ನಮ್ಮೂರಿನ ಸೂಪರ್‌ ಅಜ್ಜಿ


Team Udayavani, Jan 10, 2018, 2:17 PM IST

10-38.jpg

ಬಳ್ಳಾರಿಯ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಲ್ಲಿ ಒಬ್ಬರು ಅಜ್ಜಿ ತಿನಿಸುಗಳನ್ನು ಮಾರಲು ಕೂತಿರುತ್ತಾರೆ, ಅವರ ಹೆಸರು ನಾರಾಯಣಮ್ಮ. ಅವರನ್ನು ನೋಡಿ ನಾವೆಲ್ಲ ಕಲಿಯಬೇಕಾದ್ದು ಏನನ್ನು ಗೊತ್ತೇ?

ಯಾಕೋ ಎಂಟು ದಿನಗಳಿಂದ ಅಜ್ಜಿ ಕಾಣಿಸ್ತಾ ಇಲ್ಲ, ಏನಾಗಿರಬಹುದು? ಹುಷಾರಿಲ್ವ ಅಥವಾ ಏನಾದರೂ ತೊಂದರೆನಾ?- ಹೀಗೆ ಮನಸ್ಸಿನಲ್ಲಿ ಒಂಥರಾ ಗೊಂದಲ. ಇದೇ ಆಲೋಚನೆಯಲ್ಲೇ 3 ಗಂಟೆ ಪ್ರಯಾಣಿಸಿದ್ದೇ ಗೊತ್ತಾಗ್ತಿರಲಿಲ್ಲ. ಪ್ರತಿದಿನ ಕಂಟೋನ್ಮೆಂಟ್‌ಗೆ ಬಂದು ಇಳಿದಾಗ ನನ್ನ ಕಣ್ಣುಗಳು ಹುಡುಕುತ್ತಿದ್ದುದ್ದೇ ಅಜ್ಜಿಯನ್ನು. ನಿರಂತರ ಎರಡು ತಾಸು ಪಾಠ ಮಾಡಿ, ರೈಲು ತಪ್ಪಿ$ಹೋಗುತ್ತದೆಂದು ನೀರನ್ನೂ ಕುಡಿಯದೇ, ಎದೊ ಬಿದೊ ಅಂತ ಕಂಟೋನ್ಮೆಂಟ್‌ ಬಳಿ ಬಂದಾಗ ಅಜ್ಜಿ ಇದ್ರೆ ಸ್ವಲ್ಪ ಸಮಾಧಾನ, ಬಿಸ್ಕತ್ತು ಅಥವಾ ಶೇಂಗಾನೋ, ಹೀಗೆ ಏನಾದ್ರೂ ತಿನಿಸು ತಿಂದು ಸ್ವಲ್ಪ ಹಸಿವು ನೀಗಿಸಿಕೊಡು ಮತ್ತೆ ರೈಲಿಗೆ ಕಾಯುತ್ತಿದ್ದೆ. ಅಜ್ಜಿ ಕಾಣಿಸಲಿಲ್ಲ ಅಂದ್ರೆ, ಮತ್ತೆ 3 ಗಂಟೆ ಉಪವಾಸ. ಮನೆ ತಲುಪಿದ ನಂತರವೇ ಊಟ.

ಬಳ್ಳಾರಿಯ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಲ್ಲಿ ಒಬ್ಬರು ಅಜ್ಜಿ ತಿನಿಸುಗಳನ್ನು ಮಾರಲು ಕೂತಿರುತ್ತಾರೆ, ಅವರ ಹೆಸರು ನಾರಾಯಣಮ್ಮ. ಬಿಸ್ಕತ್ತು, ಶೇಂಗಾ, ಕಡಲೆ, ಬಟಾಣಿ, ಹುರಿದ ಶೇಂಗಾ ಬೀಜ- ಹೀಗೆ ಚಿಕ್ಕ ಪುಟ್ಟ ತಿನಿಸುಗಳನ್ನು ಮಾರಿ ಜೀವನ ಸಾಗಿಸುತ್ತಾರೆ. 80ರ ಈ ಇಳಿ ವಯಸ್ಸಿನಲ್ಲೂ ಇವರು ಸ್ವಾಭಿಮಾನಿ. ಮೂಲತಃ ಆಂಧ್ರಪ್ರದೇಶದವರಾದ ನಾರಾಯಣಮ್ಮ, ಮದುವೆ ನಂತರ ಬಳ್ಳಾರಿಯಲ್ಲಿ ಬಂದು ನೆಲೆಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳಕೊಂಡು ಸಂಸಾರದ ಜಂಜಾಟದಲ್ಲಿ ಬಳಲಿ ಹೋಗಿದ್ದ ಇವರು, ಹೇಗಾದರೂ ದುಡಿದು ಬದುಕಬೇಕು ಎಂದುಕೊಂಡು ಎರಡು ಗಂಡು ಮಕ್ಕಳ ಜವಾಬ್ದಾರಿಯನ್ನೂ ಹೊತ್ತು ಎಂಥ ಸಂದಿಗ್ಧ ಪರಿಸ್ಥಿಯಲ್ಲೂ ಎದೆಗುಂದದೆ ಜೀವನ ಸಾಗಿಸಿದ ದಿಟ್ಟಮಹಿಳೆ. ಗಂಡನ ಜಗಳ ಬಿಡಿಸಲು ಹೋಗಿ ತಮ್ಮ ಬಲಗೈ ಬೆರೆಳುಗಳನ್ನೂ ಕಳಕೊಂಡಿದ್ದಾರೆ. ಒಬ್ಬ ಮಗ ಮಾನಸಿಕ ಅಸ್ವಸ್ಥನಾದರೆ, ಇನ್ನೊಬ್ಬ ಬದುಕಿದ್ದರೂ ಇವರ ನೆರವಿಗಿಲ್ಲ. ಮಗ ಮದುವೆ ನಂತರ ಇವರನ್ನು ಬಿಟ್ಟು ಬೇರೆಡೆ ಬದುಕುತ್ತಿದ್ದಾನೆ. ಮಾನಸಿಕ ಅಸ್ವಸ್ಥನಾಗಿರುವ ಇನ್ನೊಬ್ಬ ಮಗ, ಮನೆ ಬಿಟ್ಟು ಹೋಗಿದ್ದಾನೆ. ಆತನನ್ನು ಹುಡುಕುವಷ್ಟೂ ಶಕ್ತಿ ಇವರಿಗಿಲ್ಲ. ಕಷ್ಟದ ಬೆಟ್ಟವೇ ಮೈಮೇಲೆ ಬಿದ್ದರೂ, ಇವರಿಗೆ ಬದುಕಿನ ಮೇಲೆ ಎಳ್ಳಷ್ಟು ಪ್ರೀತಿ ಕುಂದಿಲ್ಲ.

