ಮೋದದ ಗಣಪಗೆ ವಿಧ ವಿಧ ಮೋದಕ


Team Udayavani, Sep 12, 2018, 6:00 AM IST

7.jpg

ಮೋದಕವೆಂದರೆ ಗಣಪನಿಗೆ ಬಹಳ ಇಷ್ಟವಂತೆ. ಹೀಗೆ ಹೇಳಿದಾಗ ಹಲವರಿಗೆ- “ಮೂಷಿಕ ವಾಹನ ಮೋದಕ ಹಸ್ತಾ…’ ಎಂಬ ಭಕ್ತಿಗೀತೆ ನೆನಪಾಗಿರಲಿಕ್ಕೂ ಸಾಕು. ಅಕ್ಕಿ, ಶೇಂಗಾ ಹಾಗೂ ಖರ್ಜೂರದಿಂದ ಮಾಡಬಹುದಾದ ರುಚಿರುಚಿ ಮೋದಕದ ರೆಸಿಪಿ ಇಲ್ಲಿದೆ… 

1. ತೆಂಗಿನ ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ತೆಂಗಿನಕಾಯಿ ತುರಿ- 1 ಕಪ್‌, ತುರಿದ ಬೆಲ್ಲ- 1/2 ಕಪ್‌, ಏಲಕ್ಕಿ- 3 ರಿಂದ 4, ಗಸೆಗಸೆ- 1 ಚಮಚ, ಬಿಳಿ ಎಳ್ಳು- 1 ಚಮಚ, ತುಪ್ಪ- 2 ಚಮಚ ಕಣಕಕ್ಕೆ: ಅಕ್ಕಿ ಹಿಟ್ಟು- 1 ಕಪ್‌, ಉಪ್ಪು- ಸ್ವಲ್ಪ, ತುಪ್ಪ- 1 ಚಮಚ
ಮಾಡುವ ವಿಧಾನ: ಮೊದಲು ಕಣಕ ಮಾಡಲು ಬಾಣಲೆಗೆ ತೆಂಗಿನತುರಿ ಮತ್ತು ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ತೆಂಗಿನಕಾಯಿಯಲ್ಲಿರುವ ನೀರಿನಂಶ ಬೆಲ್ಲ ಕರಗಿಸಲು ಸಾಕಾಗುವುದರಿಂದ ಬೇರೆ ನೀರು ಹಾಕುವುದು ಬೇಡ. ಬೆಲ್ಲ ಕರಗಿ ತೆಂಗಿನಕಾಯಿ ಜೊತೆ ಸೇರಿ ಗಟ್ಟಿಯಾಗುವವರೆಗೆ ಕಾಯಿಸಿ. ಏಲಕ್ಕಿ ಪುಡಿ, ಗಸಗಸೆ ಸೇರಿಸಿ ಕೆಳಗಿಳಿಸಿ.

ಈಗ ಒಂದು ಪಾತ್ರೆಯಲ್ಲಿ ಒಂದು ಕಪ್‌ ನೀರು, ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲಿಡಿ. ಕುದಿಯುತ್ತಿರುವಂತೆ ಅಕ್ಕಿ ಹಿಟ್ಟು ಸೇರಿಸಿ, ಕದಡಿ. ಉರಿ ಆರಿಸಿ. ಈಗ ಅದನ್ನು ಚೆನ್ನಾಗಿ ನಾದಿಕೊಂಡು, ಬಿರುಕುಗಳಿಲ್ಲದಂತೆ ಕಣಕ ತಯಾರಿಸಿ. ಈ ಕಣಕದಿಂದ ಚಿಕ್ಕ, ಚಿಕ್ಕ ಉಂಡೆ ಮಾಡಿಕೊಂಡು ಲಟ್ಟಿಸಿ, ಅದರೊಳಗೆ ಒಂದು ಚಮಚದಷ್ಟು ತಯಾರಿಸಿದ ಹೂರಣ ಇಟ್ಟು, ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಈಗ, ಗಣಪನಿಗೆ ಪ್ರಿಯವಾದ, ಸಾಂಪ್ರದಾಯಿಕ ಮೋದಕ ತಯಾರು.

