ರೆಡ್‌ ಅಲರ್ಟ್‌!

ಕೆಂಪಾದವೋ ಎಲ್ಲ ಕೆಂಪಾದವೋ...

Team Udayavani, Aug 21, 2019, 5:48 AM IST

5

ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ ಈ ನೀತಿ-ನಿಯಮಗಳು ಅನ್ವಯವಾಗಲ್ಲ. ಯಾಕಂದ್ರೆ, ಕೆಂಪು ಬಣ್ಣ ಈಗಿನ ಟ್ರೆಂಡ್‌. ಅದರಲ್ಲೂ ಕೆಂಬಣ್ಣದ ಪಾದರಕ್ಷೆಗಳು ಬೋಲ್ಡ್‌ ಹುಡುಗೀರ ಸ್ಟೈಲ್‌ ಸ್ಟೇಟ್‌ಮೆಂಟ್‌…

ಕೆಂಪು ಬಣ್ಣ ಪ್ರೀತಿಯ ಸಂಕೇತ ಎನ್ನುತ್ತಾರೆ. ಅದು ಅಪಾಯ ಮತ್ತು ಅಶುಭದ ಸಂಕೇತ ಅಂತ ನಂಬುವವರೂ ಇದ್ದಾರೆ. ಕುಂಕುಮದ ಈ ಬಣ್ಣಕ್ಕೆ ನಮ್ಮ ಸಂಪ್ರದಾಯದಲ್ಲಿ ಮರ್ಯಾದೆ ಮತ್ತು ಗೌರವವೂ ಇದೆ. ಅದರಲ್ಲೂ ಹೆಂಗಳೆಯರು, ಗಾಢ ಬಣ್ಣದ ಕೆಂಪು ಬಣ್ಣಕ್ಕೆ ಮಾರು ಹೋಗಿದ್ದಾರೆ. ಸೀರೆ, ಲೆಹೆಂಗ, ಸಲ್ವಾರ್‌, ಲಿಪ್‌ಸ್ಟಿಕ್‌, ನೇಲ್‌ಪಾಲಿಶ್‌ ಖರೀದಿಯಲ್ಲಿ, ಕೆಂಪು ಬಣ್ಣಕ್ಕೇ ಹೆಚ್ಚು ಆದ್ಯತೆ ಕೊಡುತ್ತಾರೆ. ಅಷ್ಟೇ ಅಲ್ಲ, ಕೆಂಪು ಬಣ್ಣದ ಪಾದರಕ್ಷೆಗಳೂ ಹುಡುಗೀರ ಮನಸ್ಸು ಕದ್ದಿವೆ.

ಕೆಂಪು ಬಣ್ಣ ಎಲ್ಲರ ಗಮನ ಸೆಳೆಯುತ್ತದೆ. ಅದಕ್ಕಾಗೇ, ಅಪಾಯದ ಸಂಕೇತವಾಗಿ ಕೆಂಪು ಬಣ್ಣದ ಚಿಹ್ನೆಯನ್ನು ಬಳಸುವುದು. ಫ್ಯಾಷನ್‌ ಲೋಕದಲ್ಲೂ ಅಷ್ಟೇ, ಎಲ್ಲರ ಕಣ್ಮನ ಸೆಳೆಯುವ ಬಣ್ಣ ಕೆಂಪು. ಸರಳ ಉಡುಗೆ ತೊಟ್ಟಾಗಲೂ, ಗಾಢ ಕೆಂಪು ಬಣ್ಣದ ಪಾದರಕ್ಷೆ ಧರಿಸಿದರೆ ಎಲ್ಲರ ಗಮನ ಸೆಳೆಯಬಹುದು. ಕೆಂಪುಬಣ್ಣದ ಹೈಹೀಲ್ಸ್‌, ಬೂಟ್ಸ್‌, ಶೂಸ್‌, ಸ್ಲಿಪ್‌ಆಸ್ಟ್, ಸ್ಯಾಂಡಲ್ಸ…, ಚಪ್ಪಲಿ… ಹೀಗೆ, ಧರಿಸುವ ಉಡುಪು ಟ್ರೆಡಿಷನಲ್‌ ಆಗಿದ್ದರೂ, ಪಾರ್ಟಿವೇರ್‌ ಆಗಿದ್ದರೂ ಅದಕ್ಕೆ ಸರಿಯಾದಂಥ ಕೆಂಪು ಪಾದರಕ್ಷೆಗಳನ್ನು ಮ್ಯಾಚ್‌ ಮಾಡಬಹುದು.

