ಹಸಿಬಿಸಿ ಸಂಜೆಗೆ ಸವಿಯಿರಿ ಸಂಡಿಗೆ


Team Udayavani, Mar 13, 2019, 12:30 AM IST

x-5.jpg

ಚಳಿಗಾಲ ಮುಗಿದು ಬೇಸಿಗೆ ಕಣ್ಬಿಟ್ಟಿದೆ. ಬಿಸಿಲು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲನ್ನು ಬಳಸಿಕೊಂಡೇ, ಮುಂಬರುವ ಮಳೆಗಾಲದ ತಯಾರಿ ಕೂಡ ಶುರುವಾಗಿದೆ. ಜಡಿ ಮಳೆ ಸುರಿಯುವಾಗ ಸವಿಯಲು ಬೇಕಾದ ಹಪ್ಪಳ, ಸಂಡಿಗೆ, ಕುರುಕಲು ತಿನಿಸುಗಳನ್ನು ತಯಾರಿಸಲು ಇದುವೇ ಸಕಾಲ. ಈ ಬೇಸಿಗೆಯಲ್ಲಿ, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಸಂಡಿಗೆಗಳ ರೆಸಿಪಿ ಇಲ್ಲಿದೆ.  

1. ರಾಗಿ ಸಂಡಿಗೆ
ಬೇಕಾಗುವ ಸಾಮಗ್ರಿ:
ರಾಗಿ ಹಿಟ್ಟು- 1/2 ಕಪ್‌, ಮಜ್ಜಿಗೆ- 1/2 ಕಪ್‌, ನೀರು- ಎರಡೂವರೆ ಕಪ್‌, ಉಪ್ಪು- 1ಚಮಚ, ಹಸಿಮೆಣಸು- 2, ಜೀರಿಗೆ- 1/2ಚಮಚ, ಇಂಗು- ಸ್ವಲ್ಪ, ಬಿಳಿ ಎಳ್ಳು- 1ಚಮಚ.

ಮಾಡುವ ವಿಧಾನ: ರಾಗಿಯ ಹಿಟ್ಟಿಗೆ, ಮಜ್ಜಿಗೆ ಮತ್ತು ಸ್ವಲ್ಪ ನೀರು ಸೇರಿಸಿ ಗಂಟಿಲ್ಲದಂತೆ ಕಲಸಿಟ್ಟುಕೊಳ್ಳಿ. ಹಸಿ ಮೆಣಸು, ಉಪ್ಪು, ಜೀರಿಗೆ ಮತ್ತು ಇಂಗು ಸೇರಿಸಿ ತರಿತರಿಯಾಗಿ ರುಬ್ಬಿ.  ಈಗ ಬಾಣಲೆಗೆ 2 ಲೋಟ ನೀರು ಹಾಕಿ ಕುದಿಯಲು ಇಡಿ. ನೀರು ಕುದಿಯುತ್ತಿರುವಂತೆ ಉಪ್ಪು, ಜೀರಿಗೆಯ ಮಿಶ್ರಣ ಹಾಕಿ. ನಂತರ ಕಲಸಿದ ರಾಗಿಯ ಹಿಟ್ಟನ್ನು ಕೂಡಿಸಿ, ಚೆನ್ನಾಗಿ ಮಗುಚಿ. ಮಗುಚುತ್ತಿರುವಂತೆ ರಾಗಿ ಕುದ್ದು ದಪ್ಪ ಆಗುತ್ತದೆ. ಈಗ ಬಿಳಿ ಎಳ್ಳು ಸೇರಿಸಿ. ಈ ಸಂಡಿಗೆಯ ಹಿಟ್ಟನ್ನು ಒಂದು ಚಮಚದ ಅಳತೆಯಲ್ಲಿ ಬಟ್ಟೆ ಅಥವಾ ಪ್ಲಾಸ್ಟಿಕ್‌ ಶೀಟ್‌ ಮೇಲೆ ಹಾಕುತ್ತಾ ಹೋಗಿ. ಎರಡು ಮೂರು ದಿನ ಬಿಸಿಲಿಗೆ ಒಣಗಲಿ. ನಂತರ ತೆಗೆದು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ, ಬೇಕಾದಾಗ ಎಣ್ಣೆಯಲ್ಲಿ ಕರಿದು ಸವಿಯಿರಿ. 

