ಅಡುಗೆಮನೆಯಲಿ ಅವರೆ ಮೇಳ


Team Udayavani, Jan 16, 2019, 12:30 AM IST

w-6.jpg

ಇದು ಅವರೆಯ ಸೀಸನ್‌. ಬಾಯಿಯಲ್ಲಿ ನೀರೂರಿಸುವ ಅವರೆ ಖಾದ್ಯಗಳ ರೆಸಿಪಿಗಳು ಇಲ್ಲಿವೆ. 

1. ಅವರೆಕಾಯಿ ಪಲ್ಯ
ಬೇಕಾಗುವ ಸಾಮಗ್ರಿ:
ಎಳೆ ಕಾಯಿ-3 ಲೋಟ, ಈರುಳ್ಳಿ-2, ಟೊಮೇಟೊ-2, ಅಚ್ಚ ಖಾರದ ಪುಡಿ-2 ಚಮಚ, ಹಸಿಮೆಣಸು, ಎಣ್ಣೆ ಸ್ವಲ್ಪ, ಸಾಸಿವೆ- 1 ಚಮಚ, ಜೀರಿಗೆ-1/2 ಚಮಚ, ಎಳ್ಳು-1 ಚಮಚ, ಅರಿಶಿನ ಪುಡಿ-1 ಚಮಚ, ಬೆಳ್ಳುಳ್ಳಿ-2 ಎಸಳು, ಗರಂ ಮಸಾಲೆ-1 ಚಮಚ, ಸಾಂಬಾರ್‌ ಪುಡಿ-1 ಚಮಚ, ಕೊತ್ತಂಬರಿ ಸೊಪ್ಪು-1/2 ಕಟ್ಟು, ಚೂರು ಸಕ್ಕರೆ (ಬೇಕಿದ್ದರೆ)

ಮಾಡುವ ವಿಧಾನ: ಅವರೆಕಾಳನ್ನು ಚೆನ್ನಾಗಿ ತೊಳೆದು ಬೇಯಿಸಿ. ಒಗ್ಗರಣೆಗೆ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಹಸಿಮೆಣಸು, ಎಳ್ಳು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಈರುಳ್ಳಿಯನ್ನು ಸಹ ಕೆಂಪಗೆ ಹುರಿಯಬೇಕು. ನಂತರ ಟೊಮೇಟೊ ಹಾಕಿ, ಬೇಯಿಸಿಟ್ಟ ಅವರೆ ಕಾಳು ಹಾಕಿ ಬೆರೆಸಿರಿ. ಅಚ್ಚಖಾರದ ಪುಡಿ, ಗರಂ ಮಸಾಲೆ, ಅರಿಶಿನಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೊನೆಗೆ ಒಂದು ಚಮಚ ಸಕ್ಕರೆ ಬೆರೆಸಿ. ನಂತರ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ. 

2.ಅವರೆಕಾಳಿನ ಕೂರ್ಮ
ಬೇಕಾಗುವ ಸಾಮಗ್ರಿ: ಅವರೆ ಕಾಳು -3 ಕಪ್‌, ಆಲೂಗಡ್ಡೆ-2, ಟೊಮೇಟೊ-2, ಈರುಳ್ಳಿ-2, ಹುಣಸೆ ಹಣ್ಣಿನ ರಸ- 2 ಚಮಚ, ಕೊತ್ತಂಬರಿ ಸೊಪ್ಪು- ಅರ್ಧ ಕಟ್ಟು, ಸಾಸಿವೆ-1/2 ಚಮಚ, ಅರಿಶಿನ ಪುಡಿ-1 ಚಮಚ, ಅಚ್ಚಖಾರದ ಪುಡಿ-2 ಚಮಚ, ಎಣ್ಣೆ-ಒಗ್ಗರಣೆಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ ಚಟಪಟಿಸಿದ ನಂತರ, ಹೆಚ್ಚಿದ ಈರುಳ್ಳಿ ಹಾಗೂ ಟೊಮೇಟೊ ಹಾಕಿ ಹುರಿಯಿರಿ. ಬೇಯಿಸಿದ ಆಲೂಗಡ್ಡೆಯನ್ನು ತುಂಡು ಮಾಡಿ ಸರಿಯಾಗಿ ಕಲಸಿ. ಅವರೆಕಾಳನ್ನು ಬೇಯಿಸಿ, ಇವೆಲ್ಲವನ್ನು ಸೇರಿಸಿ ಉಪ್ಪು ಹಾಕಿ, ಕೈ ಆಡಿಸುತ್ತಲೇ ಕೊತ್ತಂಬರಿ ಸೊಪ್ಪು ಹಾಕಿ. ಒಂದು ಕುದಿ ಬಂದ ನಂತರ, ಬೇರೆ ಪಾತ್ರೆಗೆ ವರ್ಗಾಯಿಸಿ. ಇದು ರೊಟ್ಟಿ ಜೊತೆಗೆ ತಿನ್ನಲು ರುಚಿಕರವಾಗಿರುತ್ತದೆ. 