ಹಾಲಿವುಡ್‌ ಟಚ್‌
ನೀವು ವಿದೇಶಿ ಜಾನಪದ ಕಥೆ, ಕಿನ್ನರಿಯರ ಕಥೆ, ಸಿನಿಮಾ, ನಾಟಕ, ನೃತ್ಯ ಮತ್ತು ಫ್ಯಾಷನ್‌ ಶೋಗಳನ್ನು ನೋಡಿದ್ದರೆ, ಅಲ್ಲಿ ಕೆಂಪು ಬಣ್ಣದ ಪಾದರಕ್ಷೆಗೆ ಪ್ರಾಮುಖ್ಯ ನೀಡುವುದನ್ನು ಗಮನಿಸಿರಬಹುದು. ಅದೇ ರೀತಿ ಬ್ಯಾಲೆ ನೃತ್ಯಗಾತಿಯರು, ಪಾಪ್‌ ತಾರೆಯರು, ಹಾಲಿವುಡ್‌ ನಟಿಯರು, ರೂಪದರ್ಶಿಯರು ಹೆಚ್ಚಾಗಿ ಗಾಢ ಕೆಂಪು ಬಣ್ಣದ ಪಾದರಕ್ಷೆಗಳನ್ನು ಧರಿಸುತ್ತಾರೆ.

ಮಕ್ಕಳಿಗೂ ಇಷ್ಟ
ಮಿನಿಮೌಸ್‌, ಲಿಟಲ್‌ ರೆಡ್‌ ರೈಡಿಂಗ್‌ಹುಡ್‌, ಸಾಂಟಾಕ್ಲಾಸ್‌, ಸೂಪರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌, ಪುಸ್‌ಇನ್‌ಬೂಟ್ಸ್‌ನಂಥ ಕಾಟೂìನ್‌ ಪಾತ್ರಗಳೂ ಕೆಂಪು ಬೂಟು ತೊಟ್ಟು ಮೆರೆದಿವೆ. ಹಾಗಾಗಿ, ಮಕ್ಕಳ ಪಾದರಕ್ಷೆಗಳಲ್ಲೂ ಕೆಂಪುಬಣ್ಣದ ವೈವಿಧ್ಯಮಯ ಆಯ್ಕೆಗಳಿವೆ.

ಬೋಲ್ಡ್‌ ಅಂಡ್‌ ಬಿಂದಾಸ್‌
ಫ್ಯಾಷನ್‌ ಸಮೀಕ್ಷೆಗಳ ಪ್ರಕಾರ ಕೆಂಪು ಬಣ್ಣ, ಹುಡುಗಿಯರ ಆತ್ಮವಿಶ್ವಾಸದ ಸಂಕೇತ ಎಂದು ಗುರುತಿಸಲಾಗುತ್ತದೆ. ಗಾಢ ಕೆಂಪುಬಣ್ಣದ ಪಾದರಕ್ಷೆ, ದಿರಿಸು, ಲಿಪ್‌ಸ್ಟಿಕ್‌, ನೇಲ್‌ಪಾಲಿಶ್‌ ಹಾಗೂ ಇತರೆ ಫ್ಯಾಷನ್‌ ಆ್ಯಕ್ಸೆಸರಿಸ್‌ಗಳನ್ನು ಧರಿಸುವವರು ಬೋಲ್ಡ್‌ ಅಂಡ್‌ ಬಿಂದಾಸ್‌ ಮನೋಭಾವದ ಹುಡುಗಿಯರು ಅನ್ನುತ್ತವೆ ಸಮೀಕ್ಷೆಗಳು. ನೀವೂ ಯಾಕೆ, ಕೆಂಪುಬಣ್ಣದ ಪಾದರಕ್ಷೆಗಳನ್ನು ಧರಿಸಿ ಟ್ರೆಂಡ್‌ ಸೆಟ್‌ ಮಾಡಬಾರದು?

