ಸುಂದರ ಆರೋಗ್ಯಕ್ಕೆ ‘ಪಂಚಕರ್ಮ ಚಿಕಿತ್ಸೆ’


Team Udayavani, Jun 6, 2018, 9:15 AM IST

ayurvedamuseum.jpg

ಆಯುರ್ವೇದ ಶಾಸ್ತ್ರ, ಕೇವಲ ವೈದ್ಯ ಪದ್ಧತಿ ಮಾತ್ರವಲ್ಲ. ಇದೊಂದು ಜೀವನ ವಿಧಾನ. ಹಲವಾರು ವರ್ಷಗಳು ಆನಂದದಿಂದ ಜೀವಿಸಬೇಕೆಂಬ ಹಂಬಲವುಳ್ಳವರು ಅನುಸರಿಸುವ ಆರೋಗ್ಯ ಪದ್ಧತಿ. ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಲು ನೀಡುವ ಪಂಚಕರ್ಮ ಚಿಕಿತ್ಸೆ ಆರೋಗ್ಯ ಕ್ಷೇತ್ರದ ಅದ್ಭುತಗಳಲ್ಲೊಂದು…
– – –
ಆಧುನಿಕ ಜೀವನ ಶೈಲಿಯಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಆಯುರ್ವೇದ ಔಷಧ ಪದ್ಧತಿ ಎಂತಹ ಕಾಯಿಲೆ, ಒತ್ತಡಗಳಿದ್ದರೂ ಮೂಲದಿಂದಲೇ ವಾಸಿ ಮಾಡುವ ಗುಣ ಹೊಂದಿದೆ. 

ಇಲ್ಲಿ ವೈದ್ಯರು ಕೇವಲ ಕಾಯಿಲೆಗೆ ಮಾತ್ರ ಔಷಧ ಕೊಡುವುದಿಲ್ಲ. ದೇಹ, ಮನಸ್ಸು, ಪ್ರಕೃತಿ, ಆತ್ಮ ಮತ್ತು ದೋಷಗಳು, ಮಲ ಮತ್ತು ಧಾತುಗಳ ಸ್ಥಿತಿಯತ್ತಲೂ ಗಮನ ಹರಿಸುತ್ತಾರೆ.

ದೇಹದಲ್ಲಿ ಅಡಗಿರುವ ವಾತ, ಪಿತ್ತ, ಕಫ ಎಂಬ ಮೂರು ಗುಣಗಳ ಸಮತೋಲನದಿಂದ ಹಾಗೂ ದೈಹಿಕ ಅಂಗಗಳ ಸಾಮರಸ್ಯದಿಂದ, ಉತ್ತಮ ಆಹಾರ ಪಚನ ಮತ್ತು ತ್ಯಾಜ್ಯ ವಿಸರ್ಜನೆಗಳಿಂದ ಕೂಡಿದ ವ್ಯಕ್ತಿಯು ಆರೋಗ್ಯವಂತ ವ್ಯಕ್ತಿ ಎನ್ನಿಸಿಕೊಳ್ಳುತ್ತಾನೆ. ವಾತ, ಪಿತ್ತ, ಕಫದಲ್ಲಿ ಸಮತೋಲನ ತಪ್ಪಿದರೆ ಹಾಗೂ ಮನೋ ದೈಹಿಕ ಬಲಗಳ ನಡುವೆ ಏರುಪೇರು ಉಂಟಾದರೆ ಕಾಯಿಲೆ ಕಂಡುಬರುತ್ತವೆ. ವಾತ, ಪಿತ್ತ, ಕಫವನ್ನು ಸಮತೋಲನದಿಂದ ಕಾಯ್ದುಕೊಳ್ಳಲು ಆನುಕೂಲ ಮಾಡಿಕೊಡುವ ಪಂಚಕರ್ಮ ಚಿಕಿತ್ಸೆ ಆರೋಗ್ಯ ಕ್ಷೇತ್ರದ ಅದ್ಭುತಗಳಲ್ಲೊಂದಾಗಿದೆ. 

ಸಾಧಾರಣವಾಗಿ ಬರುವ ಅಜೀರ್ಣದಿಂದ ಹಿಡಿದು, ಮಲಬದ್ಧತೆ, ಮೂಲವ್ಯಾಧಿ, ಬೆನ್ನು-ಸೊಂಟ ನೋವು, ತಲೆನೋವು, ನಪುಂಸಕತೆ, ಪೋಲಿಸಿಸ್ಟಿಕ್‌ ಓವೇರಿಯನ್‌ ಡಿಸೀಸ್‌ ನಂತರ ಮುಟ್ಟಿನ ಸಮಸ್ಯೆ, ಸಂತಾನಹೀನತೆ, ಆಥೆùìಟಿಸ್‌ ಮುಂತಾದ ರೋಗಗಳು ಹುಟ್ಟುತ್ತವೆ. ರೋಗ ಪ್ರತಿರೋಧ ಶಕ್ತಿ ಹೆಚ್ಚಿರುವ ಶರೀರವು ಈ ತಡೆಗಳನ್ನು ಹೋಗಲಾಡಿಸುವ ಸಾಮರ್ಥ್ಯ ಹೊಂದಿರುತ್ತವೆ. ಇನ್ನು ಕೆಲವು ಶರೀರಗಳಿಗೆ ಇದಕ್ಕಾಗಿ ಸಣ್ಣ ಪ್ರಮಾಣದ ಚಿಕಿತ್ಸಾ ಸಹಾಯ ಬೇಕಾಗುತ್ತದೆ.