2. ನೆಲಗಡಲೆ(ಶೇಂಗಾ) ಮೋದಕ
ಬೇಕಾಗುವ ಸಾಮಗ್ರಿ: ಹೂರಣಕ್ಕೆ: ಶೇಂಗಾ – 1/2 ಕಪ್‌, ಬೆಲ್ಲ-1/3 ಕಪ್‌, ತೆಂಗಿನತುರಿ-1/4 ಕಪ್‌, ಏಲಕ್ಕಿ ಪುಡಿ- ಸ್ವಲ್ಪ
ಕಣಕಕ್ಕೆ: ಅಕ್ಕಿ ಟ್ಟು-1 ಕಪ್‌, ನೀರು- 3/4 ಕಪ್‌, ಉಪ್ಪು-ಚಿಟಿಕೆಯಷ್ಟು
ಮಾಡುವ ವಿಧಾನ: ಶೇಂಗಾವನ್ನು ಚೆನ್ನಾಗಿ ಹುರಿದು, ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ಬೆಲ್ಲ, 3 ಚಮಚದಷ್ಟು ನೀರು ಹಾಕಿ ಕುದಿಯಲಿಡಿ. ಬೆಲ್ಲ ಕರಗುತ್ತಿದ್ದಂತೆ ಪುಡಿ ಮಾಡಿದ ಶೇಂಗಾ, ತೆಂಗಿನತುರಿ, ಏಲಕ್ಕಿ ಪುಡಿ ಸೇರಿಸಿ ಗಟ್ಟಿಯಾಗುವವರಗೆ ಕಾಯಿಸಿ, ತಣಿಯಲು ಬಿಡಿ.
ಈಗ ಪಾತ್ರೆಗೆ ನೀರು, ಉಪ್ಪು ಹಾಕಿ ಕುದಿಸಿ, ಅದನ್ನು ಅಕ್ಕಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ನಾದಿ ಕಣಕ ತಯಾರಿಸಿ. ಕಣಕ ಮತ್ತು ಹೂರಣಗಳೆರಡನ್ನೂ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕದ ಉಂಡೆಯನ್ನು ಸ್ವಲ್ಪ ಲಟ್ಟಿಸಿಕೊಂಡು, ಹೂರಣದ ಉಂಡೆ ಇಟ್ಟು ಮೋದಕದ ಆಕಾರ ಕೊಟ್ಟು ಹಬೆಯಲ್ಲಿ ಬೇಯಿಸಿ. ಇದು ನೆಲಗಡಲೆಯ ಪರಿಮಳದೊಂದಿಗೆ ತಿನ್ನಲು ರುಚಿಕರ.

3. ಖರ್ಜೂರದ ಮೋದಕ
ಬೇಕಾಗುವ ಸಾಮಗ್ರಿ: ಖರ್ಜೂರ- 20, ಒಣಹಣ್ಣುಗಳು(ಬಾದಾಮಿ, ಗೋಡಂಬಿ, ಪಿಸ್ತಾ)- 1/2 ಕಪ್‌, ತುಪ್ಪ-ಸ್ವಲ್ಪ, ಏಲಕ್ಕಿ ಪುಡಿ- 1/4 ಚಮಚ
ಮಾಡುವ ವಿಧಾನ: ಖರ್ಜೂರಗಳನ್ನು ಬಿಡಿಸಿ, ಬೀಜಗಳನ್ನು ಬೇರ್ಪಡಿಸಿಕೊಳ್ಳಿ. ನಂತರ ಎಲ್ಲ ಒಣಹಣ್ಣುಗಳನ್ನು ಬಾಣಲೆಯಲ್ಲಿ ಬಿಸಿಮಾಡಿಕೊಂಡು ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಖರ್ಜೂರಗಳನ್ನು ಕೂಡ ಮಿಕ್ಸಿಯಲ್ಲಿ ರುಬ್ಬಿ. ಈಗ ಖರ್ಜೂರದ ಪೇಸ್ಟ್‌ ಮತ್ತು ಒಣಹಣ್ಣುಗಳ ಪುಡಿಯನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಂಡು ಮೋದಕದ ಅಚ್ಚಿನಲ್ಲಿ ಹಾಕಿ. ಮೋದಕದ ಆಕಾರ ನೀಡಿ. ಇದು ಅತ್ಯಂತ ಸರಳ ಹಾಗೂ ಅರೋಗ್ಯದಾಯಕ ಮೋದಕ.

ವಿ.ಸೂ: ಎಲ್ಲ ಮೋದಕಗಳನ್ನು ಮೋದಕದ ಅಚ್ಚು ಬಳಸಿ ಮಾಡಿದರೆ ಆಕರ್ಷಕ ಆಕಾರ ಸಿಗುವುದು.

– ಸುಮನ್‌ ದುಬೈ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.