‘ಹಿಮಾ” ಅಡುಗೆಯ ಘಮ


Team Udayavani, Jul 31, 2019, 5:00 AM IST

8

“ಪಕ್ಕದ ಮನೆ ಹುಡುಗೀನ ನೋಡಿ ಕಲಿ’, “ನಿನ್ನ ಅಕ್ಕನನ್ನು ನೋಡಿ ಕಲಿ’… ಹೀಗೆ ಮಕ್ಕಳನ್ನು, ಬೇರೆಯವರೊಂದಿಗೆ ಹೋಲಿಸೋದು ಸರ್ವೇ ಸಾಮಾನ್ಯ. (ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಅನ್ನೋದೂ ಅಷ್ಟೇ ಸಾಮಾನ್ಯ) ಇನ್ಮುಂದೆ ಅಮ್ಮಂದಿರು, “ಆ ಹಿಮಾ ದಾಸ್‌ನ ನೋಡಿ ಕಲಿ’ ಅಂತ ಹೇಳಲೂಬಹುದು. ಹಾಂ, ಕಲಿಯೋಕೆ ಹೇಳ್ತಿರೋದು ಹಿಮಾಳ ಹಾಗೆ ಓಡೋದನ್ನಲ್ಲ, ಆಕೆಯ ಹಾಗೆ ಅಡುಗೆ ಮಾಡೋದನ್ನ!

ಕಳೆದೊಂದು ತಿಂಗಳಲ್ಲೇ ಐದು ಅಂತಾರಾಷ್ಟ್ರೀಯ ಚಿನ್ನದ ಪದಕ ಗೆದ್ದು ದಾಖಲೆ ಮಾಡಿದ ಹಿಮಾ ದಾಸ್‌ರ ಸಾಧನೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಹಿಮಾ ದಾಸ್‌ ಬೇರೆಯದೇ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅದಕ್ಕೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಿಮಾ, “ನಳಪಾಕದ’ ವಿಡಿಯೋವೇ ಕಾರಣ.

ಕ್ರೀಡಾಕೂಟದ ನಿಮಿತ್ತ ಯುರೋಪ್‌ನಲ್ಲಿರುವ ಹಿಮಾ, ತಾವು ಉಳಿದುಕೊಂಡಿದ್ದ ಹೋಟೆಲ್‌ ರೂಮ್‌ನಲ್ಲಿ ಅಡುಗೆ ಮಾಡುತ್ತಿರುವ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ತಾನಿವತ್ತು ಅಸ್ಸಾಮ್‌ ಶೈಲಿಯ ದಾಲ್‌ ತಯಾರಿಸುತ್ತಿರುವುದಾಗಿ ಹಿಮಾ ಹೇಳಿದ್ದರು. ಆ ವಿಡಿಯೋದಲ್ಲಿ ಹಿಮಾ ದಾಸ್‌- “ಇವತ್ತು ಭಾನುವಾರ. ನಂಗೆ ಪ್ರ್ಯಾಕ್ಟೀಸ್‌ ಇಲ್ಲ. ಹಾಗಾಗಿ, ಇಟ್ಸ್‌ ಟೈಮ್‌ ಟು ಎಂಜಾಯ್‌! ನಾನಿವತ್ತು ಅಸ್ಸಾಮಿ ಶೈಲಿಯಲ್ಲಿ ದಾಲ್‌ ತಯಾರಿಸೋಕೆ ಹೊರಟಿದ್ದೇನೆ. ಹಿಂದೊಮ್ಮೆ ರೂಮ್‌ನಲ್ಲಿ ದಾಲ್‌ ತಯಾರಿಸಿದ್ದಾಗ, ಅದರ ಪರಿಮಳಕ್ಕೆ ಮಾರು ಹೋದವರು, “ಏನು ಅಡುಗೆ ಮಾಡಿದ್ದೀಯಾ?’ ಅಂತ ಕೇಳಿಕೊಂಡು ರೂಮ್‌ಗೆ ಬಂದಿದ್ದರು. ಅವರಿಗೆಲ್ಲಾ ಅಸ್ಸಾಂ ದಾಲ್‌ ತಿನ್ನಿಸಿದ್ದೆ. ಎಲ್ಲರಿಗೂ ಬಹಳ ಇಷ್ಟವಾಗಿತ್ತು…’ ಎಂದು ಅಸ್ಸಾಮಿ ಭಾಷೆಯಲ್ಲಿ ಹೇಳಿದ್ದರು.

“ನಿನ್ನೆ, ನಾನು ಮತ್ತು ಸರಿತಾಬೆನ್‌ ಗಾಯಕವಾಡ, ಮಾರ್ಕೆಟ್‌ಗೆ ಹೋಗಿ, ಅಡುಗೆಗೆ ಬೇಕಾದ ಪಾತ್ರೆ ಹಾಗೂ ದಿನಸಿ ಸಾಮಗ್ರಿಗಳನ್ನು ಖರೀದಿಸಿ ತಂದಿದ್ದೇವೆ. ಮೊದಲೇ ನಮ್ಮ ಬಳಿ ಇಂಡಕ್ಷನ್‌ ಸ್ಟೌ ಇತ್ತು. ಹೀಗೆ ಬೇರೆ ದೇಶಕ್ಕೆ ಹೋದಾಗ, ನಮ್ಮ ದೇಶದ ಅಡುಗೆಯನ್ನು ಕೈಯಾರೆ ತಯಾರಿಸಿ, ಸವಿಯುವುದರ ಮಜಾವೇ ಬೇರೆ!’ ಎಂದು ಹಿಮಾದಾಸ್‌ ಹೇಳಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡಿದೆ. ಅಡುಗೆ ಅನ್ನೋದು, ಬೇಯಿಸಿ-ಬಡಿಸುವ ಕೆಲಸವಷ್ಟೇ ಅಲ್ಲ, ಅದೊಂದು ಕಲೆ. ಬಿಡುವಿನ ವೇಳಿಯಲ್ಲಿ ಎಂಜಾಯ್‌ ಮಾಡುವ ಹವ್ಯಾಸ, ಒತ್ತಡ ಕಳೆದುಕೊಳ್ಳಲು ಮಾಡುವ ಧ್ಯಾನ ಎಂದೆಲ್ಲಾ ಹಿಮಾ ವಿಡಿಯೋವನ್ನು ಜನ ಹೊಗಳಿದ್ದಾರೆ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.