ಕೊನೆಗೂ ಚೆಕ್‌ಮೇಟ್‌ ಹೇಳಿದೆ!


Team Udayavani, Jul 22, 2020, 3:31 PM IST

ಕೊನೆಗೂ ಚೆಕ್‌ಮೇಟ್‌ ಹೇಳಿದೆ!

ಸಾಂದರ್ಭಿಕ ಚಿತ್ರ

ಲಾಕ್‌ಡೌನ್‌ನ ಈ ಬಿಡುವಿನ ಸಮಯದಲ್ಲಿ ನನಗೆ ಚೆಸ್‌ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು…

ಒಂದು ಲಾಕ್‌ಡೌನ್‌ ಮುಗಿಯಿತು ಅನ್ನುವಷ್ಟರಲ್ಲಿ ದೊಡ್ಡ ದೊಡ್ಡ ನಗರಗಳು ಮತ್ತೂಮ್ಮೆ ಬಂದ್‌ ಆಗಿಬಿಟ್ಟಿವೆ. ಇನ್ನು ಈ ಪರಿಸ್ಥಿತಿ ಎಷ್ಟು ದಿನವೋ ದೇವರೇ ಬಲ್ಲ. ಆದರೆ, ಮೊದಲ ಸಲ ಲಾಕ್‌ಡೌನ್‌ ಆದಾಗ ಇದ್ದ ಗೊಂದಲ, ಗಾಬರಿ ಈಗಿಲ್ಲ. ನಾವೆಲ್ಲಾ ಮನೆಯೊಳಗೇ ಬದುಕಲು ಕಲಿತಿದ್ದೇವೆ. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಆದಾಗ ನನಗಂತೂ ಬಹಳ ಕಷ್ಟವಾಗಿತ್ತು. ಬೆಳಗ್ಗೆ ವಾಕಿಂಗ್‌ ಹೋಗೋ ಹಾಗಿಲ್ಲ, ಸಂಜೆ ಗೆಳತಿಯರ ಜೊತೆ ಭಜನೆಗೆ ಸೇರುವ ಹಾಗಿಲ್ಲ ಅಂದ್ರೆ… 24* 7 ಮನೆಯೊಳಗೇ ಕುಳಿತು ಮಾಡೋದೇನು? ಧಾರಾವಾಹಿಗಳಿಲ್ಲ, ನ್ಯೂಸ್‌ ಚಾನೆಲ್‌ ನೋಡೋಕೆ ಇಷ್ಟವಿಲ್ಲ.

ಅಡುಗೆ, ಪುಸ್ತಕ, ಕಸೂತಿಯನ್ನು ಹೊಸದು ಅಂತ ಕಲಿಯೋ ವಯಸ್ಸೂ ನನ್ನದಲ್ಲ. ಆಗ ನೆನಪಾಗಿದ್ದು ಹಳೆಯದೊಂದು ಬಯಕೆ. ಅದುವೇ ಚೆಸ್‌ ಕಲಿಯೋ ಆಸೆ. “ಕಾಲೇಜು ಟೈಮಲ್ಲಿ ನಾನು ಚೆಸ್‌ ಚಾಂಪಿಯನ್‌…’ ಅಂತ ಮೀಸೆ ತಿರುವಿದವರನ್ನು ಮದುವೆಯಾಗಿ ಹದಿನೈದು ವರ್ಷ ಕಳೆದರೂ, ನನಗೆ ಚೆಸ್‌ ಆಡೋಕೆ ಬರುತ್ತಿರಲಿಲ್ಲ. ರಾಜ ಯಾವುದು, ರಾಣಿ ಯಾವುದು ಅಂತಲೂ ಕನ್‌ಫ್ಯೂಸ್‌ ಆಗುತ್ತಿತ್ತು. “ಅದು ಬುದ್ಧಿವಂತರ ಆಟ’ ಅಂತ ಯಜಮಾನರು ಛೇಡಿಸುವುದೂ ನಡೆದಿತ್ತು. ನಾನೂ ಚೆಸ್‌ ಕಲಿತು ಯಜಮಾನರ “ಗರ್ವಭಂಗ’ ಮಾಡುವ ಕನಸು ಕಂಡಿದ್ದೆನೇ ಹೊರತು, ಕಲಿಯುವ ಮನಸ್ಸು ಮಾಡಿರಲಿಲ್ಲ.

ನನಗೆ ಚೆಸ್‌ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು. ದಿನಾ ಬೆಳಗ್ಗೆ, ಸಂಜೆಯ ಬಿಡುವಿನ ವೇಳೆಯಲ್ಲಿ ಚೆಸ್‌ ಆಡಿದ್ದೇ ಆಡಿದ್ದು. ಯಜಮಾನರು ನಿಜವಾಗ್ಲೂ ಚೆಸ್‌ ಚಾಂಪಿಯನ್‌ ಅನ್ಸುತ್ತೆ. ಬಹಳ ಬೇಗ, ಸುಲಭದಲ್ಲಿ ಅರ್ಥವಾಗುವಂತೆ ಕಲಿಸಿದರು. ಮೊನ್ನೆಯ ಆಟದಲ್ಲಿ ಅಂತೂ ಅವರಿಗೆ “ಚೆಕ್‌ ಮೇಟ…’ ಅಂತ ಹೇಳಿ ವರ್ಷಗಳ ಕನಸನ್ನು ನನಸು ಮಾಡಿಕೊಂಡೆ. ಆದ್ರೆ ಯಜಮಾನರು ಮಾತ್ರ, “ನಾನು ಬೇಕಂತಲೇ ಸೋತಿದ್ದು ಕಣೇ…’ ಅಂತಿದ್ದಾರೆ. ಇದ್ದರೂ ಇರಬಹುದು. ಆದರೂ ಆ ಮಾತನ್ನು ನಾನು ನಂಬುವುದಿಲ್ಲ ಬಿಡಿ!

ಗೀತಾ ಶಂಕರ್‌

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.