ಲಿಪ್‌ಸ್ಟಿಕ್‌ ಚೆಲುವಿನ ಕಾಲ…ಚೆಂದುಟಿಗೆ ಚಿತ್ತಾರ


Team Udayavani, Jul 12, 2017, 10:48 AM IST

SUP-4.jpg

ಲಿಪ್‌ಸ್ಟಿಕ್‌ ತುಟಿಯ ಅಂದವನ್ನು ಹೆಚ್ಚಿಸಿ ಎಲ್ಲರ ನಡುವೆ ಎದ್ದು ಕಾಣುವಂತೆ ಮಾಡಬಹುದು. ನಿಮ್ಮ ಅತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆದರೆ, ಇದೇ ಲಿಪ್‌ಸ್ಟಿಕ್‌ ನಿಮ್ಮ ತುಟಿಯ ಆಕಾರ ಮತ್ತು ಮುಖಕ್ಕೆ ಹೊಂದದಿದ್ದರೆ ನಿಮ್ಮ ಅಂದಗೆಡಿಸಲೂಬಹುದು.

ಮಹಿಳೆಯರು ಅಲಂಕಾರ ಪ್ರಿಯರು. ಮಹಿಳೆಯರ ಅಲಂಕಾರದ ವಸ್ತುಗಳ ಪಟ್ಟಿ ಮಾಡಹೊರಟರೆ ಲಿಪ್‌ಸ್ಟಿಕ್‌ಗೆ ಮರುಮಾತಿಲ್ಲದೆ ಮೊದಲ ಸ್ಥಾನ ಕೊಡಬೇಕಾಗುತ್ತದೆ. ಯಾವುದೇ ಸಭೆ ಸಮಾರಂಭಗಳಿರಲಿ, ಇಲ್ಲವೇ ಪೇಟೆಗೆ ಶಾಪಿಂಗ್‌ ಮಾಡಲು ಹೋಗುವಾಗಲೇ ಆಗಲಿ, ಲಿಪ್‌ಸ್ಟಿಕ್‌ ಹಚ್ಚದೆ ಮನೆಯ ಹೊಸ್ತಿಲು ದಾಟದ ಮಹಿಳೆಯರೂ ಇ¨ªಾರೆ. ತಾರೆಯರಂತೂ ಲಿಪ್‌ಸ್ಟಿಕ್‌ ಇಲ್ಲದೆ ಕ್ಯಾಮೆರಾ ಮುಂದೆ ಬರೋದೇ ಇಲ್ಲ. ನೆನಪಿರಲಿ: ಲಿಪ್‌ಸ್ಟಿಕ್‌ ತುಟಿಯ ಅಂದವನ್ನು ಹೆಚ್ಚಿಸಿ ಎಲ್ಲರ ನಡುವೆ ಎದ್ದು ಕಾಣುವಂತೆ ಮಾಡಬಹುದು. ನಿಮ್ಮ ಅತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆದರೆ, ಇದೇ ಲಿಪ್‌ಸ್ಟಿಕ್‌ ನಿಮ್ಮ ತುಟಿಯ ಆಕಾರ ಮತ್ತು ಮುಖಕ್ಕೆ ಹೊಂದದಿದ್ದರೆ ನಿಮ್ಮ ಅಂದಗೆಡಿಸಲೂಬಹುದು. ತಮ್ಮ ಮುಖ ಚೆನ್ನಾಗಿಲ್ಲ ಎಂದು ಕೊರಗುವ ಮಹಿಲೆಯರಿಗೆ ಒಂದು ಕಿವಿಮಾತು. ತುಟಿಯ ಆಕಾರವನ್ನು ಬದಲಾಯಿಸಲಾಗದಿದ್ದರೂ ಉಪಾಯದಿಂದ ತಿದ್ದಿ ತೀಡಿ, ಆಕಾರಕ್ಕೆ ಹೊಂದುವ ಬಣ್ಣ ಹಚ್ಚಿ ತುಟಿಗಳು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಇನ್ನು ತುಟಿ ತುಂಬಾ ದಪ್ಪಗಿದೆಯೆಂದೋ, ತೆಳುವಾಯಿತೆಂದೋ ಚಿಂತೆ ಬೇಡ. ಅದಕ್ಕೂ ಪರಿಹಾರವಿದೆ. ಲಿಪ್‌ ಲೈನರ್‌ (ತುಟಿಯ ಪೆನ್ಸಿಲ…) ಬಹೋಪಯೋಗಿ. ತುಟಿಯ ಸುತ್ತಲೂ ಲಿಪ್‌ ಲೈನರ್‌ ಬಳಸುವುದರಿಂದ ತುಟಿಗೆ ಹಚ್ಚಿದ ಬಣ್ಣ ಸೋರಿ ಮುಖದ ಮೇಲೆ ಬೀಳದಂತಿರಲು ನೆರವಾಗುವುದಲ್ಲದೆ, ತುಟಿಯ ಆಕಾರವನ್ನೂ ಲಿಪ್‌ ಲೈನರ್‌ನ ಸಹಾಯದಿಂದ ತಿದ್ದಿ ತೀಡಬಹುದು.

