ಬಡವರ ಫ್ರಿಡ್ಜ್ ಬೇಕೇನು?
Team Udayavani, Mar 20, 2019, 12:30 AM IST
ಗಂಡನ ದುಡಿಮೆಯಿಂದ ಸಂಸಾರ ನಡೆಯುವುದು ಕಷ್ಟ ಅನ್ನಿಸಿದಾಗ, ಮಡಕೆ ವ್ಯಾಪಾರಕ್ಕೆ ಮುಂದಾದರು ಲಕ್ಷ್ಮಮ್ಮ. ಆ ವ್ಯಾಪಾರವೇ ಈಗ ಇಡೀ ಕುಟುಂಬಕ್ಕೆ ಅನ್ನದ ದಾರಿ ತೋರಿಸಿದೆ…
ಆಧುನಿಕ ಹೆಣ್ಣು ವಿದ್ಯಾವಂತಳು. ವ್ಯವಹಾರ ಚಾತುರ್ಯ ಉಳ್ಳವಳು. ವ್ಯಾಪಾರ, ಉದ್ಯಮ ಕ್ಷೇತ್ರಗಳಲ್ಲಿ ಆಕೆಯ ಹೆಜ್ಜೆಗುರುತುಗಳು ಶ್ಲಾಘನೀಯ. ಸ್ವಾರಸ್ಯವೆಂದರೆ, ಓದು- ಬರಹವಿಲ್ಲದ, ಬಡ ಕುಟುಂಬದಿಂದ ಬಂದ ಕೆಲವು ಮಹಿಳೆಯರು ಕೂಡಾ, ವ್ಯಾಪಾರದಲ್ಲಿ ಹಿಂದೆ ಬಿದ್ದಿಲ್ಲ. ಬದುಕಿನಲ್ಲಿ ಎದುರಾದ ಅನಿವಾರ್ಯಗಳೇ ಅವರಲ್ಲಿ ಛಲ ಹುಟ್ಟಿಸಿ, ಸ್ವಾವಲಂಬಿ ಬದುಕಿಗೆ ದಾರಿ ಕಂಡುಕೊಳ್ಳುವಂತೆ ಮಾಡಿದೆ.
ಈಕೆಯ ಹೆಸರು ಲಕ್ಷ್ಮಮ್ಮ. ನಾಲ್ಕು ಜನರಿರುವ ಬಡ ಕುಟುಂಬ ಆಕೆಯದ್ದು. ಗಂಡನಿಗೆ ನಿಶ್ಚಿತ ಆದಾಯವಿಲ್ಲ. ಗಂಡನ ಆದಾಯದಿಂದ ಕುಟುಂಬ ನಿರ್ವಹಣೆ ಅಸಾಧ್ಯ ಎಂದಾದಾಗ, ಲಕ್ಷ್ಮಮ್ಮನ ಕೈ ಹಿಡಿದಿದ್ದು ಮಡಕೆ ವ್ಯಾಪಾರ. ಅದಕ್ಕೆ ಗಂಡ-ಮಕ್ಕಳೂ ನೆರವಾಗುತ್ತಿದ್ದಾರೆ.
ವಿಜಯಪುರದ ದರ್ಬಾರ ಹೈಸ್ಕೂಲ್ ರಸ್ತೆ ಪಕ್ಕದ ಜಾಗ ಲಕ್ಷ್ಮಮ್ಮನ ಅಂಗಡಿ ಇರುವ ಸ್ಥಳ. ಸಾಲ ಮಾಡಿ, ಆ ಹಣದಿಂದ ಮಡಕೆ ಖರೀದಿಸಿ ತಂದು, ಬಿರುಬಿಸಿಲಿನಲ್ಲೇ ವ್ಯಾಪಾರ ನಡೆಸುತ್ತಾರೆ. ಮಡಕೆಯ ಗಾತ್ರದ ಮೇಲೆ ದರ ನಿಗದಿಯಾಗುತ್ತದೆ. ಅಂದರೆ ಸಣ್ಣ ಮಡಕೆಗೆ 100- 150 ರೂ., ದೊಡ್ಡ ಮಡಕೆಗಳಿಗೆ 400- 500 ರೂಪಾಯಿ. ಬೇಸಿಗೆಯ ದಿನಗಳಲ್ಲಿ ಮಡಕೆಯ ವ್ಯಾಪಾರ ಜೋರಾಗಿರುತ್ತದೆ. ಉಳಿದ ದಿನಗಳಲ್ಲಿ ಸಾಧಾರಣ ವ್ಯಾಪಾರ ನಡೆಯುತ್ತದೆ. ಮಳೆಗಾಲದಲ್ಲಿ ಕುಂಡಾಳಿ (ಹೂವಿನ ಕುಂಡ)ಗಳನ್ನು ಮಾರುತ್ತಾರೆ. “ಬೇಸಿಗೆಯಲ್ಲಿ ಒಂದು ದಿನಕ್ಕೆ 1000-1500 ರೂ.ವರೆಗೂ ಗಳಿಸಬಹುದು. ಆದರೆ, ಕೆಲವು ದಿನ ಖಾಲಿ ಕೈಯಲ್ಲಿ ಮರಳಿದ್ದೂ ಇದೆ’ ಅನ್ನುತ್ತಾರೆ ಲಕ್ಷ್ಮಮ್ಮ.
ಬಡ್ಡಿ, ಬಾಡಿಗೆ ಖರ್ಚು
ಈ ವ್ಯಾಪಾರದಿಂದ ಬಂದ ಹಣದಿಂದ ಸಾಲ- ಬಡ್ಡಿ ಮರುಪಾವತಿ ಮಾಡಿ, ಉಳಿದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ಮನೆಯೂ ಇಲ್ಲದ ಕಾರಣ, ಮನೆಯ ಬಾಡಿಗೆಯ ಖರ್ಚೂ ಇವರಿಗಿದೆ. ಇದ್ದುದರಲ್ಲಿಯೇ ಸಂತೋಷದಿಂದ ಜೀವನ ನಡೆಸಬೇಕು ಎಂಬುದು ಲಕ್ಷ್ಮಮ್ಮನ ಮಾತು.
ಮಡಕೆ, ಕುಂಡಾಳಿ ವ್ಯಾಪಾರವೇ ನಮ್ಮ ಕುಲ ಕಸುಬು. ನಮ್ಮ ಮನೆಯವರು ಬೇರೆ ಕೆಲಸಕ್ಕೆ ಹೋಗುವುದಿಲ್ಲ. ಬಡತನದಿಂದ ಸಂಸಾರ ನಡೆಸುವುದೇ ಕಷ್ಟವಾದಾಗ ನಾನೇ ವ್ಯಾಪಾರಕ್ಕೆ ಇಳಿದೆ. ಅದರಿಂದ ಬಂದ ಹಣದಿಂದ ಮನೆ ಬಾಡಿಗೆ ಮತ್ತು ಇತರೆ ಖರ್ಚನ್ನು ನಿಭಾಯಿಸುತ್ತೇನೆ. ಮಗಳು ಪಿಯುಸಿ ಓದುತ್ತಿದ್ದಾಳೆ. ಅವಳ ಓದಿನ ಖರ್ಚು ಕೂಡ ಇದರಲ್ಲೇ ಕಳೆಯುತ್ತದೆ.
ಲಕ್ಷ್ಮಮ್ಮ ನಾಗಪ್ಪ
ಸಂಗೀತಾ ಗ. ಗೊಂಧಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು