ಆಫೀಸ್‌ಗೆ ಹೋಗ್ಬೇಕು, ಥತ್‌…!


Team Udayavani, Oct 23, 2019, 4:10 AM IST

office-ger

ಮಕ್ಕಳು ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತವಲ್ಲ, ಹಾಗೇ ದೊಡ್ಡವರ ಮನಸ್ಸೂ ಆಫೀಸಿಗೆ ಹೊರಟು ನಿಂತಾಗ ಹಠ ಮಾಡುತ್ತೆ. ಅದೂ, ಒಂದೆರಡು ತಿಂಗಳು ಕೆಲಸದಿಂದ ಬ್ರೇಕ್‌ ತಗೊಂಡು, ಪುನಃ ಕೆಲಸಕ್ಕೆ ಹೋಗುವುದಿದೆಯಲ್ಲ, ಅದು ಬಹಳ ಕಷ್ಟ. ಆ ಕಷ್ಟ ಇತ್ತೀಚೆಗೆ ನನಗೆ ಅನುಭವಕ್ಕೆ ಬಂತು. ಮದುವೆಯ ನಂತರ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಎರಡು ತಿಂಗಳ ನಂತರ ಬೇರೊಂದೆಡೆ ಕೆಲಸಕ್ಕೆ ಹೊರಟು ನಿಂತಾಗ, ಅಳುವೇ ಬಂದುಬಿಟ್ಟಿತ್ತು.

ನನ್ನ ಅಳು ಮೋರೆ ನೋಡಿದ ಯಜಮಾನರು, ಮಗುವನ್ನು ಶಾಲೆಗೆ ಕಳಿಸುವಂತೆ ನನ್ನನ್ನು ಆಫೀಸ್‌ಗೆ ರೆಡಿ ಮಾಡತೊಡಗಿದರು. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿ ಇರೋದ್ರಿಂದ, 8 ಗಂಟೆಗೂ ಮುಂಚೆ ಏಳುವ ಪರಿಪಾಟ ಇರಲಿಲ್ಲ. ಹೀಗಾಗಿ, ಮೊದಲ ದಿನ ಕೆಲಸಕ್ಕೆ ಹೊರಡುವಾಗ ಬೆಳಗ್ಗೆ 6ಕ್ಕೆ ಏಳಬೇಕಿದ್ದರೂ, ನಿದ್ರಾದೇವಿ ಇನ್ನೂ ಕಣ್ರೆಪ್ಪೆಯ ಮೇಲೇ ಇದ್ದಳು. ಕಷ್ಟಪಟ್ಟು ಆರೂವರೆಗೆ ಹಾಸಿಗೆ ಬಿಟ್ಟಿದ್ದೆ.

ಅಷ್ಟೊತ್ತಿಗೆ ಯಜಮಾನರೂ ಎದ್ದು ಬಂದು, ಮನೆಕೆಲಸದಲ್ಲಿ ನೆರವಾಗತೊಡಗಿದರು. ಸ್ನಾನಕ್ಕೆ ಬಿಸಿ ನೀರು ಕಾಯಲಿಟ್ಟು, ಕಾಫಿ ಮಾಡಿ, ಕರ್ಚೀಫ್, ಛತ್ರಿ, ಮೊಬೈಲ್‌ ಚಾರ್ಜರ್‌, ಪುಸ್ತಕ, ಪೆನ್ನು, ನೀರಿನ ಬಾಟಲಿ ಮುಂತಾದ ಅಗತ್ಯ ವಸ್ತುಗಳನ್ನು ವ್ಯಾನಿಟಿ ಬ್ಯಾಗೊಳಗೆ ತುಂಬಿದರು. ಇಷ್ಟರ ಮಧ್ಯೆ ಅವರೂ ಸ್ನಾನ, ಪೂಜೆ, ತಿಂಡಿ ಅಂತೆಲ್ಲಾ ಕೆಲಸ ಮುಗಿಸಿ ಆಫೀಸ್‌ಗೆ ಹೊರಡಲು ಅಣಿಯಾಗಬೇಕಿತ್ತು.

ಅವರ ಅವಸ್ಥೆಯನ್ನು ಕಂಡು ನನಗೆ ನಗು ಮತ್ತು ಪ್ರೀತಿ ಎರಡು ಒಟ್ಟೊಟ್ಟಿಗೇ ಬಂದವು. ಮಗಳಿಗೆ ಬಟ್ಟೆ ಇಸ್ತ್ರಿ ಮಾಡಿ ಶಾಲೆಗೆ ಸಿದ್ಧಗೊಳಿಸುವ ಅಪ್ಪನಂತೆ, ಶಾಲೆಗೆ ಹೊರಡುವ ಮಗಳಿಗೆ ತಿಂಡಿ ತಿನ್ನಿಸುವ ಅಮ್ಮನಂತೆ, ತಂಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಡಲು ಆತುರಪಡುವ ಅಣ್ಣನಂತೆ… ಹೀಗೆ ಹಲವು ಬಂಧನಗಳ ಭಾವ ಗಂಡನಲ್ಲಿ ಕಾಣಿಸುತ್ತಿತ್ತು. “ಥ್ಯಾಂಕ್ಯೂ, ಯಜಮಾನ್ರೇ’… ಅಂತ ಹೇಳಿ ಆಫೀಸ್‌ಗೆ ಹೊರಟವಳ ಕಣ್ಣಲ್ಲಿ ನೀರಿತ್ತು.

ಅದು ಆನಂದಭಾಷ್ಪವಾ ಅಥವಾ ಆಫೀಸಿಗೆ ಹೋಗಬೇಕಲ್ಲಾ ಅನ್ನುವ ಸಂಕಟವಾ ಗೊತ್ತಾಗಲಿಲ್ಲ. ಸಂಜೆ ಶಾಲೆಯ ಬೆಲ್‌ ಹೊಡೆಯುವುದನ್ನೇ ಕಾಯುವ ಸ್ಕೂಲು ಹುಡುಗಿಯಂತೆ, ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದೆ. ಅಂತೂ ಇಂತೂ ಕಚೇರಿ ಮುಗಿಸಿ ಮನೆಗೆ ಬಂದಾಗ, ಕಾಫಿ ಲೋಟ ಹಿಡಿದು ಕಾಯುತ್ತಿದ್ದ ಯಜಮಾನರನ್ನು ನೋಡಿ, ದಿನದ ಆಯಾಸವೆಲ್ಲಾ ದೂರವಾಯ್ತು.

* ಗೋಪಿಕಾ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.