ಅರೆಘಳಿಗೆಯೂ ಬಿಟ್ಟಿರಲಾಗದ ಪ್ರೀತಿ…


Team Udayavani, Sep 30, 2020, 8:01 PM IST

ಅರೆಘಳಿಗೆಯೂ ಬಿಟ್ಟಿರಲಾಗದ ಪ್ರೀತಿ…

ಸಾಂದರ್ಭಿಕ ಚಿತ್ರ

ಪ್ರೀತಿಗೆ ಇಪ್ಪತ್ತೇಳು ವರ್ಷ. ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಗ್ಯಾಸ್ಟ್ರಿಕ್‌ ಸಮಸ್ಯೆ, ಹೊಟ್ಟೆನೋವು ಮತ್ತು ವಾಂತಿಯ ಸಮಸ್ಯೆ ಅವಳನ್ನುಕಂಗಾಲು ಮಾಡಿತ್ತು. ಅದಕ್ಕಾಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಳು. ಇತ್ತೀಚೆಗೆ, ತಡೆಯಲಾರದ ಹೊಟ್ಟೆನೋವು ಬಂದುದರಿಂದ, ಆಸ್ಪತ್ರೆಗೆ ದಾಖಲಾಗಿ ಎಲ್ಲಾ ತಪಾಸಣೆ ಮಾಡಿದಾಗ, ಯಾವುದೇ ರೀತಿಯ ಸೋಂಕು ಇರಲಿಲ್ಲ. ಆದರೂ ಊಟ ಸೇರದೆ ಬಹಳ ನಿಶ್ಯಕ್ತಿ ಹೊಂದಿದ್ದಳು. ಆಗ ವೈದ್ಯರು ಮಾನಸಿಕ ಒತ್ತಡದ ಪರೀಕ್ಷೆಗೆ ನನ್ನ ಬಳಿ ಕಳಿಸಿದ್ದರು.

ಪ್ರೀತಿ ಸ್ನಾತಕೋತ್ತರ ಪದವೀಧರೆ,ಕೆಲಸದಲ್ಲಿದ್ದಳು. ಮನೆಯಲ್ಲಿ ಯಾವುದಕ್ಕೂಕೊರತೆಯಿಲ್ಲ.ಕೊರತೆ ಇಲ್ಲದಿರುವುದೇಕೆಲವರಿಗೆ ಸಮಸ್ಯೆಯಾಗುತ್ತದೇನೋ. ಒಂದು ಚಿಕ್ಕಕೊರತೆ ಜೀವನಕ್ಕೆ ಹರಿವು ನೀಡುತ್ತದೆ. ಅಸಲಿಗೆ ಅವಳು ಹಣಕ್ಕಾಗಿ ಕೆಲಸಕ್ಕೆ ಹೋಗಬೇಕಾಗಿರಲಿಲ್ಲ. ಅವಳು ಕೇಳಿದೆಲ್ಲಾ ಕ್ಷಣಾರ್ಧದಲ್ಲಿ ಸಿಗುತ್ತಿತ್ತು. ಒಂದು ಜೊತೆ ಬಟ್ಟೆಕೇಳಿದರೆ ಎರಡು ಜೊತೆ ಕೊಡಿಸುತ್ತಿದ್ದರು. ರಾತ್ರಿ ಐಸ್‌ಕ್ರೀಮ್‌ ತಿನ್ನಬೇಕೆನಿಸಿದರೆ, ಎಲ್ಲರೂ ಖುಷಿಯಾಗಿ ಹೊರಡುತ್ತಿದ್ದರು. ಅವಳು ಹಣಕ್ಕಾಗಿ ಅಲ್ಲ, ಆತ್ಮ ತೃಪ್ತಿಗೆಕೆಲಸ ಮಾಡುತ್ತಿದ್ದಳು ಕೆಲವು ತಿಂಗಳಿನಿಂದ, ಅವಳ ಒಪ್ಪಿಗೆ ಪಡೆದೇ ಮನೆಯಲ್ಲಿ ಮದುವೆಗಾಗಿ ಹುಡುಗನನ್ನು ಹುಡುಕುತ್ತಿದ್ದಾರೆ. ಮನೋದೈಹಿಕ ಬೇನೆಗೆಕಾರಣ ಹಠಮಾರಿ ಸ್ವಭಾವವೂಕಾರಣವಾಗುತ್ತದೆ. ಆದರೆ ಪ್ರೀತಿಯಲ್ಲಿ ಛಲವಿತ್ತು. ಹಠವಿರಲಿಲ್ಲ. ಎಷ್ಟು ಒಳ್ಳೆಯ ಹುಡುಗಿ ಈ ರೀತಿ ನರಳುತ್ತಿದ್ದಾಳಲ್ಲ ಎಂದು ಎಲ್ಲರಿಗೂ ಬೇಜಾರಾಗಿತ್ತು. ಆಪ್ತ ಸಮಾಲೋಚನೆಯ ಸಂದರ್ಭದಲ್ಲಿ,ಕಡೆಗೂ ಪ್ರೀತಿಯ ಹೊಟ್ಟೆನೋವಿಗೆ ಕಾರಣವೇನೆಂದು ಗೊತ್ತಾಯಿತು.

