿದೆ.

* ಗೀತಾ ಎಸ್‌. ಭಟ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.