ನಡುವಯಸ್ಸಿನಲ್ಲಿ ಕಬ್ಬು, ಹಣ್ಣು, ತರಕಾರಿಯನ್ನು ಮಾರುತ್ತಿದ್ದ ಇವರು, ವಯಸ್ಸಾದ ಬಳಿಕ ಸಣ್ಣಪುಟ್ಟ ತಿನಿಸುಗಳನ್ನು ಹೊತ್ತುತಂದು ಮಾರಿ ಬಂದ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿದ್ದರೂ ಅನಾಥೆಯಾಗಿ ಬದುಕುತ್ತಿರುವ ನಾರಾಯಣಮ್ಮನಿಗೆ ಅವಶ್ಯವಿದ್ದಾಗ ಅಕ್ಕಪಕ್ಕದವರು ನೆರವಾಗುತ್ತಾರೆ, ತಾವೇ ಸ್ವತಃ ಆಟೋ ತೆಗೆದುಕೊಂಡು ಮಾರ್ಕೆಟ್‌ಗೆ ತೆರಳಿ ಸಾಮಾನುಗಳನ್ನು ತರುತ್ತಾರೆ. ಇರುವ ಒಂದೇ ಕೈಯಲ್ಲೇ ಸರಾಗವಾಗಿ, ಎಲ್ಲ ಕೆಲಸಗಳನ್ನೂ ಮಾಡಿಕೊಂಡು ಜೀವಿಸುತ್ತಿರುವ ಇವರನ್ನು ನೋಡುತ್ತಿದ್ದರೆ, ಎಂಥ ಕಷ್ಟವೂ ಇವರನ್ನು ಮಣಿಸಲಾರದು ಎನಿಸುತ್ತದೆ. 10 ವರ್ಷಗಳಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣವೇ ಇವರ ವ್ಯಾಪಾರ ತಾಣ.

ಬದುಕನ್ನು ಪ್ರೀತಿಸಲು ನೂರಾರು ದಾರಿಗಳಿದ್ದರೂ, ಬದುಕೇ ಬೇಡವೆಂದು ನಿರ್ಧಾರ ತೆಗೆದುಕೊಳ್ಳುವ ಎಷ್ಟೋ ಜನರನ್ನು ಪ್ರತಿದಿನ ಬ್ರೇಕಿಂಗ್‌ ನ್ಯೂಸ್‌ನಲ್ಲಿ ನೋಡುತ್ತೇವೆ. ಎಲ್ಲಾ ಸರಿಯಿದ್ದರೂ ಭಿಕ್ಷೆ ಬೇಡುವವರನ್ನು ನೋಡುತ್ತೇವೆ, ಪ್ರೀತಿ ಸಿಗಲಿಲ್ಲವೆಂದು, ಕೆಲಸ ಸಿಗಲಿಲ್ಲವೆಂದು, ಅವಮಾನವಾಯಿತೆಂದು, ಪಾಲಕರು ಬೈದರೆಂದು- ಹೀಗೆ ಸಣ್ಣಪುಟ್ಟ ಕಾರಣಗಳಿಗೆ ತಲೆಮೇಲೆ ಕೈಹೊತ್ತು ಕೂರುವವರನ್ನೂ ನೋಡುತ್ತಿದ್ದೇವೆ. ಇಂಥವರೆಲ್ಲರಿಗೂ ನಾರಾಯಣಮ್ಮನ ಜೀವನ ಮಾದರಿಯೇ ಸರಿ.

ಮಂಜುಳಾ ಬಡಿಗೇರ್‌, ಕೊಪ್ಪಳ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.