ಅವಳು, ಇ-ಟೀಚರ್‌ ಆಗಿಯೂ ಗೆದ್ದಳು!


Team Udayavani, Feb 10, 2021, 6:57 PM IST

ಅವಳು, ಇ-ಟೀಚರ್‌ ಆಗಿಯೂ ಗೆದ್ದಳು!

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬುದು ನಮಗೆ ತಿಳಿದಿರುವ ನುಡಿ. ಈ ಶೈಕ್ಷಣಿಕ ವರ್ಷಕ್ಕೆ ಸರಿಹೊಂದುವ ನುಡಿ ಎಂದರೆ: ಮನೆಯೇ ದಿನದ ಪಾಠಶಾಲೆ, ಆನ್‌ಲೈನ್‌ ಶಿಕ್ಷಕಿಯೇ ಇ- ಗುರು. ಕೋವಿಡ್ ಕಾಟದ ಕಾಲದಲ್ಲೂ ಕಲಿಕೆ-ಕಲಿಸುವಿಕೆ ನಡೆದೇಹೋಯಿತು. ಈ ಕಲಿಸುವಿಕೆಯ ಜವಾಬ್ದಾರಿ ಹೊತ್ತವರು, ಲೆಕ್ಕಕ್ಕೆ ಸಿಗದ ಅದೆಷ್ಟೋ ಶಿಕ್ಷಕರು. ಹೀಗೆ ಆನ್‌ಲೈನ್‌ ತರಗತಿಯಲ್ಲಿ ಪಾಠ ಹೇಳಿದವರಲ್ಲಿ ಮಹಿಳೆಯರ ಸಂಖ್ಯೆಯೇ ದೊಡ್ಡದಿತ್ತು.

ಮನೆಯಲ್ಲಿನ ಕೆಲಸ ಕಾರ್ಯಗಳ ನಡುವೆ, ನಿರ್ದಿಷ್ಟ ಸಮಯಕ್ಕೆ, ನಿರ್ದಿಷ್ಟ ತರಗತಿಯವರಿಗೆ ಪಾಠ ಹೇಳಿಕೊಡುವುದು ಸುಲಭದ ಮಾತಲ್ಲ. ಇಷ್ಟು ದಿನ ಶಾಲೆ- ಕಾಲೇಜುಗಳಲ್ಲಿ ಕಪ್ಪು ಹಲಗೆಯ ಮುಂದೆ ನಿಂತು ಪಾಠ ಹೇಳುತ್ತಿದ್ದವರು, ಬದಲಾದ ಪರಿಸ್ಥಿತಿಯಲ್ಲಿ ಕಂಪ್ಯೂಟರ್‌, ಲ್ಯಾಪ್‌ ಟಾಪ್‌ ಮುಂದೆ ಕುಳಿತು ಪಾಠ ಹೇಳಿಕೊಟ್ಟು, ನಮ್ಮಿಂದ ಇದೂ ಸಾಧ್ಯ ಎಂದು ತೋರಿಸಿದ್ದಾರೆ. ಎಷ್ಟೋ ಶಿಕ್ಷಕರಿಗೆ ಕಂಪ್ಯೂಟರ್‌ ಬಳಸುವುದರಲ್ಲಿ ಪರಿಣಿತಿ ಇರಲಿಲ್ಲ. ಅಂಥವರೂ ಸಹ ಕಲಿತು, ಬಳಸಿದ್ದಾರೆ.

ಇದರ ಜೊತೆ ಇಂಟರ್ನೆಟ್‌ ಅಡೆ ತಡೆ, ಹೊಸ ಸಾಫ್ಟ್ ವೇರ್‌ಗಳ ಬಳಕೆ, ವಿದ್ಯುತ್‌ ವ್ಯತ್ಯಯದಂತಹ ಸಮಸ್ಯೆಗಳ ಮಧ್ಯೆಯೂ ಕೆಲಸ ನಿರ್ವಹಿಸಿದ್ದಾರೆ. ಶಾಲೆ- ಕಾಲೇಜುಗಳಲ್ಲಿ ಮುಖಾಮುಖೀ ಪಾಠ ಹೇಳಿಕೊಡುವುದೇ ಕೆಲವೊಮ್ಮೆ ಕಷ್ಟ. ಅಂತಹುದರಲ್ಲಿ ಕ್ಯಾಮರಾ ಕಣ್ಣಿನ ಮೂಲಕ ಪಾಠ ಹೇಳಿ, ಪ್ರಶ್ನೆಗಳನ್ನು ಕೇಳಿ, ಹೋಂ ವರ್ಕ್‌ ಕೊಟ್ಟು, ನಂತರ ಮಕ್ಕಳು ಅಪ್ಲೋಡ್‌ ಮಾಡಿರುವ ಹೋಂ ವರ್ಕ್‌ ಅನ್ನು ಒಂದೊಂದಾಗಿ ಡೌನ್ಲೌಡ್‌ ಮಾಡಿ, ಸರಿಯಿದೆಯೇ ಎಂದು ನೋಡಿ, ತಪ್ಪಿದ್ದರೆ ಅದನ್ನು ಸರಿಮಾಡಲು ಹೇಳುವುದು… ಅಬ್ಟಾ! ಇಷ್ಟೆಲ್ಲಾ ಕೆಲಸ. ಪಾಠಕ್ಕೆ ಸಂಬಂಧಿಸಿದ ಆಫ್‌ಲೈನ್‌ ವಿಡಿಯೋಗಳನ್ನು ಮಾಡುವಾಗ ಶಿಕ್ಷಕರು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಹೊರಗಿನ ಶಬ್ಧ ಆದಷ್ಟೂ ಕೇಳದಂತೆ ನೋಡಿಕೊಳ್ಳಬೇಕು. ಕುಕ್ಕರ್‌ ಶಬ್ಧ ಇರಬಹುದು, ರಸ್ತೆಯಲ್ಲಿ ವಾಹನಗಳ ಸದ್ದು, ತರಕಾರಿ ವ್ಯಾಪಾರಿಗರ ಕೂಗು… ಹೀಗೆ ಇನ್ನು ಹಲವು. ಎಷ್ಟೋ ಬಾರಿ ಸರಿಯಾಗಿ ಬರುವವರೆಗೂ ಮಾಡಬೇಕಾಗುತ್ತದೆ. ಇದರ ಮಧ್ಯೆ ಆ ಶಿಕ್ಷಕಿಯು ಮನೆಯಲ್ಲಿರುವ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ಗಮನ

ಕೊಡಬೇಕಿತ್ತು… ಮಕ್ಕಳಂತೂ ಪಾಠ ನಡೆಯುವಾಗ ಮ್ಯಾಮ್‌ ಕೇಳಿಸ್ತಿಲ್ಲ, ಮ್ಯಾಮ್‌ ಕಾಣಿಸ್ತಿಲ್ಲ ಅನ್ನುತ್ತಿದ್ದರು. ಅದಕ್ಕೆ ಸಮಾಧಾನದಿಂದಲೇ ಉತ್ತರಿಸುತ್ತ, ಪಾಠಕ್ಕೆ ಪೂರಕವಾದ ವಸ್ತುಗಳನ್ನು ಮನೆಯಲ್ಲಿಯೇ ಸ್ವತಃ ಮಾಡಿ ತೋರಿಸಿ, ಅರ್ಥ ಮಾಡಿಸುವಲ್ಲಿ ಶಿಕ್ಷಕಿಯರು ಸಫಲರಾಗಿದ್ದಾರೆ. ಎಷ್ಟೋ ಕಡೆ ಅವರಿಗೆ ಸಿಗಬೇಕಾದ ಪೂರ್ಣ ವೇತನ ಸಿಕ್ಕಿಲ್ಲ ಆದರೂ ಮಕ್ಕಳ ಹಿತಾಸಕ್ತಿಯ ದೃಷ್ಟಿಯಿಂದ ಅವರು ಕೆಲಸ ನಿರ್ವಹಿಸಿದ್ದಾರೆ. ಆ ಮೂಲಕ ಹೆಣ್ಮಕ್ಳು ಸ್ಟ್ರಾಂಗ್‌ ಗುರೂ ಎಂದು ಮತ್ತೂಮ್ಮೆ ಸಾರಿ ಹೇಳಿದ್ದಾರೆ.

 

-ಶ್ರೀಲಕ್ಷ್ಮೀ

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.