ಬೋಗುಣಿ ಕಟ್‌: ಇದು ಕೋವಿಡ್ ಹೇರ್‌ ಸ್ಟೈಲ್‌


Team Udayavani, May 13, 2020, 12:49 PM IST

ಬೋಗುಣಿ ಕಟ್‌: ಇದು ಕೋವಿಡ್ ಹೇರ್‌ ಸ್ಟೈಲ್‌

ಸಾಂದರ್ಭಿಕ ಚಿತ್ರ

ಸ್ಮಶಾನ ವೈರಾಗ್ಯ ಎಂಬ ಮಾತು ಕೇಳಿದ್ದೆವು. ಆದರೆ, ಈಗ ನಮ್ಮನ್ನು ಆವರಿಸಿರುವುದು ಕೋವಿಡ್ ವೈರಾಗ್ಯ. ಅಲ್ವಾ ಮತ್ತೆ? ಮಡಿಸಿ ಇಸ್ತ್ರಿ ಮಾಡಿಟ್ಟ ಸೀರೆಗಳು, ಬೀರುವಿನಲ್ಲಿ
ಹಾಗೆಯೇ ಇವೆ. ನಾಲ್ಕು ನೈಟಿ, ಮೂರು ಚೂಡಿದಾರಗಳಲ್ಲಿ ತಿಂಗಳು ಕಳೆದಿದ್ದೇವೆ. ಇಷ್ಟಿದ್ದರೆ ಸಾಕಲ್ಲವೇ? ಹೊಸ ಚಪ್ಪಲಿ, ಹೊಸ ಸೀರೆಗಳು, ಆಭರಣಗಳು ಏನೂ ಬೇಡ. ಆರೋಗ್ಯ ಸರಿಯಾಗಿದ್ದರೆ ಸಾಕು ಎನ್ನಿಸುವ ಮಟ್ಟಿಗೆ, “ಕೋವಿಡ್ ವೈರಾಗ್ಯ’ ಆವರಿಸಿಬಿಟ್ಟಿದೆ.

ಅಷ್ಟೇ ಅಲ್ಲ, ಈ “ಲಾಕ್‌ಡೌನ್‌’, ನಮ್ಮಲ್ಲಿರುವ ಪ್ರತಿಭೆಯ “ಲಾಕ್‌ ಓಪನ್‌’ ಮಾಡಿರುವುದು ಸುಳ್ಳಲ್ಲ. (ಕೆಲವರು ಎಲ್ಲೆಲ್ಲೋ ಸಿಕ್ಕಿ ಹಾಕಿಕೊಂಡು ನಿಜ ಅರ್ಥದಲ್ಲಿ ಲಾಕ್‌ ಡೌನ್‌ ಆಗಿಬಿಟ್ಟಿದ್ದಾರೆ. ಪರಿಚಿತರೊಬ್ಬರು, ನೆಂಟರ ಮದುವೆಗೆಂದು ಬೆಂಗಳೂರಿಗೆ ಬಂದವರು ವಾಪಸ್‌ ಹೋಗಲಾಗದೆ ಅನಿವಾರ್ಯವಾಗಿ ನೆಂಟರ ಮನೆಯಲ್ಲಿಯೇ ದಿನ ಎಣಿಸುತ್ತಿದ್ದಾರೆ) ನಮ್ಮ ಮನೆಯ ಹತ್ತಿರ, ಉಡುಪಿ ಮೂಲದ ಸಂಸಾರ ಒಂದಿದೆ. ಅವರ ಹೆಂಡತಿ, ಮದುವೆ ಇತ್ತೆಂದು ಉಡುಪಿಗೆ ಹೋಗಿದ್ದಾರೆ. ಗಂಡನಿಗೆ ಕೆಲಸದ ಒತ್ತಡದಲ್ಲಿ ಹೊರಡಲಾಗಲಿಲ್ಲ. 4 ದಿನಕ್ಕೆ ಅಂತ ಹೋದ ಹೆಂಡತಿ, ಮಕ್ಕಳು ಅಲ್ಲಿ ಲಾಕ್‌ ಆಗಿಬಿಟ್ಟರು. ಇವರು ಬೆಂಗಳೂರಿನಲ್ಲಿ. ನಮ್ಮ ಹಿಂದಿನ ಬೀದಿಯವರೇ ಆದ್ದರಿಂದ, ಆಚೀಚೆ ಓಡಾಡುವಾಗ, ಮಾತಾಡಿಸುತ್ತಿದ್ದರು. ಒಂದು ದಿನ ಹೀಗೇ ಮಾತಾಡುತ್ತಾ- “ನೋಡಿ ಅಕ್ಕ, ನನ್ನ ಕೂದಲು ಹೇಗೆ ಬೆಳೆದಿದೆ. ಯಾವಾಗಲೂ 2 ತಿಂಗಳಿಗೊಮ್ಮೆ ಹೇರ್‌ಕಟ್‌ ಮಾಡಿಸ್ತಿದ್ದೆ. ಈ ಬಾರಿ ಎರಡೂವರೆ ತಿಂಗಳು ಹೋಗಲಾಗಿರಲಿಲ್ಲ. ಅಷ್ಟರಲ್ಲಿ ಲಾಕ್‌ಡೌನ್‌ ಆಯಿತು. ಈಗ 4 ತಿಂಗಳು ಆಗುತ್ತಾ ಬಂತು. ತಲೆಯೆಲ್ಲಾ ತುರಿಕೆ ಬೇರೆ’ ಎಂದು ನೀಳ ಕೂದಲೊಳಗೆ ಕೈಯಾಡಿಸಿ, ಎಂಥ ಮಾಡುವುದೋ ಏನೋ ಎಂದು ಪೇಚಾಡಿಕೊಂಡರು.

