ಸ್ಕೈವಾಕ್‌ ಟೀಚರ್‌


Team Udayavani, Sep 4, 2019, 5:55 AM IST

Q-16

22 ವರ್ಷದ ಯುವತಿಯೊಬ್ಬಳಿಗೆ ತಾನು ಚೆನ್ನಾಗಿ ಸಂಪಾದಿಸಬೇಕು, ಉದ್ಯೋಗದಲ್ಲಿ ಬಡ್ತಿ ಪಡೆಯಬೇಕು, ಬದುಕನ್ನು ಎಂಜಾಯ್‌ ಮಾಡಬೇಕು… ಎಂಬಂಥ ವಯೋಸಹಜ ಕನಸುಗಳಿರುತ್ತವೆ. ಆದರೆ, ಇಲ್ಲೊಬ್ಬಳು ಹುಡುಗಿ ಕೊಳಗೇರಿಯ ಮಕ್ಕಳನ್ನು ಸಾಕ್ಷರರನ್ನಾಗಿಸುವ ಕನಸು ಕಂಡಿದ್ದಾಳೆ. ಅವರನ್ನೆಲ್ಲಾ ಒಂದೆಡೆ ಸೇರಿಸಿ, ತರಗತಿಗಳನ್ನೂ ನಡೆಸುತ್ತಿದ್ದಾಳೆ. ಅವಳ ಕ್ಲಾಸ್‌ರೂಮ್‌ ಇರುವುದೆಲ್ಲಿ ಗೊತ್ತಾ? ಪಾದಚಾರಿಗಳು ನಡೆಯುವ ಸ್ಕೈ ವಾಕ್‌ ಮೇಲೆ!

ಈ ಸ್ಕೈವಾಕ್‌ ಟೀಚರ್‌ನ ಹೆಸರು ಹೇಮಂತಿ ಸೇನ್‌. ಮುಂಬೈನ ಕಂಡೀವಾಲಿ ರೈಲ್ವೆ ನಿಲ್ದಾಣದ ಬಳಿಯ ಜನನಿಬಿಡ ಸ್ಕೈ ವಾಕ್‌ ಆಕೆಯ ತರಗತಿ. ಸುತ್ತಮುತ್ತಲಿನ ಕೊಳೆಗೇರಿಯ ಭಿಕ್ಷುಕರ ಮಕ್ಕಳೇ ಆಕೆಯ ವಿದ್ಯಾರ್ಥಿಗಳು. ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಕಳೆದ ಒಂದು ವರ್ಷದಿಂದ ತರಗತಿ ನಡೆಯುತ್ತಿದೆ.

ಪ್ರತಿದಿನ ಅದೇ ದಾರಿಯಲ್ಲಿ ಓಡಾಡುತ್ತಿದ್ದ ಹೇಮಂತಿ ಸೇನ್‌, ಅಲ್ಲಿ ಭಿಕ್ಷೆ ಬೇಡುತ್ತಿದ್ದ, ಸುಮ್ಮನೆ ಅಲೆದಾಡುತ್ತಿರುತ್ತಿದ್ದ ಬಡ ಮಕ್ಕಳನ್ನು ಗಮನಿಸುತ್ತಿದ್ದಳು. ಅವರೆಲ್ಲ ಯಾರ ಮಕ್ಕಳು, ವಿದ್ಯಾಭ್ಯಾಸದ ಬಗ್ಗೆ ಅವರಿಗೆ ಅರಿವಿದೆಯಾ, ಅವರ ಮಂದಿನ ಭವಿಷ್ಯದ ಕತೆಯೇನು ಅಂತೆಲ್ಲಾ ಆಕೆಗೆ ಚಿಂತೆಯಾಗುತ್ತಿತ್ತು. ಈ ಮಕ್ಕಳಿಗೆ ವಿದ್ಯಾಭ್ಯಾಸ ಸಿಗದಿದ್ದರೆ ಮುಂದೆ ಅವರೂ, ಭಿಕ್ಷುಕರೋ, ಕಿಸೆಗಳ್ಳರೋ ಆಗುತ್ತಾರಲ್ಲ ಅಂತ ದುಃಖವಾಗುತ್ತಿತ್ತು. ಹೇಗಾದರೂ ಮಾಡಿ ಅವರ ಮನವೊಲಿಸಿ ಶಾಲೆಗೆ ಸೇರಿಸಬೇಕು ಅಂತ ನಿರ್ಧರಿಸಿದಳು ಹೇಮಂತಿ. ಆ ಮಕ್ಕಳ ಕುಟುಂಬದವರನ್ನು ಭೇಟಿ ಮಾಡಿದರೆ, ಅವರಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಒಲವು ಕಾಣಿಸಲಿಲ್ಲ. ಹತ್ತಿರದ ಶಾಲೆಯವರೂ ಭಿಕ್ಷುಕರ ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದರಂತೆ. ಭಿಕ್ಷುಕರ ಮಕ್ಕಳು, ದಿನಾ ತರಗತಿಗೆ ಬರುವುದಿಲ್ಲ, ಅವರನ್ನು ತಿದ್ದುವುದು ಕಷ್ಟ ಎಂಬುದು ಶಾಲೆಯವರ ವಾದ.

