ತನ್ನ ಆವರಣವೇ ಸೆರೆಮನೆಯಾದರೆ…


Team Udayavani, Apr 25, 2018, 7:30 AM IST

6.jpg

ಕೆಲವರಿರುತ್ತಾರೆ, ಮಕ್ಕಳಿಗೆ ಸದಾ ಉಪದೇಶ ನೀಡುವುದೇ ಅವರಿಗೊಂದು ಚಟ. ಯಾವಾಗ ನೋಡಿದ್ರೂ ಆದೇಶ ಕೊಡುತ್ತಿರುತ್ತಾರೆ. ಇದನ್ನೆಲ್ಲ ಕೇಳಿದ ಮಕ್ಕಳ ಮನಸ್ಸು ಕೆಲವೊಮ್ಮೆ ಹಿಂಸೆಗೊಳಪಡುತ್ತದೆ. ಇದನ್ನು scar on the self image ಎನ್ನುತ್ತಾರೆ. ನೀವು ನಿರ್ದೇಶನ ಮಾಡಲು ಮಕ್ಕಳು ನಟರಲ್ಲ. ಬದುಕು ಸಿನಿಮಾವೂ ಅಲ್ಲ. ಕೆಲವರಂತೂ ಇನ್ನೊಬ್ಬರ ಮಕ್ಕಳನ್ನು ಮನಸ್ಸಿಗೆ ಬಂದಂತೆ ಎಳೆದಾಡುತ್ತಾರೆ. ಮನೆಯಲ್ಲಿ ಹಣಕಾಸು ವ್ಯವಸ್ಥೆ ಕಡಿಮೆ ಇದ್ದರಂತೂ ನೆಂಟರೆಲ್ಲಾ ತಲೆಗೊಂದು ಮಾತಾಡುತ್ತಾರೆ.

ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಕೆಲವೊಮ್ಮೆ ಮನೆಯಲ್ಲೇ ಧಕ್ಕೆ ಬರುತ್ತದೆ ಎಂಬುದಕ್ಕೆ ಹಲವಾರು ನಿದರ್ಶನಗಳು ಸಿಗುತ್ತವೆ. ಮನಸ್ಸು- ವ್ಯಕ್ತಿತ್ವ ಮುದುಡಿದ ಪರಿಣಾಮ ಸ್ವರ್ಣಳಿಗೆ ಉಗ್ಗು. ಮೊಂಡು ಸ್ವಭಾವ, ಹಟವೂ ಜೊತೆಯಾಗಿತ್ತು. ತಂದೆ ಇಲ್ಲದ ಹನ್ನೆರಡು ವರ್ಷದ ಸ್ವರ್ಣ, ಮನೋವೈದ್ಯರ ಸಲಹೆಯಂತೆ, ಬುದ್ದಿಮತ್ತೆ (ಐ.ಕ್ಯೂ) ಪರೀಕ್ಷೆಗೆಂದು ಅಜ್ಜಿಯ ಜೊತೆ ನನ್ನ ಬಳಿ ಚಿಕಿತ್ಸೆಗಾಗಿ ಬಂದಳು. ದರ್ಜಿಯ ಕೆಲಸದಲ್ಲಿ ತಾಯಿಗೆ ಬಿಡುವಿಲ್ಲ. “ವಾರಸಾªರರು ಇಲ್ಲ ನೋಡಿ ಮಗೀಗೆ, ಅದ್ಕೆ, ಎಲ್ಲ ಮನೇಲೂ ಬೆಳೀತು’ ಎಂಬ ಅಜ್ಜಿಯ ಮಾತುಗಳು ಮಗುವಿನ ಪರಿಸ್ಥಿತಿಯನ್ನು ಅರ್ಥ ಮಾಡಿಸಿತು. 

  ಸ್ವರ್ಣ, ಕತ್ತು ಮೇಲಕ್ಕೆತ್ತಲು ಸಾಧ್ಯವಿಲ್ಲದ ಮಟ್ಟಿಗೆ ತಲೆ ಬಗ್ಗಿಸಿದ್ದಳು. ನಾಚಿಕೆಯ ಗೂಡಾಗಿದ್ದಳು. ಮಗುವಿನಿಂದ ಚಿಕಿತ್ಸೆಗೆ ಸಹಕಾರ ಸಿಗುವುದು ಕಷ್ಟ ಎನಿಸಿ ಐ.ಕ್ಯೂ. ಪರೀಕ್ಷೆಯನ್ನು ಮುಂದೂಡಿದೆ. ಸತತ ಹತ್ತು ದಿನಗಳು ಚಿಕಿತ್ಸೆಗೆ ಬರಲು ಹೇಳಿದೆ. ಸಾಂಪ್ರದಾಯಿಕ ಚಿಕಿತ್ಸೆ/ಪರೀಕ್ಷೆಗಳನ್ನು ಬಿಟ್ಟು ಅವಳ ಗೆಳತಿಯಾದೆ. ಅವಳು ನನಗೆ ಸಹಕರಿಸಿದರೆ, ಪ್ರತಿದಿನ ಉಡುಗೊರೆ ಕೊಡುವುದಾಗಿ ಹೇಳಿ, ಮಾತಿಗಿಳಿದೆ. ಮೂದಲಿಕೆ- ಅಪಹಾಸ್ಯಕ್ಕೆ ಗುರಿಯಾದ ಮನಸ್ಸಿನ ಬರೆಗಳನ್ನು ಅಳಿಸಲು ಸ್ನೇಹವೇ ಮುಲಾಮು. ಕೇಕು, ಬನ್ನು, ಬಳೆ, ಗೊಂಬೆ, ತಲೆಗೆ ಹಾಕುವ ಪುಟ್ಟ ಕ್ಲಿಪ್ಪುಗಳು, ಬಿಂದಿ… ಹೀಗೆ ಸ್ವರ್ಣ ಬಹಳ ಖುಷಿಯಾದಳು.

