ಪುಟ್ಟಗೌರಿಯ ಕತೆ


Team Udayavani, Jan 25, 2017, 2:45 PM IST

gouri.jpg

ಕೇರಳದ ಪ್ರತಿಷ್ಠಿತ “ಕಲೋತ್ಸವ’ ದಲ್ಲಿ ಭಾಗವಹಿಸೋದು ಈ ರಾಜ್ಯದ ಹೆಣ್ಣುಮಕ್ಕಳ ಕನಸು. ಸಾವಿರಾರು ಮಂದಿ  ಚಿತ್ರ ವಿಚಿತ್ರ ವೇಷಗಳಲ್ಲಿ ಅದ್ಭುತ ಕಲಾಪ್ರದರ್ಶನ ನೀಡುತ್ತಾರೆ.  ವಿವಿಧ ಸ್ಪರ್ಧೆಗಳು, ಎಲ್ಲಿಲ್ಲದ ಉತ್ಸಾಹದಿಂದ ಬಣ್ಣ ಹಚ್ಚಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು, ಅವರ ಕೇಕೆ, ನಗುವಿನಲ್ಲಿ ಕಳೆಕಳೆಯಾಗಿತ್ತು ಈ ಬಾರಿಯ ಕಲೋತ್ಸವ. ಆದರೆ ಅಲ್ಲೊಬ್ಬ ಹುಡುಗಿ ಮಾತ್ರ ಬಹಳ ಮಂಕಾಗಿದ್ದಳು, ಆಗಾಗ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಉಳಿದ ಮಕ್ಕಳ ಜೊತೆಗೆ ಬೆರೆಯದೇ ಮೂಲೆಯಲ್ಲಿ ಕೂತು ಕಷ್ಟಪಟ್ಟು ಅಳುವನ್ನು ನಿಯಂತ್ರಿಸುತ್ತಿದ್ದಳು.

ಆ ಹುಡುಗಿ ಹೆಸರು ಸುಕನ್ಯಾ. ಕಲೋತ್ಸವಂನಲ್ಲಿ ಭಾಗವಹಿಸೋದು ಅವಳ ಬಹಳ ದಿನಗಳ ಆಸೆ. ಮದುವೆಯ ಸಂದರ್ಭದಲ್ಲಿ ಮುಸ್ಲಿಮ್‌ ಹೆಣ್ಣುಮಕ್ಕಳು ಮಾಡುವ ಸಾಂಪ್ರದಾಯಿಕ ನೃತ್ಯವನ್ನು ಆಕೆ ಪ್ರದರ್ಶಿಸಬೇಕಿತ್ತು.

ಅದಕ್ಕೋಸ್ಕರ ಬಹಳ ದಿನಗಳಿಂದ ಅಭ್ಯಾಸ ಮಾಡಿದ್ದಳು. ಅಂಥ ಸ್ಥಿತಿವಂತರಲ್ಲದಿದ್ದರೂ ಅವಳ ಅಪ್ಪ ಅವಳಿಗಾಗಿ ಕಾಸ್ಟೂéಮ್‌ಗಳನ್ನು ರೆಡಿಮಾಡಿ ಮಗಳಿಗೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿದ್ದರು. ಮಗಳು ಕಲೋತ್ಸವಂ ವೇದಿಕೆಯಲ್ಲಿ ಡಾನ್ಸ್‌ ಮಾಡೋದನ್ನು ಕಣ್ತುಂಬಿಕೊಳ್ಳಬೇಕೆಂಬುದು ಅವರ ಕನಸೂ ಹೌದು. 

ಮರುದಿನವೇ ಮಗಳ ನೃತ್ಯ ಪ್ರದರ್ಶನ. ಮನೆಯಿಡೀ ಅವಳದೇ ಓಡಾಟ. ಪ್ಯಾಕಿಂಗ್‌, ಕಾಸ್ಟೂéಮ್‌ ರೆಡಿ ಮಾಡ್ಕೊಳಕ್ಕೆ ಅಂತ ಓಡಾಡ್ತಿದ್ದ ಅಪ್ಪ ಸುಭಾಷ್‌ ಇದ್ದಕ್ಕಿದ್ದ ಹಾಗೆ ರಕ್ತವಾಂತಿ ಮಾಡಿಕೊಳ್ಳಲಾರಂಭಿಸಿದರು. ಮನೆಯವರು ಆಧರಿಸೋ ಮೊದಲೇ ಕುಸಿದು ಬಿದ್ದವರು ಮತ್ತೆ ಏಳಲೇ ಇಲ್ಲ. ಕ್ಷಣದ ಹಿಂದೆ ಸಂಭ್ರಮದ ಗೂಡಾಗಿದ್ದ ಮನೆಯಲ್ಲಿ ಕ್ಷಣಮಾತ್ರದಲ್ಲಿ ನೀರವ ಮೌನ, ಆಗಾಗ ಕೇಳಿಬರುವ ರೋದನ. 

ಇಂಥ ಸ್ಥಿತಿಯಲ್ಲಿ ಅಪ್ಪನ ಮುದ್ದಿನ ಮಗಳ ಸ್ಥಿತಿ ಹೇಗಿರಬೇಡ? ತನ್ನ ನೃತ್ಯ ನೋಡಲು ಕಾತರದಿಂದ ಕಾಯುತ್ತಿದ್ದ ಅಪ್ಪ ಕಣ್ಣಮುಂದೆಯೇ ಬಾರದ ಲೋಕಕ್ಕೆ ಹೋದರೆ? 

ಅಳುತ್ತ ಕೂತಿದ್ದ ಮಗಳನ್ನು ಸಮಾಧಾನ ಮಾಡಿದ್ದು ಧೈರ್ಯ ತುಂಬಿದ್ದು ಅಮ್ಮ. 
” ನೀನು ಡಾನ್ಸ್‌ ಮಾಡಬೇಕು ಮಗಳೇ, ಇಲ್ಲಾಂದ್ರೆ ಮಲಗಿರೋ ಅಪ್ಪ ಕಣ್ಣೀರು ಹಾಕ್ತಾರೆ ..’ ಅಂದರಾಕೆ ಭಾವುಕರಾಗಿ. 
ಮರುದಿನ ಮುಂಜಾನೆ ಅಪ್ಪನ ಅಂತಿಮ ವಿಧಿ ನಡೆಯೋ ಮೊದಲೇ ಮಗಳು ಹೊರಟುನಿಂತಿದ್ದಳು. 

ಹಸಿದ ಹೊಟ್ಟೆಯಲ್ಲಿ ಕಣ್ಣೀರು ಸುರಿಸುತ್ತಲೇ ಸುಕನ್ಯಾ ಡಾನ್ಸ್‌ ಪ್ರದರ್ಶಿಸಿದಳು. 
ಬೆರಗಿನಿಂದ ನೃತ್ಯ ನೋಡುತ್ತಿದ್ದ ಪತ್ರಕರ್ತೆಯೊಬ್ಬರಿಗೆ ಈಕೆಯ ಕಣ್ಣೀರು ಕಂಡು ಅನುಮಾನ ಬಂತು. ಆಕೆ ಕರೆದು ವಿಚಾರಿಸಿದಾಗ ಹೊರಬಿದ್ದ ಸತ್ಯವಿದು.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.