ಹಲ್ವಾ ತಿನ್ನಿಸಿ…


Team Udayavani, Oct 30, 2019, 5:29 AM IST

r-11

ನಂಗೆ ಸ್ವೀಟ್ಸ್‌ ಇಷ್ಟವಿಲ್ಲ ಅನ್ನುವವರು ಕೂಡಾ, ಹಲ್ವದ ರುಚಿಯಿಂದ ದೂರ ಉಳಿಯಲು ಸಾಧ್ಯವಿಲ್ಲ. ಮನೆಗೆ ಅತಿಥಿಗಳು ಬಂದಾಗ ಕೆಲವೇ ನಿಮಿಷಗಳಲ್ಲಿ ಮಾಡಿ, ಬಡಿಸಬಹುದಾದ ಸಿಹಿಯೂ ಇದೇ. ಕ್ಯಾರೆಟ್‌, ಬೂದುಗುಂಬಳ ಅಷ್ಟೇ ಅಲ್ಲ, ಇತರೆ ಕೆಲವು ಹಣ್ಣು- ತರಕಾರಿ, ಸಾಮಗ್ರಿಗಳಿಂದಲೂ ಸ್ವಾದಿಷ್ಟಕರ ಹಲ್ವ ತಯಾರಿಸಬಹುದು.

1. ಸೇಬುಹಣ್ಣಿನ ಹಲ್ವ
ಬೇಕಾಗುವ ಸಾಮಗ್ರಿ: ಸೇಬುಹಣ್ಣು-5, ಸಕ್ಕರೆ- ಅರ್ಧ ಕಪ್‌, ತುಪ್ಪ -10 ಚಮಚ, ಗೋಡಂಬಿ, ದ್ರಾಕ್ಷಿ, ಕೇಸರಿ.

ಮಾಡುವ ವಿಧಾನ: ಸೇಬುಹಣ್ಣಿನ ಸಿಪ್ಪೆ ತೆಗೆದು, ತುರಿದುಕೊಳ್ಳಿ. ಬಾಣಲಿಗೆ ತುಪ್ಪ ಹಾಕಿ, ಗೋಡಂಬಿ- ದ್ರಾಕ್ಷಿಯನ್ನು ಹುರಿಯಿರಿ. ಅದೇ ಬಾಣಲಿಗೆ ಸೇಬುಹಣ್ಣಿನ ತುರಿ ಹಾಕಿ, ಚೆನ್ನಾಗಿ ಮಗುಚಿ, ಅದಕ್ಕೆ ಸಕ್ಕರೆ ಬೆರೆಸಿ. ಸಕ್ಕರೆ ಪಾಕ ಬರುವವರೆಗೂ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಹುರಿಯಿರಿ. ನಂತರ ಅದಕ್ಕೆ ಸ್ವಲ್ಪ ಕೇಸರಿ, ಏಲಕ್ಕಿ ಪುಡಿ ಹಾಕಿ ಬೇಯಿಸಿ, ಹುರಿದಿಟ್ಟ ದ್ರಾಕ್ಷಿ- ಗೋಡಂಬಿ ಹಾಕಿ ಕಲೆಸಿದರೆ ಸೇಬು ಹಲ್ವ ಸವಿಯಲು ಸಿದ್ಧ.

2. ಬೀಟ್‌ರೂಟ್‌ ಹಲ್ವ
ಬೇಕಾಗುವ ಸಾಮಗ್ರಿ: ಬೀಟ್‌ರೂಟ್‌- 5, ತುಪ್ಪ -10 ಚಮಚ, ಹಾಲು- 1/2 ಕಪ್‌, ಸಕ್ಕರೆ - ಅರ್ಧ ಕಪ್‌, ಹಾಲಿನ ಪೌಡರ್‌- 5  ಚಮಚ.
ಮಾಡುವ ವಿಧಾನ: ಬಾಣಲೆಗೆ ತುಪ್ಪ ಹಾಕಿ, ತುರಿದ ಬೀಟ್‌ರೂಟ್‌ ಅನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಅದಕ್ಕೆ ಹಾಲು ಹಾಕಿ ಮುಚ್ಚಳ ಮುಚ್ಚಿ , ಹತ್ತು ನಿಮಿಷ ಕುದಿಸಿ. ಇನ್ನೊಂದು ಬಾಣಲೆಗೆ ತುಪ್ಪ, ಹಾಲು, ಹಾಲಿನ ಪೌಡರ್‌ ಹಾಕಿ ಮಗುಚಿಕೊಳ್ಳಿ, ಈ ಮಿಶ್ರಣಕ್ಕೆ ಈಗಾಗಲೇ ಹುರಿದ ಬೀಟ್‌ರೂಟ್‌, ಗೋಡಂಬಿ ಹಾಕಿ ಕಲಿಸಿದರೆ ಹಲ್ವ ರೆಡಿ.

