ಆಫೀಸು ಮಕ್ಕಳು ಆರೋಗ್ಯ


Team Udayavani, Mar 11, 2020, 5:30 AM IST

Ofiice-Makkalu

ವೃತ್ತಿ ಹಾಗೂ ವೈಯಕ್ತಿಕ ಜೀವನದ ಸಮತೋಲನ ಕಾಪಾಡಿಕೊಳ್ಳುವುದು ಹೆಣ್ಮಕ್ಕಳ ಪಾಲಿಗೆ ಬಹಳ ಮುಖ್ಯ. ಸಂಸಾರದ ಜವಾಬ್ದಾರಿಯ ಜೊತೆಗೆ ಅವಳು ನಿರ್ವಹಿಸುತ್ತಿರುವ ಉನ್ನತ ಹುದ್ದೆಯನ್ನು ಸಂಭಾಳಿಸಲು ಕೆಲವೊಮ್ಮೆ ಆಕೆಗೆ ಕಷ್ಟವಾಗಬಹುದು. ಇಂಥ ಸಮಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಬಹಳ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳುವುದು ಜಾಣತನ.

ಮನೆಯ ಇತರ ಕೆಲಸಗಳಿಗಿಂತ ಮಕ್ಕಳ ಆರೋಗ್ಯದ ವಿಚಾರದಲ್ಲಿ ತಾಯಂದಿರಿಗೆ ಬಹಳ ಚಿಂತೆಯಾಗುತ್ತದೆ. ಉದ್ಯೋಗಸ್ಥ ಅಮ್ಮಂದಿರು, ಮಕ್ಕಳನ್ನು ಶಾಲೆಗೆ ಕಳುಹಿಸಿ ನಂತರ ಆಫೀಸಿಗೆ ಹೋಗಿರುತ್ತಾರೆ. ಆದರೆ, “ನಿಮ್ಮ ಮಗುವಿಗೆ ಹುಷಾರಿಲ್ಲ. ಮನೆಗೆ ಕರೆದುಕೊಂಡು ಹೋಗಿ’ ಅಂತ ಶಾಲೆಯಿಂದ ಕರೆ ಬರುತ್ತದೆ. ಆಗ ಕೆಲಸ ನಿಲ್ಲಿಸಿ ಶಾಲೆಗೆ ಓಡಬೇಕು. ಇನ್ನೂ ಕೆಲವೊಮ್ಮೆ, ಮಕ್ಕಳಿಗೆ ಮಧ್ಯರಾತ್ರಿಯಲ್ಲಿ ಆರೋಗ್ಯ ಸಮಸ್ಯೆ ಕಾಡಿದಾಗ, ನಿದ್ದೆಯೂ ಇಲ್ಲದೆ, ಮರುದಿನ ಆಫೀಸ್‌ಗೆ ರಜೆ ಹಾಕಿ ಮಕ್ಕಳನ್ನು ನೋಡಿಕೊಳ್ಳಬೇಕಾಗುತ್ತದೆ.

“ವರ್ಕಿಂಗ್‌ ಮದರ್’ ಇಂಥ ಎಷ್ಟೋ ಸನ್ನಿವೇಶಗಳನ್ನು ಎದುರಿಸಿರುತ್ತಾರೆ. ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೆಂದು, ಎಲ್ಲಾ ಸಮಯದಲ್ಲೂ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಏನು ಮಾಡಲೂ ತಿಳಿಯದೆ ಕೈಚೆಲ್ಲಿ ಕುಳಿತುಕೊಳ್ಳುವ ಸನ್ನಿವೇಶ ಎದುರಾಗಬಹುದು. ಅಂಥ ಸಮಯದಲ್ಲಿ ಧೃತಿಗೆಡದೆ ಶಾಂತಚಿತ್ತರಾಗಿ ಯೋಚಿಸಿದಾಗ ಕೆಲವು ಪರಿಹಾರಗಳು ಕಾಣಿಸುತ್ತದೆ.

