ಅಪ್ಪನ ಡ್ಯೂಟಿ ಹೇಗಿರಬೇಕು?

ತಂದೆಯೇ ಬಾಳಿನ ಬೆಳಕಾಗಿ...

Team Udayavani, May 1, 2019, 6:05 AM IST

Avalu-Family

ಮಗು ಜನಿಸಿದ ನಂತರ ನೀವು ಅಪ್ಪ ಆಗುತ್ತೀರಿ. ಅಂದರೆ, ಹೆಸರಿಗೆ ಮಾತ್ರ ಅಪ್ಪನಾಗುವುದಲ್ಲ. ದಿನದ ಸ್ವಲ್ಪ ಸಮಯ ಮಡದಿಯ ಮುಂದೆ ಮಗುವನ್ನು ಎತ್ತಿ ಆಡಿಸಿ. ಮಗುವಿನ ಅಂದಚಂದವನ್ನು ಅವಳೆದುರು ಹಾಡಿ ಹೊಗಳಿ…

ಕೆಲವೊಂದು ಕುಟುಂಬದಲ್ಲಿ ಗಂಡು ಹೊರಗೆ ದುಡಿದು ಮನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಮತ್ತು ಹೆಣ್ಣು ಮನೆ ಕೆಲಸ, ಮಕ್ಕಳ ಆರೈಕೆ ನೋಡಿಕೊಳ್ಳಬೇಕೆಂದು ತಮ್ಮ ಮಕ್ಕಳ ಮದುವೆಗೆ ಮೊದಲೇ ಹಿರಿಯರ ಅಪ್ಪಣೆಯಾಗಿರುತ್ತದೆ. ಇನ್ನೂ ಕೆಲವೊಂದು ಕುಟುಂಬದವರು, ಹೆಣ್ಣು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದೂ ಕೈತುಂಬಾ ಸಂಬಳ ತರುತ್ತಿದ್ದರೆ ಮದುವೆಯ ನಂತರ ಕೆಲಸವನ್ನು ಮುಂದುವರಿಸಲು ಹೇಳುವವರೇ ಜಾಸ್ತಿ. ಮದುವೆಯ ನಂತರ ಮಕ್ಕಳು, ಸಂಸಾರವೆಂದು ಹೆಚ್ಚಿನ ಜವಾಬ್ದಾರಿ ಹೆಣ್ಣಿಗೆ ಬಳುವಳಿಯಾಗಿ ಬರುವುದು ಸಹಜ.

ಮನೆಯಲ್ಲೇ ಇರುವ ಹೆಣ್ಣಾದರೆ ಹೇಗೋ ನಿಭಾಯಿಸುವ ಶಕ್ತಿ ಅವಳಲ್ಲಿರುತ್ತದೆ. ಆದರೆ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತಾನು ತಾಯಿಯಾಗುವ ಸೂಚನೆ ಸಿಕ್ಕಾಗ ಮನೆಯಿಂದ ಹೊರಗೂ, ಒಳಗೂ ನಿಭಾಯಿಸ ಬೇಕೆಂದರೆ ಕೆಲವೊಮ್ಮೆ ಯಾಕಾದರೂ ಈ ಸಂಸಾರ- ಮಕ್ಕಳು ಅನ್ನಿಸುವಷ್ಟು ಸಂಕಟಪಡುವಂತಾಗುತ್ತದೆ.

ಇಂಥ ವೇಳೆ ಗಂಡಂದಿರು ಏನು ಮಾಡಬೇಕು? ಆಕೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟರೂ ಸಾಕು. ಅವಳು ಹ್ಯಾಪಿ. ಪತ್ನಿಗೆ ಕೆಲಸದ ಹೊರೆಯೂ ತಗ್ಗುತ್ತದೆ. ಆಕೆ ಅಮ್ಮ ಆಗುತ್ತಿದ್ದಾಳೆಂಬ ಸುದ್ದಿ ಕೇಳಿದಾಗ, ಅವಳೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ. ಅವಳ ಆರೋಗ್ಯದ ಬಗ್ಗೆ ಗಮನಹರಿಸಿ. ಅವಳು ನಿಮ್ಮಿಂದ ನಿರೀಕ್ಷಿಸುವುದು, ಸಣ್ಣ ಸಣ್ಣ ಪ್ರೀತಿಯ ಮಾತುಗಳನ್ನು ಮಾತ್ರ. ಪ್ರತಿ ತಿಂಗಳು ವೈದ್ಯರ ಭೇಟಿಯಲ್ಲಿ ತಪ್ಪದೇ ಅವಳೊಂದಿಗೆ ನೀವಿರಿ.