2. ರವೆ ಸಂಡಿಗೆ
ಬೇಕಾಗುವ ಸಾಮಗ್ರಿ: ಮೀಡಿಯಂ ರವೆ- 1/2 ಕಪ್‌, ಕೊತ್ತಂಬರಿ ಸೊಪ್ಪು- 1/4 ಕಪ್‌, ಕರಿಬೇವಿನಸೊಪ್ಪು- ಒಂದು ಹಿಡಿ, ಉಪ್ಪು- 1ಚಮಚ, ಹಸಿಮೆಣಸು- 3, ಇಂಗು- ಸ್ವಲ್ಪ, ಕಪ್ಪು ಎಳ್ಳು-3ಚಮಚ, ನೀರು- 4 ಲೋಟ

ಮಾಡುವ ವಿಧಾನ: ಹಸಿಮೆಣಸು, ಉಪ್ಪು, ಕೊತ್ತಂಬರಿಸೊಪ್ಪು, ಕರಿಬೇವಿನಸೊಪ್ಪು, ಜೀರಿಗೆ ಮತ್ತು ಇಂಗು ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ. ದಪ್ಪ ತಳದ ಬಾಣಲೆಗೆ 3 ಲೋಟ ನೀರು ಹಾಕಿ ಕಾಯಿಸಿ. ಅದಕ್ಕೆ ರುಬ್ಬಿಟ್ಟ ಹಸಿಮೆಣಸಿನ ಪೇಸ್ಟ್‌ ಮತ್ತು ಎಳ್ಳು ಸೇರಿಸಿ. ಈಗ ಒಂದು ಲೋಟ ನೀರಿನಲ್ಲಿ ರವೆಯನ್ನು ಕಲಸಿ, ಕುದಿಯುತ್ತಿರುವ ನೀರಿಗೆ ಹಾಕಿ ಗಂಟಾಗದಂತೆ ತಿರುಗಿಸಿ. 10-20 ನಿಮಿಷಗಳಲ್ಲಿ ರವೆ ಬೆಂದು ಮಿಶ್ರಣ ದಪ್ಪವಾಗುತ್ತದೆ. ಈಗ ಒಂದು ಕಾಟನ್‌ ಬಟ್ಟೆಯ ಮೇಲೆ ಅಥವಾ ಪ್ಲಾಸ್ಟಿಕ್‌ ಶೀಟ್‌ ಮೇಲೆ ಹಿಟ್ಟನ್ನು ಸಂಡಿಗೆಯ ಆಕಾರದಲ್ಲಿ ಹಾಕಿ ಒಣಗಿಸಿ.  ಸಂಡಿಗೆ ಒಣಗಲು 2-3 ದಿನದ ಚುರುಕಾದ ಬಿಸಿಲು ಸಾಕು. 

3. ಅಕ್ಕಿ ಶ್ಯಾವಿಗೆ ಸಂಡಿಗೆ
ಬೇಕಾಗುವ ಸಾಮಗ್ರಿ:
ಅಕ್ಕಿ- 1 ಕಪ್‌, ನೀರು- 2 ಕಪ್‌, ಉಪ್ಪು- 1ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು 2-3 ಗಂಟೆ ನೆನೆಸಿಡಿ. ನೆನೆದ ಅಕ್ಕಿಯನ್ನು ಸ್ವಲ್ಪ ನೀರಿನ ಜೊತೆ ಸೇರಿಸಿ ನಯವಾಗಿ ರುಬ್ಬಿ. ಈಗ ದಪ್ಪ ತಳದ ಬಾಣಲೆಗೆ ಎರಡು ಲೋಟ ನೀರು ಹಾಕಿ, ಕಾಯಿಸಿ. ಅದಕ್ಕೆ ರುಬ್ಬಿದ ಅಕ್ಕಿ ಮಿಶ್ರಣ ಸೇರಿಸಿ, ತಕ್ಷಣ ಮಗುಚಲು ಆರಂಭಿಸಿ. ಮಿಶ್ರಣ ಗಟ್ಟಿಯಾಗಿ ಮುದ್ದೆಯಂತಾದಾಗ, ಸ್ಟೌ ಆರಿಸಿ. ಬೆಂದ ಅಕ್ಕಿಹಿಟ್ಟನ್ನು ಶ್ಯಾವಿಗೆ ಮಣೆಯಲ್ಲಿ ಹಾಕಿ ಚಿಕ್ಕ ಶ್ಯಾವಿಗೆಯಂತೆ ಬಟ್ಟೆಯ ಅಥವಾ ಪ್ಲಾಸ್ಟಿಕ್‌ ಶೀಟ್‌ ಮೇಲೆ ಒತ್ತಿ. ಇದನ್ನು ಮೂರು ದಿನ ಬಿಸಿಲಲ್ಲಿ ಒಣಗಿಸಿ. ನಂತರ ಪ್ಲಾಸ್ಟಿಕ್‌ ಕವರ್‌ ಅಥವಾ ಡಬ್ಬಿಯಲ್ಲಿ ಹಾಕಿಡಿ. ತಿನ್ನಬೇಕು ಅನ್ನಿಸಿದಾಗ ಎಣ್ಣೆಯಲ್ಲಿ ಕರಿದು ಸವಿಯಿರಿ. 

 ಸುಮನ್‌ ದುಬೈ

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.