ಕೇಳಿ ಕೇಶ ಪ್ರೇಮಿಗಳೇ…


Team Udayavani, Feb 27, 2019, 12:30 AM IST

c-2.jpg

ತಲೆಗೂದಲು ಫ‌ಳಫ‌ಳ ಹೊಳೆಯಲಿ, ಕೂದಲು ಒತ್ತಾಗಿ ಬೆಳೆಯಲಿ, ತಲೆಹೊಟ್ಟು ಕಾಡದೇ ಇರಲಿ ಎಂಬ ಉದ್ದೇಶದಿಂದ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ಖರ್ಚು ಮಾಡಿ ಎಣ್ಣೆ ಖರೀದಿಸುತ್ತೇವೆ. ಕೆಲವೇ ನೂರು ರೂಪಾಯಿ ಖರ್ಚು ಮಾಡಿ ಅತ್ಯುತ್ತಮ ಗುಣಮಟ್ಟದ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಬಹುದು, ಗೊತ್ತಾ?

ಮನೆಯಲ್ಲಿಯೇ ದೊರೆಯುವ ಮೂಲಿಕೆಗಳಿಂದ, ಅಡುಗೆ ಮನೆಯಲ್ಲಿಯೇ ವಿಧವಿಧದ ಕೇಶತೈಲಗಳನ್ನು ತಯಾರಿಸಬಹುದು. ಇವುಗಳನ್ನು ತಯಾರಿಸುವುದೂ ಸುಲಭ. ವೆಚ್ಚವೂ ಕಡಿಮೆ. ಜೊತೆಗೆ, ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಎರಡೂ ವೃದ್ಧಿಯಾಗುತ್ತದೆ. 

1. ದಾಸವಾಳದ ತೈಲ
ಸಾಮಗ್ರಿ: 20 ದಾಸವಾಳದ ಹೂಗಳು (ಬಿಳಿ ದಾಸವಾಳವಾದರೆ ಶ್ರೇಷ್ಠ), 15 ದಾಸವಾಳದ ಎಲೆಗಳು, 150 ಗ್ರಾಂ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ.
ವಿಧಾನ: ದಾಸವಾಳದ ಹೂವು ಹಾಗೂ ಎಲೆಗಳನ್ನು ಮಿಕ್ಸಿಯಲ್ಲಿ ತಿರುವಿ ಪೇಸ್ಟ್ ತಯಾರಿಸಬೇಕು. ಅಗಲ ಬಾಯಿಯ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಬೇಕು. ಎಣ್ಣೆ ಬಿಸಿಯಾಗುತ್ತ ಬಂದಾಗ ದಾಸವಾಳದ ಪೇಸ್ಟ್ ಬೆರೆಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. ಎಣ್ಣೆ ತಣ್ಣಗಾದ ನಂತರ ಸೋಸಿ ಗಾಜಿನ ಬಾಟಲಿಗೆ ಹಾಕಿಡಿ. ನಿತ್ಯವೂ ಈ ಎಣ್ಣೆಯನ್ನು ಕೂದಲಿಗೆ ಬಳಸಿದರೆ, ದಾಸವಾಳದಲ್ಲಿ ಹೇರಳವಾಗಿರುವ ಅಮೈನೋ ಆಮ್ಲ, ವಿಟಮಿನ್‌ ‘ಸಿ’ ಮೊದಲಾದ ಪೋಷಕಾಂಶಗಳಿಂದ ಕೂದಲಿಗೆ ಪೋಷಣೆ ಸಿಗುತ್ತದೆ.

2. ಕಿತ್ತಳೆ ಸಿಪ್ಪೆಯ ತೈಲ
ಕಿತ್ತಳೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ, ನುಣ್ಣಗೆ ಪುಡಿ ಮಾಡಬೇಕು. 5 ಚಮಚ ಕಿತ್ತಳೆಯ ಸಿಪ್ಪೆಯ ಹುಡಿಯನ್ನು 1 ಕಪ್‌ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಬೆರೆಸಿ, ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು. ಎಣ್ಣೆ ಹೊಗೆಯಾಡಿದ ಬಳಿಕ, ಒಲೆಯಿಂದ ಕೆಳಗಿಳಿಸಿ, ಆರಿದ ಬಳಿಕ ಸೋಸಿ, ಗಾಳಿಯಾಡದ ಬಾಟಲಲ್ಲಿ ಹಾಕಿ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಲೇಪಿಸಿ, ಚೆನ್ನಾಗಿ ಮಾಲೀಶು ಮಾಡಿ, ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಕಿತ್ತಳೆಯಲ್ಲಿರುವ ಸಿಟ್ರಸ್‌ ಆಮ್ಲದ ಅಂಶ ಹಾಗೂ ‘ಸಿ’ ಜೀವಸತ್ವವು ತುರಿಕೆ, ಹೊಟ್ಟು ನಿವಾರಣೆಗೆ ಸಹಕಾರಿ. ವಾರಕ್ಕೆ 2-3 ಸಾರಿ ಈ ತೈಲ ಬಳಸಿ. 

