ಪ್ರಾಣದಂಥ ಮಗನೂ ದೇವರಂಥ ಅಮ್ಮನೂ..!


Team Udayavani, Jul 5, 2017, 3:45 AM IST

amma.jpg

ಬುದ್ಧಿಮಾಂದ್ಯ ಮಗನನ್ನು 43 ವರುಷದಿಂದ ಪುಟ್ಟ ಮಗುವಂತೆ ಸಲಹುತ್ತಿರುವ ಮಹಾತಾಯಿಯ ಕತೆ ಇದು. ಕಡೇಪಕ್ಷ, ಆಕೆಯ ಕಷ್ಟಕ್ಕೆ ದೇವರೂ ಕಿವಿಗೊಟ್ಟಿಲ್ಲ ಎನ್ನುವುದು ಬೇಸರದ ಸಂಗತಿ…

ಮಂಚದ ಮೇಲೆ ಮಲಗಿದ ಪುಟ್ಟ ಮಗು ಅಳುತ್ತದೆ. ಕಾರಣವಿಲ್ಲದೆ ಅದು ಜೋರಾಗಿ ಕಿರುಚಿಕೊಂಡಾಗ, ಅಮ್ಮನ ಕಣ್ಣಲ್ಲಿ ನೀರು ಜಿನುಗುತ್ತದೆ. ಹಿತ್ತಲಿನಲ್ಲಿ ಏನೋ ಕೆಲಸ ಮಾಡುತ್ತಿದ್ದ ಅಮ್ಮ, ಆ ಮಗುವಿಗೆ ಏನಾಯಿತೋ ಎಂದು ಆತಂಕಿತಳಾಗಿ ಓಡಿ ಬರುತ್ತಾಳೆ. “ಏನಾಯಿತು, ಕಂದ?’ ಅಂತ ಕೇಳಿದರೆ, ಅದು ಗೋಣು ಅಲುಗಾಡಿಸಿಯೂ ಉತ್ತರಿಸುವುದಿಲ್ಲ. ಅಷ್ಟಕ್ಕೂ ಆ ಮಗುವಿಗೆ, ಅಮ್ಮ ಏನು ಹೇಳುತ್ತಿದ್ದಾಳೆಂದೇ ಗೊತ್ತಾಗುವುದಿಲ್ಲ. ಬಹುಶಃ ಹಸಿವಾಗಿರಬೇಕೇನೋ ಅಂತಂದುಕೊಂಡು, ಊಟದ ತಟ್ಟೆ ಮುಂದಿಟ್ಟರೆ, ಅದು ಉಣ್ಣುವುದಿಲ್ಲ. ಎಲ್ಲರಂತೆ ಉಣ್ಣಲೂ ಅದಕ್ಕೆ ಬರುವುದಿಲ್ಲ. ಅಮ್ಮನೇ ಊಟ ಮಾಡಿಸಬೇಕು. ಆಗ ಅದರ ಮೊಗದಲ್ಲಿ ಕಂಡೂ ಕಾಣದಂಥ ನಗು ಮೂಡುತ್ತದೆ.
ಇಲ್ಲಿ “ಮಗು’ವಿನ ವಯಸ್ಸು 43! ಮಗ ದೊಡ್ಡವನಾಗಿ ಬೆಳೆದರೂ, ಆತ ಮಗುವಿನಂತೆಯೇ ವರ್ಸಿಸುತ್ತಿದ್ದಾನೆ. ಆ ಮಗನ ಹೆಸರು ಶ್ರೀನಿವಾಸ. ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು, ಆತನ ಎಲ್ಲ ಕೀಟಲೆಗಳನ್ನು ಸಹಿಸಿಕೊಂಡೂ, ನೋವುಗಳಿಗೆ ಕಿವಿಗೊಟ್ಟು, ವಾತ್ಸಲ್ಯದಿಂದ ಸಲಹುತ್ತಿರುವ ಆ ಮಹಾಮಾತೆಯೇ ಲಕ್ಷ್ಮಿದೇವಮ್ಮ.

ಈ ತಾಯಿ- ಮಗ ವಾಸವಿರುವುದು, ಬೆಂಗಳೂರಿನ ಮಾಗಡಿ ಸಮೀಪದ ಕುದೂರು- ಎಚ್‌.ಎಂ. ರೇವಣ್ಣ ನವಗ್ರಾಮದಲ್ಲಿ. ಶ್ರೀನಿವಾಸ ಎಲ್ಲರಂತೆ ತಾಯಿಯ ಗರ್ಭದಿಂದ ಜನಿಸಿದಾಗ ಆರೋಗ್ಯವಂತನಾಗಿದ್ದ. ಬೇರೆಲ್ಲ ಕಂದಮ್ಮಗಳಂತೆ ಮುದ್ದು ಮುದ್ದಾಗಿದ್ದ. ಎರಡು ವರ್ಷದವನಾಗಿದ್ದಾಗ, ತಾಯಿಯ ತಮ್ಮ ಈ ಮಗುವಿನ ಎರಡೂ ಕೈಗಳನ್ನು ಹಿಡಿದು, ಗಿರಗಿಟ್ಲೆ ಆಡಿಸುವಾಗ, ಕೈಜಾರಿತು. ದುರಾದೃಷ್ಟ… ಮೋರಿಯ ಕಲ್ಲಿನ ಮೇಲೆ ಮಗು ಬಿದ್ದು, ಅದರ ತಲೆಗೆ ತೀವ್ರ ಪೆಟ್ಟಾಯಿತು. ಕೂಡಲೇ ತುರ್ತು ಚಿಕಿತ್ಸೆಗೆಂದು ನಿಮ್ಹಾನ್ಸ್‌ಗೆ ದಾಖಲಿಸಲಾಯಿತು. ಚಿಕಿತ್ಸೆಯ ನಂತರ ವೈದ್ಯರು ಹೇಳಿದರು, “ಮೆದುಳಿಗೆ ಹೆಚ್ಚು ಹಾನಿಯಾಗಿದೆ. ಹಾಗಾಗಿ, ಭವಿಷ್ಯದಲ್ಲಿ ಮಗುವಿನ ದೇಹವೇನೋ ಬೆಳೆಯುತ್ತದೆ. ಆದರೆ, ಬುದ್ಧಿ ಮಾತ್ರ ಮಗುವಿನ ರೀತಿಯಲ್ಲಿಯೇ ಇರುತ್ತದೆ’!

