ಸದ್ಯಕ್ಕೆ,ಯಾರೂ ಬರೋದು ಬೇಡ…

ಮನೆಗೆ ಬರದವನೇ ದೇವರು!

Team Udayavani, Sep 16, 2020, 7:42 PM IST

AVALU-TDY-1

ಸಾಂದರ್ಭಿಕ ಚಿತ್ರ

ಯಾರು ನಮ್ಮವರು? ನಮ್ಮವರು ಎಂದರೇನು? ಹಾಗೊಂದು “ನಮ್ಮ’ ಎಂಬ ಕಾನ್ಸೆಪ್ಟನ್ನೇ ನುಚ್ಚುನೂರು ಮಾಡಿಬಿಟ್ಟಿತಲ್ಲ ಈ ಕೋವಿಡ್…

ಜನನಿಬಿಡ ಮಾಲ್‌ನಲ್ಲಿ ಬೇಕಾದ್ದನ್ನೆಲ್ಲ ಬುಟ್ಟಿಗೆ ತುಂಬುತ್ತಿದ್ದ ಹುಡುಗಿಯರನ್ನು ಮೊಣಕೈ ತಾಗಿಸಿ ವಿಕೃತ ಖುಷಿ ಅನುಭವಿಸುತ್ತಿದ್ದ ಗಂಡು, ಈಗಅವಳ ಹತ್ತಿರವೂ ಸುಳಿಯುತ್ತಿಲ್ಲ. ಸಾಮಾನ್ಯವಾಗಿ ಇದ್ದೇ ಇರುತ್ತಿದ್ದನವನಲ್ಲಿಗೆ ಹೋಗುವ ಹೊತ್ತಿನಲ್ಲಿ. ಕೆಕ್ಕರಿಸಿ ನೋಡುತ್ತಿದ್ದಕಣ್ಣಿನಲ್ಲೀಗ ಲಾಲಸೆಯಪಸೆಯೂ ಕಾಣುತ್ತಿಲ್ಲ. ದಿಟ್ಟಿ ಸಿ ಇತ್ತ ಕಡೆತಿರುಗುವುದೂ ಇಲ್ಲ. ಅಕಸ್ಮಾತ್‌ ಎದುರಾದರೂ, ಸರಕ್ಕನೆ ದೂರ ಸರಿವವನಕಣ್ಣಲ್ಲಿಕಾಣುವುದು ಕೇವಲ ಆತಂಕ… ಸಾವಿನ ಭಯ. ಇತ್ತ ಮಾಮೂಲಿ ಅಂಗಡಿಯವನು ತಲೆಯಲ್ಲಾಡಿಸಿ, ಗೂಗಲ್‌ ಪೇ ಎನ್ನುತ್ತಾನೆ. ಅವನದೀಗ ನೋಕ್ಯಾಶ್‌ ಮಂತ್ರ…ನನಗೂ ಅವನುಕೊಡಬಹುದಾದ ಚಿಲ್ಲರೆಯಲ್ಲಿ ಸಾವಿನ ವಾಸನೆ. ಹೊರಗೆ ಅಡಿಯಿಟ್ಟರೆ ಸೂತಕದ ಮನೆಯಂತೆಕಾಣುವ ಪ್ರಪಂಚ. ಹೆಜ್ಜೆ ಒಳಗೆಳೆದುಕೊಂಡರೆ ಅಲ್ಲೂ ಹಾಗೇ, ವ್ಯತ್ಯಾಸವೇನಿಲ್ಲ.. ಪಾರಾಗಲು ಓಡಹೊರಟ ಕಾಲುಗಳಿಗೀಗ ಬರೀ ತಬ್ಬಿಬ್ಬು… ಧರೆಯೆ ಹೊತ್ತಿ ಉರಿಯುವಾಗ ಬದುಕಲೆಲ್ಲಿ ಓಡುವುದು? ಯಾವ ದಿಕ್ಕಿಗೆ? ಎತ್ತ ತಿರುಗಿದರೂ ಸಾವಿನ ಭಯ, ಅಪನಂಬಿಕೆ..ನನ್ನಲ್ಲೂ.. ಅವನಲ್ಲೂ.. ಅವಳಲ್ಲೂ.. ಇವರೆಲ್ಲರಲ್ಲೂ… ಲಾಕ್‌ ಡೌನ್‌ ರದ್ದಾಗಿ ತಿಂಗಳು ಕಳೆದಿದೆ. ಸೋಂಕು ಹರಡುವುದು ಕಡಿಮೆ ಆಗಿದೆ ಎಂದು ನಾಲ್ಕು ದಿನಕ್ಕೊಮ್ಮೆ ಸುದ್ದಿಯೂ ಬರುತ್ತಿದೆ. ಆದರೂ, ದಶದಿಕ್ಕುಗಳಲ್ಲೂ ಭಯದ್ದೇ ರಾಜ್ಯಭಾರ.. ರಿಮೋಟು ಅದುಮಿದರೆ ಬೀದಿಬೀದಿಯಲ್ಲೂ ಮೈಕು ಹಿಡಿದವರು, ಮೈಕಿನ ಮುಂದೆ ನಿಂತವರು.. ಇಬ್ಬರಿಗೂ ಭಯ.. ವಾರ್ತೆ ಹೇಳಲುಕೂತವನು ಪದಗಳನ್ನು ಎಸೆಯುತ್ತಲೇ ಇದ್ದಾನೆ.. ಅವನ ದನಿಯಲ್ಲೂ ನಡುಕ? ರಪ್ಪನೇ ಟಿ ವಿ ಆರಿಸಬೇಕೆನಿಸುತ್ತದೆ…

ವಾಕಿಂಗಿಗೆ ಹೋಗುವಾಗ ಪರಿಚಿತರು ಸಿಗದಿರಲಿ ದೇವರೇ. ಸಿಕ್ಕರೆ ಮಾತಿಗೆ ನಿಂತಾರು.. ಹತ್ತಿರ ಬಂದಾರು. ಐದೂವರೆ ಅಡಿ ಎತ್ತರದ ದೇಹದ ವೈಶಿಷ್ಟ್ಯಗಳನ್ನು ಮಾಸ್ಕ್ ಮುಚ್ಚೀತೇ? ಅವರಿಗೆ ಗುರುತು ಸಿಗದಿದ್ದೀತೇ… ಎದುರು ಹೋಗುತ್ತಿರುವವರು ಕೊನೆಯ ಮನೆಯವರಲ್ಲವಾ? ಅವರ ಮನೆಯಲ್ಲಿ ಯಾರಿಗಾದರೂ ಜ್ವರ ಬಂದಿದ್ದರೆ? ಅವರಿಂದ ಈಗ ಹೇಗೆ ತಪ್ಪಿಸಿಕೊಳ್ಳುವುದು? ಹೆಜ್ಜೆಚುರುಕುಗೊಳಿಸುವುದಾ, ನಿಧಾನಿಸುವುದಾ?ಅರೆರೆ, ಅವರು ಅದೇಕೆ ಅತ್ತಕಡೆ ಹೊರಟದ್ದು? ನನ್ನ ನೋಡೇ ದಿಕ್ಕು ಬದಲಿಸಿದರಾ? ಹೌದು .. ನನ್ನನ್ನು ನೋಡಿಯೇ ಅವರು ದಿಕ್ಕು ಬದಲಿಸಿದ್ದು.. ಈಗ ಸಮಾಧಾನದಲ್ಲೂ ಪೆಚ್ಚಾದ ಭಾವ. ಯಾಕೋ ಚುಳ್‌ ಎನ್ನಿಸುತ್ತಿದೆ ಮನಸ್ಸೀಗೀಗ… ಮತ್ತೆ ಸಿಗುತ್ತಾರೋ ಇಲ್ಲವೋ.. ನಾಲ್ಕುಮಾತಾಡಬಹು ದಿತ್ತು ಈಗ ಸಿಕ್ಕಿದ್ದರೆ..ಅಷ್ಟರೊಳಗೆ..ಯಾರ ಸರದಿ ಯಾವಾಗಲೋ ಯಾರಿಗೆ ಗೊತ್ತು? …

ಸಾವಿನ ನೆರಳು… ಅಳಲು ಜೊತೆಗ್ಯಾರಾದರೂ ಇರುತ್ತಾರೋ ಇಲ್ಲವೋ.. ಯಾರದೋ ಮನೆಯಲ್ಲಿ ಸಾವಂತೆ. ಯಾರೂ ಹೋಗುವ ಹಾಗಿಲ್ಲ. ಆಕೆ ವಿಪರೀತ ಅತ್ತರಂತೆ.ಕಣ್ಣೊರೆಸಲೂ ಜೊತೆಯಿಲ್ಲ ಯಾರೂ. ಮಗು  ಹುಟ್ಟಿದೆ ಮತ್ತೂಂದೆಡೆ.. ದಯವಿಟ್ಟು, ಸದ್ಯಕ್ಕೆ ಯಾರೂ ಬರಬೇಡಿ ಎಂಬ ಬೇಡಿಕೆ ಅಲ್ಲಿಂದ. ಬರದಿದ್ದವರೇ ಈಗ ದೇವರು.. ಯಾರು ನಮ್ಮವರು? ನಮ್ಮವರು ಎಂದರೇನು? ಹಾಗೊಂದು ನಮ್ಮ ಎಂಬ ಕಾನ್ಸೆಪ್ಟನ್ನೇ ನುಚ್ಚುನೂರು ಮಾಡಿತಾ ಈ ಕೋವಿಡ್ ? ನಾನಿದ್ದರೆ ”ನಾವು” ಅಲ್ಲವಾ? ಎಲ್ಲಿಂದ ಬಂತು ಈ ಮಾರಿ? ಈ ಹಿಂದೆಲ್ಲಾ ಏನೇಕಾಯಿಲೆ ಬಂದರೂ, ಪರಿಚಯದ ಅವರೆಲ್ಲಾ ಇದ್ದಾರೆ ಬಿಡು, ತಕ್ಷಣ ಓಡಿಬಂದು ಬದುಕಿಸಿಕೊಳ್ತಾರೆ ಎಂಬ ಧೈರ್ಯವಿತ್ತು. ಆದರೆ ಈಗ? ಕೋವಿಡ್ ಅಂದರೆ ಸಾಕು; ಸ್ವಂತ ಮಕ್ಕಳೂ ಮುಟ್ಟಲೂ ಹೆದರುವಂಥ ಸಂದರ್ಭವೊಂದು ಜೊತೆಯಾಗಿ ಬಿಟ್ಟಿದೆ. ಈ ನೋವು, ಈ ಸಂಕಟ, ಈ ಹತಾಶೆ ಇನ್ನೂ ಎಷ್ಟು ದಿನವೋ…

 

– ಮಾಲಿನಿ ಗುರುಪ್ರಸನ್ನ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.