ಮಖಾನ ಸವಿರುಚಿ


Team Udayavani, Nov 27, 2019, 4:26 AM IST

as-7

ತಾವರೆ ಹೂವು ಎಲ್ಲರಿಗೂ ಗೊತ್ತಿದೆ. ಆದರೆ, ತಾವರೆ ಬೀಜದಿಂದ ಮಾಡಬಹುದಾದ ಅಡುಗೆಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಮಖಾನ, ಲೋಟಸ್‌ ಸೀಡ್ಸ್‌, ಫಾಕ್ಸ್‌ ನಟ್ಸ್‌ ಎಂದು ಕರೆಸಿಕೊಳ್ಳುವ ತಾವರೆ ಬೀಜ, ಈಗ ಎಲ್ಲ ಅಂಗಡಿಗಳಲ್ಲೂ ಸಿಗುತ್ತದೆ. ರುಚಿಗಷ್ಟೇ ಅಲ್ಲ, ಅದನ್ನು ನಿಯಮಿತವಾಗಿ ಬಳಸುವುದರಿಂದ ತೂಕ ನಿಯಂತ್ರಣವೂ ಸಾಧ್ಯವಿದೆ. ಷಿಾವರೆ ಬೀಜಗಳನ್ನು ಬಳಸಿ ಮಾಡಬಹುದಾದ ರೆಸಿಪಿಗಳು ಇಲ್ಲಿವೆ.

1. ಮಖಾನ ರಾಯತ
ಬೇಕಾಗುವ ಸಾಮಗ್ರಿ: ಮೊಸರು- 1 ಕಪ್‌, ಮಖಾನ (ತಾವರೆ ಬೀಜ)- 1 ಕಪ್‌, ಗರಂ ಮಸಾಲ- ಅರ್ಧ ಚಮಚ, ಜೀರಿಗೆ ಪುಡಿ- 1 ಚಮಚ, ಒಣಮೆಣಸಿನಪುಡಿ- 1 ಚಮಚ, ಕೊತ್ತಂಬರಿ ಸೊಪ್ಪು- 1 ಕಪ್‌, ರುಚಿಗೆ ಉಪ್ಪು, ಎಣ್ಣೆ- 2 ಚಮಚ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ, ಮಖಾನವನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಒಂದು ಬೌಲ್‌ನಲ್ಲಿ ಮೊಸರು ಹಾಕಿ, ಮೇಲೆ ಹೇಳಿದ ಎಲ್ಲ ಮಸಾಲೆ ಪುಡಿಗಳನ್ನು ಸೇರಿಸಿ, ಉಪ್ಪು ಹಾಕಿ, ಮಿಶ್ರಣ ಮಾಡಿ. ಹುರಿದ ಮಖಾನ ಹಾಕಿ ಕೂಡಿಸಿ. ನಂತರ, ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರಾಯತ ತಯಾರು. ಪಲಾವ್‌, ರೈಸ್‌ಬಾತ್‌ಗಳೊಂದಿಗೆ ಇದನ್ನು ಸವಿಯಬಹುದು.

2. ಮಖಾನ ಪಾಯಸ
ಬೇಕಾಗುವ ಸಾಮಗ್ರಿ: ಹುರಿದ ಮಖಾನ- 1 ಕಪ್‌, ಹಾಲು- 3 ಕಪ್‌, ತುಪ್ಪ- 2 ಚಮಚ, ದ್ರಾಕ್ಷಿ-ಗೋಡಂಬಿ- 2 ಚಮಚ, ಏಲಕ್ಕಿ ಪುಡಿ- ಅರ್ಧ ಚಮಚ, ಸಕ್ಕರೆ- 2 ಕಪ್‌.

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ 2 ಚಮಚ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿ ಹಾಕಿ ಹುರಿಯಿರಿ, ದಪ್ಪ ತಳದ ಪಾತ್ರೆಗೆ ಹಾಲು ಹಾಕಿ ಕುದಿಯಲು ಇಡಿ. ಒಂದು ಕುದಿ ಬಂದ ನಂತರ ಸಕ್ಕರೆ ಹಾಕಿ ಕೂಡಿಸಿ. ಈಗ ಹುರಿದ ಮಖಾನ ಹಾಕಿ ಚೆನ್ನಾಗಿ ಕೈಯಾಡಿಸಿ. ದ್ರಾಕ್ಷಿ ಗೋಡಂಬಿ ಹಾಕಿ ಗಟ್ಟಿಯಾಗುವವರೆಗೆ ಕುದಿಸಿ ಕೆಳಗಿಳಿಸಿ.

