ಅಪ್ಸರೆಯಂತೆ ಕಾಣಬೇಕೆಂದರೆ…


Team Udayavani, Jan 3, 2018, 2:02 PM IST

03-36.jpg

ಮದುವೆಯ ದಿನ ತಾನು ಅಪ್ಸರೆಯಂತೆ ಕಾಣಿಸಬೇಕು ಎಂಬುದು ಎಲ್ಲ ಹುಡುಗಿಯರ ಕನಸು. ಹತ್ತಾರು ವರ್ಷಗಳ ನಂತರ ಮದುವೆ ಆಲ್ಬಂ ತೆಗೆದು ನೋಡಿದರೂ, ತನ್ನ ಸೌಂದರ್ಯದ, ಅಲಂಕಾರದ ಬಗ್ಗೆ ತನಗೇ ಹೊಟ್ಟೆಕಿಚ್ಚಾಗುವಂತಿರಬೇಕು ಎಂದು ಹೆಣ್ಣು ಬಯಸುವುದು ಸಹಜ. ಇನ್ನು ಡಿಸೆಂಬರ್‌- ಜನವರಿಯ ಚುಮು ಚುಮು ಚಳಿಯಲ್ಲಿ ಮದುವೆ ನಡೆಯುವುದಿದ್ದರೆ, ಮದುಮಗಳು ತ್ವಚೆಯ ಬಗ್ಗೆ, ಮೇಕಪ್‌ನ ಬಗ್ಗೆ ತುಸು ಜಾಸ್ತಿಯೇ ಜಾಗ್ರತೆ ವಹಿಸಬೇಕು. ಯಾಕೆಂದರೆ, ಚಳಿಗಾಲವೆಂದರೆ ಚರ್ಮ ಜೀವಂತಿಕೆ ಕಳೆದುಕೊಳ್ಳುವ, ಕೂದಲು ಹುಲ್ಲಿನಂತಾಗುವ ಸಮಯ. ಇಂಥ ಸಮಯದಲ್ಲಿ ಸಪ್ತಪದಿ ತುಳಿಯುವವರು ಈ ಐದು ಅಂಶಗಳನ್ನು ಮರೆಯಲೇಬಾರದು. 

1. ತ್ವಚೆಯ ರಕ್ಷಣೆಗೆ ಮಾಯಿಶ್ಚರೈಸರ್‌:
ಚಳಿಗಾಲದಲ್ಲಿ ನೀವು ಚರ್ಮದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಸರಿಯಾಗಿ ಮಾಯಿಶ್ಚರೈಸರ್‌ ಕ್ರೀಂ ಬಳಸದಿದ್ದರೆ ಚರ್ಮದ ನುಣುಪೇ ಮಾಯವಾಗಿ, ಮದುವೆ ದಿನ ಎಷ್ಟೇ ಮೇಕಪ್‌ ಮಾಡಿದರೂ ಪ್ರಯೋಜನವಾಗುವುದಿಲ್ಲ. ಮದುವೆ ಕೆಲಸದಲ್ಲಿ ನೀವೆಷ್ಟೇ ಬ್ಯುಸಿ ಇದ್ದರೂ, ಪ್ರತಿದಿನಿ ಮಾಯಿಶ್ಚರೈಸರ್‌ ಹಚ್ಚಲು ಮರೆಯಬೇಡಿ. ಬರೀ ಮುಖವಷ್ಟೇ ಅಲ್ಲ, ಕತ್ತು, ಕಾಲು-ಕೈಗೂ ಕ್ರೀಂ ಬಳಸಿ. 

2. ಸನ್‌ಸ್ಕ್ರೀನ್‌ ಲೋಷನ್‌ಗೆ ಬೈ ಬೈ
ಮದುವೆಯ ದಿನ ಅಪ್ಪಿತಪ್ಪಿಯೂ ಸನ್‌ಸ್ಕ್ರೀನ್‌ ಲೋಷನ್‌ ಹಚ್ಚಬೇಡಿ. ಅದು ನಿಮ್ಮ ಮುಖವನ್ನು ನಿಸ್ತೇಜವಾಗಿಸುತ್ತದೆ. ಅಷ್ಟೇ ಅಲ್ಲ, ಫೋಟೊದಲ್ಲಿ ಕೂಡ ನೀವು ತುಂಬಾ ಬಿಳಿಚಿಕೊಂಡಂತೆ ಕಾಣಿಸುತ್ತೀರಿ.

