ಸೊಂಟಪಾಠ


Team Udayavani, May 2, 2018, 12:36 PM IST

sonta.jpg

“ಸೊಂಟ ನೋವನ್ನು ಅನುಭವಿಸಿದವರಿಗೆ ಮಾತ್ರವೇ ಗೊತ್ತು’ ಎನ್ನುವ ಅತ್ತೆಯ ನುಡಿಮುತ್ತು, ನನ್ನ ಪಾಲಿಗೂ ನಿಜವಾಗುವ ಸಂದರ್ಭವೊಂದು ಎದುರಾಯಿತು. ಒಂದು ಬೆಳಗ್ಗೆ ಅಡುಗೆ ಕೋಣೆ ಒರೆಸಲು ಬಗ್ಗುತ್ತೇನೆ. ಅದು ಚಳಕ್‌ ಎಂಬ ರಾಗ ಹಾಡಿತು…

ಸೊಂಟ ನೋವಿಗೂ, ಮಹಿಳೆಯರಿಗೂ ಆತ್ಮೀಯವಾದ ನಂಟಿದೆ. “ಸೊಂಟ ನೋವನ್ನು ಅನುಭವಿಸಿದವರಿಗಷ್ಟೇ ಗೊತ್ತು’ ಎಂದು ನಮ್ಮ ಅತ್ತೆ ಸದಾ ಹೇಳುತ್ತಿರುತ್ತಾರೆ. “ನಾವೆಷ್ಟೇ ಹೇಳಿದ್ರೂ ಬೇರೆಯವರಿಗೆ ಅದು ಅರ್ಥವೇ ಆಗೋಲ್ಲ. ಈ ಕಷ್ಟ ಹೇಳಿ ಏನು ಪ್ರಯೋಜನ?’ ಎಂದು ಅತ್ತೆ, ವಾತರೋಗದಿಂದ ಮೈಕೈ ನೋವು ಅನುಭವಿಸುತ್ತಾ, ಹೀಗೆ ಹೇಳುತ್ತಿರುತ್ತಾರೆ. “ಹಾಗಾದರೆ, ಅರ್ಥವಾಗಲು ಆ ನೋವು ಭರಿಸಿಕೊಳ್ಳಬೇಕಾ?’ ಎಂದು ನಾನು ಅವರನ್ನು ತಮಾಷೆಯಿಂದ ಕೆಣಕುತ್ತಿರುತ್ತೇನೆ.

ಹೌದು! ಜ್ವರ, ಹೊಟ್ಟೆನೋವು, ಶೀತ, ತಲೆನೋವು- ಹೀಗೆ ಯಾವ ಕಾಯಿಲೆಯಾದರೂ ಸರಿ, ಅದು ನಮಗೆ ತಟ್ಟಿದರೆ ತಾನೇ ಅದರ ಕಷ್ಟ ಏನೆಂದು ಗೊತ್ತಾಗೋದು! ಜ್ವರ, ಶೀತದಂಥ ಸಣ್ಣಪುಟ್ಟ ರೋಗಗಳನ್ನು ನಾನು ಅನುಭವಿಸಿದ್ದೇನೆ. ನನ್ನ ದೊಡ್ಡಪ್ಪ, ದೊಡ್ಡಣ್ಣ, ಅಕ್ಕಂದಿರಿಬ್ಬರು ತೀವ್ರ ಸೊಂಟನೋವಿನಿಂದ ಬಳಲಿರುವುದನ್ನು ಹತ್ತಿರದಿಂದ ಕಂಡಿದ್ದೇನೆ. ಅದರ ತೀವ್ರತೆಯಿಂದ ಅವರು ನರಳಿರುವುದನ್ನೂ ನೋಡಿದ್ದೇನೆ. ಆದರೆ, ಸೊಂಟನೋವಿನ ಅನುಭವ ಮಾತ್ರ ನನಗೆ ಆಗಿರಲಿಲ್ಲ. 

ಅತ್ತೆಯ ನುಡಿಮುತ್ತಿನ ಫ‌ಲವೋ ಏನೋ, ಅದೊಂದು ದಿನ ನನಗೂ ಸೊಂಟ “ಚಳಕ್‌’ ಎಂದು ಕೈಕೊಟ್ಟಿತು. ಅಂದು ಹೇಗೋ ಕೋಲಿನಲ್ಲಿ ನೆಲ ಒರೆಸಿ ಸುಧಾರಿಸಿದೆ. ಸಂಜೆ ಯೋಗಾಭ್ಯಾಸಕ್ಕೆ ಹೋದೆ. ಅಲ್ಲಿ ಸೂರ್ಯ ನಮಸ್ಕಾರ ಮಾಡಲು ಬಗ್ಗಿದೆ. ಯಮಯಾತನೆಯ ಪರಿಚಯವಾಯಿತು. ಏನೋ ಭಾರ ಎತ್ತಿ ಹೀಗಾಗಿರಬಹುದು. ಸೊಂಟಕ್ಕೆ ವಿಶ್ರಾಂತಿ ಕೊಟ್ಟರೆ, ಸರಿ ಹೋದೀತು ಎಂದು ಭಾವಿಸಿದೆ. ನಾಲ್ಕು ದಿನ ಆರಾಮ ಕೊಟ್ಟರೂ ಕಡಿಮೆ ಆಗಲಿಲ್ಲ.

