ಮಗೂ, ದೇಶ ಕಾಯುವೆಯಾ?


Team Udayavani, Feb 20, 2019, 12:30 AM IST

u-8.jpg

ಮಕ್ಕಳು ಹುಟ್ಟುವ ಮುನ್ನವೇ ಡಾಕ್ಟರ್‌ ಓದಿಸುವುದೋ, ಎಂಜಿನಿಯರ್‌ ಓದಿಸುವುದೋ ಎಂಬುದನ್ನು ಹೆತ್ತವರು ನಿರ್ಧರಿಸುವ ಕಾಲವಿದು. ಎಲ್ಲರಿಗೂ ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವ ನೀಡುವ ಹುದ್ದೆಗಳತ್ತಲೇ ಗಮನ. ಅದರಿಂದಾಚೆ ಅವರ ಆಸಕ್ತಿ ಹರಿಯುವುದೇ ಇಲ್ಲ. ಎಲ್ಲಾ ತಾಯಂದಿರಂತೆ ನಾನು ಕೂಡಾ ನೀನೇನಾಗಬೇಕೆಂದು ಆಸೆ ಪಟ್ಟಿದ್ದೇನೆ…

ಮಗುವೇ…
ನಿನ್ನ ನಿರೀಕ್ಷೆಗೀಗ ಎಂಟು ತಿಂಗಳು. ಒಳಗೆ ಎಲ್ಲವೂ ಕ್ಷೇಮ ತಾನೇ. ನಾನಿಲ್ಲಿ ಕ್ಷೇಮ. ನನಗೆ ಗೊತ್ತು ಒಳಗಲ್ಲಿ ಕತ್ತಲು. ನಿನಗೆ ಗೊತ್ತೇ? ಇಲ್ಲೂ ಕತ್ತಲು. ನಮ್ಮ ದೇಶದ ಸೈನಿಕರ ಮೇಲೆ ದಾಳಿ ನಡೆಸಿ ಹಲವರನ್ನು ಹತ್ಯೆಗೈದಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಮನೆಯಲ್ಲಿ ನನಗೂ, ನಿನ್ನ ತಂದೆಯದೂ ಇದೇ ಮಾತುಕತೆ. ನಿನ್ನ ಚಿಕ್ಕಪ್ಪನೂ ಸೇನೆಯಲ್ಲಿದ್ದಾರೆ. ಅವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶ ದಾಳಿ ನಡೆದ ಸ್ಥಳದಿಂದ ಬಹಳ ದೂರವಿಲ್ಲ. ಈ ಕಾರಣಕ್ಕೆ ನಮ್ಮ ದಿಗಿಲು ಇನ್ನೂ ಹೆಚ್ಚಾಗಿದೆ. ಮುಂದಿನಿಂದ ದಾಳಿ ನಡೆಸುವವರನ್ನು ಧೈರ್ಯವಾಗಿ ಎದುರಿಸಿ ಸೆದೆಬಡಿದುಬಿಡಬಹುದು, ಆದರೆ ಹಿಂದಿನಿಂದ, ಕದ್ದು ಮುಚ್ಚಿ ದಾಳಿ ನಡೆಸುವವರದೇ ಚಿಂತೆ. ಅಷ್ಟುಮಾತ್ರಕ್ಕೆ ಜಗತ್ತು ಕೆಟ್ಟಿದೆಯೆಂದು ತಿಳಿಯಬೇಡ. ಜಗತ್ತು ನಿಜಕ್ಕೂ ಸುಂದರವಾಗಿದೆ. ಹುಂ, ಸ್ವಲ್ಪ ಸಮಯವಷ್ಟೇ. ಇನ್ನೇನು ಹೊರಗೆ ಬರುತ್ತೀಯಲ್ಲ. ಆಗ, ಎಲ್ಲವನ್ನೂ ನೀನೇ ನೋಡುವೆಯಂತೆ…

