ಆಫೀಸ್‌ಗೆ ಹೋಗ್ಬೇಕು, ಥತ್‌…!


Team Udayavani, Oct 23, 2019, 4:10 AM IST

office-ger

ಮಕ್ಕಳು ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತವಲ್ಲ, ಹಾಗೇ ದೊಡ್ಡವರ ಮನಸ್ಸೂ ಆಫೀಸಿಗೆ ಹೊರಟು ನಿಂತಾಗ ಹಠ ಮಾಡುತ್ತೆ. ಅದೂ, ಒಂದೆರಡು ತಿಂಗಳು ಕೆಲಸದಿಂದ ಬ್ರೇಕ್‌ ತಗೊಂಡು, ಪುನಃ ಕೆಲಸಕ್ಕೆ ಹೋಗುವುದಿದೆಯಲ್ಲ, ಅದು ಬಹಳ ಕಷ್ಟ. ಆ ಕಷ್ಟ ಇತ್ತೀಚೆಗೆ ನನಗೆ ಅನುಭವಕ್ಕೆ ಬಂತು. ಮದುವೆಯ ನಂತರ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಎರಡು ತಿಂಗಳ ನಂತರ ಬೇರೊಂದೆಡೆ ಕೆಲಸಕ್ಕೆ ಹೊರಟು ನಿಂತಾಗ, ಅಳುವೇ ಬಂದುಬಿಟ್ಟಿತ್ತು.

ನನ್ನ ಅಳು ಮೋರೆ ನೋಡಿದ ಯಜಮಾನರು, ಮಗುವನ್ನು ಶಾಲೆಗೆ ಕಳಿಸುವಂತೆ ನನ್ನನ್ನು ಆಫೀಸ್‌ಗೆ ರೆಡಿ ಮಾಡತೊಡಗಿದರು. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿ ಇರೋದ್ರಿಂದ, 8 ಗಂಟೆಗೂ ಮುಂಚೆ ಏಳುವ ಪರಿಪಾಟ ಇರಲಿಲ್ಲ. ಹೀಗಾಗಿ, ಮೊದಲ ದಿನ ಕೆಲಸಕ್ಕೆ ಹೊರಡುವಾಗ ಬೆಳಗ್ಗೆ 6ಕ್ಕೆ ಏಳಬೇಕಿದ್ದರೂ, ನಿದ್ರಾದೇವಿ ಇನ್ನೂ ಕಣ್ರೆಪ್ಪೆಯ ಮೇಲೇ ಇದ್ದಳು. ಕಷ್ಟಪಟ್ಟು ಆರೂವರೆಗೆ ಹಾಸಿಗೆ ಬಿಟ್ಟಿದ್ದೆ.

ಅಷ್ಟೊತ್ತಿಗೆ ಯಜಮಾನರೂ ಎದ್ದು ಬಂದು, ಮನೆಕೆಲಸದಲ್ಲಿ ನೆರವಾಗತೊಡಗಿದರು. ಸ್ನಾನಕ್ಕೆ ಬಿಸಿ ನೀರು ಕಾಯಲಿಟ್ಟು, ಕಾಫಿ ಮಾಡಿ, ಕರ್ಚೀಫ್, ಛತ್ರಿ, ಮೊಬೈಲ್‌ ಚಾರ್ಜರ್‌, ಪುಸ್ತಕ, ಪೆನ್ನು, ನೀರಿನ ಬಾಟಲಿ ಮುಂತಾದ ಅಗತ್ಯ ವಸ್ತುಗಳನ್ನು ವ್ಯಾನಿಟಿ ಬ್ಯಾಗೊಳಗೆ ತುಂಬಿದರು. ಇಷ್ಟರ ಮಧ್ಯೆ ಅವರೂ ಸ್ನಾನ, ಪೂಜೆ, ತಿಂಡಿ ಅಂತೆಲ್ಲಾ ಕೆಲಸ ಮುಗಿಸಿ ಆಫೀಸ್‌ಗೆ ಹೊರಡಲು ಅಣಿಯಾಗಬೇಕಿತ್ತು.

ಅವರ ಅವಸ್ಥೆಯನ್ನು ಕಂಡು ನನಗೆ ನಗು ಮತ್ತು ಪ್ರೀತಿ ಎರಡು ಒಟ್ಟೊಟ್ಟಿಗೇ ಬಂದವು. ಮಗಳಿಗೆ ಬಟ್ಟೆ ಇಸ್ತ್ರಿ ಮಾಡಿ ಶಾಲೆಗೆ ಸಿದ್ಧಗೊಳಿಸುವ ಅಪ್ಪನಂತೆ, ಶಾಲೆಗೆ ಹೊರಡುವ ಮಗಳಿಗೆ ತಿಂಡಿ ತಿನ್ನಿಸುವ ಅಮ್ಮನಂತೆ, ತಂಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಡಲು ಆತುರಪಡುವ ಅಣ್ಣನಂತೆ… ಹೀಗೆ ಹಲವು ಬಂಧನಗಳ ಭಾವ ಗಂಡನಲ್ಲಿ ಕಾಣಿಸುತ್ತಿತ್ತು. “ಥ್ಯಾಂಕ್ಯೂ, ಯಜಮಾನ್ರೇ’… ಅಂತ ಹೇಳಿ ಆಫೀಸ್‌ಗೆ ಹೊರಟವಳ ಕಣ್ಣಲ್ಲಿ ನೀರಿತ್ತು.

ಅದು ಆನಂದಭಾಷ್ಪವಾ ಅಥವಾ ಆಫೀಸಿಗೆ ಹೋಗಬೇಕಲ್ಲಾ ಅನ್ನುವ ಸಂಕಟವಾ ಗೊತ್ತಾಗಲಿಲ್ಲ. ಸಂಜೆ ಶಾಲೆಯ ಬೆಲ್‌ ಹೊಡೆಯುವುದನ್ನೇ ಕಾಯುವ ಸ್ಕೂಲು ಹುಡುಗಿಯಂತೆ, ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದೆ. ಅಂತೂ ಇಂತೂ ಕಚೇರಿ ಮುಗಿಸಿ ಮನೆಗೆ ಬಂದಾಗ, ಕಾಫಿ ಲೋಟ ಹಿಡಿದು ಕಾಯುತ್ತಿದ್ದ ಯಜಮಾನರನ್ನು ನೋಡಿ, ದಿನದ ಆಯಾಸವೆಲ್ಲಾ ದೂರವಾಯ್ತು.

* ಗೋಪಿಕಾ

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.