ಡ್ರೆಸ್ಸಲ್ಲಿ ಗುಣ ಕಾಣೋಲ್ಲ!


Team Udayavani, Dec 20, 2017, 3:40 PM IST

20-26.jpg

ಒಂದು ಹೆಣ್ಣನ್ನು ನಾವೇಕೆ ಅವಳ ಉಡುಗೆ ನೋಡಿ ಚಿತ್ರಿಸುತ್ತೇವೆ? ಸೀರೆ ಉಟ್ಟ ಸಿಂಗಾರಿ ಸಂಭಾವಿತಳು, ಜೀನ್ಸ್‌ ಹಾಕಿದವಳು ಜಗಳಗಂಟಿ ಅಂತ ನಾವೇಕೆ ಭಾವಿಸಬೇಕು? 

ಅವತ್ತು ಪದವಿಯ ಮೊದಲ ದಿನ. ಎಲ್ಲೆಲ್ಲೂ ಹೊಸ ಮುಖಗಳೇ. ಎಲ್ಲರೂ ತಮ್ಮಷ್ಟಕ್ಕೆ ಕ್ಲಾಸ್‌ ಒಳಗೆ ಬಂದು, ಅವರಿಗಿಷ್ಟ ಬಂದಲ್ಲಿ ಕುಳಿತರು. ಅಷ್ಟರಲ್ಲೇ ಒಬ್ಬಳು ಮಾಡರ್ನ್ ಊರ್ವಶಿಯ ಆಗಮನ. ನಮ್ಮ ಶಿಕ್ಷಕರಿಂದ ಹಿಡಿದು, ಜೊಲ್ಲು ಪಾರ್ಟಿ ಅನಂತನವರೆಗೆ ಎಲ್ಲರೂ ಕಣ್ಣು ಮಿಟುಕಿಸದೇ ಬಾಯಿ ಬಿಟ್ಟುಕೊಂಡು ಅವಳನ್ನು ನೋಡುತ್ತಿದ್ದರು. ಕಾರಣ ಅವಳು ಹಾಕಿದ್ದ ಡ್ರೆಸ್‌. ಸಿನಿಮಾ ಶೂಟಿಂಗ್‌ಗೆ ಬಂದವಳಂತೆ ಕಾಣಿಸುತ್ತಿದ್ದಳು ಆಕೆ.

ನಾವ್ಯಾರೂ ಅವತ್ತು ಅವಳೊಂದಿಗೆ ಒಂದೇ ಒಂದೂ ಮಾತಾಡಲಿಲ್ಲ. ನಮ್ಮೆಲ್ಲರ ಬಾಯಿಗೆ ಅವಳೇ ಬ್ರೇಕಿಂಗ್‌ ನ್ಯೂಸ್‌. ಆಕೆಯ ಬಗ್ಗೆ ಇಲ್ಲಸಲ್ಲದ್ದನ್ನು ಮಾತಾಡಿಕೊಂಡೆವು. ಭಾರೀ ಶ್ರೀಮಂತಳಿರಬೇಕು, ಊರಿಗೆಲ್ಲ ಸಾಕಾಗುವಷ್ಟು ಸೊಕ್ಕು ಅವಳ ಹತ್ರನೇ ಇದೆ, ಎಷ್ಟು ಹುಡುಗರಿಗೆ ಕೈ ಕೊಟ್ಟಿದ್ದಾಳ್ಳೋ? ಒಂಚೂರೂ ಡ್ರೆಸ್‌ ಸೆನ್ಸ್‌ ಇಲ್ಲ, ಹುಡುಗಿಯರ ಮರ್ಯಾದೆ ತೆಗೆಯಲು ಇವಳೊಬ್ಬಳು ಸಾಕು, ಮೇಕಪ್‌ ಮೇಲಿನ ಇಂಟ್ರೆಸ್ಟ್‌ ಅನ್ನು ಓದಿನಲ್ಲಿ ತೋರಿಸಿದ್ರೆ ಯುನಿವರ್ಸಿಟಿಗೆ ರ್‍ಯಾಂಕ್‌ ಬರುತ್ತಾಳ್ಳೋ ಏನೋ… ಹೀಗೆ ತಲೆಗೊಂದು ಮಾತಾಡಿಕೊಂಡೆವು. 