ದಪ್ಪ ತುಟಿ: ಮುಖದಲ್ಲಿ ತುಟಿಗಳೇ ಅತಿ ದಪ್ಪವಾಗಿ ಎದ್ದು ಕಾಣುವಂತಿದ್ದರೆ, ಲಿಪ್‌ ಲೈನರ್‌ನಿಂದ ತುಟಿಯ ಒಳಭಾಗಕ್ಕೆ ಗೆರೆ ಎಳೆದು, ಮ್ಯಾಟ… (ತುಸು ಮಂಕಾದ) ಅಥವಾ ಕ್ರೀಮಿ ಲಿಪ್‌ಸ್ಟಿಕ್ಕನ್ನು ಹಚ್ಚಿ. ಕಣ್ಣು ಮತ್ತು ಕೆನ್ನೆಗಳೇ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಿದರೆ ತುಟಿಗಳು ಹೆಚ್ಚು ಎದ್ದು ಕಾಣುವುದಿಲ್ಲ. ಅತೀ ಗಾಢ ಬಣ್ಣ ಮತ್ತು ಅತೀ ತಿಳಿ ಬಣ್ಣದ ಲಿಪ್‌ಸ್ಟಿಕ್ಕನ್ನು ದೂರವಿರಿಸಬೇಕು. ಅವು ತುಟಿಗಳನ್ನು ಇನ್ನೂ ದಪ್ಪವಾಗಿ ಕಾಣುವಂತೆ ಮಾಡುತ್ತವೆ. ಮರೂನ್‌, ಕಾಪರ್‌, ಪಿಂಕ್‌ ಮತ್ತು ಬ್ರೌನ್‌ ಸೂಕ್ತ ಬಣ್ಣ. ತುಟಿಯಂಚಿಗೆ ಸೂಕ್ಷ್ಮವಾಗಿ ಫೌಂಡೇಶನ್‌ ಹಚ್ಚುವುದರಿಂದಲೂ ತುಟಿಗಳು ಕೊಂಚ ಕಿರಿದಾಗಿ ಕಾಣುವಂತೆ ಮಾಡಬಹುದು.

ತೆಳು ತುಟಿ: ಲಿಪ್‌ ಲೈನರ್‌ನಿಂದ ತುಟಿಯಂಚಿನ ಹೊರಭಾಗದಲ್ಲಿ ಗೆರೆ ಬರೆದಾಗ ತುಟಿಯು ಸ್ವಲ್ಪ ಅಗಲವಾದಂತೆ ಕಾಣುವುದು. ಪೀಚ್‌, ಬೀಜ್‌, ಲೈಟ… ಬ್ರಾಂಝ್, ಮೆಟಾಲಿಕ್‌, ಪಿಂಕ್‌ ಬಣ್ಣಗಳು ಸೂಕ್ತ. ಕಡು ಕೆಂಪು, ನೇರಳೆ ಬಣ್ಣಗಳು ಬೇಡವೇ ಬೇಡ. ಇವುಗಳಿಂದ ತುಟಿಗಳು ಇನ್ನೂ ತೆಳುವಾದಂತೆ ಕಾಣಿಸುತ್ತವೆ. ತುಟಿಗಳಿಗೆ ಹವಳದ ಹೊಳಪು ಕೊಟ್ಟರೆ ತುಟಿಗಳು ಉಬ್ಬಿದಂತೆಯೂ ಮತ್ತು ತುಸು ದೊಡªದಾಗಿಯೂ ಕಾಣುತ್ತವೆ.

