ಹೋಟೆಲ್‌ ಬದಲು ಹಾಸ್ಪಿಟಲ್‌!

ಮೊದಲ ಭೇಟಿಯ ನೆನಪು...

Team Udayavani, Dec 25, 2019, 4:12 AM IST

sz-13

ಹುಡುಗ ಮತ್ತು ರಿತುವಿನ ಭೇಟಿ ದೊಡ್ಡ ಹೋಟೆಲ್‌ನಲ್ಲಿ ನಿಗದಿಯಾಗಿತ್ತು. ಸ್ವತಃ ಹುಡುಗನೇ ರಿತುವನ್ನು ಹಾಸ್ಟೆಲ್‌ನಿಂದ ಕರೆದೊಯ್ಯಲು ಬರುವವನಿದ್ದ. ನಮಗೆ ತಡೆಯಲಾರದ ಕುತೂಹಲ. ರಿತು ಬೆಳಗ್ಗೆಯಿಂದಲೇ ಸಿದ್ಧವಾಗುತ್ತಿದ್ದರೆ, ನಾವು ರೂಮಿನ ಕಿಟಕಿಗೆ ಕಣ್ಣು ಕೀಲಿಸಿ ಕುಳಿತಿದ್ದೆವು.

“ಏ ಹೇಗ್ರೇ ದಪ್ಪ ಆಗೋದು? ಬಾದಾಮಿ, ಪಿಸ್ತಾ, ಲೀಟರ್‌ಗಟ್ಟಲೆ ಹಾಲು ಎಲ್ಲಾ ಕುಡಿದಾಯ್ತು. ಒಂದು ಗ್ರಾಂ ಕೂಡಾ ಹೆಚ್ಚಾಗಿಲ್ಲ. ಇನ್ನು ನಾಲ್ಕು ದಿನ ಬಿಟ್ರೆ ಆ ಹುಡುಗ ಇಲ್ಲಿಗೆ ಬರ್ತಾನೆ. ಏನು ಮಾಡೋದು?’- ಗೆಳತಿ ರಿತು ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಳು. ವಿಷಯ ಇಷ್ಟೇ. ಫೈನಲ್‌ ಇಯರ್‌ ಮುಗಿಸುವ ಹಂತದಲ್ಲಿದ್ದ ಅವಳಿಗೆ ಮದುವೆ ಮಾಡಲು ಹೆತ್ತವರು ತಯಾರಾಗಿದ್ದರು. ಅದಕ್ಕೆ ಸರಿಯಾಗಿ, ಅಮೆರಿಕದಲ್ಲಿದ್ದ ಪರಿಚಿತ ಹುಡುಗನ ಮನೆಯವರು, ತಾವಾಗಿ ಹೆಣ್ಣು ಕೇಳಿದ್ದರು. ಎಲ್ಲವೂ ಹೊಂದಾಣಿಕೆಯಾಗಿ, ಹುಡುಗ ಅಮೆರಿಕದಿಂದ ಬಂದು, ರಿತುವನ್ನು ನೋಡುವುದಷ್ಟೇ ಬಾಕಿ ಇತ್ತು.

ಇವಳ್ಳೋ ಐದು ಅಡಿ ಎಂಟು ಇಂಚಿನ ಬಳುಕುವ ಬಳ್ಳಿಯಂಥ ಹುಡುಗಿ.ಅವನು ಆರಡಿ ಎತ್ತರದ ಕಟ್ಟುಮಸ್ತು ಹುಡುಗ. ಹಾಗಾಗಿ ಅಪ್ಪ-ಅಮ್ಮರಿಂದ, ಹಾಸ್ಟೆಲ್‌ನಲ್ಲಿದ್ದ ಮಗಳಿಗೆ “ದಪ್ಪಗಾಗು’ ಎನ್ನುವ ಕಟ್ಟುನಿಟ್ಟಾದ ಆದೇಶ ದೊರೆತಿತ್ತು. ರಿತುವಿಗೂ ಹಂಚಿಕಡ್ಡಿಯಂತೆ ಇರುವುದು ಇಷ್ಟವಿರಲಿಲ್ಲ. ಹಾಗಾಗಿಯೇ, ಆಕೆ ಮಾಡದ ಪ್ರಯತ್ನವಿರಲಿಲ್ಲ. ಆದರೆ ಫ‌ಲಿತಾಂಶ ಮಾತ್ರ ಸೊನ್ನೆ.ಅದಕ್ಕೇ ಸಿಕ್ಕಾಪಟ್ಟೆ ಬೇಸರದಲ್ಲಿದ್ದಳು.

