ಕೆಮಿಸ್ತ್ರೀ: ಟಿ-ಷರ್ಟ್‌ ಮೇಲೆ ಸೂಪರ್ ಸೈನ್ಸ್


Team Udayavani, Feb 27, 2019, 12:30 AM IST

c-3.jpg

ಶಾಲಾ ದಿನಗಳಲ್ಲಿ ಕಲಿತ ವೈಜ್ಞಾನಿಕ ಸಂಶೋಧನೆಗಳ ಮಾಹಿತಿ, ಈಕ್ವೇಷನ್‌, ಥಿಯರಂ, ಪಿರಿಯಾಡಿಕ್‌ ಟೇಬಲ್‌ಗ‌ಳು ಈಗ ಫ್ಯಾಷನೆಬಲ್‌ ಪ್ರಿಂಟ್‌ ಹೆಸರಿನಲ್ಲಿ ಟಿ-ಷರ್ಟ್‌ಗಳ ಮೇಲೆ ಮೂಡಿವೆ. ಈ ವಿಜ್ಞಾನ ದಿನದಂದು ನೀವೂ ಅಂಥ ಟಿ-ಷರ್ಟ್‌ ಧರಿಸಿ. 

ಫೆಬ್ರವರಿ 28ರ ವಿಶೇಷ ಏನಂತ ಎಲ್ಲರಿಗೂ ಗೊತ್ತೇ ಇದೆ. ಅವತ್ತು ರಾಷ್ಟ್ರೀಯ ವಿಜ್ಞಾನ ದಿನ. 1928ರ ಫೆಬ್ರವರಿ 28ರಂದು ಹೆಮ್ಮೆಉ ವಿಜ್ಞಾನಿ ಸರ್‌ ಸಿ. ವಿ. ರಾಮನ್‌ ಅವರು “ರಾಮನ್‌ ಎಫೆಕr…’ ಅನ್ನು ಕಂಡು ಹಿಡಿದರು. ಈ ಸಂಶೋಧನೆಗಾಗಿ 1930ರಲ್ಲಿ ಅವರಿಗೆ ನೊಬೆಲ್‌ ಪ್ರಶಸ್ತಿ ದೊರೆಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊದಲ ನೊಬೆಲ್‌ ಪುರಸ್ಕಾರ. “ರಾಮನ್‌ ಎಫೆಕ್ಟ್ ‘ ಅನ್ನು ಕಂಡುಹಿಡಿದ ಈ ದಿನವನ್ನು 1987ರಿಂದ “ರಾಷ್ಟ್ರೀಯ ವಿಜ್ಞಾನ’ ದಿನವನ್ನಾಗಿ ಆಚರಿಸಲಾಗುತ್ತಿದೆ. ಜನರಲ್ಲಿ ವಿಜ್ಞಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಈ ಆಚರಣೆಯ ಉದ್ದೇಶ.

ಟಿ-ಶರ್ಟ್‌ ಮೇಲೆ ವಿಜ್ಞಾನ
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಫ್ಯಾಷನ್‌ ಲೋಕದಲ್ಲೂ ವಿಜ್ಞಾನ ದಿನದ ಆಚರಣೆ ಜೋರಾಗಿಯೇ ಇದೆ. ವಿಜ್ಞಾನಕ್ಕೆ ಸಂಬಂಧಪಟ್ಟ ನುಡಿಮುತ್ತುಗಳು, ವಿಜ್ಞಾನಿಗಳ ಹೇಳಿಕೆಗಳು, ಈಕ್ವೇಶನ್‌ (ಸಮೀಕರಣ), ಡಿರೈವೇಶನ್‌ (ವುತ್ಪತ್ತಿ), ಥಿಯರಮ್‌ (ಪ್ರಮೇಯ), ಪಿರಿಯಾಡಿಕ್‌ ಟೇಬಲ್‌ (ಆವರ್ತಕ ಕೋಷ್ಟಕ), ವೈಜ್ಞಾನಿಕ ಉಪಕರಣಗಳ ಚಿತ್ರ, ವಿಜ್ಞಾನಿಗಳ ಭಾವಚಿತ್ರಗಳನ್ನು ಹೊಂದಿದ, ಜಾಕೆಟ್‌ ಮತ್ತು ಟಿ-ಶರ್ಟ್‌ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ನಿಮ್ಮ ಆಯ್ಕೆಯ ಬಣ್ಣದ ಪ್ಲೆ„ನ್‌ ಟಿ-ಶರ್ಟ್‌ ಮೇಲೆ, ನಿಮಗೆ ಬೇಕಾದ ಚಿತ್ರ ಅಥವಾ ಬರಹವನ್ನು ಪ್ರಿಂಟ್‌ ಮಾಡಿಸಬಹುದು. ಈ ರೀತಿ ಮಾಡಿ ಕೊಡುವ ಅಂಗಡಿಗಳಿದ್ದು, ಆನ್‌ಲೈನ್‌ ಮೂಲಕವೂ ಕಸ್ಟಮೈ ಟಿ-ಶರ್ಟ್‌ ಖರೀದಿಸಬಹುದು. 
 