ಮೊನ್ನೆ ಸಂಜೆ ಕಾಂಪೌಂಡ್‌ ಬಳಿ ನಿಂತಿದ್ದಾಗ, “ಹೇಗಿದ್ದೀರ ಅಕ್ಕಾ..?’ ಎಂದು ರಸ್ತೆಯಲ್ಲಿ ಹೋಗುವವರೊಬ್ಬರು ಕೇಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಪಕ್ಕನೆ ಗುರುತು ಸಿಗಲಿಲ್ಲ. ಮಾಸ್ಕ್ ತೆಗೆದ ಆತ, “ನಾನು ಅಕ್ಕಾ ಶ್ರೀಧರ. ಗೊತ್ತಾಗಲಿಲ್ಲವಾ?’ ಎಂದರು. ಅವರ ಹೊಸ ಹೇರ್‌ಸ್ಟೈಲ್‌ ನೋಡಿ, “ಅಯ್ಯೋ, ಇದೆಂಥಾ ಅವಸ್ಥೆ ನಿಮ್ಮದು? ಎಲ್ಲಿ ಹೇರ್‌ಕಟ್‌ ಮಾಡಿಸಿದಿರಿ?’ ಎಂದಾಗ, “ಶಾರದಕ್ಕ, ಕೂದಲು ಉದ್ದ ಆಗಿ ತುರಿಕೆಯಿಂದ ಮಂಡೆಬಿಸಿ ಆಗಿತ್ತು. ಇದಕ್ಕೊಂದು ಗತಿ ಕಾಣಿ ಸಲೇಬೇಕೆಂದು, ಕನ್ನಡಿ ಮುಂದೆ ನಿಂತು, ಕತ್ತರಿಯಿಂದ ಹಿಂದೆ, ಮುಂದೆ ಹಾಗೂ ಕಿವಿ ಹತ್ತಿರ ಉದ್ದುದ್ದ ಬೆಳೆದ ಕೂದಲೆಲ್ಲ ಕತ್ತರಿಸಿದೆ. ಆದರೆ ಒಂದೇ ಲೆವೆಲ್‌ ಬರಲಿಲ್ಲ. ಒಂಥರಾ ಇಲಿ ತಿಂದ ಹಾಗಾಗಿತ್ತು. ಎಂಥ ಮಾಡುದಪ್ಪಾ ಅಂತ ಆಲೋಚಿಸಿ, ನನ್ನ ತಲೆ ಅಳತೆಯ ಒಂದು ಗುಂಡಾದ ಸ್ಟೀಲ್‌ ಬೋಗುಣಿ ತೆಗೆದುಕೊಂಡು, ತಲೆ ಮೇಲೆ ಕವಚಿ ಇಟ್ಟು, ಒಂದು ಕೈಯಲ್ಲಿ ಅದನ್ನು ಗಟ್ಟಿಯಾಗಿ ಹಿಡಿದು, ಇನ್ನೊಂದು ಕೈಯಲ್ಲಿ ಉಳಿದ ಭಾಗವನ್ನು ನೀಟಾಗಿ ಶೇವ್‌ ಮಾಡಿಬಿಟ್ಟೆ. ಹೇಗಿದೆ ಈ “ಕೊರೊನಾ ಕಟಿಂಗ್‌?’ ಎಂದು ನಕ್ಕರು.

“ಇದಕ್ಕೆ “ಬೋಗುಣಿ ಕಟ್‌’ ಅಂತ ಹೇಳ್ಳೋದೆ ಸರಿ. ಹೆಂಡತಿಗೆ ತೋರಿಸಿದಿರಾ ನಿಮ್ಮ ಕೈ ಚಳಕವನ್ನು?’ ಅಂತ ಕೇಳಿದೆ. “ಒಳ್ಳೆ ಹೆಸರೇ ಕೊಟ್ರಿ ನೋಡಿ ಈ ಸ್ಟೈಲ್‌ಗೆ. ಫೋಟೋ ಕಳಿಸಿದ್ದೆ. ಚೆನ್ನಾಗಿದೆ ಹೊಸಾ ಸ್ಟೈಲು ಅಂತ ಉತ್ತರ ಬಂದಿದೆ. ಅದೇನು ಹೊಗಳಿಕೆಯೋ, ವ್ಯಂಗ್ಯವೋ ಸದ್ಯಕ್ಕೆ ಗೊತ್ತಾಗಿಲ್ಲ. ಈ ಕೋವಿಡ್ ದಿಂದ ನಾವು ಇನ್ನೂ ಏನೇನು ಕಲಿಯಬೇಕಿದೆಯೋ ಅನ್ನುತ್ತಾ ಹೆಜ್ಜೆ ಮುಂದಿಟ್ಟರು. ಇನ್ನು ಯಾರ್ಯಾರು ಏನೇನು ಕಂಡು ಹಿಡಿದಿದ್ದಾರೋ, ದೇವರೇ ಬಲ್ಲ. ನೋಡುತ್ತಿರಿ, ಎಲ್ಲಾ ಈಚೆಗೆ ಬರುತ್ತದೆ, ಲಾಕ್‌ಡೌನ್‌ ನಂತರ…

ಶಾರದಾಂಬ .ವಿ.ಕೆ.

ಟಾಪ್ ನ್ಯೂಸ್

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.