ಉಪನಿಷತ್ತಿನ ಕಥಾ ಸಾರ


Team Udayavani, Apr 15, 2020, 12:04 PM IST

ಉಪನಿಷತ್ತಿನ ಕಥಾ ಸಾರ

ಹಿಂದೊಮ್ಮೆ ಮಾನವರೆಲ್ಲಾ ಯಥೇಚ್ಛವಾಗಿ ಸಂಪಾದಿಸುತ್ತಿದ್ದರೂ, ಇನ್ನೂ ತೃಪ್ತಿಯಿಲ್ಲದಂತೆ ದುಡಿಯತೊಡಗಿದರು. ಇನ್ನೊಂದೆಡೆ, ರಾಕ್ಷಸರು ಯಥೇಚ್ಛವಾಗಿ ದುಷ್ಟಕರ್ಮಗಳನ್ನು ಮಾಡತೊಡಗಿದ್ದರು. ಹಿಂಸಿಸುವುದು, ಅನ್ಯರನ್ನು ನೋಯಿಸುವುದು, ಅನ್ಯಾಯ ಮಾಡುವುದರಲ್ಲೇ ಸುಖಪಡುತ್ತಲಿದ್ದರು.

ಮತ್ತೂಂದೆಡೆ ದೇವತೆಗಳು, ಇಂದ್ರಿಯಗಳಿಗೆ ಕಡಿವಾಣವೇ ಇಲ್ಲದಂತೆ ವೈಭೋಗ, ವ್ಯಸನಗಳಲ್ಲಿ ತಲ್ಲೀನರಾಗಿದ್ದರು. ಹೀಗೆ ದೇವತೆಗಳು, ರಾಕ್ಷಸರು, ಮಾನವರು ಮೂರು ವರ್ಗದವರೂ ಮನಸೋ ಇಚ್ಛೆಯಾಗಿ ವರ್ತಿಸಿದರೂ, ಅವರಿಗೆ ನೆಮ್ಮದಿ ದೊರಕುತ್ತಿರಲಿಲ್ಲ. ಅತಿಯಾದ ಸುಖವೂ ದುಃ ಖಕ್ಕೆ ಕಾರಣವಂತೆ. ಹಾಗೆ ಯಥೇಚ್ಛ ಸುಖದ ಅನುಭವದಲ್ಲಿದ್ದರೂ, ದುಃಖ ತಪ್ತರಾಗಿ, ಮೂರೂ ವರ್ಗದವರು ಬ್ರಹ್ಮನಲ್ಲಿಗೆ ಹೋಗಿ ತಮ್ಮ ಸಮಸ್ಯೆಯನ್ನಿಟ್ಟರು. ಬ್ರಹ್ಮನು ಇವರೆಲ್ಲರ ವಿಶೇಷತೆಗಳನ್ನು ಗಮನಿಸಿ, ಪರಿಹಾರಸೂಚಕವಾಗಿ ಒಂದೇ ಒಂದು ಅಕ್ಷರವನ್ನು ಅರುಹಿದ. “ದ’ ಎಂಬುದಾಗಿ. “ದ’ ಎಂಬ ಒಂದೇ ಶಬ್ದವನ್ನು
ಮೂವರೂ ಅವರ ಸಂಸ್ಕಾರಕ್ಕೆ ಅನುಗುಣವಾಗಿ ಗ್ರಹಿಸಿದರು. ಇಂದ್ರಿಯಗಳು ಕೆಲಸ ಮಾಡುವುದು ದೇವತೆಗಳ ಶಕ್ತಿಯಿಂದ. ಅದನ್ನು ಅವರೇ ನಿಗ್ರಹಿಸಬೇಕು. ಹಾಗೆಂದೇ ದೇವತೆಗಳು “ದ’ ಅಂದರೆ “ದಮ್ಯತಾ’ ಎಂಬುದಾಗಿ ಗ್ರಹಿಸಿದರು. ಇಂದ್ರಿಯ ನಿಗ್ರಹ ಮಾಡಿ ಚಾಪಲ್ಯವನ್ನು ತೊರೆದು ನೆಮ್ಮದಿ ಕಂಡುಕೊಂಡರು.

ಕ್ರೌರ್ಯ ಅಸುರೀ ಪ್ರವೃತ್ತಿ. ಅದನ್ನು ಆ ಶಕ್ತಿಗಳೇ ನಿಗ್ರಹಿಸಬೇಕು. ಹಾಗಾಗಿ ಅಸುರರು, “ದ- ದಯಾ’ ಎಂಬುದಾಗಿ ಅರ್ಥೈಸಿಕೊಂಡರು. ಎಲ್ಲರಲ್ಲೂ ದಯೆ
ತೋರಿಸುತ್ತಾ, ಸಾತ್ವಿಕ ಮನೋಭಾವ ಹೊಂದಿ ನೆಮ್ಮದಿ ಕಂಡರು. ಮಾನವರಿಗೆ ಸಂಪತ್ತಿನ ಸಂಗ್ರಹ ಸ್ವಭಾವ. ಅವರು “ದ-ದಾನಂ’ ಎಂಬುದಾಗಿ ಅರ್ಥೈಸಿಕೊಂಡು, ಸ್ವಾರ್ಥಕ್ಕಾಗಿ ಕೂಡಿಟ್ಟುಕೊಳ್ಳದೆ ಪರರಿಗೂ ಹಂಚುತ್ತಾ, ಪ್ರಕೃತಿಯಲ್ಲಿಯ ಸಮತೋಲನ ಕಾಪಾಡಿಕೊಂಡರು. ದೇವತಾಭಾವ, ಆಸುರಿಭಾವ, ಮಾನುಷಿಭಾವ ಎಲ್ಲವೂ, ನಮ್ಮಲ್ಲಿ ಆಗಾಗ ಕಾಣುವಂಥದ್ದೇ. ಇಂದ್ರಿಯ ಸುಖಕ್ಕೆ ಅಲ್ಲಲ್ಲಿ ಕಡಿವಾಣ ಹಾಕುತ್ತಾ, ಅನ್ಯರಿಗೆ ಹಿಂಸೆ ಮಾಡದೆ, ತಮಗೇ ತಾವು ಹಿಂಸೆಗೈದುಕೊಳ್ಳದೆ ದಯಾಪರ ರಾಗಿ, ದಾನ ಮಾಡುತ್ತ ಭಗವಂತನ ಸ್ಮರಣೆಯಲ್ಲಿ ತೊಡಗಬೇಕು ಎಂಬುದೇ, ಈ ಉಪನಿಷತ್ತಿನ ಕಥೆಯ ಸಾರ.

ಡಾ. ಯಶಸ್ವಿನಿ, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನ ಮಂದಿರಂ

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.