“ಸದ್ಯ, ಮಗು ಉಳಿಯಿತಲ್ಲ’ ಎಂದು ಸಮಾಧಾನಪಟ್ಟ ಲಕ್ಷಿ¾ದೇವಮ್ಮ, ಇಂದಿಗೂ ಶ್ರೀನಿವಾಸನನ್ನು ಪುಟ್ಟ ಮಗನಂತೆ ಸಾಕುತ್ತಲೇ ಬಂದಿದ್ದಾರೆ. ಶ್ರೀನಿವಾಸನಿಗೆ ಅಳುವುದು, ನಗುವುದು ಬಿಟ್ಟರೆ ಬೇರೇನೂ ತಿಳಿಯುವುದೂ ಇಲ್ಲ. ಮಾತು ಕೂಡ ಬರುವುದಿಲ್ಲ. ಹೀಗೆ ಪ್ರಪಂಚದ ಅರಿವೇ ಇಲ್ಲದ ಮಗನಿಗೆ ಊಟ ಮಾಡಿಸುವುದು, ಶೌಚಕ್ಕೆ ಕರೆದೊಯ್ಯುವುದು, ಸ್ನಾನ ಮಾಡಿಸುವುದು, ಬಟ್ಟೆ ಬದಲಿಸುವ ಕ್ರಿಯೆಗಳನ್ನು ಲಕ್ಷ್ಮೀದೇವಮ್ಮ ಯಾವತ್ತೂ ತಪ್ಪಿಸಿಲ್ಲ. ಲಕ್ಷ್ಮೀದೇವಮ್ಮ, ತಾಯಿಯ ತಮ್ಮನನ್ನೇ ಮದುವೆಯಾದವರು. ಈಕೆ ವಿಕಲಚೇತನ ಮಗನ ಸೇವೆಯಲ್ಲಿ ನಿರಂತರ ತೊಡಗಿರುವುದನ್ನು ಕಂಡ ಪತಿರಾಯ, ಪತ್ನಿಯನ್ನು ತೊರೆದು ಬೇರೆ ಮದುವೆಮಾಡಿಕೊಂಡು ಹೊರಟುಹೋದ. ಬಡತನ ರೇಖೆಗಿಂತಲೂ ಕಡಿಮೆ ಆದಾಯದ ಹಿನ್ನೆಲೆಯಲ್ಲಿ ಇವರೀಗ ಜಂಗ್‌ಶೀಟಿನ ಮನೆಯೊಂದರಲ್ಲಿ ವಾಸವಿದ್ದಾರೆ.

“ಮಗನನ್ನು ಮನೆಯಲ್ಲಿ ಬಂಧಿಸಿ, ಬೀಗಹಾಕಿಕೊಂಡು ಹೊರಗೆ ದುಡಿಮೆ ಹೋಗುವಾಗ ಕಣ್ಣೀರು ಉಕ್ಕುತ್ತದೆ’ ಎನ್ನುವುದು ಅವರ ನೋವಿನ ಮಾತು. ಶಿಶು ಅಭಿವೃದ್ದಿ ಕಲ್ಯಾಣ ಇಲಾಖೆಯಿಂದ ವಿಕಲಚೇತನರ ಭತ್ಯೆಯಿಂದ ಆಗಾಗ್ಗೆ ಬರುವ ಒಂದು ಸಾವಿರ ರೂಪಾಯಿಯಲ್ಲಿ, ಅಂತ್ಯೋದಯದ ಪಡಿತರ ಚೀಟಿಯಿಂದ ದಿನಸಿ ಕೊಂಡು ಈಕೆ ಜೀವನ ಕಳೆಯುತ್ತಿದ್ದಾರೆ.

ಇವರ ಈ ಅಸಹಾಯಕ ಸ್ಥಿತಿ ಕಂಡು, ಕಟ್ಟಿಕೊಂಡ ಗಂಡ, ಬಂಧು- ಬಳಗ… ಎಲ್ಲರೂ ದೂರ ಉಳಿದಿದ್ದಾರೆ. ತಾಯಿ- ಮಗನ ಸಂಕಷ್ಟ ಆಲಿಸಲು ಇಲ್ಲಿ ಬೇರೆ ಕಿವಿಗಳಿಲ್ಲ.

– ಖಂಡಪರಶು ಮಾಗಡಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.