“ಮೈ’ ಮನದಲ್ಲಿ ಸ್ವಾತಂತ್ರ್ಯ


Team Udayavani, Aug 16, 2017, 1:00 PM IST

16-AVALU-4.jpg

ಆಗಸ್ಟ್‌ ಬಂತಂದ್ರೆ, ತಿರಂಗಾ ಬಣ್ಣದ ಓಕುಳಿ ಎಲ್ಲೆಲ್ಲೂ ಚೆಲ್ಲಾಡಿದಂತೆ ಅನಿಸುತ್ತದೆ. ಕೇಸರಿ, ಬಿಳಿ, ಹಸಿರು ನಾನಾ ರೂಪದಲ್ಲಿ ಕಣ್ಣನ್ನು ಸೆಳೆಯುತ್ತದೆ. ದೇಶಭಕ್ತಿ ಹೃದಯದಲ್ಲಷ್ಟೇ ಅಲ್ಲ ಧರಿಸುವ ಬಟ್ಟೆಯಲ್ಲೂ ರಾರಾಜಿಸುತ್ತದೆ. “ಐ-ಡೇ’ ಸೆಲೆಬ್ರೇಷನ್‌ಗೆ ಟ್ರೆಂಡಿಯಾಗಿ ಏನಪ್ಪಾ ಧರಿಸೋದು ಅನ್ನೋ ಟೆನ್ಶನ್‌ ಯಾಕೆ?

ಧಾರ್ಮಿಕ ಹಬ್ಬಗಳಿಗಷ್ಟೇ ಚೆಂದನೆಯ ಡ್ರೆಸ್‌ ಹಾಕಿದರೆ ಸಾಕೆ? ಸ್ವಾತಂತ್ರ್ಯ ದಿನದಂದೂ ಕಚೇರಿಯಲ್ಲಿ “ಐ-ಡೇ’ ಸೆಲೆಬ್ರೇಷನ್‌ ಮಾಡೋಣ ಎನ್ನುವ ಫ್ಯಾಶನ್‌ ಪ್ರಿಯರಿಗಾಗಿ ಮಾರ್ಕೆಟ್‌ನಲ್ಲಿ ತಿರಂಗಾ ಟ್ರೆಂಡ್‌ ಶುರುವಾಗಿದೆ. ಮೈ ಮನಕ್ಕೊಪ್ಪುವಂಥ ಸಾಂಪ್ರದಾಯಿಕ ಹಾಗೂ ನೂತನ ವಿನ್ಯಾಸದ ಡಿಸೈನರ್‌ ಔಟ್‌ಫಿಟ್‌ಗಳು ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿವೆ. 

ತಿರಂಗಾ ಸ್ಯಾರಿ ಕ್ರೇಜ್‌!
ತಿರಂಗಾ ಸೀರೆಗಳು ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿವೆ. ಕೇಸರಿ, ಬಿಳಿ, ಹಸಿರಿನ ಅಂಚಿನ ಸೀರೆಗೆ ಹೆಚ್ಚಿನ ಬೇಡಿಕೆ ಇದೆ. ಬಿಳಿ ಸೀರೆ ಉಟ್ಟು ಅದಕ್ಕೆ ಕೇಸರಿ ಅಥವಾ ಹಸಿರು ಬಣ್ಣದ ಬ್ಲೌಸ್‌ ಅನ್ನು ಕೂಡ ಮ್ಯಾಚ್‌ ಮಾಡಬಹುದು. ವಿಶೇಷವಾಗಿ, ಐ-ಡೇಗಾಗಿಯೇ ಕ್ರೀಂ, ಕೇಸರಿ, ಹಸಿರು, ಬಿಳಿ, ನೀಲಿ ಬಣ್ಣದ ಸೀರೆಗಳು ಲಭ್ಯವಿದೆ.

ಐ-ಡೇ ಟೀ ಶರ್ಟ್‌
ದೇಶಪ್ರೇಮ ಸಾರುವ, ರಾಷ್ಟ್ರಾಭಿಮಾನದ ವಾಕ್ಯ ಹಾಗೂ ಚಿತ್ರಗಳ ಪ್ರಿಂಟೆಡ್‌ ಟೀ ಶರ್ಟ್‌ಗಳು ಟ್ರೆಂಡ್‌ನ‌ಲ್ಲಿವೆ. ತುಂಬಾ ಆರಾಮದಾಯಕ ಎನ್ನಿಸುವ ಈ ಶರ್ಟ್‌ಗಳನ್ನು ಯಾರು ಬೇಕಾದರೂ ಧರಿಸಬಹುದು. 