ಚಿಕ್ಕ ತುಟಿಗಳು: ಚಿಕ್ಕ ತುಟಿಗಳಿದ್ದವರು ಸಹಜವಾಗಿಯೇ ಆಕರ್ಷಕವಾಗಿ ಕಾಣುತ್ತಾರೆ. ಇವರಿಗೆ ಹೆಚ್ಚಿನ ಲಿಪ್‌ಸ್ಟಿಕ್‌ ಮೇಕ್‌ಓವರ್‌ ಕೂಡ ಬೇಕಾಗಿಲ್ಲ. ತುಟಿಗಳು ಸದಾ ಹೊಳೆಯುವಂತೆ ನೋಡಿಕೊಂಡು, ಗಾಢ ಬಣ್ಣದ ಲಿಪ್‌ಸ್ಟಿಕ್‌ನಿಂದ ದೂರವಿದ್ದರೆ ಸಾಕು. ಇವು ತುಟಿಗಳನ್ನು ಇನ್ನೂ ಚಿಕ್ಕದಾಗಿ ಕಾಣುವಂತೆ ಮಾಡುತ್ತದೆ.

ದಪ್ಪ ಮೇಲ್ತುಟಿ: ಮೇಲ್ತುಟಿ ದಪ್ಪಗಾಗಿ, ಕೆಳ ತುಟಿಗಳು ತೆಳುವಾಗಿರುವ ಉದಾಹರಣೆಗಳು ಭಾರತೀಯರಲ್ಲಿ ಅಧಿಕ. ಮೊದಲು ಲಿಪ್‌ಲೈನರ್‌ನಿಂದ ತುಟಿಗಳನ್ನು ತಿದ್ದಬೇಕು, ಮೇಲು¤ಟಿಗೆ ಗಾಢವಾಗಿ, ಕೆಳ ತುಟಿಗೆ ತುಸು ಲೈಟಾಗಿ ಲಿಪ್‌ಸ್ಟಿಕ್‌ ಹಚ್ಚಿದರೆ ಈ ತೊಂದರೆ ಎದ್ದು ಕಾಣಿಸುವುದಿಲ್ಲ.

ದಪ್ಪ ಕೆಳತುಟಿ: ಇವೇ ಸುಂದರವಾದ ತುಟಿಗಳು. ಮೇಕಪ್‌ ಮಾಡುವಾಗ ಹೆಚ್ಚೇನೂ ಕಷ್ಟಪಡಬೇಕಾಗಿಲ್ಲ. ಎರಡು ತುಟಿಗಳಿಗೂ ಒಂದೇ ತರಹ ಲಿಪ್‌ಸ್ಟಿಕ್‌ ಹಚ್ಚಿದರೆ ಸಾಕು.
                                     
ಮುಖವು ವಯಸ್ಸಾದಂತಿದ್ದರೆ: ಆದಷ್ಟು ಸಹಜ ಬಣ್ಣದ ಕ್ರೀಮ್‌ ಲಿಪ್‌ಸ್ಟಿಕ್ಕನ್ನು ಉಪಯೋಗಿಸಿದಾಗ ತುಟಿಯಲ್ಲಿರುವ ನೆರಿಗೆಗಳು ಲಿಪ್‌ಸ್ಟಿಕ್ಕಿನ ಹಿಂದೆ ಅಡಗಿಕೊಳ್ಳುತ್ತವೆ.

ಗೀತಾ ಕುಂದಾಪುರ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.