ನಾವೆಷ್ಟೇ ಚುಚ್ಚಿ ಮಾತಾಡಿದರೂ ಅವಳ ಡ್ರೆಸ್‌ ಮೊದಲಿನಂತೆಯೇ ಇತ್ತು. ಅವಳೆಂದೂ ಗೌರಮ್ಮ ಆಗಲೇ ಇಲ್ಲ. ನೀವು ನಂಬಿರೋ ಇಲ್ವೋ? ಅವತ್ತು ನಾನೇ ಶಾಪ ಹಾಕಿದ್ದ ಮಾಡರ್ನ್ ಊರ್ವಶಿ, ಇಂದು ನನ್ನ ಬೆಸ್ಟ್‌ಫ್ರೆಂಡ್‌. ಅವತ್ತು ನಾನು ಅದೆಷ್ಟು ಅವಿವೇಕಿ ತರ ಮಾತಾಡಿದೆ? ಅವಳ ಹಾಕಿರುವ ಡ್ರೆಸ್‌ನಿಂದ ಅವಳ ವ್ಯಕ್ತಿತ್ವ ಅಳೆದು ತೂಗಿಬಿಟ್ಟಿದ್ದೆ. ವಾಸ್ತವದಲ್ಲಿ ಅವಳು ನಮ್ಮಂತೆಯೇ ಮಧ್ಯಮ ವರ್ಗದ ಹುಡುಗಿ. ಹಿಡಿಯಷ್ಟೂ ಸೊಕ್ಕಿಲ್ಲ ಅವಳಲ್ಲಿ. ಮಗುವಿನಂಥ ಮುಗ್ಧತೆ. ಹುಡುಗರನ್ನು ಕಂಡರೆ ಮಾರುದೂರ ಸರಿಯುತ್ತಾಳೆ. ಇಂಥ ಪಾಪದ ಹುಡುಗಿಯನ್ನು ಅದೆಷ್ಟು ನಿಂದಿಸಿದ್ದೆ ನಾನು. ನನಗೆ ನಾನೇ ಛಿಮಾರಿ ಹಾಕಿಕೊಳ್ಳಬೇಕೆಂದೆನಿಸಿತ್ತು.

ಡ್ರೆಸ್‌, ಮೇಕಪ್‌ ಅವರವರ ಅಭಿರುಚಿ, ಆಸೆ, ಧರ್ಮ, ಸಂಪ್ರದಾಯ, ಸಂಸ್ಕಾರಕ್ಕೆ ಬಿಟ್ಟ ವಿಚಾರ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆದರೂ, ಒಂದು ಹೆಣ್ಣನ್ನು ನಾವೇಕೆ ಅವಳ ಉಡುಗೆ ನೋಡಿ ಚಿತ್ರಿಸುತ್ತೇವೆ? ಸೀರೆ ಉಟ್ಟ ಸಿಂಗಾರಿ ಸಂಭಾವಿತಳು, ಜೀನ್ಸ್‌ ಹಾಕಿದವಳು ಜಗಳಗಂಟಿ ಅಂತ ನಾವೇಕೆ ಭಾವಿಸಬೇಕು? ಸೀರೆ, ಜೀನ್ಸ್‌ ಎರಡರಲ್ಲೂ ಮುಖವಾಡ ಇರಬಹುದು. ಎದುರು ಕಾಣುವುದೆಲ್ಲವೂ ಸತ್ಯವಲ್ಲ ತಾನೇ?

ಮೊದಲು ನಾವು ಬದಲಾಗಬೇಕು. ನಮ್ಮ ದೃಷ್ಟಿಕೋನ ಬದಲಾಗಬೇಕು. ಹಿರಿಯರು ಮುಖ ನೋಡಿ ಮಣೆ ಹಾಕು ಎಂದಿದ್ದಾರೆ. ದಿರಿಸು ನೋಡಿ ವ್ಯಕ್ತಿತ್ವವನ್ನು ಅಳೆಯಿರಿ ಎಂದಲ್ಲ. ಹೆಣ್ಣಿಗೂ ಸ್ವಾತಂತ್ರ್ಯವಿದೆ. ಅವಳಿಗೆ ಇಷ್ಟಬಂದಂತೆ ಬದುಕುವ ಹಕ್ಕು ಅವಳಿಗಿದೆ. ಅವಳು ತನ್ನ ಹಿಡಿತದಲ್ಲಿ ತಾನಿದ್ದರೆ ಎಂಥ ಮೇಕಪ್‌ ಮೆತ್ತಿಕೊಂಡರೂ, ಮಿನಿ ಸ್ಕರ್ಟ್‌ ಹಾಕಿ ಊರೆಲ್ಲ ತಿರುಗಿದರೂ, ಎಡವಿ ಬೀಳುವುದಿಲ್ಲ.

ಹೆತ್ತವರು ಹೆಣ್ಣಿಗೆ ಬಾಲ್ಯದಲ್ಲಿಯೇ ಆಂತರಿಕ ಸೌಂದರ್ಯದ ಸಂಸ್ಕಾರವನ್ನು ನೀಡಿರುತ್ತಾರೆ. ಸಂಸ್ಕಾರಸ್ಥ ಹೆಣ್ಣು ಮಗಳು ಅದೆಂಥದ್ದೇ ಉಡುಗೆ ತೊಟ್ಟರೂ ಅವಳ ಹಿಡಿತದಲ್ಲಿ ಅವಳಿರುತ್ತಾಳೆ. ಉಡುಗೆ ಸಾಂಪ್ರದಾಯಕವಾದರೂ ಸರಿ, ಆಧುನಿಕವಾದರೂ ಸರಿ. ನೋಡುಗರ ದೃಷ್ಟಿ ಸರಿಯಿದ್ದರೆ ಒಳ್ಳೆಯದು.

ಕಾವ್ಯಾ ಭಟ್ಟ ಜಕ್ಕೊಳ್ಳಿ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.