3. ಪಪಾಯ ಹಲ್ವ
ಬೇಕಾಗುವ ಸಾಮಗ್ರಿ: ಪಪಾಯ ಹೋಳು-20, ಹಾಲು- ಅರ್ಧ ಕಪ್‌, ತುಪ್ಪ -10 ಚಮಚ , ಸಕ್ಕರೆ ಪುಡಿ- ಅರ್ಧ ಕಪ್‌, ಗೋಡಂಬಿ, ದ್ರಾಕ್ಷಿ, ಏಲಕ್ಕಿಪುಡಿ.
ಮಾಡುವ ವಿಧಾನ: ಪಪಾಯ ಹಣ್ಣಿನ ಹೋಳನ್ನು ತುರಿಯಿರಿ ಅಥವಾ ಚಮಚದಿಂದ ಸ್ಮ್ಯಾಶ್‌ ಮಾಡಿ. ಬಾಣಲೆಗೆ ತುಪ್ಪ ಹಾಕಿ, ತುರಿದ ಪಪಾಯವನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಆ ಮಿಶ್ರಣಕ್ಕೆ ಹಾಲು, ಸಕ್ಕರೆ ಪೌಡರ್‌ ಹಾಕಿ ಕಲಸಿ, ಏಲಕ್ಕಿಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಸೇರಿಸಿ, ಮಗುಚಿ.

4. ಮೈದಾ ಹಲ್ವ
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು- 1 ಕಪ್‌, ಸಕ್ಕರೆ- 3 ಕಪ್‌, ತುಪ್ಪ- 1 ಕಪ್‌, ಕೇಸರಿ ಬಣ್ಣ, ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ.

ಮಾಡುವ ವಿಧಾನ: ಮೈದಾ ಹಿಟ್ಟಿಗೆ ಸ್ವಲ್ಪ ನೀರು ಹಾಕಿ, ಗಂಟಿಲ್ಲದಂತೆ ಮಗುಚಿ, ತೆಳ್ಳನೆಯ ಪೇಸ್ಟ್‌ ಮಾಡಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ಅರ್ಧ ಲೋಟ ನೀರು ಹಾಕಿ, ಪಾಕ ಮಾಡಿ. ನಂತರ, ಮೈದಾ ಹಿಟ್ಟಿನ ಮಿಶ್ರಣವನ್ನು ಸಕ್ಕರೆ ಪಾಕಕ್ಕೆ ಹಾಕಿ, ಸಣ್ಣ ಉರಿಯಲ್ಲಿ ಮಗುಚಿ. ಮಿಶ್ರಣ ಗಟ್ಟಿಯಾಗುತ್ತಾ ಬಂದಂತೆ, ಒಂದೊಂದೇ ಚಮಚ ತುಪ್ಪವನ್ನು ಸೇರಿಸುತ್ತಾ ಬನ್ನಿ. ಮಿಶ್ರಣವು, ಪಾತ್ರೆಯ ತಳವನ್ನು ಬಿಡುವವರೆಗೆ ಮಗುಚಿ, ದ್ರಾಕ್ಷಿ-ಗೋಡಂಬಿ ತುಣುಕುಗಳನ್ನು ಸೇರಿಸಿ. ತುಪ್ಪ ಹಚ್ಚಿದ ತಟ್ಟೆಗೆ ಮಿಶ್ರಣವನ್ನು ವರ್ಗಾಯಿಸಿ, ತಣ್ಣಗಾದ ಮೇಲೆ ಚೌಕಾಕಾರದಲ್ಲಿ ಕತ್ತರಿಸಿ.

5. ರಾಗಿ ಹಲ್ವ
ಬೇಕಾಗುವ ಸಾಮಗ್ರಿ: ರಾಗಿ- ಅರ್ಧ ಕಪ್‌, ತುಪ್ಪ- 6 ಚಮಚ, ಬಿಸಿಹಾಲು- 1 ಲೋಟ, ಸಕ್ಕರೆ- ಕಾಲು ಕಪ್‌, ಏಲಕ್ಕಿ ಪುಡಿ, ಬಾದಾಮಿ, ಗೋಡಂಬಿ, ದ್ರಾಕ್ಷಿ.

ಮಾಡುವ ವಿಧಾನ: ಬಾಣಲೆಗೆ ತುಪ್ಪ ಬಿಸಿ ಮಾಡಿ, ಅದಕ್ಕೆ ರಾಗಿ ಹಿಟ್ಟನ್ನು ಹಾಕಿ ಮಗುಚಿ. (ರಾಗಿ ಹಿಟ್ಟು ಗಂಟುಗಂಟಾಗದಂತೆ ಮಗುಚಬೇಕು) ಹಿಟ್ಟಿನಲ್ಲಿ ಗುಳ್ಳೆಗಳು ಏಳತೊಡಗಿದಾಗ, ಸಕ್ಕರೆಯನ್ನು ಹಾಕಿ. ಸಕ್ಕರೆ ಕರಗಿ ನೀರಾಗುತ್ತಿದ್ದಂತೆ ಬಿಸಿ ಹಾಲು ಹಾಕಿ, ಮಗುಚಿ (ಹಾಲನ್ನು ಮೊದಲೇ ಬಿಸಿ ಮಾಡಿಟ್ಟುಕೊಳ್ಳಿ) ಆ ಮಿಶ್ರಣವು ಗಟ್ಟಿಯಾಗಿ, ಪಾತ್ರೆಯ ತಳ ಬಿಡುವವರೆಗೂ ಮಧ್ಯಮ ಉರಿಯಲ್ಲಿಟ್ಟು ಕೈಯಾಡಿಸಿ. ನಂತರ, ಏಲಕ್ಕಿಪುಡಿಯನ್ನು ಸೇರಿಸಿ ಮಗುಚಿ ಒಲೆಯಿಂದ ಇಳಿಸಿ. ಬಾದಾಮಿ, ಗೋಡಂಬಿ, ದ್ರಾಕ್ಷಿಯಿಂದ ಅಲಂಕರಿಸಿ.

-ಭಾಗ್ಯ ಬುಳ್ಳಾ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.