-ಕೆಲಸದ ಸಮಯದಲ್ಲಿ ಮಕ್ಕಳ ಆರೋಗ್ಯದ ವಿಚಾರ ಬಂದಾಗ ಯಾವುದು ತುಂಬಾ ಮುಖ್ಯ, ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ನಿಮಗೆ ನೀವೇ ಪ್ರಶ್ನಿಸಿಕೊಳ್ಳಿ. ನಿಮ್ಮ ಮೊದಲ ಆದ್ಯತೆ ನಿಮ್ಮ ಮಕ್ಕಳೇ ಆಗಿರುತ್ತಾರೆ. ಹಾಗಿದ್ದಲ್ಲಿ, ಆರೋಗ್ಯದ ಸಮಸ್ಯೆಯಿಂದ ಅವರು ಹಿಂಸೆ ಪಡದಂತೆ ಎಚ್ಚರ ವಹಿಸಿ. ಎಲ್ಲ ಔಷದಕ್ಕಿಂತ ಹೆಚ್ಚಿನ ಶಕ್ತಿ ಇರುವುದು ತಾಯಿಯ ಆರೈಕೆಯಲ್ಲಿ. ಅಗತ್ಯವಿದ್ದಲ್ಲಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ. ಏನನ್ನು ತಿನ್ನಲು ಬಯಸುತ್ತಾರೆ ಅಷ್ಟನ್ನು ಮಾತ್ರ ತಿನ್ನಿಸಿ. ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳುವ ತನಕ ಅರಾಮಾಗಿ ನಿಮ್ಮೊಂದಿಗೆ ಕಾಲ ಕಳೆಯಲು ಸಹಕರಿಸಿ.

-ಮಕ್ಕಳ ದೇಹಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ ಎಂದಾಗ ನಿಮ್ಮ ಕೆಲಸದ ಒತ್ತಡದ ಬಗ್ಗೆ ಅವರಿಗೆ ಅರ್ಥವಾಗುವಷ್ಟು ತಿಳಿಸಿ ಹೇಳಿ. ನಂತರ ನಿಮ್ಮ ಕೆಲಸ ಮಾಡಿಕೊಳ್ಳುತ್ತಲೇ ಅವರೊಂದಿಗೆ ಕಾಲ ಕಳೆಯಿರಿ.

-ಇಂಥ ಸಮಯದಲ್ಲಿ ತಾಯಂದಿರು ಒತ್ತಡಕ್ಕೆ ಒಳಗಾಗದಂತೆ ಜಾಗರೂಕರಾಗಿರಬೇಕು. ಆಫೀಸ್‌ಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಹಾಗೂ ಅಲ್ಲಿ ನಿಮ್ಮ ಅವಶ್ಯಕತೆ ತೀರಾ ಇದ್ದಲ್ಲಿ ನಿಮ್ಮ ಬಾಸ್‌ಗೆ ಇ-ಮೇಲ್‌ ಮೂಲಕ ಗೈರನ್ನು ಸಂಕ್ಷಿಪ್ತವಾಗಿ ವಿವರಿಸಿ. ಎರಡು ದೋಣಿಯಲ್ಲಿ ಕಾಲಿಟ್ಟ ಮೇಲೆ ಬ್ಯಾಲೆನ್ಸ್‌ ಮಾಡುವುದನ್ನು ಕಲಿಯಲೇಬೇಕು. ಹಾಗಾಗಿ, ಸಂಸಾರ, ಉದ್ಯೋಗ ಎರಡಕ್ಕೂ ನ್ಯಾಯ ಒದಗಿಸಿ.

-ಯಾವುದಾದರೂ ತುಂಬಾ ಮುಖ್ಯವಾದ ಮೀಟಿಂಗ್‌ ಅಥವಾ ಪ್ರಾಜೆಕ್ಟ್ ಡಿಸ್‌ಕಷನ್‌ ಇದ್ದಲ್ಲಿ ಆಫೀಸ್‌ ಸಮಯ ಆರಂಭವಾಗುವ ಮುಂಚಿತವಾಗಿಯೇ ನಿಮ್ಮ ಸೀನಿಯರ್‌ಗೆ ಫೋನ್‌ ಮಾಡಿ, ವಿಷಯದ ಅನಿವಾರ್ಯವನ್ನು ತಿಳಿಸಿ. ನೀವಿಲ್ಲದೆ ಮೀಟಿಂಗ್‌ ನಡೆಸಲು ಸಾಧ್ಯವೇ ಇಲ್ಲ ಎಂದಾದಲ್ಲಿ ಅದನ್ನು ಮುಂದೂಡಲು ಸಾಧ್ಯವೇ ಎಂದು ಕೇಳಿ, ಅದೂ ಆಗದಿದ್ದಲ್ಲಿ ಕಾನ್‌ಫ‌ರೆನ್ಸ್‌ ಕಾಲ್‌ ಅಥವಾ ವೀಡಿಯೊ ಕಾಲ್‌ ಮೂಲಕ ನಿಮ್ಮ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಳ್ಳಿ.

ಭಾರ್ಗವಿ.ಕೆ.ಆರ್‌ ಕಾಣಿಚ್ಚಾರ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.