3. ಉತ್ತಮ ಗುಣಮಟ್ಟದ ಮೇಕಪ್‌
ಬೇಸಿಗೆಯಲ್ಲಾದರೆ ಬೆವರಿನ ಜೊತೆಗೆ ಮೇಕಪ್‌ ಕರಗುವ ಭಯ ಇರುತ್ತದೆ. ಚಳಿಗಾಲದಲ್ಲಿ ಆ ತಲೆಬಿಸಿ ಇಲ್ಲ. ಹಾಗಾಗಿ ಪೌಡರ್‌ನಂಥ ಮೇಕಪ್‌ ಪ್ರಾಡಕ್ಟ್ಗಳ ಬದಲು ಲಿಕ್ವಿಡ್‌ ಪ್ರಾಡಕ್ಟ್ಗಳನ್ನು ಬಳಸಿದರೆ ಉತ್ತಮ. ಅದರಿಂದ ಮೇಕಪ್‌ ಜಾಸ್ತಿ ಹೊತ್ತು ಉಳಿದುಕೊಳ್ಳುತ್ತದೆ.

4. ಕಣ್ಣಿನ ಮೇಕಪ್‌ 
ಚಳಿಗಾಲದಲ್ಲಿ ಕಣ್ಣಿನಲ್ಲಿ ನೀರು ತುಂಬಿಕೊಳ್ಳುವ, ಕಣ್ಣು ತೇವಗೊಳ್ಳುವ ಸಂಭವಗಳು ಹೆಚ್ಚು. ಸಾದಾ ಐ ಲೈನರ್‌ಗಳ ಬದಲು ವಾಟರ್‌ಪ್ರೂಫ್ ಐ ಲೈನರ್‌, ಮಸ್ಕರಗಳನ್ನು ಬಳಸಿದರೆ ಒಳಿತು. ಲಿಕ್ವಿಡ್‌ ಐ ಲೈನರ್‌ಗಿಂತ ಜೆಲ್‌ ಬಳಸಿದರೆ ಇನ್ನೂ  ಉತ್ತಮ. 

5. ಕೂದಲಿನ ಕಾಳಜಿ ಮಾಡಿ
ಮದುವೆಯಲ್ಲಿ ಎಲ್ಲರ  ಕಣ್‌ ಸೆಳೆಯುವುದು ಹೆಣ್ಣಿನ ಕೇಶಾಲಂಕಾರ. ಮದುವಣಗಿತ್ತಿಯರು ಚಳಿಗಾಲದಲ್ಲಿ ಕೂದಲಿನ ಕಡೆಗೆ ಲಕ್ಷ್ಯ ನೀಡುವುದು ಅಗತ್ಯ. ಕೂದಲು ಸತ್ವ ಕಳೆದುಕೊಳ್ಳದಂತೆ ಹೈಡ್ರೇಟಿಂಗ್‌ ಹೇರ್‌ ಮಾಸ್ಕ್ ಅಥವಾ ಜೆಲ್‌ ಹಚ್ಚಿ ಆರೈಕೆ ಮಾಡಿ. ನಿಮ್ಮ ಕೂದಲಿನ ಗುಣ ಯಾವುದು ಅಂತ ತಿಳಿದುಕೊಂಡು ಮದುವೆಗೆ ಹೇರ್‌ ಸ್ಟೈಲ್‌ ಮಾಡಿ. ಗುಂಗುರು ಕೂದಲು, ಒಣ ಕೂದಲಿನವರು ಫ್ರೀ ಹೇರ್‌ಸ್ಟೈಲ್‌ ಮಾಡೋದು ಅಷ್ಟು ಸರಿಯಲ್ಲ.  

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.