ಮಕ್ಕಳ ಕೈಗೆ ಆಟಿಕೆ ಕೊಡಿ


Team Udayavani, Dec 26, 2018, 9:03 AM IST

toy.jpg

ಅಳುವ ಕಂದನ ಕೈಗೆ ಆಟಿಕೆ ಕೊಟ್ಟು ಸುಮ್ಮನಾಗಿಸುವ ಕಾಲ ಈಗಿಲ್ಲ. ಮಗು ಅತ್ತರೆ, ಊಟ ಮಾಡದಿದ್ದರೆ, ಹಠ ಮಾಡುತ್ತಿದ್ದರೆ, ಮಲಗಲು ಕೇಳದಿದ್ದರೆ, ಎಲ್ಲದಕ್ಕೂ ಒಂದೇ ಪರಿಹಾರ. ಕೈಗೆ ಮೊಬೈಲ್‌ ಕೊಟ್ಟು, ಯಾವುದೋ
ವಿಡಿಯೊ ಹಾಕಿ ಮಗುವನ್ನು ಸುಮ್ಮನಾಗಿಸುವುದು. ಹೀಗೆ ಅಮ್ಮನ ಪ್ರೋತ್ಸಾಹದಿಂದಲೇ ಮೊಬೈಲ್‌ ಸಾಂಗತ್ಯಕ್ಕೆ ಬೀಳುವ ಮಗುವಿಗೆ, ಮುಂದೆ ಬೇರೆಲ್ಲಾ ಆಟಿಕೆಗಳಿಗಿಂತ ಮೊಬೈಲೇ ಹೆಚ್ಚು ಆಕರ್ಷಕ ಎನಿಸುತ್ತದೆ. ಮುಂದೆ,
ಬೇರೆಲ್ಲಾ ಆಟಿಕೆಗಳನ್ನು ಬದಿಗೊತ್ತಿ, ಮೊಬೈಲ್‌ ಗೀಳನ್ನು ಹತ್ತಿಸಿಕೊಳ್ಳುತ್ತದೆ ಮಗು. ಹೀಗಾಗಬಾರದು ಅಂತಾದರೆ, ಮಗುವಿಗೆ ಆಟಿಕೆಯೊಡನೆ ಸಮಯ ಕಳೆಯುವುದನ್ನು ಕಲಿಸಬೇಕು. ವಿಡಿಯೊ ಗೇಮ್‌ಗಳಿಂದ ಹೊರತಾದ ಪ್ರಪಂಚವನ್ನು ಮಕ್ಕಳ ಎದುರು ತೆರೆದಿಡಬೇಕು. ಯಾಕೆಂದರೆ, ಮಕ್ಕಳ ಭಾವನಾತ್ಮಕ, ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಆಟಿಕೆಗಳು ಸಹಕಾರಿ ಎನ್ನುತ್ತಾರೆ ತಜ್ಞರು.