ಬಿಝಿ ಲೈಫ್‌ನಲ್ಲೂ ಪಂಚಕರ್ಮ ಸಾಧ್ಯ: ಡಾ. ಕೇಶವ ಭಟ್‌ ಸರ್ಪಂಗಳ ಇಂದಿನ ಬಿಝಿ ಲೈಫ್‌ ಮಂದಿಗೆ ಅನ್ನಪಚನಾಂಗದ ದಿನಂಪ್ರತಿ ಚಟುವಟಿಕೆಗಳ ವ್ಯತ್ಯಯವೇ ಸಕಲ ರೋಗಗಳಿಗೂ ಮೂಲ ಕಾರಣ. ಪಚನಕ್ರಿಯೆಯ ರೂವಾರಿ ಶಾರೀರಿಕ ‘ಅಗ್ನಿ’ ಎನ್ನಿಸಿದ ‘ಪಿತ್ತ’ವನ್ನು ಹತೋಟಿಯಲ್ಲಿರಿಸುವುದು ಬಹುಮುಖ್ಯ.

ಅದಕ್ಕಾಗಿ ಸಾಮಾನ್ಯವಾಗಿ ಬಿಡುವಿಲ್ಲದ ವೃತ್ತಿ ಜೀವನದೆಡೆಯಲ್ಲೂ ಪಂಚಕರ್ಮ ಚಿಕಿತ್ಸೆ ಅಗತ್ಯ. ಔಪಚಾರಿಕವಾದ ಸ್ನೇಹ ಪ್ರಯೋಗ (ಔಷಧೀಯ ತುಪ್ಪ ಸೇವನೆ) ಮತ್ತು ಸ್ವೇದನ (ಬೆವರಿಸುವಿಕೆ)ದ ನಂತರ ಆಯ್ದ ಶೋಧನ ಪ್ರಯೋಗ (ವಮನ, ವಿರೇಚನ, ವಸ್ತಿ, ಸಸ್ಯ, ರಕ್ತಮೋಕ್ಷ ಇವುಗಳಲ್ಲಿ ಸೂಕ್ತವಾದುದು)ವನ್ನು ಚುಟುಕಾಗಿ ಸುಲಭ ರೀತಿಯಲ್ಲಿ ಕಾಲೀಯವಾಗಿ ಮಾಡುವುದರಿಂದ ಶಾಸ್ತ್ರೋಕ್ತವಾದ ಫಲಿತಾಂಶ ಸಿಗದೇ ಇದ್ದರೂ ಮಲಾಂಶವು ಶರೀರದಲ್ಲಿ ವೃದ್ಧಿಸುವುದನ್ನು ತಡೆಗಟ್ಟಬಹುದು. ಆದ್ದರಿಂದಲೇ ಪಂಚಕರ್ಮಗಳು ಈ ನಿಟ್ಟಿನಲ್ಲಿ ಬಹು ಪರಿಣಾಮಕಾರಿ ಎಂದಿದ್ದಾರೆ ಬೆಂಗಳೂರಿನ ವೈದ್ಯರತ್ನಂ ಚಿಕಿತ್ಸಾಲಯದ  ಹಿರಿಯ ವೈದ್ಯ ಮತ್ತು ವ್ಯವಸ್ಥಾಪಕ ಡಾ. ಕೇಶವ ಭಟ್‌ ಸರ್ಪಂಗಳ.

ವೈದ್ಯರತ್ನಂ ಆಯುರ್ವೇದ ಫೌಂಡೇಶನ್‌ನಡಿ ವೈದ್ಯರತ್ನಂ ಔಷಧಶಾಲಾ, ವೈದ್ಯರತ್ನಂ ನರ್ಸಿಂಗ್‌ ಹೋಂ, ವೈದ್ಯರತ್ನಂ ಆಯುರ್ವೇದ ಕಾಲೇಜ್‌, ರಿಸರ್ಚ್‌ ಮತ್ತು ಡೆವಲಪ್‌ಮೆಂಟ್‌ ಲ್ಯಾಬ್‌, ವೈದ್ಯ ವಿದ್ಯಾರ್ಥಿಗಳ ತರಬೇತಿ ಕೇಂದ್ರ ಹಾಗೂ ವೈದ್ಯರತ್ನಂ ಆಯುರ್ವೇದ ಮ್ಯೂಸಿಯಂ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನ ಹೆಚ್‌ಎಸ್‌ಆರ್‌ ಬಡಾವಣೆಯ ವೈದ್ಯರತ್ನಂನ ಚಿಕಿತ್ಸಾ ಕೇಂದ್ರದಲ್ಲಿ ಪರಿಣಿತ ಹಾಗೂ ಅನುಭವಿ ವೈದ್ಯರ ಸಮಾಲೋಚನೆ (ಕೌನ್ಸಿಲಿಂಗ್‌) ಕೂಡ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿ 080-22580020, ಮೊ. 9449593130 ಅಥವಾ  ಇಮೇಲ್‌ನಲ್ಲಿ cಚrಛಿಃvಚಜಿಛyಚrಚಠಿnಚಞಚಿlr.cಟಞ  ಪಡೆಯಬಹುದು.

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.