ಫೆಬ್ರವರಿಯಲ್ಲಿ ಪ್ರೀತಿಯ ತಾಯಿ ತೀರಿಕೊಂಡಿದ್ದರು. ಆ ನಂತರದಲ್ಲಿ ಪ್ರೀತಿಯ ತಂದೆ ಮಗಳನ್ನು ಬಹಳ ಹಚ್ಚಿಕೊಂಡಿದ್ದರು. ಒಂದುಕ್ಷಣವೂ ಬಿಟ್ಟಿರಲಾರರು. ಮಗಳು ಅಂದರೆ ಪ್ರಾಣಕ್ಕೂ ಮಿಗಿಲು. ಅವಳ ಪ್ರತಿ ಸಾಧನೆಯಲ್ಲಿ ಅವರ ಪ್ರೇರಣೆ ಇತ್ತು. ಮಗಳಿಗೆ ವರನನ್ನು ಹುಡುಕವ ಪ್ರಯತ್ನದಲ್ಲಿದ್ದರೂ, ಮಗಳ ಅಗಲಿಕೆ ಅವರಿಗೆ ತಾಯಿಯ ಸಾವಿನಷ್ಟೇ ನೋವು ಕೊಡುತ್ತಿತ್ತು. ಪ್ರೀತಿಗೆ ಮದುವೆಯಾಗಲು ಇಷ್ಟ. ಆದರೆ, ತಾನು ಬೇರೊಂದು ಮನೆಗೆ ಹೋದರೆ, ಅದರಿಂದ ತಂದೆ ನೋವು ಅನುಭವಿಸುತ್ತಾರೆ ಎಂಬ ಸಂಗತಿಯೇ ಅವಳ ಮನಸ್ಸನ್ನು ಕೊರೆಯತೊಡಗಿತು.

ಈ ಸಂದರ್ಭದಲ್ಲಿಯೇ, ಅವಳ ಬಾಲ್ಯ ಸ್ನೇಹಿತೆತೋರಿಸಿದ ಒಂದು ಹುಡುಗನ ಬಗ್ಗೆ ಒಳ್ಳೆಯ  ಅಭಿಪ್ರಾಯವಿದ್ದರೂ ಅಪ್ಪನ ಬಳಿ ಪ್ರಸ್ತಾಪ ಮಾಡಲು ಭಯವಾಗಿ ಅರೋಗ್ಯ ಹದಗೆಟ್ಟಿತ್ತು. ತಂದೆಯನ್ನುಕರೆದು ಮಾತನಾಡಿದೆ. ಅವರ ಪ್ರೀತಿ ಮಗಳಿಗೆ ಮುಳುವಾಗಿರುವುದು ಅವರಿಗೆ ಅರ್ಥವಾಯಿತು. ಮಗಳನ್ನು ಬಹಳ ಹಚ್ಚಿಕೊಳ್ಳಬೇಡಿ ಎಂದು ಹೆಂಡತಿಯೂ ಹೇಳಿದ್ದಳು. ಆಗ ನಾನು ನಿರ್ಲಕ್ಷ ಮಾಡಿದ್ದೆ. ನೀವು ಹೇಳಿದ ಮೇಲೆ ಮನಸ್ಸಿಗೆ ನಾಟಿತು ಮೇಡಂ ಎಂದರು.  ಮದುವೆಯ ನಂತರ ಮಗಳು- ಅಳಿಯನ ಮನೆಗೆ ಹೋಗುವುದಾಗಿ ತಿಳಿಸಿದರು. ಈಗ, ಅಪ್ಪಾ, ಐ ಲವ್‌ ಯು ಪಾ ಎನ್ನುವ ಸರದಿ ಪ್ರೀತಿಯದ್ದು. ­

 

-ಡಾ. ಶುಭಾ ಮಧುಸೂದನ್‌ ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.