ಲೈಫ್ ಈಸ್‌ “ಬುಟ್ಟಿ’ಫ‌ುಲ್‌!


Team Udayavani, Sep 27, 2017, 12:22 PM IST

27-STATE–31.jpg

ಸಂಜೆ ಮನೆಗೆ ಹೋಗ್ತಾ ದುಡ್ಡು ತಗೊಂಡು ಹೋಗಿಲ್ಲ ಅಂದ್ರೆ, ಸೊಸೆ ಒಂದಿನ ಊಟ ಹಾಕ್ತಾಳೆ, ಎರಡು ದಿನ ಹಾಕ್ತಾಳೆ, ಮೂರನೇ ದಿನ ಮೂತಿ ತೀರ್ತಾಳೆ…

ರಸ್ತೆಯಲ್ಲಿ ನಡೆದು ಹೋಗುವಾಗ ಸುತ್ತಮುತ್ತಲಿನ ಘಟನೆಗಳು, ಚಿತ್ರಣಗಳು ಮನಸ್ಸಿನಲ್ಲಿ ಅನೇಕ ಭಾವನೆಗಳನ್ನು ಮೂಡಿಸುತ್ತವೆ. ಕೆಲವು ಸಂಗತಿಗಳು ಕಣ್ಣಿಗೆ ಆನಂದ ನೀಡಿದರೆ, ಇನ್ನು ಹಲವು ಮನಸ್ಸಿಗೆ ನಾಟುತ್ತವೆ. ದಾರಿಯಲ್ಲಿ ಸಿಗುವ ಅನೇಕರು ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ, ಹಾಗೇ ಅವರು ಕಲಿಸುವ ಜೀವನಪಾಠವೂ. 

ನಾನು ರಸ್ತೆಯಲ್ಲಿ ಸಾಗುತ್ತಿದ್ದಾಗ, ಹಣ್ಣಣ್ಣು ಮುದುಕಿಯೊಬ್ಬಳು ಬುಟ್ಟಿ ಹೆಣೆಯುತ್ತಾ ಕುಳಿತಿದ್ದನ್ನು ನೋಡಿದೆ. ಆಕೆಯ ಸ್ವಾಭಿಮಾನಕ್ಕೆ ತಲೆ ಬಾಗುತ್ತಾ, ಇಳಿವಯಸ್ಸಿನಲ್ಲೂ ಕಷ್ಟಪಡಬೇಕಾದ ಆಕೆಯ ಸ್ಥಿತಿಗೆ ಮರುಗುತ್ತಾ ಆ ಅಜ್ಜಿಯನ್ನು ಮಾತಾಡಿಸಿದೆ. “ಏನಜ್ಜಿ ನಿನ್‌ ಹೆಸರು? ಯಾವೂರು?’ ಅಂತೆಲ್ಲ ಕೇಳಿದಾಗ, ಆಕೆ ತನ್ನಿಡೀ ಕಥೆಯನ್ನು ಬಿಚ್ಚಿಟ್ಟಿದ್ದು ಹೀಗೆ …

ನನ್ನ ಹೆಸರು ಮರಿಯಮ್ಮ ಕಣಮ್ಮ. ನಾನು ಶಾಲೆಗೇನೂ ಹೋಗಿಲ್ಲ. ಆದ್ರೆ ಈ ಬುಟ್ಟಿ ಮಾರಿ ಬಂದ ಹಣಾನ ಎಣಿಸೋಷ್ಟು ಲೆಕ್ಕ ಗೊತ್ತೈತೆ ನಂಗೆ. ನನ್ನೂರು ಮೈಸೂರು. ನನಗೆ 13 ವರ್ಷಕ್ಕೇ ಮದುವೆ ಮಾಡಿದ್ರು. ಆಗ ನಂಗೆ ಗೊತ್ತಿದ್ದಿದ್ದು ಅಪ್ಪ- ಅಮ್ಮ ಕಲಿಸಿದ ಈ ಕೆಲಸ ಮಾತ್ರ. ಆವತ್ತಿಂದ ನಂದು ಇದೇ ಕಸುಬು. ನಂಗೀಗ 67 ವರ್ಷ. 48 ವರ್ಷದಿಂದ ಕೆ.ಆರ್‌. ರಸ್ತೆಯಲ್ಲೇ ಬುಟ್ಟಿ ಮಾರೋದು ನಾನು. 

ಪಾರ್ವತಿಪುರದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗು. ಎಲಿÅಗೂ ಮದುವೆಯಾಗಿದೆ. ನನ್ನೊಬ್ಬ ಮಗ ಸತ್ತೋದ. ಹಂಗಾಗಿ ನಾನು, ನನ್ನ ಯಜಮಾನ, ಸೊಸೆ, ಮೊಮ್ಮಕ್ಕಳೆಲ್ಲಾ ಜೊತ್ಯಾಗೇ ಇದೀವಿ. ನಮ್ಮವೂÅ ಕೂಲಿಗೆ ಹೋಗ್ತಾರೆ. ಮೊಮ್ಮಕ್ಕಳು ಓದಿ¤ದಾರೆ. ಸೊಸೆ ಮನೆ ಕೆಲಸಕ್ಕೆ ಹೋಗ್ತಾಳೆ. ಜೀವ° ನಡೀಬೇಕಲ್ಲ? ನಂಗೆ ಈ ಕೆಲ್ಸ ಬಿಟ್ಟು ಬೇರೆ ಏನೂ ಬರಾಕಿಲ್ಲ. ಮಾಡ್ತೀನಿ ಅಂದ್ರೂ, ನಂಗ್ಯಾರು ಕರೆದು ಕೆಲಸ ಕೊಡ್ತಾರೆ?