3. ಅವರೆಕಾಳು ಉಸಲಿ
ಬೇಕಾಗುವ ಸಾಮಗ್ರಿ:
ಅವರೆಕಾಳು-3 ಕಪ್‌, ಹಸಿಮೆಣಸು-4, ತೆಂಗಿನ ತುರಿ-1/2 ಕಪ್‌, ಲಿಂಬೆ ಹಣ್ಣು-1, ಅರಿಶಿನ-1/2 ಚಮಚ, ಕೊತ್ತಂಬರಿ ಸೊಪ್ಪು-1/2 ಕಟ್ಟು, ಜೀರಿಗೆ- 1 ಚಮಚ, ಮೆಂತ್ಯೆ- 1ಚಮಚ, ಚಕ್ಕೆ ಪುಡಿ-1 ಚಮಚ, ಈರುಳ್ಳಿ-2, ಎಣ್ಣೆ-ಒಗ್ಗರಣೆಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ. ನಂತರ ಈರುಳ್ಳಿ ಹಾಕಿ, ಕೆಂಪಗೆ ಹುರಿಯಿರಿ. ತೆಂಗಿನ ತುರಿ, ಹಸಿಮೆಣಸು ಹಾಕಿ ರುಬ್ಬಿ, ಆ ಮಿಶ್ರಣಕ್ಕೆ ಅವರೆಕಾಳನ್ನು ಸೇರಿಸಿ, ಬಾಣಲೆಯಲ್ಲಿ ಸ್ವಲ್ಪ ಹೊತ್ತು ಬಾಡಿಸಿ. ಜೀರಿಗೆ, ಮೆಂತ್ಯೆ, ಚಕ್ಕೆ ಪುಡಿ ಹಾಕಿ ಬೆರೆಸಿ. ನಂತರ ಅರಿಶಿನ ಪುಡಿ, ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿದರೆ, ಸ್ವಾದಿಷ್ಟಕರ ಉಸಲಿ ರೆಡಿ.

4. ಅವರೆಕಾಳಿನ ಇಡ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು-1 ಕಪ್‌, ಉದ್ದಿನ ಬೇಳೆ-1 ಕಪ್‌, ಅಕ್ಕಿ- 2 ಕಪ್‌, ಮೊಸರು-1/2 ಕಪ್‌, ಉಪ್ಪು ರುಚಿಗೆ  ತಕ್ಕಷ್ಟು.

ಮಾಡುವ ವಿಧಾನ: ನೆನಸಿದ ಉದ್ದಿನ ಬೇಳೆ ಹಾಗೂ ಅಕ್ಕಿಯನ್ನು ರುಬ್ಬಿ, 8 ಗಂಟೆ ಕಾಲ ಇಡಿ. ಅವರೆಕಾಳನ್ನು ಬೇಯಿಸಿಕೊಳ್ಳಿ. ಹಿಟ್ಟನ್ನು, ಇಡ್ಲಿ ಪಾತ್ರೆಗೆ ಸುರಿಯುವಾಗ ಬೇಯಿಸಿದ ಅವರೆಕಾಳು ಸೇರಿಸಿ, ಹಬೆಯಲ್ಲಿ ಬೇಯಿಸಿ. ಇಪ್ಪತ್ತು ನಿಮಿಷದ ನಂತರ  ಗಮಗಮ ಅವರೆಕಾಳು ಇಡ್ಲಿ ತಯಾರು.

5. ಮಸಾಲೆ ಇಡ್ಲಿ
ಬೇಕಾಗುವ ಸಾಮಗ್ರಿ: ಅವರೆಕಾಳು- 2 ಕಪ್‌, ನೆನೆಸಿದ ಕಡಲೆಬೇಳೆ-2 ಕಪ್‌, ಮೊಸರು- ಸ್ವಲ್ಪ, ತೆಂಗಿತುರಿ-1/2 ಕಪ್‌, ಕೊತ್ತಂಬರಿ ಸೊಪ್ಪು, ಶುಂಠಿ- 1 ತುಣುಕು, ಒಗ್ಗರಣೆಗೆ ಎಣ್ಣೆ,  ಸಾಸಿವೆ, ಜೀರಿಗೆ ಹಾಗೂ ಅಚ್ಚಖಾರದ ಪುಡಿ-ತಲಾ 1/2 ಚಮಚ, ಒಣಮೆಣಸು-6, ಹಸಿಮೆಣಸಿನಕಾಯಿ-2, ಕರಿಬೇವು-10. 

ಮಾಡುವ ವಿಧಾನ: ಹಿಂದಿನ ರಾತ್ರಿ ಕಡಲೆಬೇಳೆ ನೆನೆಸಿ ರುಬ್ಬಿಕೊಂಡು, ಅದಕ್ಕೆ ಮೊಸರು ಸೇರಿಸಿ ಇಡಿ. ಮಾರನೆಯ ದಿನ, ಶುಂಠಿ ಹಾಗೂ ಹಸಿಮೆಣಸನ್ನು ತರಿತರಿಯಾಗಿ ರುಬ್ಬಿ. ನಂತರ ಅವರೆಕಾಳು ಸೇರಿಸಿ, ಇಡ್ಲಿ ಹಿಟ್ಟನ್ನು ಕುಕ್ಕರ್‌ ಪಾತ್ರೆಯಲ್ಲಿ ಹಾಕಿ, ಸಾಸಿವೆ ಒಗ್ಗರಣೆ ಹಾಕಿ. ಇಪ್ಪತ್ತು ನಿಮಿಷ ಹಬೆಯಲ್ಲಿ ಬೇಯಿಸಿದರೆ ಅವರೆ ಕಾಳು ಇಡ್ಲಿ ರೆಡಿ.

ಹೀರಾ ರಮಾನಂದ್‌, ಬೆಂಗಳೂರು

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.