ಇತ್ತ ದರಿ, ಅತ್ತ ಸುಂದರಿ


Team Udayavani, Oct 3, 2018, 12:26 PM IST

6005.jpg

(ಅಂತರಗಂಗೆ) ರಾಜೂ ಹೆಂಡತಿಯದ್ದು “ಏತಿ ಅಂದರೆ ಪ್ರೇತಿ’ ಸ್ವಭಾವ. ಕೆಲಸಕ್ಕೆ ಹೋಗು ಅಂದರೆ, “ನಾನು ಮನೆಯಲ್ಲಿ ಆರಾಮವಾಗಿರುವುದು ನಿಮಗೆ ಇಷ್ಟ ಇಲ್ಲಾ ಅಲ್ವಾ?’ ಅಂತ ಜಗಳ. ಸರಿ, ಕೆಲಸಕ್ಕೆ ಹೋಗಬೇಡ ಎಂದರೆ, “ನಾನು ಕೆಲಸಕ್ಕೆ ಹೋಗಿ ಯಶಸ್ವಿಯಾಗುವುದು ನಿಮಗೆ ಬೇಡ. ಮನೆಕೆಲಸಕ್ಕೆ ನಾನು ಆಳು ಅಲ್ವಾ?’ ಅಂತ ಬೈಗುಳ…

ನಲವತ್ತರ ರಾಜೂಗೆ ಕೆಲಸದೊತ್ತಡ ಇರಲಿಲ್ಲ. ಆದರೆ, ಮನೆಯಲ್ಲಿ ನಡೆದ ಘಟನೆ ಅವರ ಮನಸ್ಸಿಗೆ ತುಂಬಾ ನೋವು ತಂದಿದೆ. ತಂದೆ ತೀರಿಕೊಂಡು 20 ದಿನಗಳಾಗಿದ್ದವು. ಸತ್ತ ನಾಲ್ಕನೇ ದಿನ, ರಾಜೂ ಅವರ ಅಕ್ಕಂದಿರು ತಮ್ಮನಿಗೆ ಸಾಂತ್ವನ ಹೇಳುವ ಬದಲು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಮದುವೆಯಾದಾಗಿನಿಂದ ರಾಜೂ ಹೆಂಡತಿಗೇ ಪ್ರಾಶಸ್ತ್ಯ ಕೊಟ್ಟು, ತಂದೆ- ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಅವರ ಕಂಪ್ಲೇಂಟು. ಮದುವೆಗೆ ಹುಡುಗಿ ಹುಡುಕಿದ್ದು ಅಕ್ಕಂದಿರೇ. ಆದರೆ, ಸೊಸೆ ಹೊಂದಿಕೊಳ್ಳಲೇ ಇಲ್ಲ. ಈ ಕಾರಣದಿಂದ ಅಪ್ಪ- ಅಮ್ಮ ಬೇರೆ ಮನೆಯಲ್ಲಿ ಇದ್ದರು.  ಅಪ್ಪನಿಗೆ ಸಾವು ಬರುವುದಕ್ಕೆ ಮಗನಿಂದ ದೂರ ಇದ್ದದ್ದೇ ಕಾರಣ ಎಂದು ಅಕ್ಕಂದಿರ ವಾದ.
  ರಾಜೂ ಹೆಂಡತಿಯದ್ದು “ಏತಿ ಅಂದರೆ ಪ್ರೇತಿ’ ಸ್ವಭಾವ. ಕೆಲಸಕ್ಕೆ ಹೋಗು ಅಂದರೆ, “ನಾನು ಮನೆಯಲ್ಲಿ ಆರಾಮವಾಗಿರುವುದು ನಿಮಗೆ ಇಷ್ಟ ಇಲ್ಲಾ ಅಲ್ವಾ?’ ಅಂತ ಜಗಳ. ಸರಿ, ಕೆಲಸಕ್ಕೆ ಹೋಗಬೇಡ ಎಂದರೆ, “ನಾನು ಕೆಲಸಕ್ಕೆ ಹೋಗಿ ಯಶಸ್ವಿಯಾಗುವುದು ನಿಮಗೆ ಬೇಡ. ಮನೆಕೆಲಸಕ್ಕೆ ನಾನು ಆಳು ಅಲ್ವಾ?’ ಅಂತ ಬೈಗುಳ. ರಾಜೂಗೆ ಒಬ್ಬಳು ಸ್ನೇಹಿತೆ ಇರಬಹುದೆಂದು ಗುಮಾನಿ ಮತ್ತು ಮಾವನವರು ತನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಾರೆ ಎಂದು ಸುಳ್ಳು ಹೇಳಿ, ಅತ್ತೆ-ಮಾವನನ್ನು ದೂರ ಮಾಡಿದ್ದಳು.