ಒಂದಿನಕ್ಕೆ ಹೆಚ್ಚಂದ್ರೆ ಮೂರ್‍ನಾಲ್ಕು ಬುಟ್ಟಿ ಹೆಣೀಬೋದು. ಹೂವಿನಬುಟ್ಟಿ, ತರಕಾರಿ ಬುಟ್ಟಿ… ಹಿಂಗೆ ಬೇರೆ ಬೇರೆ ಬುಟ್ಟಿಗೆ ಬೇರೆ ಬೇರೆ ರೇಟು. ಒಂದಕ್ಕೆ 50-100 ರೂಪಾಯ್‌ ಸಿಗುತ್ತೆ. ಯಾರಾದ್ರೂ ಆರ್ಡರ್‌ ಕೊಟ್ರೆ, ಹೆಣೆದು ಕೊಡ್ತೀನಿ. ಈಗ ಮೊದಲಿನಷ್ಟು ಕಡಿಮೆ ದರದಲ್ಲಿ ಬಿದಿರು ಸಿಗೋದಿಲ್ಲ. ಏನೂ ಗಿಟ್ಟಲ್ಲ ಅಂದ್ರೂ, ದುಡಿಲೇಬೇಕಾದ ಅನಿವಾರ್ಯತೆ. ಒಂದು ಬಿದಿರಿಗೆ 300 ರೂ. ಕೊಡ್ಬೇಕು ನನ್ನವ್ವಾ. ಅದು ಬೆಳಗಾವಿಯಿಂದ ಬಂಬೂ ಬಜಾರಕ್ಕೆ ಬರುತ್ತೆ, ಅಲ್ಲಿಂದ ತಗೊಂಡು ಬಂದು ನಾವಿಲ್ಲಿ ಬುಟ್ಟಿ ಹೆಣೆಯೋದು. 

ಸಂಜೆ ಮನೆಗೆ ಹೋಗ್ತಾ ದುಡ್ಡು ತಗೊಂಡು ಹೋಗಿಲ್ಲ ಅಂದ್ರೆ, ಸೊಸೆ ಒಂದಿನ ಊಟ ಹಾಕ್ತಾಳೆ, ಎರಡು ದಿನ ಹಾಕ್ತಾಳೆ, ಮೂರನೇ ದಿನ ಮೂತಿ ತೀರ್ತಾಳೆ. ಅದ್ಕೆ ದೇಹ ದಣಿದ್ರೂ ಇಲ್ಲಿ ಬಂದು ಬುಟ್ಟಿ ಹೆಣೆಯೋದು. ಸ್ವಲ್ಪ ಸಾಲ ಬೇರೆ ಕುತೆ ಮೇಲಿದೆ. ಇದರಿಂದ ಬರೋ ದುಡ್ಡಲ್ಲಿ ಅದನ್ನಾ ತೀರಿಸಬೇಕು. ಜೀವ° ನಡೆಸೋಕೆ ಗೊತ್ತಿರೋದು ಇದೊಂದೇ ದಾರಿ.  ಕಷ್ಟಾನೋ, ಸುಖಾನೋ, ಜೀವನ ನಡೀಬೇಕಲ. ಲಾಭ ಬಂದ್ರೆ ಖುಷಿ, ಇಲ್ಲ ಅಂದ್ರೆ ಬ್ಯಾಸ್ರ. ಇದ್ರಲ್ಲಿ ಇಷ್ಟೇ ಹಣ ಬರುತ್ತೆ ಅಂತ ಹೇಳಕಾಗಲ್ಲ. ಹೊಟ್ಟೆಪಾಡಿಗೆ ಏನಾದೊದು ಮಾಡ್ಲೆಬೇಕಲ್ಲ ತಾಯಿ. ಕಲಿತ ವಿದ್ಯೆನೆ ಕೈ ಹಿಡೀತಿರೋದು. ಮಳೆ ಬಂದ್ರೆ ವ್ಯಾಪಾರ ಮಾಡೋಕಾಗಲ್ಲ. ಹಂಗಂತ ಮನೇಲಿ ಬೆಚ್ಚಗೆ ಇರೋಕಾಗತ್ತಾ? ಜೀವನ ಬಂದಂಗೆ ಬಾಳ್ವೆ ನಡೆಸಬೇಕು ಕಣವ್ವಾ. 

ಚೈತ್ರ ಹೆಚ್‌.ಜಿ.

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.