ಪ್ರತಿಷ್ಠೆಯ ಸಂಕೇತ
ವಿದೇಶಗಳಲ್ಲಿ ಕೆಂಪುಬಣ್ಣದ ಪಾದರಕ್ಷೆ ಧರಿಸುವುದನ್ನು ಪ್ರತಿಷ್ಠೆಯ ಸಂಕೇತ (ಸ್ಟೇಟಸ್‌ ಸಿಂಬಲ…) ಎಂದು ಗುರುತಿಸಲಾಗುತ್ತಿತ್ತು. ಮಹಿಳೆ-ಪುರುಷ ಎಂಬ ಭೇದವಿಲ್ಲದೆ, ತಮ್ಮನ್ನು ತಾವು ಮೇಲ್ವರ್ಗದವರು ಎಂದು ಹೇಳಿಕೊಳ್ಳುತ್ತಿದ್ದ ರಾಜಕಾರಣಿಗಳು, ಮಂತ್ರಿಗಳು, ರಾಜಮನೆತನದವರು, ಜಮೀನ್ದಾರರು ಮಾತ್ರವೇ ಕೆಂಪು ಬಣ್ಣದ ಪಾದರಕ್ಷೆಗಳನ್ನು ಧರಿಸಬಹುದಾಗಿತ್ತಂತೆ. ಕೆಂಪು ಪಾದರಕ್ಷೆ ತೊಟ್ಟವರು, ಸಮಾಜದ ಗಣ್ಯ ವ್ಯಕ್ತಿ ಅಥವಾ ಮನೆತನಕ್ಕೆ ಸೇರಿದವನು ಅಂತ ಅರ್ಥವಿತ್ತಂತೆ. ಬೇರೆಯವರು ಅದನ್ನು ಧರಿಸಲು ಹಿಂಜರಿಯುತ್ತಿದ್ದರಂತೆ. ವಸ್ತು ಸಂಗ್ರಹಾಲಯದಲ್ಲಿ ಇಟ್ಟಿದ್ದ ಗಣ್ಯ ವ್ಯಕ್ತಿಯ, ಬೆಲೆ ಬಾಳುವ ಕೆಂಪುಬಣ್ಣದ ಜೋಡಿ ಪಾದರಕ್ಷೆಯಯನ್ನು ಯಾರೋ ಕದ್ದೊಯ್ದ ಘಟನೆಯೂ ವಿದೇಶದಲ್ಲಿ ನಡೆದಿತ್ತು!

ಎಲ್ಲವೂ ಕೆಂಪಾಗದಿರಲಿ
1. ನ್ಯೂಟ್ರಲ್‌ ಕಲರ್‌ ( ಬೂದು, ಕಂದು, ಕೆನೆ ಬಣ್ಣ, ಕಪ್ಪು, ಬಿಳಿ, ತಿಳಿನೀಲಿ) ಬಟ್ಟೆಯ ಜೊತೆಗೆ ಕೆಂಪು ಪಾದರಕ್ಷೆ ಧರಿಸಬಹುದು.
2. ಕೆಂಪು ಪಾದರಕ್ಷೆಗಳು ಎಲ್ಲರ ಗಮನ ಸೆಳೆಯುವುದರಿಂದ ಉಳಿದ ಎಲ್ಲವೂ (ಡ್ರೆಸ್‌, ಮೇಕಪ್‌, ಆ್ಯಕ್ಸೆಸರೀಸ್‌) ಸಿಂಪಲ್‌ ಆಗಿರಲಿ.
3. ಕೆಂಪು ಲಿಪ್‌ಸ್ಟಿಕ್‌, ಹ್ಯಾಂಡ್‌ಬ್ಯಾಗ್‌ ಓಕೆ. ಆದರೆ, ರೆಡ್‌ ಸ್ಕಾಫ್ì, ರೆಡ್‌ ಬೆಲ್ಟ್, ರೆಡ್‌ ಬ್ರೇಸ್‌ಲೆಟ್‌ ಅಂತ ಎಲ್ಲವೂ ಕೆಂಪಾಗುವುದು ಬೇಡ.
4. ರೆಡ್‌ ಹೈ ಹೀಲ್ಸ್‌ಗಳು ಪಾರ್ಟಿವೇರ್‌ ಉಡುಪಿನ ಜೊತೆಗೆ ಟ್ರೆಂಡಿಯಾಗಿ ಕಾಣುತ್ತೆ.
5. ಪ್ರೇಮಿಗಳ ದಿನ, ಆ್ಯನಿವರ್ಸರಿಯಂಥ ಸಂದರ್ಭಗಳಲ್ಲಿ ಪ್ರೀತಿಯ ಸಂಕೇತವಾಗಿ ಜೋಡಿಗಳು, ಕೆಂಪು ಬಣ್ಣದ ಪಾದರಕ್ಷೆಗಳನ್ನು ಧರಿಸಬಹುದು.
6. ಗಾಢ ಕೆಂಪು ಹಾಗೂ ಹಸಿರು ದಿರಿಸಿನ ಜೊತೆ ಕೆಂಪು ಪಾದರಕ್ಷೆ ಅಷ್ಟು ಚಂದ ಅನ್ನಿಸುವುದಿಲ್ಲ.

– ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.