3. ಮದರಂಗಿ ತೈಲ
1 ಕಪ್‌ ಮದರಂಗಿ ಸೊಪ್ಪನ್ನು 3 ಕಪ್‌ ಎಳ್ಳೆಣ್ಣೆಗೆ ಬೆರೆಸಿ, ಅಗಲಬಾಯಿ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಹೀಗೆ ಬಿಸಿ ಮಾಡುವಾಗ ಮದರಂಗಿ ಸೊಪ್ಪು ಸಿಡಿಯುವುದುಂಟು. ಆದ್ದರಿಂದ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ. ಎಣ್ಣೆ ಕಂದು ಬಣ್ಣಕ್ಕೆ ತಿರುಗುವವರೆಗೆ ಬಿಸಿ ಮಾಡಿ, ಗಾಜಿನ ಬಾಟಲಿಗೆ ಹಾಕಿ. ಈ ಎಣ್ಣೆಯನ್ನು ನಿತ್ಯವೂ ಕೂದಲಿಗೆ ಲೇಪಿಸಿದರೆ ಬಿಳಿಕೂದಲು ಕ್ರಮೇಣ ಕಪ್ಪಾಗುತ್ತದೆ. ಮದರಂಗಿ ಎಲೆಗಳೊಂದಿಗೆ ಕರಿಬೇವು, ನೆಲ್ಲಿಚೆಟ್ಟು ಬಳಸಿಯೂ ಎಣ್ಣೆ ತಯಾರಿಸಬಹುದು. 

4. ತುಳಸಿ-ಮೆಂತ್ಯೆ ತೈಲ
ಸಾಮಗ್ರಿ: 1/4 ಕಪ್‌ ತುಳಸಿ ಎಲೆ, 2 ಚಮಚ ಮೆಂತ್ಯೆ, 2 ಕಪ್‌ ಕೊಬ್ಬರಿ ಎಣ್ಣೆ.
ವಿಧಾನ: ತುಳಸಿ ಎಲೆಯನ್ನು ಅರೆದು ಪೇಸ್ಟ್ ತಯಾರಿಸಿ. ಮೆಂತ್ಯೆಯನ್ನು ಹುರಿದು ಪುಡಿ ಮಾಡಿ. ಎಣ್ಣೆಯ ಜೊತೆಗೆ, ತುಳಸಿ ಪೇಸ್ಟ್ ಹಾಗೂ ಮೆಂತ್ಯೆ ಪುಡಿ ಸೇರಿಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಬಿಸಿ ಮಾಡಿ. ಆರಿದ ಬಳಿಕ ಸೋಸಿ ಬಾಟಲಿಗೆ ಹಾಕಿಡಿ. ನಿತ್ಯ ಈ ತೈಲವನ್ನು ಬಳಸಿದರೆ, ತಲೆಹೊಟ್ಟು , ತುರಿಕೆ, ಕಜ್ಜಿ ನಿವಾರಣೆಯಾಗುತ್ತದೆ.

5. ಕರಿಬೇವು-ಈರುಳ್ಳಿ ಎಣ್ಣೆ
ಸಾಮಗ್ರಿ:
1/4 ಕಪ್‌ ಕರಿಬೇವಿನ ಸೊಪ್ಪು, 1/4 ಕಪ್‌ ಹೆಚ್ಚಿದ ಈರುಳ್ಳಿ, ಒಂದೂವರೆ ಕಪ್‌ ಕೊಬ್ಬರಿ ಎಣ್ಣೆ.
ವಿಧಾನ: ಕೊಬ್ಬರಿ ಎಣ್ಣೆಯನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಎಣ್ಣ ಬಿಸಿಯಾಗುತ್ತಿದ್ದಂತೆ ಈರುಳ್ಳಿ ಹಾಗೂ ಕರಿಬೇವಿನ ಸೊಪ್ಪು ಹಾಕಿ ಕುದಿಸಿ. ತಣ್ಣಗಾದ ಬಳಿಕ ಸೋಸಿ, ಎಣ್ಣೆಯನ್ನು ಸಂಗ್ರಹಿಸಿ. ನಮ್ಮ ಕೂದಲು ಕೆರ್ಯಾಟಿನ್‌ ಅಂಶದಿಂದ ಉತ್ಪತ್ತಿಯಾಗಿದ್ದು, ಕೆರ್ಯಾಟಿನ್‌ನಲ್ಲಿ ಗಂಧಕವು ಹೆಚ್ಚಾಗಿರುತ್ತದೆ. ಈರುಳ್ಳಿಯಲ್ಲಿ ಗಂಧಕದ ಅಂಶ ಅಧಿಕವಾಗಿದ್ದು, ಕೂದಲಿನ ಬೆಳವಣಿಗೆಗೆ ಸಹಕಾರಿ. ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣ ಇರುವುದರಿಂದ ತಲೆಹೊಟ್ಟು, ತುರಿಕೆ ಕಜ್ಜಿ ನಿವಾರಣೆಯಾಗುತ್ತವೆ. 

5. ಬೆಳ್ಳುಳ್ಳಿ ತೈಲ
3-4 ಬೆಳ್ಳುಳ್ಳಿ ಎಸಳನ್ನು ಜಜ್ಜಿ 1 ಕಪ್‌ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಹಾಕಿ. ಸಣ್ಣ ಉರಿಯಲ್ಲಿ ಎಣ್ಣೆಯನ್ನು ಕುದಿಸಿ, ನಂತರ ಎಣ್ಣೆಯನ್ನು ಸೋಸಿ ಸಂಗ್ರಹಿಸಿ. ಬೆಳ್ಳುಳ್ಳಿಯಲ್ಲಿ ಜೀವಾಣು ನಿರೋಧಕ ಗುಣ ಇರುವುದರಿಂದ ತಲೆಹೊಟ್ಟು, ತುರಿಕೆ ನಿವಾರಣೆಯಾಗಿ, ಕೂದಲು ಸೊಂಪಾಗಿ ಬೆಳೆಯುತ್ತದೆ. 

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.