ಐ -ಡೇ ಖಾದಿ ಕುರ್ತಾ
ಇಂಥ ವಿಶಿಷ್ಟ ಆಚರಣೆಗಳ ಸಂದರ್ಭದಲ್ಲಿ ಖಾದಿ ಕುರ್ತಾ ಧರಿಸುವ ಖದರೇ ಬೇರೆ! ಖಾದಿ ಆಫೀಸ್‌ ವೇರ್‌ ಕುರ್ತಾ ಜತೆಗೆ ಕೇಸರಿ ಅಥವಾ ಹಸಿರು ಲೆಗ್ಗಿನ್ಸ್‌ ಧರಿಸಿ ಮಿಕ್ಸ್‌- ಮ್ಯಾಚ್‌ ಮಾಡಿ ಮಿಂಚಬಹುದು. ಜತೆಗೆ ಖಾದಿ ವೇಸ್ಟ್‌ ಕೋಟ್‌ ಧರಿಸಿದರೆ ಲುಕ್‌ ಇನ್ನಷ್ಟು ಟ್ರೆಂಡಿ ಎನಿಸುತ್ತದೆ.

ತ್ರಿವರ್ಣದ ದುಪಟ್ಟಾ
ಇನ್ನೂ ಸಿಂಪಲ್‌ ಆಗಿ ರೆಡಿಯಾಗಬೇಕೆನ್ನುವವರಿಗೆ ತಿರಂಗಾ ದುಪಟ್ಟಾ ಹೇಳಿ ಮಾಡಿಸಿದ್ದು. ಬಿಳಿ ಕುರ್ತಾ ಜತೆಗೆ ಕೇಸರಿ, ಹಸಿರು, ಬಿಳಿ ಬಣ್ಣದ ಪ್ರಿಂಟೆಡ್‌ ದುಪಟ್ಟಾ ಚೆನ್ನಾಗಿ ಸೂಟ್‌ ಆಗುತ್ತದೆ. 

ಬಟ್ಟೆಗೆ ಮಾತ್ರ ಬಣ್ಣವೇ?
ಈ ತಿರಂಗಾ ಕ್ರೇಜ್‌ ಕೇವಲ ಉಡುಪಿಗಷ್ಟೇ ಸೀಮಿತವಾಗದೆ ಫ್ಯಾಷನ್‌ ಆಕ್ಸಸರೀಸ್‌ಗೂ ವಿಸ್ತರಿಸಿಕೊಂಡಿದೆ. ಐ-ಡೇ ಪ್ರಯುಕ್ತ ನೀವು ತಿರಂಗ ಬ್ಯಾಂಗಲ್‌, ತಿರಂಗಾ ನೇಲ್‌ ಆರ್ಟ್‌, ಬಿಂದಿ, ತಿರಂಗಾ ಐ ಮೇಕಪ್‌, ತಿರಂಗಾ ಫ್ಯಾಶನ್‌ ಆಕ್ಸೆಸರೀಸ್‌ ಕೂಡ ಟ್ರೈ ಮಾಡಬಹುದು. ನಿಮ್ಮ ಐ-ಡೇ ಉಡುಪಿಗೆ ಹೊಂದುವ ಟ್ರೆಂಡಿ ತಿರಂಗಾ ಫ್ಯಾಷನ್‌ ಜ್ಯುವೆಲರಿ ಬಳಸಿ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ರಚಿಸಿಕೊಳ್ಳಿ.

ತಿರಂಗಾ ಫೇಸ್‌ ಟ್ಯಾಟೂ…
ಹೌದು… ಇದು ಈಗಿನ ಲೇಟೆಸ್ಟ್‌ ಟ್ರೆಂಡ್‌. ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಐ-ಡೇಯಂದು ಮುಖಕ್ಕೆ ತಿರಂಗಾ ಫೇಸ್‌ ಪೇಂಟ್‌ ಮಾಡಿಕೊಳ್ಳಬಹುದು. ಐ-ಡೇ ಡ್ರೈವ್‌ಗಳಲ್ಲಿ ಪಾಲ್ಗೊಳ್ಳುವವರು ಈ ರೀತಿಯ ತಿರಂಗಾ ಫೇಸ್‌ ಟ್ಯಾಟೂಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ಚಿತ್ರಶ್ರೀ ಹರ್ಷ 

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.