ಸ್ನೇಹಿತೆಯರಾದ ನಾವೆಲ್ಲರೂ ಸದುದ್ದೇಶದಿಂದ ನಾನಾ ಸಲಹೆ ನೀಡುತ್ತಿದ್ದೆವು. ಕಡೆಗೆ ರಿತುವಿನ ಗೋಳಾಟ ನೋಡಲಾರದ ಗೆಳತಿಯೊಬ್ಬಳು, “ತಿಂದಂತೂ ನೀನು ಈ ಜನ್ಮದಲ್ಲಿ ದಪ್ಪವಾಗಲು ಸಾಧ್ಯವಿಲ್ಲ. ಅದರ ಬದಲಿಗೆ ಹಾಕುವ ಬಟ್ಟೆಯಿಂದ ದಪ್ಪ ಕಾಣಿಸುವ ಹಾಗೆ ಮಾಡಿದರೆ ಹೇಗೆ?’ ಎಂಬ ಸೂಪರ್‌ ಐಡಿಯಾ ಕೊಟ್ಟಳು. ಅವಳಿಗೆ ಐನ್‌ಸ್ಟೈನಿ ಎಂಬ ಬಿರುದು ಕೊಟ್ಟು ನಮ್ಮ ಪಡೆ ಕಾರ್ಯಪ್ರವೃತ್ತವಾಯಿತು.

ಯಾವುದೋ ಫ್ಯಾಶನ್‌ ಮ್ಯಾಗಜಿನ್‌ ಓದಿ, ಉದ್ದವಾಗಿ ಸಪೂರ ಇರುವವರು ಕುರ್ತಾ ಜತೆ ಅಡ್ಡ ಗೆರೆ ಇರುವ ನೆರಿಗೆಗಳುಳ್ಳ ಅಗಲವಾದ ಪಟಿಯಾಲಾ ಪ್ಯಾಂಟ್‌ ಧರಿಸಿದರೆ ಸ್ವಲ್ಪ ಗಿಡ್ಡ ಮತ್ತು ಅಗಲವಾಗಿ ಕಾಣುತ್ತಾರೆ ಎಂಬ ಮಾಹಿತಿ ಪಡೆದೆವು. ಸರಿ, ಅವತ್ತೇ ಗುಂಪಾಗಿ ಹತ್ತಾರು ಅಂಗಡಿಗೆ ಹೋಗಿ, ಆ ಥರದ ಬಟ್ಟೆ ಹುಡುಕಿ, ಟೈಲರ್‌ಗೆ ಒಂದಕ್ಕೆರಡು ದುಡ್ಡು ಕೊಟ್ಟು ಎರಡೇ ದಿನದಲ್ಲಿ ಆ ಥರದ ಪ್ಯಾಂಟ್‌ ಹೊಲಿಸಿದ್ದಾಯ್ತು. ಅದನ್ನು ರಿತುವಿಗೆ ಹಾಕಿಸಿ ಟ್ರಯಲ್‌ ನಡೆಸಿದಾಗ ರಿತು, ಸ್ವಲ್ಪ ದಪ್ಪವಾಗಿ ಮುದ್ದಾಗಿ ಕಾಣುತ್ತಿದ್ದಳು.ಇನ್ನು ಕ್ಲೀನ್‌ ಬೌಲ್ಡ್‌ ಆಗುವ ಸರದಿ ಹುಡುಗನದ್ದು ಎಂಬ ನಮ್ಮ ಕೀಟಲೆಗೆ ರಿತು, ಕೆಂಪು ಕೆಂಪು!