ಈಗ ನನಗೆ ನೆನಪಾಗುತ್ತಿದೆ. ನಿನ್ನ ತಂದೆಯನ್ನು ಮದುವೆಯಾಗುವ ಮೊದಲು ಹಲವು ಸಂಬಂಧಗಳನ್ನು ಮನೆಯವರು ನೋಡಿದ್ದರು. ಯಾವ ಯಾವುದೋ ಕಾರಣಗಳಿಗೆ ಸರಿಬಂದಿರಲಿಲ್ಲ. ಕಡೆಗೆ ನಿನ್ನ ತಂದೆಯ ಕಡೆಯ ಸಂಬಂಧ ನಮ್ಮ ಮನೆಯವರಿಗೆಲ್ಲಾ ಹಿಡಿಸಿದ್ದು ಈಗ ಹಳೆಯ ಕಥೆ. ಈ ಬಗ್ಗೆ ನಿನಗೊಂದು ವಿಚಾರ ಹೇಳಲೇಬೇಕು. ನನ್ನನ್ನು ನೋಡಲು ಬಂದಿದ್ದವರಲ್ಲಿ ಒಬ್ಬರು ಸೈನಿಕರಾಗಿದ್ದರು. ಅವರು ನನ್ನನ್ನು ನೋಡಿ ಇಷ್ಟಪಟ್ಟಿದ್ದರು. ನನಗೂ ಅವರು ಹಿಡಿಸಿದ್ದರು. ಆರಡಿ ಎತ್ತರದ ಆಜಾನುಬಾಹು, ನಾನೋ ಅವರ ಹೆಗಲಿಗಿಂತಲೂ ಕೆಳಕ್ಕೆ ಬರುತ್ತಿದ್ದೆ. ಗೆಳತಿಯರೆಲ್ಲಾ ಈ ಬಗ್ಗೆ ಆಡಿಕೊಂಡಿದ್ದೇ ಆಡಿಕೊಂಡಿದ್ದು. ನನಗೆ ಅವರು ಸೇನೆಯವರೆಂದು ತಿಳಿದು ಅವರ ಮೇಲೆ ಗೌರವ ಮೂಡಿತ್ತು. ಅವರ ಬಳಿ ಮಾತಾಡುವಾಗಲೂ ಅಷ್ಟೆ: ಎಲ್ಲಿ ತಪ್ಪು ತಿಳಿದುಕೊಂಡುಬಿಡುತ್ತಾರೋ ಎಂದು ಪ್ರತಿ ಪದವನ್ನೂ ಅಳೆದು ತೂಗಿ ಆಡುತ್ತಿದ್ದೆ. ಆದರೆ, ಅವರು ನಾನಂದುಕೊಂಡಂತೆ ಅಂಥ ಕಟ್ಟುನಿಟ್ಟಿನ ವ್ಯಕ್ತಿಯಾಗಿರಲಿಲ್ಲ. ಅವರೇ ನನ್ನ ಪತಿಯಾಗುತ್ತಾರೆ ಎಂದುಕೊಂಡೆ. ಆದರೆ, ನಮ್ಮ ಮನೆಯಲ್ಲಿ ಅವರನ್ನು ಒಪ್ಪಲಿಲ್ಲ. ಅವರು  ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆಂಬ ಕಾರಣಕ್ಕೆ ನಮ್ಮ ಮನೆಯಲ್ಲಿ ವಿರೋಧ ಬಂದಿತು. ನಾನಂತೂ ಸಿದ್ಧಳಿದ್ದೆ. ಅವರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆಂಬ ಕಾರಣಕ್ಕೇ ಅವರು ನನಗೆ ಹಿಡಿಸಿಬಿಟ್ಟಿದ್ದರು. ಆದರೆ, ಯೋಗ ಕೂಡಿ ಬರಲಿಲ್ಲ. ಅವರೀಗ ಕ್ಷೇಮವಾಗಿದ್ದಾರೆಂದೇ ಆಶಿಸುತ್ತೇನೆ. ಟಿ.ವಿ.ಯಲ್ಲಿ ಸೇನೆ ಮೇಲಿನ ದಾಳಿ ಸುದ್ದಿ ನೋಡಿದಾಗ ಇವೆಲ್ಲಾ ನೆನಪಾಯಿತು.

ಮಕ್ಕಳು ಹುಟ್ಟುವ ಮುನ್ನವೇ ಡಾಕ್ಟರ್‌ ಓದಿಸುವುದೋ, ಎಂಜಿನಿಯರ್‌ ಓದಿಸುವುದೋ ಎಂಬುದನ್ನು ಹೆತ್ತವರು ನಿರ್ಧರಿಸುವ ಕಾಲವಿದು. ಎಲ್ಲರಿಗೂ ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವ ನೀಡುವ ಹುದ್ದೆಗಳತ್ತಲೇ ಗಮನ. ಅದರಿಂದಾಚೆ ಅವರ ಆಸಕ್ತಿ ಹರಿಯುವುದೇ ಇಲ್ಲ. ಎಲ್ಲಾ ತಾಯಂದಿರಂತೆ ನಾನು ಕೂಡಾ ನೀನೇನಾಗಬೇಕೆಂದು ಆಸೆ ಪಟ್ಟಿದ್ದೇನೆ. ಅವರಂತೆ ಡಾಕ್ಟರ್‌, ಎಂಜಿನಿಯರ್‌ ಆಗಿಸುವ ಆಸೆಯಿಲ್ಲ. ನಿನ್ನನ್ನು ಸೈನಿಕನನ್ನಾಗಿ ಮಾಡುವ ಆಸೆಯಿದೆ. ದೇಶಕ್ಕಾಗಿ ಹೋರಾಡುವ ಸೈನಿಕನ ಹುದ್ದೆಗಿಂತ ನನಗೆ ಬೇರಾವ ಹುದ್ದೆಯೂ ದೊಡ್ಡದಾಗಿ ಕಾಣುವುದಿಲ್ಲ. ಮುದ್ದೂ, ನನ್ನಾಸೆಯೇ ನಿನ್ನದೂ ಆಗಿರುತ್ತೆ ಎಂಬ ನಂಬಿಕೆ ನನ್ನದು… 

ಇತಿ ನಿನ್ನ
ಅಮ್ಮ

ಭಾರತೀ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.