ಮಗುವಿಗೆ ಕೊಡಿಸುವ ಆಟಿಕೆಗಳು ಹೇಗಿರಬೇಕು ಅಂದರೆ…
* ಪುಟ್ಟ ಇಟ್ಟಿಗೆಗಳಂಥ (ಬಿಲ್ಡಿಂಗ್‌ ಬ್ಲಾಕ್ಸ್‌) ವಸ್ತುಗಳಿಂದ ಕಟ್ಟಡ ನಿರ್ಮಿಸುವ ಆಟ ಗೊತ್ತೇ ಇದೆ. ಈ ಆಟ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೃಜನಶೀಲತೆ, ಚುರುಕುತನ, ಗಣಿತದ ಸಾಮರ್ಥ್ಯವನ್ನು ಬೆಳೆಸುವ ಈ
ಆಟಿಕೆಗಳನ್ನು ಮಕ್ಕಳಿಗೆ ಕೊಡಿಸಿ, ಆಟವಾಡುವುದನ್ನು ಪ್ರೋತ್ಸಾಹಿಸಿ.
* ಭಾಷಾ ಜ್ಞಾನವನ್ನು ಹೆಚ್ಚಿಸುವ, ಕಲಿಕೆಗೆ ಸಹಾಯವಾಗುವಂಥ ಆಟಿಕೆಗಳನ್ನು ಕೊಡಿಸಿ. ಅಕ್ಷರಗಳನ್ನು ಜೋಡಿಸಿ ಪದ ರಚಿಸುವುದು, ವಸ್ತುಗಳನ್ನು, ಬಣ್ಣಗಳನ್ನು ಗುರುತಿಸುವುದು ಮುಂತಾದವು.
* ಶಾಲೆಗೆ ಹೋಗುವ ಮಕ್ಕಳಿಗೆ, ಪದಬಂಧ, ಸುಡೊಕು ಮುಂತಾದ ಜ್ಞಾನವರ್ಧಕ ಆಟಗಳನ್ನು ಆಡಿಸಬಹುದು. ಹೆತ್ತವರು ಜೊತೆಗಿದ್ದು, ಸಲಹೆ-ಸೂಚನೆಗಳನ್ನುನೀಡುತ್ತಿದ್ದರೆ ಮಕ್ಕಳಲ್ಲೂ ಆಸಕ್ತಿ ಹೆಚ್ಚುತ್ತದೆ.
* ಕಲ್ಪನಾ ಶಕ್ತಿಯನ್ನು ಹೆಚ್ಚಿಸುವಂಥ ಆಟಿಕೆಗಳು ಮಕ್ಕಳ ಬೆಳವಣಿಗೆಗೆ ಸಹಕಾರಿ. ಚೌಕಾಕಾರದ ಖಾಲಿ ಪೆಟ್ಟಿಗೆಗಳು, ಅಡುಗೆ ಸೆಟ್‌, ಡಾಕ್ಟರ್ ಕಿಟ್‌… ಹೀಗೆ ಭವಿಷ್ಯದ ಕಲ್ಪನೆಗಳನ್ನು, ಕನಸುಗಳನ್ನು ಮೂಡಿಸುವ ಹಲವಾರು ಆಟಿಕೆಗಳಿವೆ.
* ನಾವೆಲ್ಲಾ ಸಣ್ಣವರಿದ್ದಾಗ ಆಡುತ್ತಿದ್ದ ಬುಗುರಿ, ಚನ್ನೆಮಣೆ, ಚದುರಂಗ, ಪಗಡೆ, ಹಾವು- ಏಣಿಯಂಥ ಆಟಗಳನ್ನು ಮಕ್ಕಳಿಗೆ ಕಲಿಸಬಹುದು. ಈ ಆಟಗಳು ಮೊಬೈಲ್‌ ಗೇಮ್‌ಗಳ ಸ್ವರೂಪ ಪಡೆದಿದ್ದರೂ, ಎಲ್ಲರೂ ಒಟ್ಟಾಗಿ ಕುಳಿತು
ಆಡುವುದರಿಂದ ಮಕ್ಕಳ ಸಂವಹನ ಶಕ್ತಿ ಹೆಚ್ಚುತ್ತದೆ.
* ಜಿಗಿಯುವ ಗೊಂಬೆಗಳು, ಚೆಂಡು ಮುಂತಾದ ಆಟಿಕೆಗಳು ಮಕ್ಕಳನ್ನು ದೈಹಿಕವಾಗಿ ಫಿಟ್‌ ಆಗಿಸುತ್ತವೆ. ಮನೆಯ ಹೊರಗೆ, ಸಮವಯಸ್ಕರ ಜೊತೆ ಇಂಥ ಆಟಗಳನ್ನು ಆಡಿದಾಗ ಅವರಲ್ಲಿ ಕ್ರೀಡಾ ಮನೋಭಾವವೂ ಮೂಡುತ್ತದೆ.
* ಆ್ಯಕ್ಷನ್‌ ಗೇಮ್‌ಗಳು (ಸೈನಿಕರು, ಸಣ್ಣ ಪುಟ್ಟ ಆಯುಧಗಳ ಆಟಿಕೆ ಸೆಟ್‌ಗಳು) ಮಕ್ಕಳಲ್ಲಿ ಹಿಂಸಾತ್ಮಕ ಭಾವನೆ ಬೆಳೆಸುತ್ತವೆ ಎಂಬ ಆತಂಕ ಕೆಲವರದ್ದು. ಆದರೆ, ಅಂಥ ಆಟಿಕೆಗಳು ಕಲ್ಪನಾಶಕ್ತಿ ಮತ್ತು ಸಾಹಸ ಮನೋಭಾವವನ್ನು ಹೆಚ್ಚಿಸುತ್ತವೆ ಎಂಬುದೂ ಸುಳ್ಳಲ್ಲ.

ಪುಷ್ಪಲತಾ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.