  ಕೆಲವು ಅಕ್ಷರಗಳನ್ನು ಉಚ್ಚರಿಸುವಾಗ ಅವಳ ನಾಲಗೆ ತೊಂದರೆ ಕೊಡುತ್ತಿತ್ತು ಬಿಟ್ಟರೆ, ಉಗ್ಗು ಇರಲಿಲ್ಲ. ಅನವಶ್ಯಕ ಮಾರ್ಗದರ್ಶನದಲ್ಲಿ ಮಗು ನೊಂದಿತ್ತು. ಮಂಕು ಬಡಿದಿತ್ತು. ಮಾತು ಬಿಟ್ಟಿತ್ತು. ಅವಳಲ್ಲಿ ವರ್ತನಾ ಸಮಸ್ಯೆ ಮೈಗೂಡಿತ್ತು. ಮಾವ, ಚಿಕ್ಕಮ್ಮನ ಪರಿವಾರದೊಡನೆ ಸುತ್ತಾಡಲು ಹೊರಟಾಗ ಕೀಳರಿಮೆ ಉಂಟಾಗುತ್ತಿತ್ತು. ಹೊಸಬಟ್ಟೆ ಕೊಡಿಸುವಾಗ ತಾರತಮ್ಯ. ಜೊತೆಗೆ, ಕೂತರೆ ಸಾಕು ಕೆಲಸಕ್ಕೆ ಹಚ್ಚುತ್ತಿದ್ದರಂತೆ. ತನಗಿಂತ ತೀರಾ ಚಿಕ್ಕಮಕ್ಕಳ ಜೊತೆ ಆಟ ಆಡುತ್ತಿದ್ದಳು. ಅವರನ್ನು ಅನುಕರಿಸುತ್ತಿದ್ದಳು. ಪ್ರೌಢಾವಸ್ಥೆಯಲ್ಲಿ ಬರಬೇಕಾದ ಪ್ರೌಢಿಮೆ ಇರಲಿಲ್ಲ.

  ನನ್ನ ಪ್ರಯತ್ನ ಫ‌ಲಿಸಿತ್ತು. ಒಂದು ವಾರಗಳ ಒಡನಾಟ ಚಿಗುರೊಡೆದಿತ್ತು. ಸಮಸ್ಯೆಯನ್ನು ನಿಧಾನವಾಗಿ ಬಿಡಿಸಿ ಹೇಳಿದೆ. ಅರ್ಥಮಾಡಿಕೊಂಡಳು. ನಂತರ ವಾರಕ್ಕೊಂದು ಸಲ ಬಂದಳು. ಸತತ ಎರಡು ವರ್ಷಗಳಲ್ಲಿ, ಸ್ವರ್ಣ ಯೌವನದ ಹೊಸ್ತಿಲನ್ನು ಆತ್ಮವಿಶ್ವಾಸದಲ್ಲಿ ದಾಟಿದ್ದಾಳೆ. 

ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

ಯತ್ನಾಳ

Vijayapura; ಡಿಸಿಎಂ ಸ್ಥಾನಕ್ಕೆ ಶಾಮನೂರು ಬೇಡಿಕೆ ಸೂಕ್ತ: ಶಾಸಕ ಯತ್ನಾಳ

ramesh jigajinagi

Vijayapura; ಜೆಡಿಎಸ್ ಹೊಂದಾಣಿಕೆಯಿಂದ ಬಲ ಬಂದಿದೆ: ಸಂಸದ ಜಿಗಜಿಣಗಿ

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Indian Flag: ರಾಷ್ಟ್ರ‌ಧ್ವಜಕ್ಕೆ ಮದೀನಾ ಗುಂಬಜ್ ಚಿತ್ರ ಹಾಕಿ ಅಪಮಾನ: ವ್ಯಕ್ತಿ ಬಂಧನ

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Heavy Rain: ಗೋವಾದಲ್ಲಿ ಭಾರೀ ಮಳೆ… ಧರೆಗುರುಳಿದ ಮರ, ಭೂಕುಸಿತ, ಅಪಾಯದಂಚಿನಲ್ಲಿ ಮನೆ

Big Bash Winning Coach Luke Williams Joins RCB Women’s Team as Head Coach

WPL; Royal Challengers Bangalore ಮಹಿಳಾ ತಂಡಕ್ಕೆ ಹೊಸ ಕೋಚ್ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

4-kottigehara

Kottigehara: ಧಾರಾಕಾರ ಮಳೆ, ಹೈರಾಣಾದ ರೈತರು

ಯತ್ನಾಳ

Vijayapura; ಡಿಸಿಎಂ ಸ್ಥಾನಕ್ಕೆ ಶಾಮನೂರು ಬೇಡಿಕೆ ಸೂಕ್ತ: ಶಾಸಕ ಯತ್ನಾಳ

ramesh jigajinagi

Vijayapura; ಜೆಡಿಎಸ್ ಹೊಂದಾಣಿಕೆಯಿಂದ ಬಲ ಬಂದಿದೆ: ಸಂಸದ ಜಿಗಜಿಣಗಿ

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.