3. ಪಾಲಕ್‌ ಮಖಾನ ಕರಿ
ಬೇಕಾಗುವ ಸಾಮಗ್ರಿ: ಪಾಲಕ್‌ ಸೊಪ್ಪು- 1 ಕಂತೆ, ಟೊಮೇಟೊ- 2, ಮಖಾನ- 2 ಕಪ್‌, ಜೀರಿಗೆ- 1 ಚಮಚ, ಹಸಿಮೆಣಸಿನಕಾಯಿ- 2, ಗರಂ ಮಸಾಲ- 1 ಚಮಚ, ಒಣಮೆಣಸಿನಪುಡಿ- ಅರ್ಧ ಚಮಚ, ಅರಿಶಿನ- ಅರ್ಧ ಚಮಚ, ಹಾಲು- 2 ಚಮಚ, ಉಪ್ಪು ರುಚಿಗೆ.

ಮಾಡುವ ವಿಧಾನ: ಮೊದಲಿಗೆ ಪಾಲಕ್‌ ಸೊಪ್ಪನ್ನು ಚೆನ್ನಾಗಿ ತೊಳೆದು, ಜೊತೆಗೆ ಜೀರಿಗೆ, ಅರಿಶಿಣ, ಉಪ್ಪು, ಹಸಿಮೆಣಸಿನಕಾಯಿ ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಮಖಾನವನ್ನು ಹೊಂಬಣ್ಣಕ್ಕೆ ಹುರಿದು, ಅದೇ ಬಾಣಲೆಗೆ ಎಣ್ಣೆ, ಜೀರಿಗೆ ಹಾಕಿ, ಹೆಚ್ಚಿದ ಟೊಮೇಟೊ ಹಾಕಿ ಹದವಾಗಿ ಬೇಯಿಸಿ. ಎಲ್ಲ ಮಸಾಲೆ ಪುಡಿಗಳನ್ನು ಹಾಕಿ, ಸ್ವಲ್ಪ ನೀರು ಹಾಕಿ ಕುದಿಸಿ. ಇದಕ್ಕೆ ಹಾಲು, ರುಬ್ಬಿದ ಪಾಲಕ್‌ ಮಿಶ್ರಣವನ್ನು ಸೇರಿಸಿ ಕುದಿಸಿ. ನಂತರ ಮಖಾನ ಸೇರಿಸಿ 2 ನಿಮಿಷ ಕುದಿಸಿ. ಇದು ರೋಟಿ, ಜೀರಾ ರೈಸ್‌, ನಾನ್‌ಗಳೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

4. ಮಖಾನ ಫ್ರೈ
ಬೇಕಾಗುವ ಸಾಮಗ್ರಿ: ಮಖಾನ -200 ಗ್ರಾಂ, ಅರಿಶಿಣ ಪುಡಿ – ಅರ್ಧ ಚಮಚ, ಖಾರದ ಪುಡಿ – ಅರ್ಧ ಚಮಚ, ಚಾಟ್‌ ಮಸಾಲ – 1 ಚಮಚ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ಎಣ್ಣೆ – 2 ದೊಡ್ಡ ಚಮಚ, ಉಪ್ಪು ರುಚಿಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ತಾವರೆ ಬೀಜ ಹಾಕಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಆಗ ಆ ಬೀಜಗಳು ಪಾಪ್‌ ಕಾರ್ನ್ನಂತೆ ಊದಿಕೊಳ್ಳುತ್ತವೆ. ಅದಕ್ಕೆ, ಉಪ್ಪು, ಅರಿಶಿಣ, ಖಾರದ ಪುಡಿ, ಚಾಟ್‌ ಮಸಾಲ, ಕಾಳುಮೆಣಸಿನ ಪುಡಿ ಸೇರಿಸಿದರೆ, ಕಾಫಿ, ಟೀ ಜೊತೆ ಸ್ನ್ಯಾಕ್ಸ್‌ನಂತೆ ಸವಿಯಬಹುದು.

-ಶ್ರುತಿ ಕೆ.ಎಸ್‌.

ಟಾಪ್ ನ್ಯೂಸ್

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.