ಅಂತೂ ಹುಡುಗ ಮತ್ತು ರಿತುವಿನ ಭೇಟಿ ದೊಡ್ಡ ಹೋಟೆಲ್‌ನಲ್ಲಿ ನಿಗದಿಯಾಗಿತ್ತು. ಸ್ವತಃ ಹುಡುಗನೇ ರಿತುವನ್ನು ಹಾಸ್ಟೆಲ್‌ನಿಂದ ಕರೆದೊಯ್ಯಲು ಬರುವವನಿದ್ದ. ನಮಗೆ ತಡೆಯಲಾರದ ಕುತೂಹಲ. ರಿತು ಬೆಳಗ್ಗೆಯಿಂದಲೇ ಸಿದ್ಧವಾಗುತ್ತಿದ್ದರೆ, ನಾವು ರೂಮಿನ ಕಿಟಕಿಗೆ ಕಣ್ಣು ಕೀಲಿಸಿ ಕುಳಿತಿದ್ದೆವು. ಹೇಳಿದ ಸಮಯಕ್ಕೆ ಸರಿಯಾಗಿ ಹುಡುಗ ಕಾರಿನಲ್ಲಿ ಬಂದು, ಹಾಸ್ಟೆಲ್‌ ಹೊರಗೆ ಕಾಯುತ್ತಾ ನಿಂತ.ನಮ್ಮ ರಿತು ಹಂಸಗಮನೆಯಾಗಿ ಅವನತ್ತ ಹೊರಟಳು.ನಾವು ಉಸಿರು ಬಿಗಿಹಿಡಿದು ಸಿನಿಮಾ ನೋಡುವವರಂತೆ ಕಾಯುತ್ತಿದ್ದೆವು. ತನ್ನತ್ತ ಬಂದ ರಿತುವನ್ನು ಕಂಡ ಹುಡುಗ ನಸುನಕ್ಕ, ಇವಳೂ ತಲೆ ಎತ್ತಿ ನಕ್ಕು ಮುಂದಡಿಯಿಟ್ಟಳು. ಅಷ್ಟೇ! ಅಗಲ ಪ್ಯಾಂಟಿನ ತುದಿಗೆ ಇವಳ ಚಪ್ಪಲಿ ಸಿಕ್ಕಿ ಧಬ್‌ ಎಂದು ಮುಗ್ಗರಿಸಿ ನೇರವಾಗಿ ಅವನ ಮೇಲೇ ಬಿದ್ದು, ಅವನನ್ನೂ ಬೀಳಿಸಿಬಿಟ್ಟಳು. ಒಳಗಿನಿಂದ ನಾವೆಲ್ಲರೂ ಓಡಿ ಹೋಗಿ ಇಬ್ಬರನ್ನೂ ಎತ್ತಬೇಕಾಯಿತು. ಹುಡುಗನ ಕೈ ಉಳುಕಿತ್ತು, ರಿತುವಿಗೆ ಅಲ್ಲಲ್ಲಿ ತರಚು ಗಾಯ. ಇಬ್ಬರೂ ಹೊಟೆಲ್‌ಗೆ ಅಲ್ಲ ಹಾಸ್ಪಿಟಲ್‌ಗೆ ಹೋಗಿ ಪಕ್ಕ-ಪಕ್ಕ ಕುಳಿತು ಚಿಕಿತ್ಸೆ ಪಡೆಯಬೇಕಾಯಿತು!

ನೋವಿನಿಂದ ಅಳುತ್ತಿದ್ದ ರಿತುವನ್ನು ಪಾಪ ಹುಡುಗನೇ ಸಂತೈಸಿದನಂತೆ. ಹೀಗೇ ಅಲ್ಲೇ ಪರಸ್ಪರ ಮಾತುಕತೆ ನಡೆದು ಎಲ್ಲವೂ ಸುಖಾಂತ್ಯವಾಯಿತು. ಆದರೆ ಈಗಲೂ ರಿತುವಿನ ಗಂಡ, ಪಟಿಯಾಲಾ ಪ್ಯಾಂಟ್‌ ಎಂದರೆ ದೂರ ಓಡುತ್ತಾನಂತೆ!

-ಡಾ.ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.