ಚಳಿಗೆ ಚಮಕ್‌ ಕೊಡಲು “ಸೂಪ್‌’ ಶಾಸ್ತ್ರ!


Team Udayavani, Jan 23, 2019, 12:30 AM IST

b-7.jpg

ಈ ವರ್ಷ ಚಳಿ ಜೋರಾಗಿಯೇ ಇದೆ. ಬಿಸಿಬಿಸಿ ಸಾರು, ಸೂಪ್‌, ಚಹಾ, ಕಷಾಯ.. ಹೀಗೆ ಚಳಿಯಿಂದ ರಕ್ಷಣೆ ಪಡೆಯಲು ಬಿಸಿ ಆಹಾರದ ಮೊರೆ ಹೋಗಿದ್ದೇವೆ. ಈ ಸಾಲಿಗೆ ತುಕ್ಬಾ ಮತ್ತು ಸ್ಕ್ಯೂ ಅನ್ನು ಸೇರಿಸಬಹುದು. ಏನಪ್ಪಾ ಇದು ತುಕಾ³ ಅಂತೀರಾ? ಇತ್ತೀಚೆಗೆ ಲಡಾಕ್‌ಗೆ ಪ್ರವಾಸ ಹೋಗಿದ್ದಾಗ ಅಲ್ಲಿ ಸವಿದ ಆಹಾರವೇ ತುಕಾ³ ಮತ್ತು ಸ್ಕ್ಯೂ. ಅಲ್ಲಿ ಸ್ಥಳೀಯವಾಗಿ ಬೆಳೆಯುವ ಕೆಲವು ತರಕಾರಿಗಳು, ಯಾಕ್‌ ಮೃಗದ ಹಾಲು, ಬೆಣ್ಣೆ ಬಳಸಿ ಇವನ್ನು ತಯಾರಿಸಲಾಗುತ್ತದೆ. ಆದರೆ, ನಮ್ಮಲ್ಲಿ ಲಭ್ಯವಿರುವ ಪರ್ಯಾಯ ವಸ್ತುಗಳನ್ನು ಹಾಗೂ ಮಸಾಲೆಯನ್ನು ಸೇರಿಸಿ, ಕೆಲವು ಪ್ರಾದೇಶಿಕ ಬದಲಾವಣೆ ಮಾಡಿಕೊಂಡು ನಾವೂ ಲಡಾಕ್‌ನ ತುಕಾ³ ಮತ್ತು ಸ್ಕೂ ಗಳನ್ನು ತಯಾರಿಸಬಹುದು. ಹೇಗೆ ಅನ್ನೋದು ಇಲ್ಲಿದೆ…

1. ತುಕ್ಬಾ (ನೂಡಲ್‌ ಸೂಪ್‌) 
(ಲಡಾಕ್‌ನ ಹೆಚ್ಚಿನ ಹೋಟೆಲ್‌ಗ‌ಳಲ್ಲಿ ಸುಲಭವಾಗಿ ಸಿಗುವ ಆಹಾರ ಇದು. ಸಸ್ಯಾಹಾರ ಮತ್ತು ಮಾಂಸಾಹಾರದ ವೈವಿಧ್ಯಗಳಲ್ಲಿ ದೊರೆಯುತ್ತದೆ. ಬೇರೆ ಬೇರೆ ಮಸಾಲೆಗಳನ್ನು ಬಳಸಿ ವಿವಿಧ ಬಣ್ಣ,ರುಚಿ ಹಾಗೂ ಘಮದ ತುಕ್ಬಾವನ್ನು ತಯಾರಿಸಬಹುದು. ಪಾಸ್ತಾ  ಅಥವಾ ನೂಡಲ್ಸ್‌ ಜೊತೆಗೆ ಕೆಲವು ತರಕಾರಿಗಳು, ಬೆಣ್ಣೆ, ಗರಂ ಮಸಾಲೆ ಹಾಕಿ ಕುದಿಸಿದಾಗ ತಯಾರಾಗುವ ಸರಳ ಸೂಪ್‌ ಇದು) 

ಬೇಕಾಗುವ ಸಾಮಗ್ರಿ: ನೂಡಲ್ಸ್‌/ಪಾಸ್ತಾ- 100 ಗ್ರಾಂ, ಸಣ್ಣಗೆ ಹೆಚ್ಚಿದ ಕ್ಯಾರೆಟ್‌, ಬೀನ್ಸ್, ಆಲೂಗಡ್ಡೆ ಇತ್ಯಾದಿ ತರಕಾರಿ- 2 ಕಪ್‌, ಗರಂ ಮಸಾಲೆ/ಸಾರಿನ ಪುಡಿ/ಹಸಿಮೆಣಸಿಕಾಯಿ-ಕಾಳುಮೆಣಸು ಪೇಸ್ಟ್‌/ ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಚಮಚ, ಬೆಣ್ಣೆ/ಅಡುಗೆ ಎಣ್ಣೆ- 4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ನೀರು- 5-6 ಕಪ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ, ಲಿಂಬೆ ಹಣ್ಣು-1.

