ಕಲೆ ಅಳಿಸುವ ಕಲೆ


Team Udayavani, Feb 12, 2020, 4:31 AM IST

sds-8

ಹಾಲು ಒಡೆಯಲು ಒಂದು ಹನಿ ಹುಳಿ ಸಾಕು. ಹಾಗೆಯೇ, ಬಟ್ಟೆ ಹಾಳಾಗಲು ಒಂದು ಚಿಕ್ಕ ಕಲೆ ಸಾಕು. ಅದರಲ್ಲೂ ಹೊಸ ಬಟ್ಟೆ ಮೇಲೆ ಕಲೆ ಆಗಿಬಿಟ್ಟರಂತೂ, ಧರಿಸುವಂತಿಲ್ಲ, ಬಿಡುವಂತಿಲ್ಲ ಎಂದು ಪೇಚಾಡುವ ಪರಿಸ್ಥಿತಿ. ಕಠಿಣ ಕಲೆಯನ್ನು ಅಳಿಸುವುದು ಸವಾಲಿನ ಕೆಲಸವೇ. ಆ ಸವಾಲನ್ನು ಸ್ವಲ್ಪ ಸುಲಭ ಮಾಡುವಂಥ ಟಿಪ್ಸ್‌ಗಳು ಇಲ್ಲಿವೆ. ಯಾವ ಕಲೆಗೆ, ಯಾವುದು ರಾಮಬಾಣ ಅಂತ ನೋಡಿ…

-ಆಯಿಲ್‌ ಪೇಂಟ್‌, ಗ್ರೀಸ್‌
ಆಯಿಲ್‌ ಪೇಂಟ್‌ ಹತ್ತಿದ ಬಟ್ಟೆಯನ್ನು, ಸೀಮೆಎಣ್ಣೆಯಲ್ಲಿ ಒಂದು ಗಂಟೆ ನೆನೆಸಿಟ್ಟು, ಬಟ್ಟೆ ಸೋಪ್‌/ಪೌಡರ್‌ನಿಂದ ತೊಳೆದರೆ ಕಲೆ ಹೋಗುತ್ತದೆ.

-ಲಿಪ್‌ಸ್ಟಿಕ್‌
ಲಿಪ್‌ಸ್ಟಿಕ್‌ ಕಲೆಯ ಅಂಟಿರುವ ಜಾಗಕ್ಕೆ ಗ್ಲಿಸರಿನ್‌ ಹಚ್ಚಿ, ಕಲೆ ಸಂಪೂರ್ಣವಾಗಿ ಹೋಗುವವರೆಗೆ ಉಜ್ಜಿ, ನಂತರ ಸೋಪ್‌ ಹಾಕಿ ತೊಳೆಯಿರಿ.

-ರಕ್ತ
ಬಟ್ಟೆಯ ಮೇಲೆ ರಕ್ತ ಬಿದ್ದ ತಕ್ಷಣ, ಉಪ್ಪುನೀರಿನಿಂದ ತೊಳೆದರೆ ಕಲೆ ಉಳಿಯುವುದಿಲ್ಲ. ಇಲ್ಲದಿದ್ದರೆ, ಉಪ್ಪಿನ ನೀರಿನಲ್ಲಿ ಒಂದೆರಡು ಗಂಟೆ ನೆನೆಸಿಟ್ಟು, ನಂತರ ತೊಳೆದರೆ ಕಲೆ ಹೋಗುತ್ತದೆ.

-ಟೀ, ಕಾಫಿ
ಕಲೆ ಆಗಿರುವ ಜಾಗಕ್ಕೆ ಎತ್ತರದಿಂದ ಬಿಸಿ ನೀರನ್ನು ಚೆಲ್ಲಿ. ನಂತರ, ಬಿಸಿ ಸೋಪಿನ ನೀರಿನಲ್ಲಿ ತೊಳೆಯಬೇಕು.

-ಶಾಯಿಯ ಬಣ್ಣ
ಟೊಮೇಟೋ ತುಂಡಿನಿಂದ, ಕಲೆಯಿರುವ ಭಾಗವನ್ನು ಚೆನ್ನಾಗಿ ಉಜ್ಜಿ. ನಂತರ ಕಲೆಯ ಭಾಗಕ್ಕೆ ಉಪ್ಪು ಲೇಪಿಸಿ, ತಣ್ಣೀರಿನಲ್ಲಿ ತೊಳೆಯಿರಿ. ಕಲೆಯಿರುವ ಭಾಗವನ್ನು ಅರ್ಧ ಗಂಟೆ ಮೊಸರಿನಲ್ಲಿ ನೆನೆಸಿಟ್ಟು, ನಂತರ ತೊಳೆದರೂ ಸರಿಯೇ.

-ಎಲೆ ಅಡಿಕೆ ರಸ
ಬಟ್ಟೆಯ ಮೇಲೆ ಎಲೆ ಅಡಿಕೆ ರಸವೇನಾದರೂ ಬಿದ್ದಿದ್ದರೆ, ಆ ಜಾಗಕ್ಕೆ ಸೀಬೆಕಾಯಿ ರಸ ಹಚ್ಚಿ, ಚೆನ್ನಾಗಿ ಉಜ್ಜಿ ಆನಂತರ ತೊಳೆಯಬೇಕು.

-ಎಣ್ಣೆ
ಕಲೆಯಾಗಿರುವ ಭಾಗವನ್ನು ಹೀರಿಕೊಳ್ಳುವಂತೆ ಸೀಮೆ ಸುಣ್ಣ, ಫೇಸ್‌ ಪೌಡರ್‌, ಟಾಲ್ಕಮ್‌ ಪೌಡರ್‌ನಂಥ ವಸ್ತುಗಳಿಂದ ಪುಡಿಯನ್ನು ಹರಡಬೇಕು. ಕುದಿಯುವ ನೀರನ್ನು ಬಹಳ ಎತ್ತರದಿಂದ ಸುರಿದು ಸೋಪಿನಿಂದ ತೊಳೆಯಬೇಕು.

-ತುಕ್ಕು
ಲಿಂಬೆ ರಸ ಮತ್ತು ಉಪ್ಪನ್ನು ಬೆರೆಸಿದ ಮಿಶ್ರಣದಲ್ಲಿ ತುಕ್ಕಿನ ಕಲೆ ಇರುವ ಬಟ್ಟೆಯ ಭಾಗವನ್ನು ಸ್ವಲ್ಪ ಹೊತ್ತು ನೆನೆಸಿ, ನಂತರ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿ. ಇದೇ ರೀತಿ 2-3 ಸಾರಿ ಮಾಡಿದರೆ ಕಲೆ ಹೋಗುತ್ತದೆ.

-ಬಾಲ್‌ ಪಾಯಿಂಟ್‌ ಪೆನ್‌
ಸ್ಪಿರಿಟ್‌ ಅನ್ನು ಲೇಪಿಸಿ ಸರಿಯಾಗಿ ಉಜ್ಜಿ, ಆಮೇಲೆ ಸೋಪಿನಿಂದ ತೊಳೆಯಬೇಕು.

-ಶಿವಲೀಲಾ ಸೊಪ್ಪಿಮಠ

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.