ಸೊಂಟನೋವಿಗೆ ಕಾರಣವೇನೆಂದು ತಿಳಿದುಕೊಳ್ಳಲು ನಮ್ಮ ಮನೆಯವರು ಎಕ್ಸರೇ ಮಾಡಿಸಿದ್ದು ನೆನಪಿಗೆ ಬಂದು ನನ್ನ ಸೊಂಟನೋವಿಗೆ ಕಾರಣ ತಿಳಿಯಲು ನಾನೂ ಎಕ್ಸರೇ ತೆಗೆಸಿದರೆ ಹೇಗೆ ಎಂಬ ಉಪಾಯ ಹೊಳೆಯಿತು! ನಮ್ಮ ಮನೆಯ ಬಳಿಯೇ ಇದ್ದ ಲ್ಯಾಬಿಗೆ ನಡೆದು ಹೋದೆ. ಅಲ್ಲಿ ಬೇರೆಲ್ಲ ಸೌಲಭ್ಯ ಇದ್ದರೂ ಎಕ್ಸರೇ ಮಾತ್ರ ಇರಲಿಲ್ಲ! ಹಾಗಾಗಿ, ನನ್ನ ಸೊಂಟ ಎಕ್ಸರೇಯಿಂದ ಬಚಾವಾಯಿತು!

ಸೊಂಟದ ನೋವನ್ನು ಗುಣಪಡಿಸಲೇಬೇಕೆಂದು ಹೋಮಿಯೋಪತಿ ಮದ್ದಿಗೆ ಮೊರೆ ಹೋದೆ. ನಮ್ಮ ಬಂಧು (ನಮ್ಮತ್ತೆಯ ಅಣ್ಣನ ಮೊಮ್ಮಗ) ಹೋಮಿಯೋ ವೈದ್ಯ ಕ್ಲಿನಿಕ್‌ ಮುಚ್ಚಿ ಮನೆಗೆ ಹೋಗುವಾಗ ರಾತ್ರಿ ನಮ್ಮ ಮನೆಗೇ ಬಂದು ಔಷಧಿ ನೀಡಿದ. ಜೊತೆಗೆ 4 ವಿಟಮಿನ್‌ ಮಾತ್ರೆಯನ್ನೂ ಕೊಟ್ಟಿದ್ದ. ನಾಲ್ಕು ದಿನ ತಪ್ಪದೇ ಕುಚ್ಚಿಲಕ್ಕಿ ಗಂಜಿ ತಿಳಿಯನ್ನೂ ಎರಡು ಲೋಟ ಕುಡಿದಿದ್ದೆ. ಒಟ್ಟಿನಲ್ಲಿ ನನ್ನ ಸೊಂಟ ಸಹಜ ಸ್ಥಿತಿಗೆ ಮರಳಿತು. ಸುಮಾರು ಹತ್ತು ದಿನ ನೋವು ಕಾಟ ಕೊಟ್ಟಿತ್ತು.

ಮನೆಯಲ್ಲಿ ನಮ್ಮ ಅತ್ತೆಗೆ ನನ್ನ ಸೊಂಟ ನೋವಿನ ವಿಷಯ ಹೇಳಿರಲಿಲ್ಲ. ನೋವನ್ನಾದರೂ ಹೇಗೋ ಸಹಿಸಬಹುದು. ಆದರೆ, ನಮ್ಮ ಅತ್ತೆಯ ತೀವ್ರ ಕಾಳಜಿಯನ್ನು ಸಹಿಸಲು ಮಾತ್ರ ಸಾಧ್ಯವಿಲ್ಲ! ಹಾಗಾಗಿ, ಗುಟ್ಟಾಗಿ ಇಟ್ಟಿದ್ದೆ. ಅವನು ಮನೆಗೆ ಬಂದಾಗ ಗೇಟಿನ ಬಳಿಯೇ ಔಷಧಿ ಪಡೆದು, “ಅಜ್ಜಿಗೆ ಹೇಳಬೇಡ’ ಎಂದು ಹೇಳಿದ್ದೆ. ಒಳಗೆ ಕಾಲಿಟ್ಟ ಅವನನ್ನು, “ಇದೇನು ಇಷ್ಟು ತಡರಾತ್ರಿ ಬಂದದ್ದು?’ ಎಂದು ಅತ್ತೆ ಕೇಳಿದಾಗ, “ಅಜ್ಜಿ, ನಿಮ್ಮನ್ನು ನೋಡಿ ಹೋಗೋಣವೆಂದು ಬಂದೆ. ತುಂಬಾ ದಿವಸವಾಯಿತಲ್ಲ, ಬರಲೇ ಆಗಿರಲಿಲ್ಲ’ ಅಂತ ಅವನು ಹೇಳಿದಾಗ, ನಮ್ಮತ್ತೆಗೆ ಬಹಳ ಖುಷಿ.