ತಯಾರಿಸುವ ವಿಧಾನ: ನೂಡಲ್ಸ್‌ ಅಥವಾ ಪಾಸ್ತಾವನ್ನು ನೀರಿನಲ್ಲಿ ಕುದಿಸಿ, ನೀರು ಸೋಸಿ ಸಿದ್ಧಪಡಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆ ತೆಗೆದುಕೊಂಡು, ಹೆಚ್ಚಿದ ತರಕಾರಿ ಹೋಳುಗಳು, ಉಪ್ಪು, ಇಷ್ಟವೆನಿಸಿದ ಯಾವುದಾದರೂ ಒಂದು ಮಸಾಲೆ ಸೇರಿಸಿ ಸ್ವಲ್ಪ ಬಾಡಿಸಿ. ಆಮೇಲೆ ತರಕಾರಿ ಮುಳುಗುವಷ್ಟು ನೀರು ಸೇರಿಸಿ ಬೇಯಿಸಿ. ಬೆಂದ ತರಕಾರಿ ಮಿಶ್ರಣಕ್ಕೆ  ನೂಡಲ್ಸ್‌ ಅನ್ನು ಸೇರಿಸಿ, ಬೇಕಿದ್ದರೆ ಪುನಃ ಸ್ವಲ್ಪ ಉಪ್ಪು ಹಾಕಿ. ಸಾಕಷ್ಟು  ನೀರು ಸೇರಿಸಿ ಸೂಪ್‌ನ ಹದಕ್ಕೆ ಕುದಿಸಿ. ಇದಕ್ಕೆ  ಲಿಂಬೆಹಣ್ಣಿನ ರಸ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಬಿಸಿಬಿಸಿಯಾಗಿ ಸೇವಿಸಲು ರುಚಿಯಾಗಿರುತ್ತದೆ.

2.    ಸ್ಕ್ಯೂ
ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- 2 ಚಪಾತಿಗೆ ಆಗುವಷ್ಟು, ಸಣ್ಣಗೆ ಹೆಚ್ಚಿದ ಕ್ಯಾರೆಟ್‌, ಬೀನ್ಸ್, ಆಲೂಗಡ್ಡೆ ಇತ್ಯಾದಿ ಮಿಶ್ರ ತರಕಾರಿಗಳು- 1  ಕಪ್‌, ಬಟಾಣಿ/ಅವರೇಕಾಳು- 1 ಕಪ್‌, ಗರಂ ಮಸಾಲೆ- 1 ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಅಡುಗೆ ಎಣ್ಣೆ- 4 ಚಮಚ, ಅರಿಶಿನ ಪುಡಿ- 1/2 ಚಮಚ, ಅಚ್ಚಮೆಣಸಿನ ಪುಡಿ- 1/2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ನೀರು- 5-6 ಕಪ್‌, ಹಾಲು- ಒಂದು ಕಪ್‌.

ತಯಾರಿಸುವ ವಿಧಾನ: ಗೋಧಿಹಿಟ್ಟಿಗೆ ಸ್ವಲ್ಪ ನೀರು, ಸ್ವಲ್ಪ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ, ಸಣ್ಣ ಉಂಡೆಗಳನ್ನು ಮಾಡಿ. ಉಂಡೆಗಳನ್ನು ತಟ್ಟಿ ಚಿಕ್ಕ ವಡೆಯಾಕಾರ ಅಥವಾ ಗಿಣ್ಣಲಿನಂತೆ ತಯಾರಿಸಿಟ್ಟುಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಕತ್ತರಿಸಿಟ್ಟ ಎಲ್ಲಾ ತರಕಾರಿಗಳನ್ನು ಒಂದೊಂದಾಗಿ ಹಾಕಿ ಬಾಡಿಸಿಕೊಂಡು, ಮಸಾಲೆ, ಅರಿಶಿನಪುಡಿ, ಉಪ್ಪು, ಖಾರದ ಪುಡಿಯನ್ನೂ ಹಾಕಿ ತರಕಾರಿ ಮುಳುಗುವಷ್ಟು ನೀರು ಹಾಕಿ ಬೇಯಿಸಿ. ತರಕಾರಿ ಬೆಂದ ಮೇಲೆ, ತಯಾರಿಸಿಟ್ಟಿದ್ದ ಗೋಧಿಹಿಟ್ಟಿನ ವಡೆಗಳನ್ನು ಸೇರಿಸಿ, ಬೇಕಿದ್ದಲ್ಲಿ ಪುನಃ ಸ್ವಲ್ಪ ನೀರು, ಉಪ್ಪು ಸೇರಿಸಿ ಸೂಪ್‌ನ ಹದಕ್ಕೆ ಕುದಿಸಿ. ಕೊನೆಯಲ್ಲಿ ಹಾಲನ್ನು ಸೇರಿಸಿ ಕೆಳಗಿಳಿಸಿ. ಬಿಸಿಬಿಸಿಯಾದ ಸ್ಕ್ಯೂ ಸವಿಯಲು ಸಿದ್ಧ. ಅವರವರ ಆಯ್ಕೆಯ ತರಕಾರಿಯನ್ನು ಉಪಯೋಗಿಸಬಹುದು. 

-ಹೇಮಮಾಲಾ.ಬಿ

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.