ಟ್ರೆಂಡ್‌ ಸೃಷ್ಟಿಸಿ
ಈ ವಿಜ್ಞಾನ ದಿನದಂದು, ಗೆಳೆಯರೆಲ್ಲ ಒಂದೇ ಬರಹ ಅಥವಾ ಚಿತ್ರವಿರುವ ಉಡುಪು ಧರಿಸಿ ಕಾಲೇಜು/ ಕಚೇರಿಯಲ್ಲಿ ಟ್ರೆಂಡ್‌ ಸೃಷ್ಟಿಸಬಹುದು. ಸ್ಟಾರ್‌ಟ್ರೆಕ್‌, ದ ಬಿಗ್‌ ಬ್ಯಾಂಗ್‌ ಥಿಯರಿ, ದ ಜೆಟ್ಸ್, ಡೆಕ್‌ಸ್ಟರ್ಸ್‌ ಲ್ಯಾಬ್‌, ಪವರ್‌ಪಫ್ ಗರ್ಲ್ಸ್‌, ಸ್ಮಾಲ್‌ ವಂಡರ್‌, ಥರ್ಡ್‌ ರಾಕ್‌ ಫ್ರಮ್‌ ದ ಸನ್‌… ಹೀಗೆ ವಿಜ್ಞಾನಕ್ಕೆ ಸಂಬಂಧಪಟ್ಟ ಅನೇಕ ಟಿವಿ ಕಾರ್ಯಕ್ರಮಗಳು, ಕಾರ್ಟೂನ್‌ಗಳು, ಕಾಮಿಕ್‌ ಬುಕ್‌ ಪಾತ್ರಗಳ ಚಿತ್ರಗಳಿರುವ ಟಿ-ಶರ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ. 

ವಿದ್ಯಾರ್ಥಿಗಳ ಫೇವರಿಟ್‌
ಎಂಜಿನಿಯರಿಂಗ್‌, ವೈದ್ಯಕೀಯ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಸೇರಿದಂತೆ ವಿಜ್ಞಾನದ ವಿದ್ಯಾರ್ಥಿಗಳ ಫೇವರಿಟ್‌ ಫ್ಯಾಷನ್‌ ಇದಾಗಿದೆ. ವಿಜ್ಞಾನಕ್ಕೆ ಸಂಬಂಧಿಸಿದ ಸಿನಿಮಾ, ಪುಸ್ತಕ, ಕಾರ್ಟೂನ್‌ಗಳ ಅಭಿಮಾನಿಗಳೂ ಇಂಥ ಉಡುಪುಗಳನ್ನು ಕೊಳ್ಳಲು ಮುಂದಾಗುತ್ತಿ¨ªಾರೆ. ಟಿವಿ ಕಾರ್ಯಕ್ರಮಗಳ ಜನಪ್ರಿಯತೆಯೇ ಇದಕ್ಕೆ ಕಾರಣ ಎನ್ನಬಹುದು. ಟಿವಿ ಕಾರ್ಯಕ್ರಮ, ವ್ಯಂಗ್ಯ ಚಿತ್ರ ಮತ್ತು ಕಾಮಿಕ್‌ ಬುಕ್‌ ಪಾತ್ರಗಳನ್ನು ಇಷ್ಟ ಪಡುವ ಸೆಲೆಬ್ರಿಟಿಗಳು ಕೂಡಾ ವಿಜ್ಞಾನದ ಟಿ-ಶರ್ಟ್‌ಗಳನ್ನು ತೊಟ್ಟು ಪೋಸ್‌ ಕೊಟ್ಟಿದ್ದಾರೆ. 

ಹ್ಯಾಷ್‌ಟ್ಯಾಗ್‌ ಸೈನ್ಸ್‌ ಡೇ! 
ಈಗ ಬಹುತೇಕ ಎಲ್ಲ ಆಚರಣೆಗಳೂ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡುತ್ತಿವೆ. ವಿಶೇಷ ದಿನಗಳಂದು ವಿಶಿಷ್ಟ ದಿರಿಸು ತೊಟ್ಟು, ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುವುದು ಈಗ ಕಾಮನ್‌. ಬಟ್ಟೆಯ ಬ್ರ್ಯಾಂಡ್‌ ಅನ್ನು ಹ್ಯಾಷ್‌ ಟ್ಯಾಗ್‌ ಜೊತೆ ಪೋಸ್ಟ್ ಮಾಡುವ ಗ್ರಾಹಕರಿಗೆ ರಿಯಾಯಿತಿ, ಉಡುಗೊರೆ ಕೊಡುವ ಬ್ರ್ಯಾಂಡ್‌ಗಳೂ ಇವೆ. ನಿಮ್ಮ ಬಳಿಯೂ ವಿಜ್ಞಾನಕ್ಕೆ ಸಂಬಂಧಪಟ್ಟ ವಿನ್ಯಾಸದ ಟಿ-ಶರ್ಟ್‌ ಅಥವಾ ಉಡುಪುಗಳು ಇದ್ದರೆ, ಅದನ್ನು ಧರಿಸಿ ಹೆಮ್ಮೆಯಿಂದ “ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಿ. ಹಾಂ, ಸೆಲ್ಫಿ ಕ್ಲಿಕ್ಕಿಸಿ, ಅಪ್‌ಲೋಡ್‌ ಮಾಡಲು ಮರೆಯಬೇಡಿ. 

ಅದಿತಿ ಮಾನಸ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.