ಹೆರಿಗೆಯ ದಿನಾಂಕವನ್ನು ವೈದ್ಯರಲ್ಲಿ ತಿಳಿದು ಎರಡು ವಾರಗಳ ಮೊದಲೇ ನಿಮಗೆ ಎಂಥ ಆಫೀಸ್‌ ಕೆಲಸಗಳಿದ್ದರೂ ರಜೆ ಹಾಕಿ ಅವಳೊಂದಿಗೆ ಸಂತೋಷವಾಗಿ ಸಮಯ ಕಳೆಯಿರಿ. ಅವಳ ಮನಸ್ಸಿನಲ್ಲಿ ನನ್ನವರು ನನ್ನ ಜೊತೆಗೆ ಇದ್ದಾರೆಂಬ ಧೈರ್ಯದ ಮನೋಭಾವ ಮೂಡುವಂತೆ ಮಾಡುವುದು ನಿಮ್ಮ ಕರ್ತವ್ಯ.

ಮಗು ಜನಿಸಿದ ನಂತರ ನೀವು ಅಪ್ಪ ಆಗುತ್ತೀರಿ. ಅಂದರೆ, ಹೆಸರಿಗೆ ಮಾತ್ರ ಅಪ್ಪನಾಗುವುದಲ್ಲ. ದಿನದ ಸ್ವಲ್ಪ ಸಮಯ ಮಡದಿಯ ಮುಂದೆ ಮಗುವನ್ನು ಎತ್ತಿ ಆಡಿಸಿ. ಮಗುವಿನ ಅಂದಚಂದವನ್ನು ಅವಳೆದುರು ಹಾಡಿ ಹೊಗಳಿ. ಆಗ ಚಿಕ್ಕ ಮಗುವನ್ನು ಹೇಗಪ್ಪಾ ಸಾಕುವುದು? ಅಂತಂದುಕೊಂಡಿದ್ದ ನಿಮ್ಮ ಪತ್ನಿಗೆ ಆ ಹೊಗಳಿಕೆ ಧೈರ್ಯ ತುಂಬುತ್ತದೆ.

ಮಗುವಿನ ಒದ್ದೆ ಬಟ್ಟೆ ಬದಲಿಸುವುದು, ತೊಟ್ಟಿಲಲ್ಲಿ ಮಗುವನ್ನು ಹಾಕಿ ಲಾಲಿ ಹಾಡಿ ಮಲಗಿಸುವುದು, ರಾತ್ರಿ ಜಾಸ್ತಿ ಆಳುವ ಮಗುವಾಗಿದ್ದರೆ ಸ್ವಲ್ಪ ಹೊತ್ತು ಅದನ್ನು ಎತ್ತಿಕೊಂಡು, ಸಮಾಧಾನಿಸುವುದು… ಇಂಥ ಸಣ್ಣಪುಟ್ಟ ಕೆಲಸಗಳನ್ನು ಮರೆಯದೆ ಮಾಡಿ. ಆಗ ಅವಳಿಗೆ ನಿಮ್ಮ ಮೇಲೆ ಗೌರವ ದುಪ್ಪಟ್ಟಾಗುತ್ತದೆ.

ಮಗುವಿನ ತುಂಟಾಟಗಳಲ್ಲಿ ನೀವೂ ಭಾಗಿಯಾಗಿ. ನಿಮ್ಮ ಮಗುವಿಗೆ ನೀವು ಕೋತಿಯಾಗಿ, ಆನೆಯಾಗಿ ಎಲ್ಲದಕ್ಕಿಂತ ಹೆಚ್ಚು ಅಪ್ಪನಾಗಿ ಆ ಮಗುವಿನೊಂದಿಗೆ ಆಟವಾಡಿ. ಮಗುವಿನ ತೊದಲು ನುಡಿಗಳನ್ನು ಕೇಳಿ ಆನಂದಿಸಿ.

ಹೀಗೆಲ್ಲ ಮಾಡಿದಾಗಲೇ, ನೀವು ಗ್ರೇಟ್‌ ಅಪ್ಪ..! ಇಲ್ಲಾಂದ್ರೆ, ಬೆಪ್ಪ..!


— ವೇದಾವತಿ ಎಚ್‌.ಎಸ್‌.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.