  ದೊಡ್ಡ ಮಗಳು ತಾಯಿಯನ್ನು ಚೆನ್ನಾಗಿ ನೋಡಿಕೊಂಡರೂ ರಾಜೂ ಬಗ್ಗೆ ಸ್ವಲ್ಪ ಅಸಹನೆ. ಇದ್ದದ್ದಕ್ಕೆ- ಇಲ್ಲದಿದ್ದಕ್ಕೆ ತಾಯಿಯ ಬಳಿ ಅವನನ್ನು ಬಯ್ಯುತ್ತಿದ್ದಳು. ಪಾಪದ ರಾಜೂವನ್ನು ಬಯ್ದರೆ ತಾಯಿಯ ಕರುಳು ಚುರ್‌ ಎನ್ನುತ್ತಿತ್ತು. ತಾಯಿ ಮಗನಿಗೆ ಫೋನ್‌ ಮಾಡಿ ಅಕ್ಕ ನಿನ್ನನ್ನು ಬಯ್ಯುತ್ತಾಳೆ ಎಂದು ದುಃಖೀಸುತ್ತಿದ್ದರು.
  ಅಂದು ರಾತ್ರಿ ಮನೆಗೆ ಬಂದಾಗ, ಹೆಂಡತಿ ತನ್ನ ತಂದೆಯ ಮೇಲೆ ಪುನಃ ಆಪಾದನೆ ಹೊರಿಸಿದ್ದಾಳೆ. ಸತ್ತೇ ಹೋದ ತಂದೆಯ ಮೇಲೆ ಏನಿದು ಆರೋಪ ಎಂದು ರಾಜೂ ಕಿರುಚಾಡಿದ್ದಾರೆ. ಆಗ ಎದೆ ಬಡಿತ ಜಾಸ್ತಿಯಾಗಿ, ಹೊಟ್ಟೆಯಲ್ಲಿ ಸಂಕಟ, ವಾಂತಿಯಾಯಿತು. ಯಾಕೋ ಎಡಗೈ ಭಾಗ ಊತವಾಗಿ, ಆಸ್ಪತ್ರೆಗೆ ಬಂದು ಅಡ್ಮಿಟ್‌ ಆಗಿದ್ದರು. ತಪಾಸಣೆ ಎಲ್ಲಾ ಮುಗಿದ ಮೇಲೆ ಹೃದ್ರೋಗ ತಜ್ಞರು ಮಾನಸಿಕ ಒತ್ತಡದಿಂದಾಗಿ ಈ ರೀತಿ ಹೃದಯದ ಕಾರ್ಯಚಟುವಟಿಕೆಯಲ್ಲಿ ಏರುಪೇರಾಗುತ್ತದೆಯೆಂದು, ಕೌನ್ಸೆಲಿಂಗ್‌ಗಾಗಿ ನನ್ನ ಬಳಿ ಕಳಿಸಿದ್ದರು.

  ರಾಜೂ ವ್ಯವಹಾರದಲ್ಲಿ ಚಾಣಾಕ್ಷ. ಆದರೆ, ತನ್ನ ಸುತ್ತ ಇರುವ ಹೆಣ್ಣು ಹೃದಯಗಳ ನಡುವೆ ಆತ ಅಸಹಾಯಕ. ತಂದೆಯ ಸಾವು, ತಾಯಿಯ ನೋವು, ಹೆಂಡತಿಯ ನಡವಳಿಕೆ, ಅಕ್ಕಂದಿರ ಅರೋಪ ಮೃದು ಹೃದಯಿ ರಾಜೂರನ್ನು ಪೇಚಿಗೆ ಸಿಲುಕಿಸಿದೆ. ಯಾರು ಸರಿ- ಯಾರು ತಪ್ಪು ಗೊತ್ತಾಗುತ್ತಿಲ್ಲ. ರಾಜೂಗೆ ಮೊದಲು ಧ್ಯಾನ ಮಾಡುವುದನ್ನು ಕಲಿಸಿದೆ. ಹೆಂಡತಿಗೆ “ಬಾರ್ಡರ್‌ ಲೈನ್‌ ಪರ್ಸನಾಲಿಟಿ’ ಇರುವುದರಿಂದ ಪರಿಚಯವಿರುವ ಮತ್ತೂಬ್ಬ ಮನೋವೈದ್ಯರ ಬಳಿ ಕಳಿಸಿದ್ದೇನೆ. ಚಿಕಿತ್ಸೆ ಸಕಾರಾತ್ಮಕವಾಗಿ ಪ್ರಗತಿಯಲ್ಲಿದೆ.

– ಶುಭಾ ಮಧುಸೂದನ್‌

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.