ಸೊಂಟ ನೋವಿದ್ದಾಗ ನನಗೆ ಒಂದೇ ಒಂದು ಚಿಂತೆ ಬಲವಾಗಿ ಕಾಡಿತ್ತು. ಆಯಿತು, ಇನ್ನು ನನಗೆ ಯಾವುದೇ ಚಾರಣಗಳಿಗೆ ಹೋಗಲು ಸಾಧ್ಯವಿಲ್ಲ. ಸೊಂಟನೋವು ಇಟ್ಟುಕೊಂಡು ಬೆಟ್ಟಗುಡ್ಡ ಹತ್ತುವುದು ಅಸಾಧ್ಯ ಎಂದು ಬಹಳ ಚಿಂತೆಯಾಗಿತ್ತು. “ಬೆಟ್ಟ ಗುಡ್ಡ ಹತ್ತಿದ್ದು ಜಾಸ್ತಿ ಆಯಿತು. ಅದಕ್ಕೇ ಸೊಂಟ ನೋವು ಬಂದದ್ದು’ ಎಂದು ಹೇಳಿ ಪತಿಯೂ, ನನ್ನ ಹೆದರಿಕೆಗೆ ತುಪ್ಪ ಸುರಿದಿದ್ದರು. ಸೊಂಟನೋವು ವಾಸಿಯಾದ ಮರುದಿನವೇ ಚಾರಣ ಕೈಗೊಂಡು, ನನ್ನ ಸೊಂಟ ಸರಿಯಾಗಿದೆ ಎಂಬುದನ್ನು ಖಾತ್ರಿಗೊಳಿಸಿಕೊಂಡಿದ್ದೆ!

ಸೊಂಟನೋವಿನಿಂದ ಕೆಲವು ನೀತಿಪಾಠಗಳನ್ನು ಕಲಿತೆ. ನಾನು ಬಹಳ ಗಟ್ಟಿ, ಎಷ್ಟು ಭಾರವನ್ನಾದರೂ ಎತ್ತಬಲ್ಲೆ ಎಂಬ ಜಂಭವನ್ನು ಬಿಟ್ಟು ಮೊದಲಿನಷ್ಟು ಭಾರ ಎತ್ತಲು ಹೋಗುತ್ತಿಲ್ಲ. ಮೊದಲೆಲ್ಲ 25 ಕಿಲೋ ಅಕ್ಕಿ ಮೂಟೆಯನ್ನು ಲೀಲಾಜಾಲವಾಗಿ ಹೊರುತ್ತಿದ್ದೆ. ಸಿಲಿಂಡರನ್ನೂ ಎತ್ತಿ ತರಲು ಆಗುತ್ತಿತ್ತು. ಈಗ ಆ ಸಾಹಸಗಳಿಗೆ ಗುಡ್‌ ಬೈ ಹೇಳಿರುವೆ. 

ಸೊಂಟ ಕೈಕೊಟ್ಟಾಗ…
– ತುಂಬಾ ಹೊತ್ತು ವಿಶ್ರಾಂತಿ ಬೇಡ.
– ವಾಕಿಂಗ್‌ ಥರದ ಸರಳ ವ್ಯಾಯಾಮ ಮಾಡಿ.
– ಐಸ್‌ ಅಥವಾ ಉಪ್ಪಿನ ಶಾಖ ಮುಟ್ಟಿಸಿ.
– ಸರಿಯಾದ ಭಂಗಿಯಲ್ಲಿ ಮಲಗಿ.
– ನುಗ್ಗೆಕಾಯಿ, ಕೆಂಪುಹರವೆ, ಹೀರೇಕಾಯಿ, ಬೀನ್ಸ್‌ನಂಥ ವಾತಾಪೂರಿತ ತರಕಾರಿಗಳನ್ನು ಸೇವಿಸಬೇಡಿ.
– ಜೀರಿಗೆ ಕಾಫಿ ಮಾಡಿ ಕುಡಿಯಿರಿ.

* ರುಕ್ಮಿಣಿಮಾಲಾ

ಟಾಪ್ ನ್ಯೂಸ್

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.