ಛಲ ಬಿಡದ ಹೇಮಂತಿ, ತಾನೇ ಟೀಚರ್‌ ಆಗಲು ನಿರ್ಧರಿಸಿಬಿಟ್ಟಳು. ಮಕ್ಕಳ ಮನವೊಲಿಸಿ, ಅವರ ಹೆತ್ತವರಿಗೆ ತಿಳಿ ಹೇಳಿ, ವಾರದಲ್ಲಿ ಮೂರು ದಿನ ಮಧ್ಯಾಹ್ನ ಪಾಠ ಹೇಳಿ ಕೊಡಲು ಪ್ರಾರಂಭಿಸಿದಳು. ತರಗತಿ ನಡೆಸಲು ಎಲ್ಲಿಯೂ ಸ್ಥಳ ಸಿಗದಿದ್ದಾಗ, ಜನರು ಓಡಾಡುವ ಸ್ಕೈ ವಾಕ್‌ ಸ್ಥಳವನ್ನೇ ಕ್ಲಾಸ್‌ ರೂಮ್‌ ರೀತಿ ಮಾಡಿಕೊಂಡರು. ಓದು-ಬರಹ ಅಷ್ಟೇ ಅಲ್ಲದೆ, ಡ್ಯಾನ್ಸ್‌, ಆರ್ಟ್‌, ಕ್ರಾಫ್ಟ್ ಕೂಡಾ ಕಲಿಸುತ್ತಾರೆ ಹೇಮಂತಿ ಟೀಚರ್‌!

ಕಳೆದ ಅಕ್ಟೋಬರ್‌ವರೆಗೆ ವಾರಕ್ಕೆ ಮೂರು ದಿನ ಮಾತ್ರ ನಡೆಯುತ್ತಿದ್ದ ತರಗತಿ, ಈಗ ಪ್ರತಿದಿನವೂ 1 ಗಂಟೆ ಕಾಲ ನಡೆಯುತ್ತದೆ. ಜುನೂನ್‌ ಎಂಬ ಎನ್‌ಜಿಓ ಸದಸ್ಯರು ಕೂಡಾ ಈ ಕೆಲಸದಲ್ಲಿ ಕೈ ಜೋಡಿಸಿದ್ದು, ವಾರಕ್ಕೊಮ್ಮೆ ಬೀದಿ ನಾಟಕಗಳ ಮೂಲಕ ಮಕ್ಕಳಿಗೆ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ. ಭಿಕ್ಷೆ ಬೇಡದೆ ತರಗತಿಗೆ ಹೋಗುವ ಮಕ್ಕಳ ಕಣ್ಣಿಗೆ ಖಾರದ ಪುಡಿ ಎರಚುವ ಹೆತ್ತವರು, ದಾರಿಹೋಕರಿಗೆ ತೊಂದರೆಯಾಗುತ್ತಿದೆ ಅಂತ ದೂರು ನೀಡುವ ಜನರು… ಹೀಗೆ, ಹತ್ತು ಹಲವು ಅಡೆತಡೆಗಳನ್ನು ಮೀರಿ ಈ ಅಕ್ಷರ ಯಾತ್ರೆ ನಡೆಯುತ್ತಿದೆ.

ತರಗತಿಗೆ ಬರಲು ಶುರು ಮಾಡಿದ ನಂತರ ಮಕ್ಕಳಲ್ಲಿ ಸ್ವತ್ಛತೆಯಲ್ಲಿ ಅರಿವು, ನಡವಳಿಕೆಯಲ್ಲಿ ಬದಲಾವಣೆ, ನೆನಪಿನ ಶಕ್ತಿ ವೃದ್ಧಿಸುತ್ತಿದೆ ಅಂತಾರೆ ಹೇಮಂತಿ. ರೈಟ್‌ ಟು ಎಜುಕೇಷನ್‌ ಆ್ಯಕ್ಟ್ ಪ್ರಕಾರ, ಆ ಮಕ್ಕಳನ್ನು ಶಾಲೆಗಳಿಗೆ ದಾಖಲು ಮಾಡುವ ಉದ್ದೇಶ ಆಕೆಗಿದೆ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಹೇಮಂತಿ ಟೀಚರ್‌ ಕೆಲಸಕ್ಕೊಂದು ಸಲಾಂ ಹೇಳ್ಳೋಣ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.